Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಎಐ ಸ್ಪರ್ಧೆಯಲ್ಲಿ ಭಾರತ ಚೀನಾದ ಮುಂದೆ...

ಎಐ ಸ್ಪರ್ಧೆಯಲ್ಲಿ ಭಾರತ ಚೀನಾದ ಮುಂದೆ ಸೋಲುತ್ತಿದೆಯೇ?

ಸಂದೀಪ್ ನರ್ವಾಣಿಸಂದೀಪ್ ನರ್ವಾಣಿ25 May 2025 10:12 AM IST
share
ಎಐ ಸ್ಪರ್ಧೆಯಲ್ಲಿ ಭಾರತ ಚೀನಾದ ಮುಂದೆ ಸೋಲುತ್ತಿದೆಯೇ?

ನಾವು ಎಐ ಸೂಪರ್ ಪವರ್ ಆಗುತ್ತೇವೆ ಎಂಬ ಘೋಷಣೆಗಳು ಜೋರಾಗಿ ಕೇಳಿಬರುತ್ತಿವೆ. ಆದರೆ ತೆರೆಯ ಮರೆಯಲ್ಲಿ, ವಾಸ್ತವವು ಕಠೋರವಾಗಿದೆ. ನಮ್ಮ ಪ್ರಗತಿ ನಿಧಾನವಾಗಿದೆ, ನಮ್ಮ ಹೂಡಿಕೆಗಳು ಸಾಕಾಗುತ್ತಿಲ್ಲ ಮತ್ತು ನಮ್ಮ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಈ ಪ್ರಚಾರದ ಅಬ್ಬರವು ನಿಜವಾದ ಸಮಸ್ಯೆಗಳನ್ನು ಮರೆಮಾಚುವ ಅಪಾಯವಿದೆ. ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ, ಕೇವಲ ಘೋಷಣೆಗಳು ಮತ್ತು ಸಭೆಗಳಲ್ಲಿ ಕಾಲ ಕಳೆದರೆ, ಚೀನಾ ಮತ್ತು ಭಾರತದ ನಡುವಿನ ಎಐ ಅಂತರವು ದುರಸ್ತಿ ಮಾಡಲಾಗದಷ್ಟು ದೊಡ್ಡದಾಗಲಿದೆ.

ಜಾಗತಿಕ ಆರ್ಥಿಕತೆಗಳಲ್ಲಿ ಕೃತಕ ಬುದ್ಧಿಮತ್ತೆ ಅಂದರೆ (ಎಐ) ಮಹತ್ವದ ಪಾತ್ರ ವಹಿಸುತ್ತಿರುವ ಸಮಯ ಇದು. ಇದರಲ್ಲಿ ಚೀನಾ ತನ್ನದೇ ಆದ ಮುನ್ನಡೆ ಸಾಧಿಸಿದೆ. ಭಾರತ ಚೀನಾಕ್ಕೆ ಹೋಲಿಸಿದರೆ ಬಹಳ ಹಿಂದಿದೆ.

ಎಐ ಸ್ಪರ್ಧೆ ಜಾಗತಿಕ ಮಟ್ಟದಲ್ಲಿ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಚೀನಾ ಮತ್ತು ಭಾರತದ ಮಧ್ಯೆ ಪೈಪೋಟಿಯಿದ್ದರೂ, ಎರಡರ ನಡುವೆ ಅಂತರವೂ ಸ್ಪಷ್ಟವಾಗಿ ಬೆಳೆಯುತ್ತಲೇ ಇದೆ. ಚೀನಾ ಮುಂದಿನ ದಿನಗಳಲ್ಲಿ ಭಾರತಕ್ಕೆ ಸವಾಲಾಗಿ ಕಂಡುಬರುವ ಮಟ್ಟಕ್ಕೆ ಮುನ್ನಡೆ ಸಾಧಿಸಿದೆ.

ಎಐ ಸ್ಪರ್ಧೆಯಲ್ಲಿ ಭಾರತ ಚೀನಾದ ಮುಂದೆ ಸೋಲುತ್ತಿದೆಯೇ? ಎಂಬ ಪ್ರಶ್ನೆ ಇಂದು ಹೆಚ್ಚು ಪ್ರಸ್ತುತವಾಗಿದೆ. ದುರದೃಷ್ಟವಶಾತ್, ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಉತ್ತರ ಹೌದು ಎಂದೇ ಹೇಳಬೇಕಾಗುತ್ತದೆ.

