Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕೇಂದ್ರ ಪುರಸ್ಕೃತ ಯೋಜನೆ | ಜಲಸಂಪನ್ಮೂಲ,...

ಕೇಂದ್ರ ಪುರಸ್ಕೃತ ಯೋಜನೆ | ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಇಲಾಖೆಗಳಿಗೆ ಬಿಡಿಗಾಸನ್ನೂ ಬಿಚ್ಚದ ಕೇಂದ್ರ ಸರಕಾರ

ಜಿ.ಮಹಾಂತೇಶ್,ಜಿ.ಮಹಾಂತೇಶ್,24 April 2024 9:46 AM IST
share
ಕೇಂದ್ರ ಪುರಸ್ಕೃತ ಯೋಜನೆ | ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಇಲಾಖೆಗಳಿಗೆ ಬಿಡಿಗಾಸನ್ನೂ ಬಿಚ್ಚದ ಕೇಂದ್ರ ಸರಕಾರ

ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳನ್ನು ಜಾರಿಗೊಳಿಸಿರುವ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ರಾಜ್ಯ ಮತ್ತು ಕೇಂದ್ರ ಸರಕಾರವು 2024ರ ಮಾರ್ಚ್ ಅಂತ್ಯದವರೆಗೂ ತನ್ನ ಪಾಲಿನ ಅನುದಾನದಲ್ಲಿ ಬಿಡಿಗಾಸನ್ನೂ ಬಿಚ್ಚಿಲ್ಲ.

ಅಲ್ಲದೆ ಹಿಂದು ಳಿದ ವರ್ಗ ಕಲ್ಯಾಣ, ನಗರಾ ಭಿವೃದ್ಧಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವು ಲಭ್ಯವಾಗಿರಿಸಿಕೊಂಡಿದ್ದ ಅನುದಾನದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿಡುಗಡೆ ಮಾಡಿಲ್ಲ. 2024ರ ಮಾರ್ಚ್ ಅಂತ್ಯದವರೆಗೂ ರಾಜ್ಯ ಮತ್ತು ಕೇಂದ್ರ ಸರಕಾರವು ತನ್ನ ಪಾಲಿನ ಅನುದಾನ ಬಿಡುಗಡೆ ಮಾಡದ ಕಾರಣ, ಹಲವು ಯೋಜನೆಗಳು ಫಲಾನುಭವಿಗಳಿಗೆ ಲಭ್ಯವಿಲ್ಲದಂತಾಗಿದೆ.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2024ರ ಎಪ್ರಿಲ್ 22ರಿಂದ 25ರವರೆಗೆ ನಡೆಸಲಿರುವ ಸಭೆಯಲ್ಲಿ ಇಲಾಖಾಧಿಕಾರಿಗಳು ಅನುದಾನದ ಸಮಗ್ರ ಚಿತ್ರಣವನ್ನು ಒದಗಿಸಿದ್ದಾರೆ. ಇದರ ಪ್ರತಿಯು ‘ the-file.in’ಗೆ ಲಭ್ಯವಾಗಿದೆ.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರಕಾರವು 24,487.99 ಕೋಟಿ ರೂ. ಅನುದಾನ ಲಭ್ಯವಾಗಿರಿಸಿಕೊಂಡಿದೆ. ಕೇಂದ್ರ ಸರಕಾರವು 22,368.85 ಕೋ. ರೂ. ಅನುದಾನ ಲಭ್ಯವಾಗಿರಿಸಿಕೊಂಡಿದೆ. ಒಟ್ಟಾರೆ 55,632.64 ಕೋ. ರೂ. ಅನುದಾನ ಲಭ್ಯವಿದೆ.

ಇದರಲ್ಲಿ ರಾಜ್ಯ ಸರಕಾರವು 24,487.99 ಕೋ. ರೂ.ನಲ್ಲಿ ಮಾರ್ಚ್ ಅಂತ್ಯಕ್ಕೆ 26,160.84 ಕೋ. ರೂ. ಬಿಡುಗಡೆ ಮಾಡಿದೆ. ಒಟ್ಟು ಲಭ್ಯವಿದ್ದ ಅನುದಾನಕ್ಕಿಂತಲೂ ಹೆಚ್ಚುವರಿಯಾಗಿ 1,672.85 ಕೋ. ರೂ.ಗಳನ್ನು ಬಿಡುಗಡೆ ಮಾಡಿದೆ.

