Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಹೊಣೆಗಾರಿಕೆ

ಹೊಣೆಗಾರಿಕೆ

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,4 May 2025 10:40 AM IST
share
ಹೊಣೆಗಾರಿಕೆ

ಮಾನಸಿಕ ಆರೋಗ್ಯದ ವಿಷಯವನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಬೇಕಾಗಿರುವ ಅರಿವು, ಗವಾಹಿತನ ಅಥವಾ ಸಾಕ್ಷೀಕರಿಸುವಿಕೆ, ನಿರಾಳತೆ ಮತ್ತು ಪರಿಣಾಮಕಾರಿಯಾಗಿರುವುದು; ಈ ವಿಷಯಗಳ ಜೊತೆಗೆ ಮತ್ತೊಂದು ಮಹತ್ವದ್ದು ಮತ್ತು ಅತ್ಯಗತ್ಯವಾದದ್ದು ಎಂದರೆ ಹೊಣೆಗಾರಿಕೆ.

ಯಾರೊಬ್ಬನು ತನ್ನ ನಡೆ ಮತ್ತು ನುಡಿ ಯಾವ ರೀತಿಯಲ್ಲಿ ಇತರರ ಮೇಲೆ ಮತ್ತು ಪರಿಸರದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬ ಎಚ್ಚರಿಕೆಯ ಅರಿವೇ ಹೊಣೆಗಾರಿಕೆಯ ಮೊದಲ ಹಂತ. ಇಂತಹ ಎಚ್ಚರಿಕೆಯಿಂದಾಗಿ ವ್ಯಕ್ತಿಯು ತನ್ನ ಚಟುವಟಿಕೆಗಳ ಪರಿಣಾಮಗಳನ್ನು, ಅದಕ್ಕೆ ನೀಡಬೇಕಾದ ಉತ್ತರವನ್ನು, ಅಗತ್ಯವಿದ್ದರೆ ತನ್ನ ಆಲೋಚನೆ ಮತ್ತು ಕೆಲಸಗಳ ತಿದ್ದುಪಡಿ ಸ್ವೀಕರಿಸುವಷ್ಟು ಸಲಿಲವಾದ ಅಂದರೆ ಜಿಗುಟುತನ ಇಲ್ಲದ ಮನಸ್ಥಿತಿಯನ್ನು ಹೊಂದಲು ಸಾಧ್ಯ.

ಕೆಲವೊಂದು ವ್ಯಕ್ತಿಗಳು ತಮ್ಮ ಕೆಲಸದ ಯಶಸ್ಸನ್ನು ತಮ್ಮದೆಂದು ಒಪ್ಪಿಕೊಳ್ಳುವರು. ಆದರೆ ಅದೇ ತಮ್ಮ ಕೆಲಸದಲ್ಲಿ ವಿಫಲವಾದರೆ ಅದಕ್ಕೆ ಇತರರನ್ನು, ವಸ್ತುಗಳನ್ನು, ಪರಿಸ್ಥಿತಿಯನ್ನು ಅಥವಾ ಪರಿಸರವನ್ನು ದೂರುವರು. ಹುಡುಗನೊಬ್ಬನು ಉತ್ತಮವಾದ ಫಲಿತಾಂಶ ಅಥವಾ ಯಶಸ್ಸನ್ನು ಕಂಡರೆ ನನ್ನ ಮಗನ ನೋಡು ಎನ್ನುವನು ತಂದೆ. ಅದೇ ಮಗನು ತಪ್ಪಾಗಿ ನಡೆದುಕೊಂಡರೆ ಅಥವಾ ವಿಫಲವಾಗಿದ್ದರೆ ನೋಡು ನಿನ್ನ ಮಗ ಎನ್ನುವಂತೆ ಹೊಣೆಗೇಡಿತನವನ್ನು ಪ್ರದರ್ಶಿಸುವುದು. ಯಶಸ್ಸಿಗೆ ಕಾರಣಕ್ಕೆ ತಾನು ಎನ್ನುವಂತೆ ವೈಫಲ್ಯಕ್ಕೆ ಇತರರು ಎಂದು ಆರೋಪಿಸುವುದು ಹೊಣೆಗೇಡಿತನದ ಲಕ್ಷಣ. ಅವರು ತಮ್ಮಲ್ಲಿ ಲೋಪದೋಷಗಳನ್ನು ಗುರುತಿಸಿಕೊಳ್ಳಲು ಸಿದ್ಧವಿರುವುದಿಲ್ಲ. ಅದರಿಂದ ತನ್ನ ಮೌಲ್ಯ ಮತ್ತು ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಆಂತರಿಕವಾಗಿ ಭಾವಿಸಿರುತ್ತಾರೆ.