ಚೀನಾ ಕೇವಲ ಮುಂದೆ ಇಲ್ಲ, ಅದು ಭಾರತವನ್ನು ಬಹಳ ಹಿಂದೆ ಬಿಟ್ಟು ಓಡುತ್ತಿದೆ. ಈ ಓಟದಲ್ಲಿ ಭಾರತ ಇನ್ನೂ ಆರಂಭಿಕ ಗೆರೆಯಲ್ಲೇ ತಡಕಾಡುತ್ತಿರುವಂತೆ ಭಾಸವಾಗುತ್ತಿದೆ. ಎಐಯಲ್ಲಿ ಚೀನಾದ ವ್ಯವಸ್ಥಿತ ಯೋಜನೆ, ದೈತ್ಯ ಹೂಡಿಕೆ ಮತ್ತು ದೃಢ ಸಂಕಲ್ಪದ ಮುಂದೆ ಭಾರತದ ಪ್ರಯತ್ನಗಳು ತೀರಾ ಸಣ್ಣದಾಗಿ ಕಾಣಿಸುತ್ತಿವೆ.

ಇದೊಂದು ಕೇವಲ ತಾಂತ್ರಿಕ ಪೈಪೋಟಿಯಲ್ಲ, ಭವಿಷ್ಯದ ಜಾಗತಿಕ ನಾಯಕತ್ವಕ್ಕಾಗಿ ನಡೆಯುತ್ತಿರುವ ಹೋರಾಟ. ಈ ಹೋರಾಟದಲ್ಲಿ ಭಾರತ ಹಿಂದುಳಿದರೆ, ಅದರ ಆರ್ಥಿಕ ಮತ್ತು ವ್ಯೆಹಾತ್ಮಕ ಪರಿಣಾಮಗಳು ಗಂಭೀರವಾಗಿರುತ್ತವೆ.

ಚೀನಾದ ಎಐ ಹೆಚ್ಚುಗಾರಿಕೆ ಮುಖ್ಯವಾಗಿ ಕಾಣಿಸುತ್ತಿರುವುದು, ಸಂಶ್ಲೇಷಿತ ದತ್ತಾಂಶ ಉತ್ಪಾದನೆಯಲ್ಲಿನ ಅದರ ಮುನ್ನಡೆಯಲ್ಲಿ.

ಪ್ರಪಂಚದಲ್ಲಿ ಪ್ರಸ್ತುತ ಕಾಣಿಸುತ್ತಿರುವುದಕ್ಕೆ ನಿಕಟವಾಗಿ ಡೇಟಾವನ್ನು ಪ್ರತಿಬಿಂಬಿಸುವ ತರಬೇತಿ ಡೇಟಾಸೆಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಅದು ಹೊಂದಿದೆ. ಆರೋಗ್ಯ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ಈ ಸಾಮರ್ಥ್ಯ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಚೀನೀ ವೈದ್ಯಕೀಯ ಎಐ ಪ್ಲಾಟ್‌ಫಾರ್ಮ್‌ಗಳು ಅಪರೂಪದ ರೋಗದ ಬೆಳವಣಿಗೆಯನ್ನು ಗಮನಿಸಬಲ್ಲವು. ರೋಗಿಯ ಗೌಪ್ಯತೆಗೆ ಧಕ್ಕೆಯಾಗದಂತೆ ಪ್ರಬಲ ರೋಗನಿರ್ಣಯ ಮಾದರಿ ತರಬೇತಿ ಇದರಿಂದ ಸಾಧ್ಯ.

ಚೀನಾದ ಸಂಶ್ಲೇಷಿತ ದತ್ತಾಂಶ ತಂತ್ರ ಭಾರತಕ್ಕಿಂತ ವರ್ಷಗಳಷ್ಟು ಮುಂದಿರುವಾಗ ನಾವು ಅದನ್ನು ಎಂದಾದರೂ ಹಿಂದಿಕ್ಕಬಹುದೆ? ಈ ಪ್ರಶ್ನೆಗೆ ಸದ್ಯಕ್ಕೆ ಸಕಾರಾತ್ಮಕ ಉತ್ತರ ನೀಡುವುದು ಕಷ್ಟ.

ಚೀನಾದ ಈ ಸಾಮರ್ಥ್ಯ ಆಕಸ್ಮಿಕವಾಗಿ ಬಂದಿದ್ದಲ್ಲ. ಇದು ದಶಕಗಳ ದೂರದೃಷ್ಟಿ, ಅಪಾರ ಪ್ರಮಾಣದ ರಾಷ್ಟ್ರೀಯ ಹೂಡಿಕೆ ಮತ್ತು ದತ್ತಾಂಶ ಬಳಕೆಯಲ್ಲಿನ ಕೆಲವೊಮ್ಮೆ ವಿವಾದಾತ್ಮಕ ಆದರೆ ಸರಳ ನಿಯಮಗಳಿಂದ ಸಾಧ್ಯವಾಗಿದೆ.