ಕೇಂದ್ರ ಸರಕಾರವು ತನ್ನ ಪಾಲಿನ 22,368.84 ಕೋ. ರೂ.ನಲ್ಲಿ ಮಾರ್ಚ್ ಅಂತ್ಯಕ್ಕೆ 21,357.79 ಕೋ. ರೂ. ಬಿಡುಗಡೆ ಮಾಡಿದೆ. ಬಿಡುಗಡೆಗೆ 1,011.06 ಕೋ. ರೂ. ಬಾಕಿ ಇರಿಸಿಕೊಂಡಿದೆ. ಒಟ್ಟಾರೆ 47,518.63 ಕೋ. ರೂ.ನಲ್ಲಿ 45,598.48 ಕೋ. ರೂ. ಖರ್ಚು ಮಾಡಿದೆ. ವೆಚ್ಚಕ್ಕೆ 1,920.15 ಕೋ. ರೂ. ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ.

ಜಲಸಂಪನ್ಮೂಲ ಇಲಾಖೆಗೆ ರಾಜ್ಯ ಸರಕಾರವು 200.49 ಕೋ. ರೂ., ಕೇಂದ್ರ ಸರಕಾರವು 362.48 ಕೋ. ರೂ. ಸೇರಿ ಒಟ್ಟಾರೆ 562.97 ಕೋ.ರೂ. ಅನುದಾನವಿತ್ತು. ಮಾರ್ಚ್ ಅಂತ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರವು ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ.

ವೈದ್ಯಕೀಯ ಶಿಕ್ಷಣ ಇಲಾಖೆಗೆ ರಾಜ್ಯದ ಪಾಲು 27.80 ಕೋ. ರೂ., ಕೇಂದ್ರದ ಪಾಲು 15.20 ಕೋ. ರೂ. ಸೇರಿ 43.00 ಕೋ. ರೂ. ಅನುದಾನವಿದೆ. ಮಾರ್ಚ್ ಅಂತ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರವು ಬಿಡಿಗಾಸೂ ಬಿಚ್ಚಿಲ್ಲ.

ಹಿಂದುಳಿದ ವರ್ಗ ಕಲ್ಯಾಣ ಇಲಾಖೆಗೆ ರಾಜ್ಯದ ಪಾಲು 196.01 ಕೋ.ರೂ., ಕೇಂದ್ರದ ಪಾಲು 95.01 ಕೋ.ರೂ. ಸೇರಿ 291.02 ಕೋ.ರೂ. ಅನುದಾನವಿದೆ. ಇದರಲ್ಲಿ ರಾಜ್ಯವು ತನ್ನ ಪಾಲಿನ ಅನುದಾನದಲ್ಲಿ 113.37 ಕೋ. ರೂ. ಬಿಡುಗಡೆ ಮಾಡಿದೆ. ಬಿಡುಗಡೆಗೆ 82.64 ಕೋ. ರೂ. ಬಾಕಿ ಇರಿಸಿಕೊಂಡಿದೆ.

ವಿಶೇಷವೆಂದರೇ ಕೇಂದ್ರವು ತನ್ನ ಪಾಲಿನ 95.01 ಕೋ. ರೂ. ಅನುದಾನ ಲಭ್ಯವಾಗಿರಿಸಿಕೊಂಡಿದ್ದರೂ 191.06 ಕೋ. ರೂ. ಬಿಡುಗಡೆ ಮಾಡಿತ್ತು. ಹೆಚ್ಚುವರಿಯಾಗಿ 96.05 ಕೋ. ರೂ. ಬಿಡುಗಡೆ ಮಾಡಿದೆ. ಒಟ್ಟಾರೆ 304.43 ಕೋ. ರೂ. ಬಿಡುಗಡೆ ಮಾಡಿರುವುದು ಗೊತ್ತಾಗಿದೆ.

ಕೇಂದ್ರವು ಶೇ.201.09ರಷ್ಟು ಬಿಡುಗಡೆ ಮಾಡಿದೆ. ಆದರೆ ಮಾರ್ಚ್ ಅಂತ್ಯಕ್ಕೆ ಖರ್ಚಾಗಿದ್ದು ಕೇವಲ 11.17 ಕೋ. ರೂ. ಮಾತ್ರ. 293.26 ಕೋ. ರೂ. ವೆಚ್ಚವೇ ಆಗಿಲ್ಲ. ಇದು ಒಟ್ಟು ಅನುದಾನಕ್ಕೆ ಶೇ.3.84ರಷ್ಟು ಮಾತ್ರ ಪ್ರಗತಿ ಆಗಿದೆ.

