Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗದೊಳಗಿಂದ
  5. ರಂಗ ರಸಾನುಭೂತಿ: ಎರಡು ನಾಟಕಗಳು

ರಂಗ ರಸಾನುಭೂತಿ: ಎರಡು ನಾಟಕಗಳು

ಸುಮತಿ ನಿರಂಜನ, ಹೈದರಾಬಾದ್ಸುಮತಿ ನಿರಂಜನ, ಹೈದರಾಬಾದ್18 Dec 2024 12:17 PM IST
share
ರಂಗ ರಸಾನುಭೂತಿ: ಎರಡು ನಾಟಕಗಳು

ತಾ. 29-11-24 ಮತ್ತು 30-11-24ರಂದು ಹೈದರಾಬಾದಿನ ಕನ್ನಡ ನಾಟ್ಯ ರಂಗದ ಆಯೋಜನೆಯಲ್ಲಿ ಅವ್ವ ನನ್ನವ್ವ(ರಚನೆ, ನಿರ್ದೇಶನ, ವಿನ್ಯಾಸ ಸಂಗೀತ: ಗುರುರಾಜ್ ಮಾರ್ಪಳ್ಳಿ) ಮತ್ತು ಅಂಬೆ (ರಚನೆ: ಸರಜೂ ಕಾಟ್ಕರ್, ವಿನ್ಯಾಸ ಮತ್ತು ನಿರ್ದೇಶನ : ಸಾಲಿಯಾನ್ ಉಮೇಶ್ ನಾರಾಯಣ) ಪ್ರದರ್ಶನಗೊಂಡವು.

ಹೆಣ್ಣು-ಗಂಡು, ಭೂಮಿ-ಮಾನವರ ಸಂಬಂಧಗಳ ಮೇಲೆ ತಂತ್ರಜ್ಞಾನ ಮತ್ತು ಜಾಗತೀಕರಣದ ಪ್ರಭಾವವನ್ನು ತಾಯಿ-ಮಗಳ ಸಂಬಂಧದ ರಂಗರೂಪಕದ ಮೂಲಕ ಕಟ್ಟಿಕೊಟ್ಟ ‘ಅವ್ವ ನನ್ನವ್ವ’ದಲ್ಲಿ - ಅಮ್ಮ (ಸುಗಂಧಿ ಕಲ್ಮಾಡಿ) ಮತ್ತು ಮಗಳು(ವಾಣಿ ಸುಕುಮಾರ್)- ಎರಡೇ ಪಾತ್ರಗಳಲ್ಲಿ ಒಂದು ಗಂಟೆ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದಲ್ಲದೇ ಕಣ್ಣಲ್ಲಿ ನೀರು ಒಸರುವಂತೆ ಮಾಡಿದ ‘ನಾಟ್ಕಾ ಮುದ್ರಾಡಿ’ಯವರ ರಂಗ ಪ್ರಯತ್ನ ಅತ್ಯಂತ ಪ್ರಶಂಸಾರ್ಹ.

ಮಹಾಭಾರತದ ಜನಜನಿತ ಅಂಬೆಯ ಬಂಡಾಯದ ಪ್ರಸಂಗ:

ಖಾಲಿ ರಂಗಸ್ಥಳದಲ್ಲಿ ಮೇಲೆ ಕೇಂದ್ರ ಸ್ಥಾನದಲ್ಲಿ ಕಟ್ಟಲ್ಪಟ್ಟ ಅಮಾನುಷ ಗಾತ್ರದ ಕೈ. ಐದು ಬೆರಳುಗಳಲ್ಲಿ ದಾರ/ಸೂತ್ರಗಳು- ಅವುಗಳಿಂದ ನಿಯಂತ್ರಿಸಲ್ಪಡುವ ಒಂದು ಹೆಣ್ಣು ಗೊಂಬೆ - ನಾಟಕದ ಮೊದಲ ದೃಶ್ಯ - ಇಡೀ ನಾಟಕದ ಆಶಯವನ್ನು ಒಂದೇ ಸಂಕೇತದಲ್ಲಿ ಹೇಳುವ, ನಿರ್ದೇಶಿಸುವ ಪ್ರಬಲ ರಂಗ ಪರಿಕರ. ಇಲ್ಲಿ ಹೆಣ್ಣು ಮಾತ್ರ ಪುರುಷಪ್ರಧಾನ ವ್ಯವಸ್ಥೆಯ ಕೈಗೊಂಬೆಯೇ? ಭೀಷ್ಮ, ಸಾಲ್ವ, ಕಾಶೀರಾಜರೂ ಪರಿಸ್ಥಿತಿ/ವಿಧಿ ಆಡಿಸುವ ತೊಗಲುಗೊಂಬೆಗಳೇ ಅಲ್ಲವೇ?