ಚೀನಾ ತನ್ನಲ್ಲಿರುವ ಬೃಹತ್ ಜನಸಂಖ್ಯೆಯ ನೈಜ ದತ್ತಾಂಶವನ್ನು ಬಳಸಿ, ಅದನ್ನು ಮತ್ತಷ್ಟು ಸಂಶ್ಲೇಷಿತ ದತ್ತಾಂಶ ದಿಂದ ಹಿಗ್ಗಿಸಿ, ತನ್ನ ಎಐ ಮಾದರಿಗಳನ್ನು ತರಬೇತುಗೊಳಿಸುತ್ತಿದೆ. ಇದಕ್ಕೆ ಹೋಲಿಸಿದರೆ, ಭಾರತದಲ್ಲಿ ಉತ್ತಮ ಗುಣಮಟ್ಟದ, ದೊಡ್ಡ ಪ್ರಮಾಣದ ಸ್ವದೇಶಿ ದತ್ತಾಂಶ ಸಂಗ್ರಹವೇ ಒಂದು ದೊಡ್ಡ ಸವಾಲಾಗಿದೆ. ಹೀಗಿರುವಾಗ, ಉತ್ತಮ ಸಂಶ್ಲೇಷಿತ ದತ್ತಾಂಶವನ್ನು ಸೃಷ್ಟಿಸುವುದು ಇನ್ನಷ್ಟು ಕಠಿಣ.

ಚೀನಾದ 1.2 ಬಿಲಿಯನ್ ಡಾಲರ್ ಮಾರುಕಟ್ಟೆಯ ಮುಂದೆ ಭಾರತದ 158 ಮಿಲಿಯನ್ ಡಾಲರ್ ಗುರಿ ಏನೇನೂ ಸಾಲದು. ಅದೂ ಭಾರತದಲ್ಲಿ 158 ಮಿಲಿಯನ್ ಡಾಲರ್ ತಲುಪಬಹುದು ಎಂಬ ನಿರೀಕ್ಷೆ ಇರುವುದು 2030ರಲ್ಲಿ.

ಈ ಅಂತರವನ್ನು ಕಡಿಮೆ ಮಾಡಲು ಕೇವಲ ಆಶಯ ಸಾಲದು, ಅಭೂತಪೂರ್ವ ಪ್ರಯತ್ನ ಬೇಕು. ಈ ತಾಂತ್ರಿಕ ಪ್ರಗತಿಗೆ ಗಣನೀಯ ಪ್ರಮಾಣದ ಹೂಡಿಕೆಯೇ ಆಧಾರ. 2024ರಲ್ಲಿ ಚೀನಾದ ಸಂಶ್ಲೇಷಿತ ದತ್ತಾಂಶ ಮಾರುಕಟ್ಟೆ 1.2 ಬಿಲಿಯನ್ ಡಾಲರ್ ಮುಟ್ಟಿತ್ತು.

ಹೆಚ್ಚಿನ ಎಐ ಸ್ಟಾರ್ಟ್‌ಅಪ್‌ಗಳು ತಮ್ಮ ಅಭಿವೃದ್ಧಿ ಪ್ರಕ್ರಿಯೆಗಳಲ್ಲಿ ಸಂಶ್ಲೇಷಿತ ದತ್ತಾಂಶ ಸೆಟ್‌ಗಳನ್ನು ರೂಪಿಸಿವೆ. ಆದರೆ ಇದಕ್ಕೆ ವಿರುದ್ಧವಾಗಿ, ಸಂಶ್ಲೇಷಿತ ದತ್ತಾಂಶ ಕ್ಷೇತ್ರದಲ್ಲಿ ಭಾರತ ಇನ್ನೂ ಅಂಬೆಗಾಲಿಡುವುದರಲ್ಲೇ ಇದೆ.

ಇಂಡಿಕಾ ಎಐನಂತಹ ಸ್ಟಾರ್ಟ್‌ಅಪ್‌ಗಳು ಪ್ರಗತಿ ಸಾಧಿಸುತ್ತಿದ್ದರೂ, ಅವುಗಳ ಮಾದರಿಗಳು ಚೀನಾದ ಸಾಧನೆಗೆ ಹೋಲಿಸಿದರೆ ಕಡಿಮೆ ನಿಖರತೆಯವಾಗಿವೆ. 2030ರ ವೇಳೆಗೆ 158 ಮಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿರುವ ಭಾರತೀಯ ಮಾರುಕಟ್ಟೆಯಲ್ಲಿ ದೇಶದ ವೈವಿಧ್ಯಮಯ ಭಾಷೆ ಮತ್ತು ಜನಸಂಖ್ಯೆಗೆ ಅನುಗುಣವಾಗಿ ಸ್ಥಳೀಯ ವೇದಿಕೆಗಳ ಕೊರತೆಯಿದೆ. ಬಹುಪಾಲು ಭಾರತೀಯ ಎಐ ಕಂಪೆನಿಗಳು ಪಾಶ್ಚಿಮಾತ್ಯ ಸಾಧನಗಳನ್ನೇ ಅವಲಂಬಿಸಿವೆ.

