Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಮಳೆಯ ಹನಿಗಳ ದ್ವಿಮುಖ ಪಯಣ: ಸಕಲೇಶಪುರದ...

ಮಳೆಯ ಹನಿಗಳ ದ್ವಿಮುಖ ಪಯಣ: ಸಕಲೇಶಪುರದ ರಿಡ್ಜ್ ಪಾಯಿಂಟ್ ವೈಶಿಷ್ಟ್ಯ

ಮಲ್ನಾಡ್ ಮೆಹಬೂಬ್ಮಲ್ನಾಡ್ ಮೆಹಬೂಬ್11 Aug 2025 8:15 AM IST
share
ಮಳೆಯ ಹನಿಗಳ ದ್ವಿಮುಖ ಪಯಣ: ಸಕಲೇಶಪುರದ ರಿಡ್ಜ್ ಪಾಯಿಂಟ್ ವೈಶಿಷ್ಟ್ಯ

ಸಕಲೇಶಪುರದ ಹಸಿರು ಹೊದಿಕೆಯ ಮಡಿಲಲ್ಲಿನ ಮಂಕನಹಳ್ಳಿ ಗ್ರಾಮದ ಸುತ್ತಮುತ್ತ ಒಂದೊಂದು ಹನಿ ಮಳೆಯು ತನ್ನ ಜೀವನದ ಕಥೆಯನ್ನು ಹೇಳುವಂತೆ ಕಾಣುವ ವಿಶಿಷ್ಟ ತಾಣವಿದೆ.

ಈ ತಾಣವನ್ನು ಸ್ಥಳೀಯರು ರಿಡ್ಜ್ ಪಾಯಿಂಟ್ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಮಹತ್ವ ಜಗತ್ತಿನಲ್ಲೇ ಅಪರೂಪದ್ದು.

ಈ ಪ್ರದೇಶದಲ್ಲಿ ಬರುವ ಮಳೆಯ ನೀರಿಗೆ ಎರಡು ಬಗೆಯ ಗಮ್ಯಸ್ಥಾನ. ಈ ಹಸಿರು ಪರ್ವತಗಳಲ್ಲಿ ಬೀಳುವ ಮಳೆಯ ಹನಿ ಒಂದೆಡೆ ಅರಬ್ಬೀ ಸಮುದ್ರದತ್ತ ಪಶ್ಚಿಮಕ್ಕೆ ಹರಿಯುವುದಾದರೆ, ಇನ್ನೊಂದೆಡೆ ಬಂಗಾಳಕೊಲ್ಲಿಯತ್ತ ಪೂರ್ವಕ್ಕೆ ಪ್ರಯಾಣ ಆರಂಭಿಸುತ್ತದೆ. ಇಂತಹ ಸ್ಥಳವನ್ನು ಜಲವಿಭಜಕ ರೇಖೆ ಅಥವಾ ವಾಟರ್ ಡಿವೈಡ್ ಎಂದು ಕರೆಯುತ್ತಾರೆ.

ಮಂಕನಹಳ್ಳಿ ರಿಡ್ಜ್ ಪಾಯಿಂಟ್‌ನಲ್ಲಿ ನೀರು ಪಶ್ಚಿಮಕ್ಕೆ ಹರಿಯುವುದಾದರೆ ಅದು ಕುಮಾರಧಾರಾ, ನೇತ್ರಾವತಿ ನದಿಗಳ ಮೂಲಕ ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರ ತಲುಪುತ್ತದೆ. ಇನ್ನೊಂದೆಡೆ, ಪೂರ್ವದತ್ತ ಹರಿಯುವ ನೀರು ಹೇಮಾವತಿ, ಕಾವೇರಿ ನದಿಗಳ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಒಂದೇ ಸ್ಥಳದಲ್ಲಿ ಹುಟ್ಟಿದ ಹನಿಗಳು ಎರಡು ದಿಕ್ಕಿಗೆ ಹರಿದು ಎರಡು ವಿಭಿನ್ನ ಸಮುದ್ರಗಳಲ್ಲಿ ತಮ್ಮ ಅಂತ್ಯ ಕಂಡುಕೊಳ್ಳುವುದು ಭೂಗೋಳ ಶಾಸ್ತ್ರದ ಅದ್ಭುತ ಅಂಶಗಳಲ್ಲಿ ಒಂದು.

ಈ ಪ್ರದೇಶ ಪಶ್ಚಿಮಘಟ್ಟದ ಜೀವ ವೈವಿಧ್ಯ ಹಾಟ್‌ಸ್ಪಾಟ್. ಅಪಾರ ಮಳೆ, ದಟ್ಟ ಅರಣ್ಯ, ಅಪರೂಪದ ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಇಲ್ಲಿ ತಮ್ಮ ಮನೆ ಮಾಡಿಕೊಂಡಿವೆ. ಹವಾಮಾನ ಬದಲಾವಣೆ ಮತ್ತು ಅರಣ್ಯ ನಾಶದಿಂದ ಈ ಜಲವಿಭಜಕ ಪ್ರದೇಶದ ಸಂರಕ್ಷಣೆ ಇಂದು ಅತ್ಯಂತ ಅಗತ್ಯವಾಗಿದೆ. ನೀರಿನ ಈ ದ್ವಿಮುಖ ಪಯಣವನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆಯಾಗಿದೆ. ಮಳೆಯ ಹನಿ ಎರಡು ದಿಕ್ಕಿಗೆ ಹರಿಯುವ ದೃಶ್ಯ ನೋಡಲು ಹಲವಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಕೆಲವರು ಸಣ್ಣ ಹಳ್ಳಗಳಲ್ಲಿ ನೀರು ಸುರಿದು ಅದರ ದಿಕ್ಕು ನೋಡುತ್ತ ಕುತೂಹಲದಿಂದ ಕಣ್ತುಂಬಿಕೊಳ್ಳುತ್ತಾರೆ. ಪರ್ವತಗಳ ನಡುವೆ ಮಳೆಯ ಹನಿ ಗಾಳಿಯ ಜೊತೆ ಕುಣಿಯುತ್ತಾ ಅರಬ್ಬೀ ಸಮುದ್ರವೋ, ಬಂಗಾಳಕೊಲ್ಲಿಯೋ ಎಂಬ ನಿರ್ಧಾರ ಕೈಗೊಳ್ಳುವಂತೆ ತೋರುವುದು ಪ್ರಕೃತಿಯ ಅದ್ಭುತ ಸೌಂದರ್ಯ.

ಮಂಕನಹಳ್ಳಿಯ ಈ ರಿಡ್ಜ್ ಪಾಯಿಂಟ್ ನಮಗೆ ಭೂಮಿಯ ಜಲಚಕ್ರದ ವೈಭವದ ನೋಟ ನೀಡುತ್ತದೆ. ಮಳೆಯ ಹನಿ ಕೇವಲ ಹನಿಯಲ್ಲ, ಅದು ಪ್ರಕೃತಿಯ ಜಾಲವನ್ನು ಜೋಡಿಸುವ ಜೀವನಾಡಿ.

share
ಮಲ್ನಾಡ್ ಮೆಹಬೂಬ್
ಮಲ್ನಾಡ್ ಮೆಹಬೂಬ್
Next Story
X