ಭಟ್ಕಳ: ಅರಣ್ಯವಾಸಿಗಳ ಜಾಗೃತಿ ಜಾಥಾ ಕಾರ್ಯಕ್ರಮ

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಪುನರ್ ಪರಿಶೀಲಿಸದೇ ರಾಜ್ಯದಲ್ಲಿ ಎರಡು ಲಕ್ಷ ಅರವತ್ತು ಸಾವಿರಕಕ್ಕೂ ಮಿಕ್ಕಿ ಅರ್ಜಿ ತಿರಸ್ಕರಿಸಿದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮುಖ್ಯ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀರ್ಮಾನಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.
ಅವರು ಇಂದು ಅರಣ್ಯ ಭೂಮಿ ಹಕ್ಕು ಹೋರಾಟಕ್ಕೆ 34 ವರ್ಷ ಪಾದಾರ್ಪಣೆ ಹಿನ್ನಲೆಯಲ್ಲಿ ವೇದಿಕೆಯ ಕಾರ್ಯಾಲಯ ದಲ್ಲಿ ಜರುಗಿದ ಅರಣ್ಯವಾಸಿಗಳ ಜಾಗೃತಿ ಜಾಥಾ ಕಾರ್ಯಕ್ರಮದ ಚಿಂತನ ಕೂಟದಲ್ಲಿ ತೀರ್ಮಾನಿಸಿದ ನಿರ್ಣಯವನ್ನು ಮೇಲಿನಂತೆ ಪ್ರಕಟಿಸಿದರು.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಮಿತಿ ಅಸ್ಥಿತ್ವವಿಲ್ಲದಿ ದ್ದಾಗಲೂ, ಅರ್ಜಿ ವಿಚಾರಣೆ ಮಾಡದೇ ಹಾಗೂ ಅರ್ಜಿಗಳ ಪುನರ್ ಪರಿಶೀಲನೇ ಜರುಗಿಸದೇ, ಅರ್ಜಿ ತಿಸ್ಕರಿಸಿದ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದ ಹಿನ್ನಲೆಯಲ್ಲಿ ಹೋರಾಟಗಾರರ ವೇದಿಕೆಯ ಮೇಲಿನಂತೆ ತೀರ್ಮಾ ನಿಸಲಾಗಿದೆ ಎಂದು ಅವರು ಹೇಳಿದರು.
ಮುಖ್ಯ ಕಾರ್ಯದರ್ಶಿ ನೀಡಿದ ವರದಿ ಮೇರೆಗೆ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇವರಿಗೆ ಕೇಂದ್ರ ಸರ್ಕಾರದ ಸಚಿವರು ಕರ್ನಾಟಕದಲ್ಲಿ ಅರ್ಜಿ ತಿರಸ್ಕರಿಸಿದ ಉತ್ತರದ ಪ್ರತಿಯನ್ನು ಚಿಂತನ ಕೂಟದಲ್ಲಿ ಪ್ರದರ್ಶೀಸುತ್ತಾ ಸುಪ್ರೀಂ ಕೊರ್ಟ ನಿರ್ಧೇಶನ ಉಲ್ಲಂಘಿನೆಯಾಗಿದ್ದಾರೆಂದು ಅವರು ಹೇಳಿದರು.
ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿ ಇದ್ದಾಗಲೂ, ಭೂಮಿ ಹಕ್ಕಿನಿಂದ ವಂಚಿತರಗುವ ಸಂದರ್ಭದಲ್ಲಿ ಹೋರಾಟಗಾರರ ವೇದಿಕೆಯು ಸುಪ್ರೀಂಕೊರ್ಟನಲ್ಲಿ ಕಾನೂನು ಪ್ರಭಲ ಹೋರಾಟ ತೀರ್ಮಾನಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅರಣ್ಯವಾಸಿಗಳಿಗೆ ಸಾಮಾಜಿಕ ಭದ್ದತೆ ಮತ್ತು ಕಾನೂನಾತ್ಮಕ ಸಭಲೀಕರಣಮಾಡುವ ಉದ್ದೇಶದಿಂದ ಮುಂದಿನ 60 ದಿನ ರಾಜ್ಯಾದ್ಯಂತ ಅರಣ್ಯವಾಸಿಗಳ ಜಾಗೃತ ಜಾಥಾ ಹಮ್ಮೀಕೋಳ್ಳುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಹೋರಾಟವು ೩೪ ವರ್ಷಕ್ಕೆ ಪಾದಾರ್ಪಣೆ ಸಂದರ್ಭದಲ್ಲಿ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಇಂದು ``ಅರಣ್ಯವಾಸಿಗಳ ಜಾಗೃತ ಜಾಥದ - ಚಿಂತನ ಕೂಟ” ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ನಿರಂತರ ಅರಣ್ಯವಾಸಿಗಳು ಭೂಮಿ ಹಕ್ಕಿಗಾಗಿ ೩ ದಶಕದಿಂದ ಹೋರಾಟ ಸಂಘಟನೆ ಜರುಗಿದ್ದಾಗಲೂ ಮುಂದಿನ ವರ್ಷದಲ್ಲಿ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟ ಸಂಘಟಿಸಲು ಸಭೆ ನಿರ್ಧರಿಸಿದೆ. ಅಲ್ಲದೇ, ಅರಣ್ಯ ಹಕ್ಕು ಕಾಯಿದೆ ಅರಣ್ಯವಾಸಿಗಳ ಪರವಾಗಿದ್ದಾಗಲೂ ಇಚ್ಚಾಸಕ್ತಿಯ ಕೊರತೆಯಿಂದ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಚಿಂತನ ಕೂಟದಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಹಿರಿಯ ಹೋರಾಟಗಾರ್ತಿ ಗಂಗಾ ನಾಯ್ಕ ಅವರಿಗೆ ಗಿಡ ನೀಡುವ ಮೂಲಕ ಅರಣ್ಯವಾಸಿಗಳ ಜಾಗೃತ ಜಾಥಕ್ಕೆ ಚಾಲನೆ ನೀಡಲಾಯಿತು. ಸಭೆಯಲ್ಲಿ ಜಿಲ್ಲೆಯ ಅಧ್ಯಕ್ಷ ರಮನಂದ ನಾಯ್ಕ ಅಚವೆ, ರಾಘು ಕಂಚಚೂರು, ಇಬ್ರಾಹೀಂ ಗೌಡಳ್ಳಿ, ಭೀಮಸೀ ಯಲ್ಲಾಪುರ, ನಾಗಪತಿ ನಾಯ್ಕ ಸಿದ್ದಾಪುರ, ಸ್ವಾತಿ ಜೈನ್, ಜನಾರ್ಧನ್ ನಾಯ್ಕ, ಸುಬ್ರಾಯ್ ಸೀತಾರಾಮ ಹೆಗಡೆ, ದೇವೇಂದ್ರ ಬೆಡಸಗಾಂವ್, ಸತೀಶ್ ನಾಯ್ಕ, ಶಂಕರ್ ಕೋಡಿಯಾ ಮುಂತಾದವರು ಮಾತನಾಡಿದ್ದರು.
ನೆಹರು ನಾಯ್ಕ , ಎಮ್ ಆರ್ ನಾಯ್ಕ, ಮಹೇಂದ್ರ ನಾಯ್ಕ ಕತಗಾಲ್, ಮಾಬ್ರೇಶ್ವರ ನಾಯ್ಕ ಸಿದ್ದಾಪುರ, ಹರಿ ಹರ ನಾಯ್ಕ ನಿಲ್ಕುಂದ, ನಾಗಪತಿ ಗೌಡ, ಚಂದ್ರು ಪೂಜಾರಿ ಮಂಚಿಕೇರಿ, ದಿವಾಕರ ಮರಾಠಿ, ಸೀತಾರಾಮ ನಾಯ್ಕ ಕುಂದರಗಿ, ಗಣಪತಿ ನಾಯ್ಕ ಬೆಡಸಗಾಂವ್, ಅನಂತ ಸಿದ್ದಿ, ಬಸ್ತಾö್ಯಂವ್ ಡೀಸೋಜಾ, ಅನಂತ ಗೌಡ ಮಾವಿನಮನೆ, ಮುಂತಾದವರು ಉಪಸ್ಥೀತರಿದ್ದರು. ಕಾರ್ಯಕ್ರಮವನ್ನು ರಾಘವೇಂದ್ರ ಕವಂಚೂರು ನಿರ್ವಹಿಸಿದರು, ಮಾಬ್ಲೇಶ್ವರ ಬೇಡ್ಕಣಿ ವಂದಿಸಿದರು.