ಬೆಳೆ ಇಳುವರಿ ಮುನ್ಸೂಚನೆ ಮಾದರಿಗಳಿಗೆ ಅಗತ್ಯವಾದ ಸಂಶ್ಲೇಷಿತ ಕೃಷಿ ದತ್ತಾಂಶ ಸೆಟ್‌ಗಳ ತಯಾರಿಕೆಯಲ್ಲಿನ ಸವಾಲುಗಳು ಬಗೆಹರಿದಿಲ್ಲ. ದೇಶದ ಹಲವಾರು ಕೃಷಿ ವಲಯಗಳಲ್ಲಿ ಮೈಕ್ರೋ ಕ್ಲೈಮೇಟ್ ವ್ಯತ್ಯಾಸ ತಿಳಿಯುವಲ್ಲಿನ ಪ್ರಯತ್ನಗಳು ಸಾಮಾನ್ಯವಾಗಿ ವಿಫಲಗೊಳ್ಳುತ್ತಿವೆ. ಭಾರತ ತನ್ನ ಮೂಲಸೌಕರ್ಯ ಸರಿಪಡಿಸದೆ ಎಐ ಸೂಪರ್ ಪವರ್ ಆಗಬಹುದೇ? ಖಂಡಿತವಾಗಿಯೂ ಇಲ್ಲ.

ಎಐ ಎಂದರೆ ಕೇವಲ ಸಾಫ್ಟ್‌ವೇರ್ ಅಲ್ಲ, ಅದಕ್ಕೆ ಅಪಾರ ಪ್ರಮಾಣದ ಗಣನಾ ಶಕ್ತಿ ಅಂದರೆ computing power, ದತ್ತಾಂಶ ಸಂಗ್ರಹಣೆ ಮತ್ತು ವೇಗದ ನೆಟ್‌ವರ್ಕ್ ಬೇಕು. ಇವೆಲ್ಲಕ್ಕೂ ಆಧಾರ - ಸ್ಥಿರವಾದ ವಿದ್ಯುತ್ ಪೂರೈಕೆ. ಭಾರತದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಸ್ಥಿರ ವಿದ್ಯುತ್ ಪೂರೈಕೆಯೇ ಒಂದು ಕನಸಾಗಿರುವಾಗ ಅಲ್ಲಿ ಅತ್ಯಾಧುನಿಕ ಡೇಟಾ ಕೇಂದ್ರಗಳನ್ನು ಕಟ್ಟುವುದು ಹೇಗೆ?

ಚೀನಾದ ಥ್ರೀ ಟೈಯರ್ ನಗರಗಳಲ್ಲಿನ ಡೇಟಾ ಹಬ್‌ಗಳು ಕೇವಲ ಕಟ್ಟಡಗಳಲ್ಲ; ಅವು ಕಡಿಮೆ ವೆಚ್ಚ, ಸ್ಥಳೀಯ ಪ್ರೋತ್ಸಾಹ ಮತ್ತು ಸರಕಾರದ ಬೆಂಬಲದೊಂದಿಗೆ ಬೆಳೆದ ಪರಿಸರ ವ್ಯವಸ್ಥೆಗಳು.

ನಮ್ಮ ಕೊಯಮತ್ತೂರು ಮತ್ತು ಜೈಪುರದ ಡೇಟಾ ಕೇಂದ್ರಗಳು ಸಾಮರ್ಥ್ಯಕ್ಕಿಂತ ಕಡಿಮೆ ಕೆಲಸ ಮಾಡುತ್ತಿವೆ ಎಂದರೆ ಅದಕ್ಕೆ ಮೂಲ ಕಾರಣವೇ ಈ ಮೂಲಸೌಕರ್ಯದ ಕೊರತೆ ಮತ್ತು ಕ್ಲೌಡ್ ಸೇವೆಗಳಿಗೆ ಸ್ಥಳೀಯ ಬೇಡಿಕೆಯನ್ನೂ ಸೃಷ್ಟಿಸಲು ವಿಫಲವಾಗಿರುವುದು. ಚೀನಾದಲ್ಲಿ ಸರಕಾರ ನೀಡುವ ಸಬ್ಸಿಡಿ ಮತ್ತು ಬೆಂಬಲದ ಮುಂದೆ ನಮ್ಮ ರಾಜ್ಯಗಳ ಸಹಾಯಧನಗಳು ನಗಣ್ಯ. ಈ ಮೂಲಭೂತ ಅಡಚಣೆಯನ್ನು ನಿವಾರಿಸದ ಹೊರತು, ಎಐ ಸೂಪರ್ ಪವರ್ ಕನಸು ಕೇವಲ ಮಾತುಗಳಲ್ಲಿ ಉಳಿಯುತ್ತದೆ.