ಯಾರಿಗೆ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರುವುದಿಲ್ಲವೋ ಅವರಿಗೆ ತಿದ್ದಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆಯಾಗಿರುತ್ತದೆ. ಎಷ್ಟೋ ಸಲ ವ್ಯಕ್ತಿಯ ನಿರ್ಲಕ್ಷ್ಯದಿಂದ ಅಥವಾ ಬೇರೆ ರೀತಿಯ ಗ್ರಹಿಕೆಯಿಂದ ಅಥವಾ ತಪ್ಪಾದ ಊಹೆಯಿಂದ ತಪ್ಪುಗಳು, ವೈಫಲ್ಯಗಳು ಸಂಭವಿಸುತ್ತವೆ. ಇಂತಹ ತಪ್ಪುಗಳು ಮತ್ತು ವೈಫಲ್ಯಗಳು ಆ ವ್ಯಕ್ತಿಯ ಕ್ರಿಯೆಯ ಅಥವಾ ಆಲೋಚನೆಯ ತಪ್ಪುಗಳನ್ನು ತೋರಿಸುತ್ತವೆ. ಆಲೋಚನೆ ಮತ್ತು ಕ್ರಿಯೆಗಳು ತಪ್ಪಾಗುವುದು ಅಪರಾಧವಲ್ಲ. ಆದರೂ ಮಾನಸಿಕವಾಗಿ ತಾವೇ ಇತರರ ಮುಂದೆ ಖಂಡನೀಯವಾಗಬಾರದೆಂದು ಒಪ್ಪಿಕೊಳ್ಳುವುದಿಲ್ಲ. ಹೊಣೆಯರಿತವರು ತಮ್ಮ ಆಲೋಚನೆ ಮತ್ತು ಕ್ರಿಯೆಗಳನ್ನು ಮತ್ತೊಂದು ಅವಕಾಶದಲ್ಲಿ ಸರಿಪಡಿಸಿಕೊಳ್ಳುವ ಸಾಧ್ಯತೆಯ ಭರವಸೆಯಿಂದ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಉತ್ತರದಾಯಿತ್ವವನ್ನು ಹೊಂದಿರುತ್ತಾರೆ. ಅವರು ಸಮರ್ಥನೆಗಿಂತ ವಿವರಣೆ ನೀಡಲು ಸಿದ್ಧವಾಗುತ್ತಾರೆ.

ಹೊಣೆಗಾರರ ಮತ್ತೊಂದು ಮುಖ್ಯ ಲಕ್ಷಣವೆಂದರೆ ಯಾವುದೇ ಕ್ರಿಯೆಗೆ ಮತ್ತು ಪ್ರಸಂಗಕ್ಕೆ ತಕ್ಷಣವೇ ಪ್ರತಿಕ್ರಿಯಿಸುವ ಬದಲು ಸ್ಪಂದಿಸುವುದು. ಅಂದರೆ ರಿಯಾಕ್ಷನ್ ಕೊಡುವ ಬದಲು ರೆಸ್ಪಾಂಡ್ ಮಾಡುವುದು. ಯಾರಾದರೂ ನಕಾರಾತ್ಮಕವಾಗಿ ವರ್ತಿಸಿದಾಗ ತಕ್ಷಣವೇ ನಕಾರಾತ್ಮಕವಾಗಿ ಪ್ರತಿವರ್ತಿಸುವ ಪ್ರೇರಣೆ ಉಂಟಾಗುತ್ತದೆ. ಆದರೆ ಹಾಗೆ ರಿಯಾಕ್ಷನ್ ಕೊಡುವ ಬದಲು ಅದನ್ನು ಗಂಭೀರವಾಗಿ ಗಮನಿಸಿ, ತಾಳ್ಮೆ ಮತ್ತು ಸಮಾಧಾನದಿಂದ ಒಂದಷ್ಟು ಸಮಯ ತೆಗೆದುಕೊಂಡು ಮನವರಿಕೆ ಮಾಡುವುದಕ್ಕೆ ಪ್ರಯತ್ನಿಸುವುದು ರೆಸ್ಪಾಂಡ್ ಆಗುತ್ತದೆ.

