Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರವಾಹ, ಭೂಕುಸಿತ: ಬೆಳಗಾವಿಯಲ್ಲಿ ಅತೀ...

ಪ್ರವಾಹ, ಭೂಕುಸಿತ: ಬೆಳಗಾವಿಯಲ್ಲಿ ಅತೀ ಹೆಚ್ಚು ಅಪಾಯ ಸಾಧ್ಯತೆ

ಜಿ.ಮಹಾಂತೇಶ್ಜಿ.ಮಹಾಂತೇಶ್30 May 2025 8:30 AM IST
share
ಪ್ರವಾಹ, ಭೂಕುಸಿತ: ಬೆಳಗಾವಿಯಲ್ಲಿ ಅತೀ ಹೆಚ್ಚು ಅಪಾಯ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಎದುರಾಗಬಹುದಾದ ಪ್ರವಾಹ, ಭೂ ಕುಸಿತ ಇತರ ವಿಪತ್ತುಗಳಿಗೆ ತುತ್ತಾಗಬಹುದಾದ ಪ್ರದೇಶ ಮತ್ತು ಜನಸಂಖ್ಯೆ ವಿವರಗಳನ್ನು ಕಂದಾಯ ಇಲಾಖೆಯು ಸಿದ್ಧಪಡಿಸಿಕೊಂಡಿದೆ.

2025ರ ಜೂನ್‌ನಿಂದ ಸೆಪ್ಟಂಬರ್‌ವರೆಗೆ ಮಳೆ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ವಾಡಿಕೆಗಿಂತಾ ಹೆಚ್ಚು ಮಳೆಯಾಗುವ ಸಂಭವವಿದೆ. ಹೀಗಾಗಿ ಕಂದಾಯ ಇಲಾಖೆಯು ಪ್ರವಾಹ, ಭೂ ಕುಸಿತದಿಂದಾಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಿದೆ.

ಕಂದಾಯ ಇಲಾಖೆಯು ಸಿದ್ಧಪಡಿಸಿಕೊಂಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 19,31,400 ಮಂದಿ ಪ್ರವಾಹ ಅಥವಾ ಭೂಕುಸಿತಕ್ಕೆ ತುತ್ತಾಗಬಹುದು ಎಂದು ಅಂದಾಜಿಸಿದೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿಯೇ 11,74,471 ಮಂದಿ ಇದ್ದಾರೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಈ ಸಂಖ್ಯೆಯು ರಾಜ್ಯದಲ್ಲಿಯೇ ಅತೀ ಹೆಚ್ಚಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 2025ರ ಮೇ 30 ಮತ್ತು 31ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನಕ್ಕೆ ಕಂದಾಯ ಇಲಾಖೆಯು ಈ ಅಂಕಿ ಅಂಶವನ್ನು ಒದಗಿಸಿದೆ.

ಈ ಸಮ್ಮೇಳನಕ್ಕೆ 41 ಇಲಾಖೆಗಳು ವಿವಿಧ ಯೋಜನೆಗಳು, ಕಾಮಗಾರಿಗಳು, ಅನುದಾನ ಹಂಚಿಕೆ, ಬಿಡುಗಡೆ, ವೆಚ್ಚ ಸೇರಿದಂತೆ ಇನ್ನಿತರ ವಿವರಗಳನ್ನು ಮಂಡಿಸಿವೆ. ಈ ಎಲ್ಲ ಅಂಕಿ ಅಂಶಗಳು, ಸಮಗ್ರ ಮಾಹಿತಿ, ವಿವರಗಳು "the-file.in"ಗೆ ಲಭ್ಯವಾಗಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 201 ಸ್ಥಳಗಳನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಗುರುತಿಸಿದೆ. ರಾಜ್ಯದ 1,280 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ 2,269 ಗ್ರಾಮಗಳು ಪ್ರವಾಹ, ಭೂ ಕುಸಿತ ಪೀಡಿತವಾಗಿವೆ. ಈ ಪೈಕಿ 19,31,400 ಜನಸಂಖ್ಯೆ ಪ್ರವಾಹ, ಭೂ ಕುಸಿತಕ್ಕೆ ತುತ್ತಾಗಬಹುದು ಎಂದು ಅಂದಾಜಿಸಿರುವುದು ಗೊತ್ತಾಗಿದೆ.

ಎಪ್ರಿಲ್ 1ರಿಂದ ಮೇ 27ರವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ 65 ಜೀವ ಹಾನಿ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 691 ಒಟ್ಟು ಜಾನುವಾರು ಹಾನಿಯಾಗಿವೆ. 58 ಮನೆಗಳು ಸಂಪೂರ್ಣವಾಗಿ ಹಾನಿಯಾಗಿವೆ. 1,644 ಮನೆಗಳು ಭಾಗಶಃ ಹಾನಿಯಾಗಿವೆ.