ನಗರಾಭಿವೃದ್ಧಿಗೆ ರಾಜ್ಯ ಸರಕಾರವು 960.00 ಕೋ.ರೂ. ಅನುದಾನ ಲಭ್ಯವಾಗಿರಿಸಿಕೊಂಡಿತ್ತು. ಮಾರ್ಚ್ ಅಂತ್ಯಕ್ಕೆ 297.50 ಕೋ. ರೂ. ಬಿಡುಗಡೆ ಮಾಡಿತ್ತು. ಬಿಡುಗಡೆಗೆ ಇನ್ನೂ 662.5 ಕೋ. ರೂ. ಬಾಕಿ ಇರಿಸಿಕೊಂಡಿದೆ. ಕೇಂದ್ರವು 1,280.09 ಕೋ. ರೂ.ನಲ್ಲಿ 386.00 ಕೋ. ರೂ. ಬಿಡುಗಡೆ ಮಾಡಿ, ಇನ್ನೂ 894.09 ಕೋ. ರೂ. ಬಾಕಿ ಇರಿಸಿಕೊಂಡಿದೆ. ಒಟ್ಟಾರೆ 683.50 ಕೋ. ರೂ.ನಲ್ಲಿ 1,008.03 ಕೋ. ರೂ. ವೆಚ್ಚವಾಗಿದೆ. ಅಂದರೆ ಬಿಡುಗಡೆಯಾಗಿದ್ದಕ್ಕಿಂತಲೂ 324.56 ಕೋ. ರೂ. ಹೆಚ್ಚುವರಿ ವೆಚ್ಚವಾಗಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರಾಜ್ಯ ಸರಕಾರವು 83.00 ಕೋ. ರೂ. ಅನುದಾನ ಒದಗಿಸಿಕೊಂಡಿತ್ತು. ಈ ಪೈಕಿ ಮಾರ್ಚ್ ಅಂತ್ಯಕ್ಕೆ 15.56 ಕೋ. ರೂ. ಬಿಡುಗಡೆ ಮಾಡಿ ಇನ್ನೂ 67.44 ಕೋ. ರೂ. ಬಾಕಿ ಇರಿಸಿಕೊಂಡಿದೆ. ಕೇಂದ್ರ ಸರಕಾರವು 100.00 ಕೋ. ರೂ.ನಲ್ಲಿ 23.34 ಕೋ. ರೂ. ಬಿಡುಗಡೆ ಮಾಡಿ ಇನ್ನೂ 76.66 ಕೋ. ರೂ. ಬಾಕಿ ಇರಿಸಿಕೊಂಡಿದೆ. ಬಿಡುಗಡೆಯಾಗಿದ್ದ 38.90 ಕೋ. ರೂ. ಖರ್ಚಾಗಿದೆ.

ಸಮಾಜ ಕಲ್ಯಾಣ ಇಲಾಖೆಗೆ ರಾಜ್ಯ ಸರಕಾರವು ತನ್ನ ಪಾಲಿನ 90.49 ಕೋ. ರೂ.ನಲ್ಲಿ 82.16 ಕೋ. ರೂ. ಬಿಡುಗಡೆ ಮಾಡಿದೆ. ಬಿಡುಗಡೆಗೆ 8.33 ಕೋ. ರೂ. ಬಾಕಿ ಇರಿಸಿಕೊಂಡಿದೆ. ಕೇಂದ್ರವು 173.72 ಕೋ.ರೂ.ನಲ್ಲಿ 48.22 ಕೋ. ರೂ. ಬಿಡುಗಡೆ ಮಾಡಿ, 125.5 ಕೋ.ರೂ. ಬಾಕಿ ಉಳಿಸಿಕೊಂಡಿದೆ. ಬಿಡುಗಡೆಯಾಗಿದ್ದ 130.38 ಕೋ. ರೂ.ನಲ್ಲಿ 129.15 ಕೋ.ರೂ. ವೆಚ್ಚ ಮಾಡಿದೆ.

ಕಂದಾಯ ವಿಪತ್ತು ನಿರ್ವಹಣೆಯಲ್ಲಿ ರಾಜ್ಯ ಸರಕಾರವು ತನ್ನ ಪಾಲಿನ 5,900.50 ಕೋ.ರೂ. ಒದಗಿಸಿಕೊಂಡಿತ್ತು. ಆದರೆ ಮಾರ್ಚ್ ಅಂತ್ಯಕ್ಕೆ 6,261.36 ಕೋ.ರೂ. ಬಿಡುಗಡೆ ಮಾಡಿಕೊಂಡಿತ್ತು. ಲಭ್ಯವಾಗಿದ್ದ ಅನುದಾನದ ಮೊತ್ತದಲ್ಲಿ ಹೆಚ್ಚುವರಿಯಾಗಿ 360.86 ಕೋ.ರೂ. ಬಿಡುಗಡೆಯಾಗಿತ್ತು.

