Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಿಜೋರಾಂ ಜನತೆಗೆ ವರದಾನವಾದ ರೈಲ್ವೆ

ಮಿಜೋರಾಂ ಜನತೆಗೆ ವರದಾನವಾದ ರೈಲ್ವೆ

ಎಂ.ಡಿ ಅಖೀಲ್ ಉಡೇವುಎಂ.ಡಿ ಅಖೀಲ್ ಉಡೇವು11 Sept 2025 8:55 PM IST
share
ಮಿಜೋರಾಂ ಜನತೆಗೆ ವರದಾನವಾದ ರೈಲ್ವೆ
ಗುಡ್ಡೆಗಾಡು ಪ್ರದೇಶದ ಜನರಲ್ಲಿ ಮೂಡಿದ ಮಂದಹಾಸ

ಇಡೀ ಜನಗತ್ತಿನಲ್ಲೇ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್ವರ್ಕ್ ಹೊಂದಿರುವ ನಮ್ಮ ಭಾರತ ಇಲ್ಲಿಯವರೆಗೆ ಮಿಜೋರಾಂ ರಾಜ್ಯದಲ್ಲಿ ಮಾತ್ರ ಯಾವುದೇ ರೈಲ್ವೆ ಸೇವೆಯನ್ನು ಪ್ರಾರಂಭಿಸಿರಲಿಲ್ಲ. ಆದರೆ ಈ ಶತಮಾನಗಳ ಕನಸು ಈಗ ನನಸಾಗಲು ಹೊರಟಿದೆ.

ಮಿಜೋರಾಂ ಒಂದು ಸಣ್ಣ ಈಶಾನ್ಯ ರಾಜ್ಯವಾಗಿದೆ. ಇದು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ ಸುಮಾರು 722 ಕಿ.ಮೀ ಗಳ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಳ್ಳುತ್ತದೆ. ಮಿಜೋರಾಂ ರಾಜ್ಯವು ಗುಡ್ಡ-ಗಾಡಿನಿಂದ ಕೂಡಿರುವುದರಿಂದ ಭೂಮಿಯು ಸಮತಟ್ಟಾಗಿ ಇರುವುದಿಲ್ಲ. ಇಲ್ಲಿ ರಸ್ತೆ, ರೈಲ್ವೆ ಇನ್ನಿತರೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದು ಕಷ್ಟ. ಇದೆ ಕಾರಣದಿಂದಾಗಿ ಇಲ್ಲಿಯವರೆಗೆ ಈ ರಾಜ್ಯದಲ್ಲಿ ಯಾವುದೇ ರೈಲ್ವೆ ಸೇವೆಯನ್ನು ಪ್ರಾರಂಭಿಸಿರಲಿಲ್ಲ. ಆದರೆ 2014ರ ನವೆಂಬರ್ ನಲ್ಲಿ ಕೇಂದ್ರ ಸರಕಾರ ಮಿಜೋರಾಂ ರಾಜ್ಯದ ಬೈರಾಬಿನಗರದಿಂದ ಸೈರಾಂಗ್ ನಗರದವರೆಗೆ ಒಂದು ಹೊಸ ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ ಆರಂಭಿಸಿತು. ಇದಕ್ಕೆ ಪ್ರಧಾನಿ ಮೋದಿ ಅವರು ಉದ್ಘಾಟನೆಯನ್ನು ನೆರೆವೇರಿಸಿದ್ದರು.

ಒಟ್ಟು 51.38 ಕಿ.ಮೀ ಉದ್ದದ ರೈಲ್ವೆ ಯೋಜನೆ ಇದಾಗಿದ್ದು, ಇದರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಅತಿ ಶೀಘ್ರದಲ್ಲಿ ಇದು ಉದ್ಘಾಟನೆಯಾಗಲಿದೆ. ಈ ಮಾರ್ಗವು ಹೋರ್ಟೋಕಿ, ಕವನ್ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ ಸೇರಿದಂತೆ ಒಟ್ಟು ನಾಲ್ಕು ನಿಲ್ದಾಣಗಳನ್ನು ಹೊಂದಿದ್ದು, ನಿಲ್ದಾಣಗಳ ನಿರ್ಮಾಣ ಕಾಮಗಾರಿ ಕೂಡ ಪೂರ್ಣಗೊಂಡಿದೆ. ಇವು ಕೂಡ ಶೀಘ್ರದಲ್ಲೆ ಉದ್ಘಾಟನೆಯಾಗಲಿವೆ. ಈ ಮಾರ್ಗವು ಸುಮಾರು 153 ಸೇತುವೆಗಳನ್ನು ಮತ್ತು 45 ಸುರಂಗಗಳನ್ನು ಹೊಂದಿದೆ.