ರಿಯಾಕ್ಷನ್ ಎನ್ನುವುದು ತಂತಾನೇ ಎದುರಾಳಿಯ ಕ್ರಿಯೆಗೆ ತಕ್ಕಂತೆ ಆಗುವುದು. ರೆಸ್ಪಾಂಡ್ ಎನ್ನುವುದು ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ನಮ್ಮದೇ ಆಯ್ಕೆ ಆಗಿರುತ್ತದೆ. ಖಂಡಿತವಾಗಿಯೂ ನಮ್ಮ ಪ್ರತಿಕ್ರಿಯೆಯನ್ನು ನಾವು ನಮ್ಮ ಅರಿವಿನಿಂದ ಆಯ್ದುಕೊಳ್ಳಬೇಕು. ಒತ್ತಡಗಳು, ಆತಂಕದ ಕ್ಷಣಗಳು, ಹಠಾತ್ತನೆ ಪ್ರತಿಕ್ರಿಯಿಸುವ ಪ್ರೇರಣೆಗಳಲ್ಲಿಯೂ ಸಹ ತನ್ನ ಪ್ರತಿಕ್ರಿಯೆಯು ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ಕಾದುಕೊಳ್ಳುವುದು ಹೊಣೆಗಾರಿಕೆಯ ಬಹು ಮುಖ್ಯ ಅರಿವಿನ ಭಾಗ.

ಪ್ರತಿಕ್ರಿಯಿಸುವ ಬದಲು ಸ್ಪಂದಿಸುವುದಕ್ಕೆ ಆ ವ್ಯಕ್ತಿಯಲ್ಲಿ ಅರಿವು, ಅನುಭವ, ಅಧ್ಯಯನ, ಅನುಕಂಪ ಮತ್ತು ಅಲಿಪ್ತಭಾವ ಎಲ್ಲವೂ ಇರಬೇಕು. ಇವುಗಳು ವ್ಯಕ್ತಿಯ ಆತ್ಮಾವಲೋಕನ ಮತ್ತು ತನ್ನತನದ ಪ್ರದರ್ಶನದಲ್ಲಿ ಪ್ರಕಟವಾಗುತ್ತದೆ.

ಹೊಣೆಯರಿತವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗುವರು. ಹಾಗೆಯೇ ತನ್ನ ನಡೆ ನುಡಿ ಹೇಗಿರಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ಎಚ್ಚರಿಕೆಯನ್ನು ಹೊಂದಿರುವರು. ಅದರಂತೆಯೇ ವರ್ತಿಸುವರು.