ಇನ್ನು ಮೂಲಸೌಕರ್ಯದ ವಿಷಯಕ್ಕೆ ಬಂದರೆ, ಥ್ರೀ ಟೈಯರ್ ನಗರಗಳಲ್ಲಿನ ಚೀನಾದ ಎಐ ಡೇಟಾ ಹಬ್‌ಗಳು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ಕೇಂದ್ರಗಳು ಕಡಿಮೆ ವೆಚ್ಚದವಾಗಿದ್ದು, ಸ್ಥಳೀಯ ಆಡಳಿತದ ಪ್ರೋತ್ಸಾಹವೂ ಇದೆ. ಅಂತಹ ವಿಕೇಂದ್ರೀಕರಣದಿಂದಾಗಿ ನಿರಂತರ ಡೇಟಾ ಪರಿಷ್ಕರಣೆ ಸುಗಮವಾಗುತ್ತದೆ. ಆದರೆ ನಮ್ಮಲ್ಲಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೆಲಸ ಭರವಸೆದಾಯಕವಾಗಿದ್ದರೂ, ಸಾಕಷ್ಟು ಅಡೆತಡೆಗಳಿವೆ.

ಕೊಯಮತ್ತೂರು ಮತ್ತು ಜೈಪುರದಂತಹ ನಗರಗಳಲ್ಲಿನ ಹೊಸ ಡೇಟಾ ಕೇಂದ್ರಗಳು ಅಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಕ್ಲೌಡ್ ಸೇವೆಯ ಸೀಮಿತ ಬೇಡಿಕೆ ಕಾರಣದಿಂದಾಗಿ ಸಾಮರ್ಥ್ಯಕ್ಕಿಂತ ಕಡಿಮೆ ಕೆಲಸ ಮಾಡುವಂತಾಗಿದೆ. ರಾಜ್ಯ ಸಬ್ಸಿಡಿಗಳು ಕೂಡ ಚೀನಾದಲ್ಲಿ ಸಿಗುತ್ತಿರುವ ಬೆಂಬಲಕ್ಕೆ ಹೋಲಿಸಿದರೆ ಬಹಳ ಕಡಿಮೆ. ಹೀಗಾಗಿ, ಇಲ್ಲಿನ ಸ್ಟಾರ್ಟ್‌ಅಪ್‌ಗಳು ಡೇಟಾ ಕಾರ್ಯಾಚರಣೆಗಳಿಗೆ ಹೆಚ್ಚಿನ ಬಂಡವಾಳ ಹಾಕಬೇಕಾಗುತ್ತದೆ.

ನೀತಿಯಲ್ಲಿನ ಅಡಚಣೆಗಳು ಮತ್ತು ಅನುಷ್ಠಾನದಲ್ಲಿನ ವಿಳಂಬಗಳು ಭಾರತದ ಎಐ ಮಹತ್ವಾಕಾಂಕ್ಷೆಗಳನ್ನು ನಾಶಮಾಡುತ್ತಿವೆಯೇ?

ಖಂಡಿತವಾಗಿಯೂ ಹೌದು.

ಭಾರತದಲ್ಲಿ ಉತ್ತಮ ನೀತಿಗಳನ್ನು ರೂಪಿಸುವುದರಲ್ಲಿ ಕೊರತೆಯಿಲ್ಲ, ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವುದರಲ್ಲೇ ನಾವು ಎಡವುತ್ತೇವೆ. ಇಂಡಿಯಾ ಎಐ ಮಿಷನ್‌ನಂತಹ ಯೋಜನೆಗಳು ಕಾಗದದ ಮೇಲೆ ಅದ್ಭುತವಾಗಿ ಕಾಣಿಸುತ್ತವೆ. ಆದರೆ, ಸ್ಟಾರ್ಟ್‌ಅಪ್‌ಗಳಿಗೆ ನಿಜವಾಗಿ ಬೇಕಿರುವ ಸಮಯದಲ್ಲಿ ಅನುದಾನ, ಸಂಪನ್ಮೂಲ ಮತ್ತು ಬೆಂಬಲ ಸಿಗುವುದಿಲ್ಲ.