2025 ಮೇ 27ರ ಅಂತ್ಯಕ್ಕೆ ರಾಜ್ಯದ ಜಲಾಶಯಗಳಲ್ಲಿ ಒಟ್ಟು 273.39 ಟಿಎಂಸಿ ನೀರು ಶೇಖರಣೆಯಾಗಿದೆ. 2024ರ ಮೇ 27ರ ಅಂತ್ಯಕ್ಕೆ ರಾಜ್ಯದ ಜಲಾಶಯಗಳಲ್ಲಿ ಒಟ್ಟು 180.95 ಟಿಎಂಸಿ ನೀರು ಶೇಖರಣೆಯಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 92.44 ಟಿಎಂಸಿ ನೀರು ಹೆಚ್ಚು ಶೇಖರಣೆಯಾಗಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಲಿಂಗನಮಕ್ಕಿ, ಸೂಪ, ವರಾಹಿಯಲ್ಲಿ ಗರಿಷ್ಠ 328.18 ಟಿಎಂಸಿ ಸಾಮರ್ಥ್ಯವಿದೆ. 2025ರ ಮೇ 27ರ ಅಂತ್ಯಕ್ಕೆ 82.38 ಟಿಎಂಸಿ ನೀರು ಶೇಖರಣೆಯಾಗಿದೆ. ಕಳೆದ ವರ್ಷದ ಮೇ 27ರ ಅಂತ್ಯಕ್ಕೆ 55.04 ಟಿಎಂಸಿ ನೀರು ಶೇಖರಣೆಯಾಗಿತ್ತು. ಹಾರಂಗಿ, ಹೇಮಾವತಿ, ಕೃಷ್ಣರಾಜಸಾಗರ, ಕಬಿನಿ ಜಲಾಶಯಗಳಲ್ಲಿ 114.57 ಟಿಎಂಸಿ ಸಾಮರ್ಥ್ಯವಿದೆ. ಈ ಪೈಕಿ 2025 ಮೇ 27ರ ಅಂತ್ಯಕ್ಕೆ 52.56 ಟಿಎಂಸಿ ಶೇಖರಣೆಯಾಗಿದೆ. 2024ರ ಮೇ 27ಕ್ಕೆ 32.69 ಟಿಎಂಸಿ ಶೇಖರಣೆಯಾಗಿತ್ತು.

ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರದಲ್ಲಿ ಗರಿಷ್ಠ 422.45 ಟಿಎಂಸಿ ಸಾಮರ್ಥ್ಯವಿದೆ. 2025ರ ಮೇ 27ರ ಅಂತ್ಯಕ್ಕೆ 112.79 ಟಿಎಂಸಿ ಶೇಖರಣೆಯಾಗಿದೆ. 2024ರ ಮೇ 27ರ ಅಂತ್ಯಕ್ಕೆ 74.98 ಟಿಎಂಸಿ ಶೇಖರಣೆಯಾಗಿತ್ತು.

ಬೆಳಗಾವಿಯಲ್ಲಿ 230 ಗ್ರಾಮಗಳಲ್ಲಿ 11,74,471 ಮಂದಿ ಪ್ರವಾಹ, ಭೂ ಕುಸಿತಕ್ಕೆ ತುತ್ತಾಗಬಹುದು. ಬಾಗಲಕೋಟೆಯಲ್ಲಿ 1,20,447, ವಿಜಯಪುರ 1,12,000, ಉತ್ತರ ಕನ್ನಡ 86,252, ಚಿತ್ರದುರ್ಗದಲ್ಲಿ 47,805, ಬೀದರ್‌ನಲ್ಲಿ 44,150, ಶಿವಮೊಗ್ಗದಲ್ಲಿ 40,767, ಕಲಬುರಗಿಯಲ್ಲಿ 40,731, ಗದಗ್‌ನಲ್ಲಿ 33,905, ಹಾವೇರಿಯಲ್ಲಿ 21,047, ಬಳ್ಳಾರಿಯಲ್ಲಿ 29,365, ಕೊಪ್ಪಳದಲ್ಲಿ 28,771, ದಕ್ಷಿಣ ಕನ್ನಡದಲ್ಲಿ 21,500, ತುಮಕೂರಿನಲ್ಲಿ 8,508, ಉಡುಪಿಯಲ್ಲಿ 15,828, ಮಂಡ್ಯದಲ್ಲಿ 15,620, ಚಾಮರಾಜನಗರದಲ್ಲಿ 15,000, ಚಿಕ್ಕಮಗಳೂರಿನಲ್ಲಿ 13,575, ಕೊಡಗಿನಲ್ಲಿ 12,159, ಯಾದಗಿರಿಯಲ್ಲಿ 8,786, ಹಾಸನದಲ್ಲಿ 8,707, ಧಾರವಾಡದಲ್ಲಿ 8,677, ರಾಯಚೂರಿನಲ್ಲಿ 8,235, ವಿಜಯನಗರದಲ್ಲಿ 6,191, ಮೈಸೂರಿನಲ್ಲಿ 3,677, ರಾಮನಗರದಲ್ಲಿ 3,630, ದಾವಣಗೆರೆಯಲ್ಲಿ 1,596 ಜನಸಂಖ್ಯೆ ಪ್ರವಾಹ, ಭೂ ಕುಸಿತಕ್ಕೆ ತುತ್ತಾಗಬಹುದು ಎಂದು ಅಂದಾಜಿಸಿರುವುದು ತಿಳಿದು ಬಂದಿದೆ.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X