ಇದು ಸುಮಾರು 8,071 ಕೋಟಿ ರೂ.ಗಳ ಯೋಜನೆಯಾಗಿದ್ದು, ಅನೇಕ ಸಮಸ್ಯೆಗಳ ನಡುವೆ ಮಿಜೋರಾಂ ಜನತೆಗೆ ರೈಲ್ವೆ ಸಿಕ್ಕಿದೆ. ಅಲ್ಲಿನ ಇಂಜಿನೀಯರ್ ಗಳು ಹೇಳುವಂತೆ ಸೇತುವೆಗಳು ಮತ್ತು ಸುರಂಗಗಳ ಕಾಮಗಾರಿಗೆ ಬೇಕಾಗುವ ಸರಕನ್ನು ಸಾಗಿಸಲು ರಸ್ತೆಯೇ ಇರಲಿಲ್ಲ. ಮೊದಲು ಆ ಸ್ಥಳಕ್ಕೆ ರಸ್ತೆಯನ್ನು ನಿರ್ಮಿಸಿ ನಂತರ ರೈಲ್ವೆ ಮಾರ್ಗವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

51.38 ಕಿ.ಮೀ ನ ಮಾರ್ಗದಲ್ಲಿ ಸೇತುವೆ ಮತ್ತು ಸುರಂಗಗಳು ಹೆಚ್ಚಿದ್ದು, ಸುಮಾರು 27.665 ಉದ್ದವನ್ನು ಹೊಂದಿದೆ. ಇದು ಈ ಮಾರ್ಗದ ಒಟ್ಟು ವಿಸ್ತೀರ್ಣದ ಶೇ.54ರಷ್ಟಿದೆ. ಇದರಿಂದ ರೈಲು ಪ್ರಯಾಣವು ಉತ್ತಮ ಅನುಭವವನ್ನು ಕೊಡಲಿದೆ.

ಈ ರೈಲ್ವೆ ಮಾರ್ಗದ ನಿರ್ಮಾಣ ಕಾಮಗಾರಿಯನ್ನು ಮಾಡುವುದು ತುಂಬಾ ಕಷ್ಟವಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಹವಾಮಾನ. ಇಲ್ಲಿ ಎಪ್ರೀಲ್ ನಿಂದ ಅಕ್ಟೋಬರ್ ವರೆಗೆ ಮಳೆ ಇರುತ್ತದೆ. ಇದರಿಂದ ಕಾಮಗಾರಿ ನಡೆಸುವುದು ಕಷ್ಟಕರವಾಗಿದೆ. ಉಳಿದ ಸಮಯದಲ್ಲೆ ಕಾಮಗಾರಿಯನ್ನು ನಡೆಸಬೇಕಾಗುತ್ತದೆ. ಈ ಪ್ರದೇಶದಲ್ಲಿ ಭೂಕುಸಿತ ಸಾಮಾನ್ಯವಾಗಿದ್ದು, ಶೇಲ್, ಸಿಲ್ಟ್ ಸ್ಟೋನ್, ಸ್ಯಾಂಡ್ ಸ್ಟೋನ್ ಹಗುರ ಕಲ್ಲುಗಳು, ನೀರು ನುಗ್ಗುವಿಕೆಯು ಇಲ್ಲಿನ ಭೂಕುಸಿತಕ್ಕೆ ಮುಖ್ಯಕಾರಣವಾಗಿವೆ.