ಅಧಿಕಾರಶಾಹಿಯ ಕೆಂಪು ಪಟ್ಟಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವಿನ ಸಮನ್ವಯದ ಕೊರತೆ ಮತ್ತು ಪೇಟೆಂಟ್ ಅನುಮೋದನೆಯಲ್ಲಿನ ಅತಿಯಾದ ವಿಳಂಬ ಇವೆಲ್ಲವೂ ನಾವೀನ್ಯತೆಯ ವೇಗವನ್ನು ಕೊಲ್ಲುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ, ಚೀನಾದಲ್ಲಿ ಸರಕಾರದ ನಿರ್ಧಾರಗಳು ವೇಗವಾಗಿ ಕಾರ್ಯರೂಪಕ್ಕೆ ಬರುತ್ತವೆ. ಅಲ್ಲಿನ ಸಮಗ್ರ ನೀತಿ ಶಿಕ್ಷಣ, ಉದ್ಯಮ ಮತ್ತು ಮೂಲಸೌಕರ್ಯವನ್ನು ಒಂದೇ ದಾರಿಯಲ್ಲಿ ಕೊಂಡೊಯ್ಯುತ್ತದೆ. ನಮ್ಮಲ್ಲಿ, ಪ್ರತಿಯೊಂದು ಹೆಜ್ಜೆಗೂ ಅಡೆತಡೆಗಳು ಎದುರಾಗುತ್ತವೆ. ಈ ಆಮೆ ವೇಗದ ಅನುಷ್ಠಾನದಿಂದಾಗಿ, ನಾವು ಚೀನಾದ ಜೊತೆ ಸ್ಪರ್ಧಿಸುವುದು ಅಸಾಧ್ಯವಾಗುತ್ತಿದೆ.

ಚೀನಾದಲ್ಲಿ ನೀತಿ ಅನುಷ್ಠಾನವೂ ಈ ಕ್ಷೇತ್ರದಲ್ಲಿನ ಅದರ ಪ್ರಗತಿಗೆ ಪಾಲು ನೀಡುತ್ತದೆ. ಅಲ್ಲಿನ ಸಮಗ್ರ ಎಐ ನೀತಿ ಅಲ್ಲಿನ ಶಿಕ್ಷಣ, ಉದ್ಯಮ ಮತ್ತು ಮೂಲಸೌಕರ್ಯಗಳ ನಡುವೆ ಸಮನ್ವಯ ಸಾಧಿಸಿದೆ. ಸರಕಾರ ಮತ್ತು ಉದ್ಯಮ ಪಾಲುದಾರಿಕೆಗಳಿಂದ ಹುಟ್ಟಿಕೊಂಡ ಎಐ ಪೇಟೆಂಟ್‌ಗಳ ಪ್ರಮಾಣ ಗಮನಾರ್ಹವೆನ್ನಿಸಲು ಇದು ಕಾರಣವಾಗಿದೆ.

ಭಾರತದ ರಾಷ್ಟ್ರೀಯ ಎಐ ಕಾರ್ಯತಂತ್ರ ಮಹತ್ವಾಕಾಂಕ್ಷೆ ಹೊಂದಿದ್ದರೂ, ಅನುಷ್ಠಾನದಲ್ಲಿ ಸವಾಲುಗಳಿವೆ. ಇಂಡಿಯಾ ಎಐ ಮಿಷನ್‌ನಂತಹ ಉಪಕ್ರಮಗಳು ಸ್ಟಾರ್ಟ್‌ಅಪ್‌ಗಳಿಗೆ ಅಗತ್ಯ ಭರವಸೆಗಳನ್ನು ಇನ್ನೂ ಸಂಪೂರ್ಣವಾಗಿ ಪೂರೈಸಿಲ್ಲ. ರಾಜ್ಯ ಮಟ್ಟದ ಯೋಜನೆಗಳು ಅಧಿಕಾರಶಾಹಿ ಅಡೆತಡೆಗಳಿಂದಾಗಿ ವಿಳಂಬವಾಗುತ್ತಿವೆ. ಎಐ ನಾವೀನ್ಯತೆಗಳಿಗೆ ಪೇಟೆಂಟ್ ಅನುಮೋದನೆಯಲ್ಲೂ ವಿಳಂಬ ಕಾಡುತ್ತಿರುವುದು ಮತ್ತೊಂದು ತೊಂದರೆ.

ಭಾರತದ ಶ್ರೀಮಂತ ಭಾಷೆಗಳು ಮತ್ತು ಉಪಭಾಷೆಗಳು ಎಐ ತರಬೇತಿಗೆ ವಿಶಿಷ್ಟ ಸವಾಲುಗಳನ್ನು ಒಡ್ಡುತ್ತವೆ. ಪ್ರಸ್ತುತ ನೈಸರ್ಗಿಕ ಭಾಷಾ ಸಂಸ್ಕರಣೆ (ಎನ್‌ಎಲ್‌ಪಿ) ಮಾದರಿಗಳು ಭಾಷಾ ವ್ಯತ್ಯಾಸಗಳ ಸೀಮಿತ ಭಾಗವನ್ನು ಮಾತ್ರ ಒಳಗೊಂಡಿವೆ. ಭಾಷಿನಿಯ ಕ್ರೌಡ್‌ಸೋರ್ಸಿಂಗ್ ಪ್ಲಾಟ್‌ಫಾರ್ಮ್‌ನಂತಹ ಪ್ರಯತ್ನಗಳು ಡೇಟಾ ಗುಣಮಟ್ಟದ ಸಮಸ್ಯೆ ಎದುರಿಸುತ್ತಿವೆ. ‘ಕಾರ್ಯಾ’ದ ಎಥಿಕಲ್ ಕ್ರೌಡ್‌ಸೋರ್ಸಿಂಗ್ ಮಾದರಿಯಂಥವು ಸಣ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತವೆ.