ತನ್ನತನದ ಪರಿಶೀಲನೆ ಮತ್ತು ತನ್ನತನದ ಪ್ರಕಟಣೆಯ ಬಗ್ಗೆ ಪ್ರಜ್ಞೆಯುಳ್ಳ ವ್ಯಕ್ತಿಗಳು ಹಠಾತ್ ವರ್ತಿಸುವುದರ ಬದಲು ತಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವರು. ತಮ್ಮ ನಡೆ ಮತ್ತು ನುಡಿಯ ಕಾರಣದಿಂದ ಯಾವ ಬಗೆಯ ಸಾಮಾಜಿಕ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಿಕೊಳ್ಳುತ್ತಾರೆ. ತಮ್ಮ ವರ್ತನೆಗಳು ಜೀವನದ ಮೌಲ್ಯಗಳನ್ನು ಬಿಂಬಿಸುತ್ತವೆಯೇ, ತನ್ನ ಮತ್ತು ಇತರರ ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುತ್ತದೆಯೇ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿಕೊಳ್ಳುವುದು ಹೊಣೆಗಾರಿಕೆಯ ವ್ಯಕ್ತಿತ್ವದ ಒಂದು ಮುಖ್ಯವಾದ ಗುಣವಾಗಿರುತ್ತದೆ.

ತನ್ನ ಭಾವನೆಗಳಿಗೆ ತಾನೇ ಉತ್ತರದಾಯಿತ್ವವನ್ನು ಹೊಂದುವುದರಿಂದ ಸಂಬಂಧಗಳು ಬಲಗೊಳ್ಳುವುದು ಮಾತ್ರವಲ್ಲದೇ ಆಂತರಿಕ ಶಾಂತಿಯನ್ನು ಕಂಡುಕೊಳ್ಳಲು ಸಾಧ್ಯ. ತನ್ನಲ್ಲಿ ಹುಟ್ಟುವ ಭಾವನೆಗಳಿಗೆ ತಾನು ಹೊಣೆಗಾರನಾಗಲೊಲ್ಲದವರು ಇತರರ ಕಡೆಗೆ ಬೆರಳು ಮಾಡುತ್ತಾರೆ, ಅವರು ನನ್ನ ರೇಗಿಸುತ್ತಾರೆ, ಅವರು ನನ್ನ ಕೋಪಕ್ಕೆ ಕಾರಣ, ಅವರು ನನಗೆ ಬೇಸರ ಉಂಟುಮಾಡುತ್ತಾರೆ ಇತ್ಯಾದಿ. ತಮ್ಮೊಳಗಿನ ರೇಗುವಂತಹ ಬಟನ್ನಿನ ರಿಮೋಟ್ ಕಂಟ್ರೋಲನ್ನು ಇತರರ ಕೈಗೆ ಕೊಟ್ಟಿರುವಂತಹ ಸ್ಥಿತಿ ಅವರದ್ದು. ನಂತರ ಅವರು ತಮಗಿಷ್ಟ ಬಂದಂತೆ ರಿಮೋಟ್ ಬಳಸಿ ತನ್ನಲ್ಲಿ ಕೋಪ, ದುಃಖ, ಹತಾಶೆ, ಕೆರಳುವಿಕೆ, ಕಿರಿಕಿರಿ ಉಂಟುಮಾಡುತ್ತಾರೆಂದು ದೂರುತ್ತಾರೆ.

ನಮ್ಮ ಮಾನಸಿಕವಾದ ಒಡೆತನವನ್ನು ಸಾಧಿಸುವುದರಲ್ಲಿ ವಿಫಲವಾದಾಗ ಇತರರ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಸೋಲುವುದು. ಭಾವನೆಗಳಿಂದ ರೂಪುಗೊಳ್ಳುವ ಮನಸ್ಥಿತಿಯನ್ನು ಭಾವಕೌಶಲ್ಯ ಅಥವಾ ಎಮೋಶನಲ್ ಇಂಟೆಲಿಜೆನ್ಸಿನಿಂದ ಉಪಚರಿಸಬೇಕು.

ಒಟ್ಟಾರೆ ಹೊಣೆಗಾರಿಕೆ ಎನ್ನುವುದು ದೀರ್ಘಕಾಲ ನಿರಂತರತೆಯನ್ನು ಕಾಪಾಡಿಕೊಂಡು ಮಾಡುವ ಅಭ್ಯಾಸದ ಫಲವಾಗಿದೆ. ಅದು ಮಾನಸಿಕ ಆರೋಗ್ಯದ ಲಕ್ಷಣವೂ ಆಗಿದೆ.

share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X