ಸ್ಥಳೀಯ ಕಾರ್ಮಿಕರ ಕೊರತೆ ಇರುವುದರಿಂದ ಹೊರ ರಾಜ್ಯದ ಕಾರ್ಮಿಕರನ್ನು ಕರೆತಂದು ಕಾಮಗಾರಿ ನಡೆಸಿದರೂ, ಇಲ್ಲಿ ಕಾಮಗಾರಿಕೆಗೆ ಬೇಕಾದ ಮರಳು, ಕಲ್ಲು ಸೇರಿದಂತೆ ಅನೇಕ ಸರಕುಗಳು ಮಿಜೋರಾಂನಲ್ಲಿ ಸಿಗುವುದಿಲ್ಲ. ಇವುಗಳನ್ನು ಕೂಡ ಹೊರ ರಾಜ್ಯಗಳಿಂದ ಆಮದು ಮಾಡಿಕೊಂಡು ಕಾಮಗಾರಿ ನಡೆಸಬೇಕಾಗಿರುವುದರಿಂದ ಈ ರೈಲ್ವೆ ಮಾರ್ಗ ನಿರ್ಮಾಣವು ಅನೇಕ ಸವಾಲುಗಳನ್ನು ಹೊಂದಿತ್ತು. ಇಂಜಿನೀಯರ್ ಗಳು ಮತ್ತು ಕಾರ್ಮಿಕರ ಪರಿಶ್ರಮದಿಂದ ಅಡಚಣೆಗಳನ್ನು ನಿವಾರಿಸಿ ರೈಲು ಸಂಚರಿಸುವಂತೆ ಮಾಡಿದ್ದರಿಂದ ಇಲ್ಲಿನ ಜನರು ಸಂತೋಷಗೊಂಡಿದ್ದಾರೆ.

ಕುತುಬ್ ಮಿನಾರ್ ಗಿಂತ ಎತ್ತರದ ಸೇತುವೆ :

ಈ ರೈಲ್ವೆ ಮಾರ್ಗವು ಸುಮಾರು 153 ಸೇತುವೆಗಳಿಂದ ಕೂಡಿದ್ದು, ಅದರಲ್ಲಿ ಸೈರಾಂಗ್ ಬಳಿ ಇರುವ ಒಂದು ಸೇತುವೆ ದಿಲ್ಲಿಯ ಕುತುಬ್ ಮಿನಾರ್ ಗಿಂತ ಎತ್ತರವಾಗಿದೆ. ಕುತುಬ್ ಮಿನಾರ್ ನ ಎತ್ತರ 72.5 ಮೀಟರ್ ಇದ್ದರೆ, ಈ ಸೇತುವೆಯು 114 ಮೀಟರ್ ಎತ್ತರವಿದೆ. ಕುತುಬ್ ಮಿನಾರ್ ಗಿಂತ 41.5 ಮೀಟರ್ ಉದ್ದ ಈ ಸೇತುವೆ ಇದೆ. 70 ಮೀ. ಗಿಂತಲೂ ಎತ್ತರದ 6 ಸೇತುವೆಗಳು ಈ ಮಾರ್ಗದಲ್ಲಿ ಇವೆ. ಹೀಗೆ ಸೇತುವೆಗಳ ಒಟ್ಟು ಉದ್ದವು 11.78 ಕಿ.ಮೀ ಇದ್ದು, ಇದು ಈ ಮಾರ್ಗದಲ್ಲಿ ಶೇ.23ರಷ್ಟು ಪಾಲನ್ನು ಹೊಂದಿದೆ.

ಸುರಂಗಗಳು :

ಇಲ್ಲಿನ ಇಡೀ ಭೂ ಪ್ರದೇಶವು ಗುಡ್ಡಗಳಿಂದ ಕೂಡಿದ್ದು, ಇದರಿಂದ ರೈಲು ಸಂಚರಿಸಲು ಬೇಕಾಗುವ ಮಾರ್ಗವನ್ನು ನಿರ್ಮಿಸಲು ಗುಡ್ಡಗಳನ್ನು ಕೊರೆದು ಟನಲ್ ಗಳನ್ನು ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಒಟ್ಟು 45 ಟನಲ್ ಗಳಿದ್ದು, ಅದರಲ್ಲಿ ಒಂದು ಸುರಂಗವು 1.868 ಕಿ.ಮೀ ಉದ್ದದಾಗಿದೆ. ಒಟ್ಟು ಸುರಂಗಗಳು 15.885 ಕಿ.ಮೀ ಉದ್ದವನ್ನು ಹೊಂದಿದ್ದು, ಇವುಗಳು ಈ ರೈಲ್ವೆ ಮಾರ್ಗದಲ್ಲಿ ಶೇ.31ರಷ್ಟು ಪಾಲನ್ನು ಹೊಂದಿವೆ. ಈ ಸುರಂಗಗಳಿಗೆ ಸ್ಥಳೀಯ ಜನರ ಉಡುಗೆ-ತೊಡುಗೆ ಮತ್ತು ಹಬ್ಬ, ಸಂಪ್ರದಾಯಗಳು ಹಾಗೂ ಹಳ್ಳಿಗಳ ಜೀವನ ಶೈಲಿಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿದೆ.