ಇದಲ್ಲದೆ, ಭಾರತೀಯ ಎಐ ಸ್ಟಾರ್ಟ್‌ಅಪ್‌ಗಳು ಹೆಚ್ಚಾಗಿ ಪ್ರಾದೇಶಿಕ ಭಾಷಾ ಬೆಂಬಲಕ್ಕಾಗಿ ಜಾಗತಿಕ ಭಾಷಾ ಮಾದರಿಗಳನ್ನು ಅವಲಂಬಿಸಿವೆ. ಇದರಿಂದ ಹೆಚ್ಚಿನ ವೆಚ್ಚವಾಗುವುದು ಮಾತ್ರವಲ್ಲ, ಹೆಚ್ಚಿನ ಅವಲಂಬನೆಗೂ ಕಾರಣವಾಗಿದೆ. ಇದು ನಮ್ಮ ತಾಂತ್ರಿಕ ಸಾರ್ವಭೌಮತ್ವಕ್ಕೇ ಅಪಾಯಕಾರಿ.

ನಮ್ಮ ಭಾಷಾ ವೈವಿಧ್ಯತೆ ನಮ್ಮ ಶಕ್ತಿಯಾಗಬೇಕಿತ್ತು, ಆದರೆ ಅಗತ್ಯ ಹೂಡಿಕೆ ಮತ್ತು ದೃಷ್ಟಿಕೋನದ ಕೊರತೆಯಿಂದಾಗಿ ಇದು ನಮ್ಮ ದೌರ್ಬಲ್ಯವಾಗಿ ಪರಿಣಮಿಸುತ್ತಿದೆ.

ಚೀನಾ ಎಐ ಅನ್ನು ಕೇವಲ ಆರ್ಥಿಕ ಸಾಧನವಾಗಿ ನೋಡುತ್ತಿಲ್ಲ; ಅದು ಅದನ್ನು ತನ್ನ ಜಾಗತಿಕ ಪ್ರಭಾವವನ್ನು ಹೆಚ್ಚಿಸಲು, ಮಿಲಿಟರಿ ಸಾಮರ್ಥ್ಯವನ್ನು ಬಲಪಡಿಸಲು ಮತ್ತು ಸಮಾಜದ ಮೇಲೆ ನಿಯಂತ್ರಣ ಸಾಧಿಸಲು ಬಳಸುತ್ತಿದೆ. ಆದರೆ ಭಾರತದಲ್ಲಿ, ಎಐ ಇನ್ನೂ ಹೆಚ್ಚಾಗಿ ಚರ್ಚೆಗಳು, ಸಮಿತಿಗಳು ಮತ್ತು ಘೋಷಣೆಗಳ ಮಟ್ಟದಲ್ಲೇ ಇದೆ.

ಚೀನಾ ಈಗಾಗಲೇ ತನ್ನ ’ಡಿಜಿಟಲ್ ಸಿಲ್ಕ್ ರೋಡ್’ ಮೂಲಕ ತನ್ನ ಎಐ ತಂತ್ರಜ್ಞಾನವನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ. ಆದರೆ ನಾವು ಇನ್ನೂ ನಮ್ಮದೇ ಆದ ಸವಾಲುಗಳನ್ನು ನಿಭಾಯಿಸಲು ಹೆಣಗಾಡುತ್ತಿದ್ದೇವೆ. ಈ ಆಟದಲ್ಲಿ ಉಳಿಯಬೇಕಾದರೆ, ಕೇವಲ ಮಾತನಾಡುವುದು ಸಾಲದು, ಕಾರ್ಯರೂಪಕ್ಕೆ ಇಳಿಯಬೇಕು.

ಹಾಗಾದರೆ, ಚೀನಾದ ಎದುರಲ್ಲಿ ನಮ್ಮ ಪೈಪೋಟಿ ಸರಿಗಟ್ಟುವುದಕ್ಕೆ ಅಥವಾ ಈಗಿರುವ ಅಂತರವನ್ನು ಕಡಿಮೆ ಮಾಡುವುದಕ್ಕಾದರೂ ಅಗತ್ಯವಾಗಿ ಮಾಡಬೇಕಿರುವುದೇನು?

ಮೊದಲನೆಯದಾಗಿ, ಸಂಶ್ಲೇಷಿತ ದತ್ತಾಂಶ ಅಭಿವೃದ್ಧಿ ಅಗತ್ಯ ಎಂದು ಪರಿಣಿತರು ಹೇಳುತ್ತಾರೆ. ಇದು ಕೇವಲ ಅಗತ್ಯವಲ್ಲ, ಅನಿವಾರ್ಯ. ಇದಕ್ಕೆ ಸರಕಾರ ಮತ್ತು ಖಾಸಗಿ ವಲಯ ಎರಡೂ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕು.