ಕೇಂದ್ರ ಸರಕಾರವು ತನ್ನ ಪಾಲಿನ 1,422.23 ಕೋ.ರೂ.ನಲ್ಲಿ 902.67 ಕೋ.ರೂ. ಬಿಡುಗಡೆ ಮಾಡಿತ್ತು. ಬಿಡುಗಡೆಗೆ ಇನ್ನೂ 519.56 ಕೋ.ರೂ. ಬಾಕಿ ಇರಿಸಿಕೊಂಡಿತ್ತು. ಒಟ್ಟಾರೆ 7,164.03 ಕೋ.ರೂ.ನಲ್ಲಿ ಮಾರ್ಚ್ ಅಂತ್ಯಕ್ಕೆ 5,956.06 ಕೋ.ರೂ. ಖರ್ಚು ಮಾಡಿ 1,207.97 ಕೋ.ರೂ. ಗಳನ್ನು ವೆಚ್ಚಕ್ಕೆ ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.

ಅಮೃತ್ ಮಿಷನ್, ತುಂಗಾ ಮೇಲ್ದಂಡೆ ಯೋಜನೆ, ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಸೇರಿದಂತೆ ಒಟ್ಟು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರವು ತನ್ನ ಪಾಲಿನ ಅನುದಾನದಲ್ಲಿ ಬಿಡಿಗಾಸನ್ನೂ ಒದಗಿಸಿರಲಿಲ್ಲ.

ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪೈಕಿ 7 ಕಾರ್ಯಕ್ರಮಗಳಿಗೆ ರಾಜ್ಯ ಸರಕಾರವು 2023-24ನೇ ಸಾಲಿನಲ್ಲಿ 1,221.49 ಕೋ.ರೂ. ಅನುದಾನ ಒದಗಿಸಿಕೊಂಡಿತ್ತು. ಕೇಂದ್ರ ಸರಕಾರವು ಇವೇ ಕಾರ್ಯಕ್ರಮಗಳಿಗೆ 1,917.48 ಕೋ.ರೂ. ಅನುದಾನ ಮೀಸಲಿರಿಸಿತ್ತು. ಆದರೆ ಈ ಕಾರ್ಯಕ್ರಮಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವು ಡಿಸೆಂಬರ್ ಅಂತ್ಯಕ್ಕೆ ನಯಾ ಪೈಸೆಯನ್ನೂ ಬಿಡುಗಡೆ ಮಾಡಿರಲಿಲ್ಲ.

20 ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರವು 2023-24ನೇ ಸಾಲಿಗೆ 5,980.79 ಕೋ.ರೂ. ಅನುದಾನ ಒದಗಿಸಿಕೊಂಡಿತ್ತು. ಇದರಲ್ಲಿ ಡಿಸೆಂಬರ್ ಅಂತ್ಯಕ್ಕೆ 1,566.76 ಕೋ. ರೂ. ಮಾತ್ರ ಬಿಡುಗಡೆ ಮಾಡಿದೆ. ಇನ್ನು 4,414.03 ಕೋ. ರೂ.ಗಳನ್ನು ಬಿಡುಗಡೆಗೆ ಬಾಕಿ ಇರಿಸಿಕೊಂಡಿತ್ತು.

ಅದೇ ರೀತಿ ರಾಜ್ಯ ಸರಕಾರವು ಇದೇ 20 ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2023-24ನೇ ಸಾಲಿಗೆ 9,511.38 ಕೋ. ರೂ. ಅನುದಾನ ಒದಗಿಸಿತ್ತು. ಈ ಪೈಕಿ ಡಿಸೆಂಬರ್ ಅಂತ್ಯಕ್ಕೆ 7,064.03 ಕೋ. ರೂ. ಬಿಡುಗಡೆ ಮಾಡಿದೆ. 2,447.35 ಕೋ. ರೂ.ಗಳನ್ನು ಬಿಡುಗಡೆಗೆ ಬಾಕಿ ಉಳಿಸಿಕೊಂಡಿತ್ತು.