ಪ್ರವಾಸೋದ್ಯಮ ಮತ್ತು ವ್ಯವಹಾರ ಚಟುವಟಿಕೆಗಳಿಗೆ ಉತ್ತೇಜನ :

ಈ ರೈಲ್ವೆ ಸಂಚಾರದಿಂದ ಪ್ರಯಾಣದ ಸಮಯವು ಅರ್ಧಕ್ಕೂ ಹೆಚ್ಚು ಕಡಿತಗೊಳ್ಳುತ್ತೆ ಅಂದರೆ 51 ಕಿ.ಮೀ ಹೋಗಲು ಸಮಾನ್ಯವಾಗಿ 7 ಗಂಟೆಯಾಗುತ್ತದೆ. ಆದರೆ ರೈಲಿನಿಂದ ಹೋದರೆ ಕೇವಲ ಮೂರು ಗಂಟೆಯಲ್ಲಿ ಹೋಗಬಹುದಾಗಿದೆ. ಇದರಿಂದ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಇಲ್ಲಿ ವ್ಯವಹಾರಗಳು ಹೆಚ್ಚುತ್ತವೆ, ವ್ಯವಹಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ನಿರಂತರವಾಗಿ ಸರಬರಾಜು ಮಾಡುವುದು ಕೂಡ ಅಗತ್ಯವಾಗಿರುವುದರಿಂದ ರೈಲ್ವೆ ಮಾರ್ಗ ಅನುಕೂಲವಾಗಲಿದೆ. ರೈಲ್ವೆ ಸಂಚಾರದಿಂದ ಆಮದು ವೆಚ್ಚ ಕೂಡ ಕಡಿಯಾಗುತ್ತದೆ, ಇದಿರಿಂದ ಸರಕುಗಳ ಬೆಲೆ ಕೂಡ ಕಡಿಮೆಯಾಗುತ್ತದೆ.

ಉದ್ಯೋಗಗಳ ಹೆಚ್ಚಳ ಮತ್ತು ಆರ್ಥಿಕತೆಗೆ ಉತ್ತೇಜನ :

ರೈಲ್ವೆ ಸಂಚಾರದಿಂದ ಸಿಲ್ಚರ್, ಗೌಹಾಟಿ ಮತ್ತು ದಿಲ್ಲಿಗೆ ಹೋಗಲು ಸುಲಭವಾಗುತ್ತದೆ. ಸ್ಥಳೀಯ ಜನರಿಗೆ ಅರಣ್ಯ ಉತ್ಪನ್ನಗಳು, ಹಸ್ತಕಲೆಗಳು ಮತ್ತು ತೋಟಗಾರಿಕೆ ಉತ್ಪನ್ನಗಳು ಸೇರಿದಂತೆ ಇತರೆ ವಸ್ತುಗಳನ್ನು ಬೇರೆ ಕಡೆ ಸಾಗಿಸಲು ಅನುಕೂಲವಾಗುತ್ತದೆ. ಇದರಿಂದ ಇಲ್ಲಿ ಉದ್ಯೋಗಗಳು ಹೆಚ್ಚಳವಾಗಲಿದೆ. ರಾಜ್ಯದ ಆರ್ಥಿಕತೆಗೆ ಉತ್ತೇಜನವಾಗಲಿದೆ. ಇದಲ್ಲದೆ ಐಆರ್ಸಿಟಿಸಿಯು ಮಿಜೋರಾಂ ಸರಕಾರದೊಂದಿಗೆ 2 ವರ್ಷಗಳ ಪ್ರವಾಸೋದ್ಯಮ ಪ್ರೋತ್ಸಾಹದ ಒಪ್ಪಂದ ಮಾಡಿಕೊಂಡಿದ್ದು, ಹೋಟೆಲ್, ಮಾರ್ಗದರ್ಶಕ ಸೇವೆಗಳಲ್ಲಿ ಉದ್ಯೋಗಗಳು ಹೆಚ್ಚುವುದರಿಂದ ನಿರುದ್ಯೋಗ ಕೂಡ ಕಡಿಮೆ ಆಗುತ್ತದೆ.