ಎರಡನೆಯದಾಗಿ, ಮೂಲಸೌಕರ್ಯ ಹೆಚ್ಚಿಸಬೇಕಿದೆ. ಸ್ಥಿರವಾದ ವಿದ್ಯುತ್ ಪೂರೈಕೆ ಅಗತ್ಯ. ಪ್ರಮುಖ ಕ್ಲೌಡ್ ಸೇವಾ ಪೂರೈಕೆದಾರರನ್ನು ಆಕರ್ಷಿಸಲು, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ದತ್ತಾಂಶ ಕೇಂದ್ರಗಳನ್ನು ವಿಸ್ತರಿಸಬೇಕಿದೆ. ಅವುಗಳ ಮಟ್ಟ ಅತ್ಯುತ್ತಮವಾಗಿಸುವುದು ಕೂಡ ಮುಖ್ಯ. ಇದು ಕೇವಲ ವಿಸ್ತರಣೆಯಲ್ಲ, ಗುಣಮಟ್ಟದ ಸುಧಾರಣೆಯೂ ಆಗಬೇಕು.

ಮೂರನೆಯದಾಗಿ, ನೀತಿ ಅನುಷ್ಠಾನ.ಎಐ ತಂತ್ರಗಳ ಅನುಷ್ಠಾನ ವಿಳಂಬವಾಗದಂತೆ ನೋಡಬೇಕು. ಪೇಟೆಂಟ್ ಅನುಮೋದನೆ ಕೂಡ ಹೆಚ್ಚು ಸಮಯ ತೆಗೆದುಕೊಳ್ಳದಂತೆ ಮಾಡಬೇಕು. ಅಧಿಕಾರಿಗಳ ಮಟ್ಟದಲ್ಲಿ ಕೆಲಸ ಬೇಗ ಆಗುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಮತ್ತು ಅಧಿಕಾರಶಾಹಿಯಲ್ಲಿ ಸುಧಾರಣೆ ಅತ್ಯಗತ್ಯ.

ನಾಲ್ಕನೆಯದಾಗಿ, ಭಾಷಾ ವೈವಿಧ್ಯತೆಗೆ ಅನುಗುಣವಾಗಿ ಕೆಲಸ ಅಗಬೇಕಿರುವುದಕ್ಕೆ ಗಮನ ಕೊಡಬೇಕು. ಭಾರತದ ಭಾಷಾ ವೈವಿಧ್ಯತೆಯ ಸಂಪೂರ್ಣ ಸ್ಪೆಕ್ಟ್ರಂ ಅನ್ನು ಒಳಗೊಳ್ಳುವ ಎನ್‌ಎಲ್‌ಪಿ ಮಾದರಿಗಳಲ್ಲಿ ಹೂಡಿಕೆ ಮಾಡಬೇಕು. ಇದನ್ನು ಕೇವಲ ಸವಾಲಾಗಿ ನೋಡದೆ, ಒಂದು ಅವಕಾಶವಾಗಿ ಪರಿಗಣಿಸಬೇಕು.

ನಾವು ಎಐ ಸೂಪರ್ ಪವರ್ ಆಗುತ್ತೇವೆ ಎಂಬ ಘೋಷಣೆಗಳು ಜೋರಾಗಿ ಕೇಳಿಬರುತ್ತಿವೆ. ಆದರೆ ತೆರೆಯ ಮರೆಯಲ್ಲಿ, ವಾಸ್ತವವು ಕಠೋರವಾಗಿದೆ.

ನಮ್ಮ ಪ್ರಗತಿ ನಿಧಾನವಾಗಿದೆ, ನಮ್ಮ ಹೂಡಿಕೆಗಳು ಸಾಕಾಗು ತ್ತಿಲ್ಲ ಮತ್ತು ನಮ್ಮ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಈ ಪ್ರಚಾರದ ಅಬ್ಬರವು ನಿಜವಾದ ಸಮಸ್ಯೆಗಳನ್ನು ಮರೆಮಾಚುವ ಅಪಾಯವಿದೆ. ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ, ಕೇವಲ ಘೋಷಣೆಗಳು ಮತ್ತು ಸಭೆಗಳಲ್ಲಿ ಕಾಲ ಕಳೆದರೆ, ಚೀನಾ ಮತ್ತು ಭಾರತದ ನಡುವಿನ ಎಐ ಅಂತರವು ದುರಸ್ತಿ ಮಾಡಲಾಗದಷ್ಟು ದೊಡ್ಡದಾಗಲಿದೆ.

ಕೃಪೆ: Thewire

share
ಸಂದೀಪ್ ನರ್ವಾಣಿ
ಸಂದೀಪ್ ನರ್ವಾಣಿ
Next Story
X