ಶೂನ್ಯ ಬಿಡುಗಡೆ

ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿನ ಅಮೃತ್ ಮಿಷನ್ ಯೋಜನೆಗೆ ರಾಜ್ಯವು 320.00 ಕೋ.ರೂ., ಕೇಂದ್ರವು 480.00 ಕೋ. ರೂ., ಪ್ರಾಥಮಿಕ ಶಿಲ್ಕು 1,538.35 ಕೋ.ರೂ. ಸೇರಿ ಒಟ್ಟಾರೆ 2,338.05 ಕೋ. ರೂ. ಒಟ್ಟು ಅನುದಾನವಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಡಿಸೆಂಬರ್ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿರಲಿಲ್ಲ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ರಾಜ್ಯವು 316.00 ಕೋ. ರೂ., ಕೇಂದ್ರವು 474.00 ಕೋ. ರೂ., ಪ್ರಾಥಮಿಕ ಶಿಲ್ಕು 355.31 ಕೋ. ರೂ. ಸೇರಿ ಒಟ್ಟಾರೆ 1,145.31 ಕೋ. ರೂ. ಅನುದಾನ ಲಭ್ಯವಾಗಿಸಿಕೊಂಡಿದೆ. ಇದರಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರಕಾರವು ತನ್ನ ಪಾಲಿನ ಅನುದಾನದ ಬಿಡುಗಡೆಯಲ್ಲಿ ಶೂನ್ಯ ಸಂಪಾದಿಸಿತ್ತು.

ಜಲಸಂಪನ್ಮೂಲ ಇಲಾಖೆಯ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ (ಇಆರ್ಎಂ)ಯಲ್ಲಿ ರಾಜ್ಯವು 100 ಕೋ. ರೂ., ಕೇಂದ್ರ ಸರಕಾರವು 250 ಕೋ. ರೂ., ಸೇರಿ ಒಟ್ಟಾರೆ 350 ಕೋ. ರೂ. ಅನುದಾನ ಒದಗಿಸಿಕೊಂಡಿದೆ. ಕೇಂದ್ರ ಮತ್ತು ರಾಜ್ಯವು ಈ ಯೋಜನೆಗೂ ತನ್ನ ಪಾಲಿನಲ್ಲಿ ನಯಾ ಪೈಸೆ ನೀಡಿರಲಿಲ್ಲ.

ವಸತಿ ಇಲಾಖೆಯ ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಯಲ್ಲಿ ರಾಜ್ಯವು 164.00 ಕೋ. ರೂ., ಕೇಂದ್ರವು 246.00 ಕೋ. ರೂ., ಪ್ರಾಥಮಿಕ ಶಿಲ್ಕು 838.10 ಕೋ. ರೂ. ಸೇರಿ ಒಟ್ಟು 1,248.10 ಕೋ. ರೂ. ಅನುದಾನವಿದೆ. ಇಲ್ಲಿಯೂ ಕೇಂದ್ರ ಮತ್ತು ರಾಜ್ಯ ಸರಕಾರವು ತನ್ನ ಪಾಲಿನ ಹಣವನ್ನು ನೀಡಿರಲಿಲ್ಲ.

ನಗರಾಭಿವೃದ್ಧಿ ಇಲಾಖೆಯ ಸ್ವಚ್ಛ ಭಾರತ (ನಗರ) ಯೋಜನೆಗೆ ರಾಜ್ಯವು 90 ಕೋ. ರೂ., ಕೇಂದ್ರವು 200 ಕೋ. ರೂ., ಪ್ರಾಥಮಿಕ ಶಿಲ್ಕು 747.75 ಕೋ. ರೂ. ಅನುದಾನವಿದೆ. ಸ್ವಚ್ಛ ಭಾರತ ಯೋಜನೆಗೂ ಕೇಂದ್ರ ಸರಕಾರವು ಬಿಡಿಗಾಸನ್ನು ನೀಡಿಲ್ಲ. ರಾಜ್ಯವೂ ಇದೇ ಹಾದಿಯನ್ನು ಹಿಡಿದಿತ್ತು. ಜಲಸಂಪನ್ಮೂಲ ಇಲಾಖೆಯಡಿಯಲ್ಲಿ ತುಂಗಾ ಮೇಲ್ದಂಡೆ ಯೋಜನೆಗೆ ರಾಜ್ಯವು 100.49 ಕೋ. ರೂ., ಕೇಂದ್ರ ಸರಕಾರವು 112.46 ಕೋ. ರೂ. ಸೇರಿ ಒಟ್ಟು 212.97 ಕೋ. ರೂ. ಅನುದಾನ ನಿಗದಿಪಡಿಸಿಕೊಂಡಿದೆ. ಇದರಲ್ಲಿಯೂ ಎರಡೂ ಸರಕಾರಗಳು ನಯಾಪೈಸೆಯನ್ನು ನೀಡಿರಲಿಲ್ಲ.

share
ಜಿ.ಮಹಾಂತೇಶ್,
ಜಿ.ಮಹಾಂತೇಶ್,
Next Story
X