ಈ ರೈಲ್ವೆ ಮಾರ್ಗ ನಿರ್ಮಾಣ ಮಾಡಲು ನಾವು ಸಾಕಷ್ಟು ಸಮಸ್ಯೆಗಳನ್ನು ಎದರಿಸಿದ್ದೇವೆ. ಅದರಲ್ಲಿ ಮುಖ್ಯವಾಗಿ ಕಾಮಗಾರಿ ಸ್ಥಳಗಳಿಗೆ ಹೋಗಲು ರಸ್ತೆ ಇರಲಿಲ್ಲ. ಅದಕ್ಕಾಗಿ ಸುಮಾರು 200 ಕಿ.ಮೀ ರಸ್ತೆಯನ್ನು ನಿರ್ಮಿಸಿದ್ದೇವೆ. ಸರಕುಗಳನ್ನು ದುರ್ಗಮ ಪ್ರದೇಶಕ್ಕೆ ಸಾಗಿಸುವುದು ಕೂಡ ಕಷ್ಟವಿತ್ತು. ಇಂತಹ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಈ ಮಾರ್ಗವನ್ನು ನಿರ್ಮಿಸಲಾಗಿದೆ. ಸತತ 7 ರಿಂದ 8 ತಿಂಗಳು ಮಳೆಯಿರುವುದರಿಂದ ಕಾಮಗಾರಿಯನ್ನು ವೇಗವಾಗಿ ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದ ಇದಕ್ಕೆ 11 ವರ್ಷಗಳ ಕಾಲಾವಕಾಶ ಬೇಕಾಯಿತು. ಸದ್ಯ ರೈಲ್ವೆ ಮಾರ್ಗ ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳು, ರೋಗಿಗಳು ಮತ್ತು ಪ್ರವಾಸಿಗರಿಗೆ ತುಂಬಾ ಅನುಕೂಲವಾಗಲಿದೆ. ಹಣವೂ ಉಳಿಯಲಿದೆ. ಒಟ್ಟಾರೆಯಾಗಿ ಈ ರೈಲ್ವೆ ಮಾರ್ಗವು ಇಲ್ಲಿನ ಜನರಿಗೆ ವರದಾನವಾಗಲಿದೆ.

- ಕೆ.ಕೆ ಶರ್ಮ, ಸಿಪಿಆರ್ ಓ, ಎನ್.ಎಫ್.ಆರ್. ರೈಲ್ವೆ, ಗುವಹಾಟಿ.

ಈ ರೈಲ್ವೆ ಸಂಚಾರವು ಇಲ್ಲಿನ ಜನರಿಗೆ ಶಿಕ್ಷಣ, ವೈದ್ಯಕೀಯ ಮತ್ತು ಕೃಷಿ, ರಪ್ತು-ಆಮದು ಸೇರಿದಂತೆ ಎಲ್ಲಾ ವಲಯಗಳಲ್ಲಿ ಮಿಜೋರಾಂ ಜನರಿಗೆ ಅನುಕೂಲವಾಗಲಿದೆ. ನಮ್ಮಲ್ಲಿ ಬಿದಿರುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಅದನ್ನು ಕೂಡ ಸಾಗಾಟ ಮಾಡಬಹುದು. ಇಲ್ಲಿ ವಾಹನಗಳ ಮೂಲಕ ಹೋದರೆ ತುಂಬಾ ಸಮಯ ಹಿಡಿಯುತ್ತದೆ, ಈ ರೈಲ್ವೆ ಸಂಚಾರವು ಮಿಜೋರಾಂ ಜನತೆಗೆ ಒಂದು ಹೊಸ ಅಧ್ಯಾಯವಾಗಲಿದೆ.

- ಅಡೋಲ್ಫ್ ಹಿಟ್ಲರ್ ಸೈಲಾಂ, ಸ್ಥಳೀಯ ನಿವಾಸಿ.

share
ಎಂ.ಡಿ ಅಖೀಲ್ ಉಡೇವು
ಎಂ.ಡಿ ಅಖೀಲ್ ಉಡೇವು
Next Story
X