ಪೀಠಿಕೆಯಾಗಿ- ಹೆಣ್ಣು ಮಕ್ಕಳ ಮದುವೆಯ ಕುರಿತು ಸಂಭಾಷಣೆ ನಡೆಸುವ ಸೂತ್ರಧಾರಿ ದಂಪತಿ- ತಮ್ಮ ಲಘು ಹಾಸ್ಯದ ಮೂಲಕ ವರ್ತಮಾನದಿಂದ ಮಹಾಭಾರತದ ಸಂದರ್ಭಕ್ಕೆ ಪ್ರೇಕ್ಷಕರನ್ನು ಸಾಗಿಸುವ ಕೊಂಡಿಗಳು.

ಮತ್ತೆ ಬರುವರು- ರಂಗಸ್ಥಳವನ್ನೆಲ್ಲ ಆಕ್ರಮಿಸಿ ಬಿಡುವ ದೈತ್ಯ ಪ್ರತಿಭೆಯ ಅಂಬೆ ಪಾತ್ರಧಾರಿ (ವಾಣಿ ಸುಕುಮಾರ್). ಸಖಿಯೊಂದಿಗೆ ತನ್ನ ಅಳಲು -ತಂದೆ ಕಾಶಿ ರಾಜ ತನ್ನ ಹೆಣ್ಣು ಮಕ್ಕಳ ಸ್ವಯಂವರದ ಸಮಯದಲ್ಲಿ ಅವರಿಗಿಂತಲೂ ಚಿಕ್ಕವಳಾದ ನಾಗ ರಾಜಕುಮಾರಿಯನ್ನು ಸ್ವಯಂವರದಲ್ಲಿ ಗೆದ್ದು ಬರುವ ಸನ್ನಿವೇಶದ ವಿಪರ್ಯಾಸ...

ಸ್ವಯಂವರವೆಂದರೆ ಬೇಕಾದ ವರನನ್ನು ಆರಿಸುವುದಲ್ಲ, ಅದು ರಾಜಕುಮಾರಿಯರ ಹರಾಜು. ರಾಜಕೀಯ ಚದುರಂಗದಲ್ಲಿ ಅವರು ಬರಿಯ ದಾಳಗಳು ಎನ್ನುತ್ತ ಸ್ವಯಂವರದ ಬಗೆಗಿನ ರಮ್ಯ ಕಲ್ಪನೆಯನ್ನು ಹೊಡೆದೋಡಿಸುವ ಕಾಶಿ ರಾಜಕುಮಾರಿ.

ತಾಯಿಯ ಆಜ್ಞೆ ಪಾಲಿಸಲು ವಧುಗಳನ್ನು ಗೆಲ್ಲಲು ಬಂದಿರುವ ಭೀಷ್ಮನ ಪಾತ್ರದಲ್ಲಿ ರಂಗಸ್ಥಳವನ್ನು ತುಂಬಿ ಬಿಡುವ ಸುಕುಮಾರ್ ಮೋಹನ್‌ರ ಗಂಭೀರ ನಿಲುವು, ಕಂಠಸಿರಿ, ಅಚ್ಚುಕಟ್ಟಾಗಿ ಮೂಡಿದ ಸಾಲ್ವ(ಸಂದೇಶ್ ಕೋಟ್ಯಾನ್) ಮತ್ತು ಅಸಹಾಯಕ ತಂದೆ ಕಾಶಿರಾಜನ ಪಾತ್ರ (ಮಿಥುನ್ ಕುಮಾರ್ ಸೋನ)ಗಳು; ಅಬ್ಬರದ ವೇಷಭೂಷಣ ಮತ್ತು ಚಲನ ವಲನಗಳಲ್ಲಿ ಅಸಾಧ್ಯ ಲಾಘವದಿಂದ ಪ್ರೇಕ್ಷಕರ ಉಸಿರು ಒಮ್ಮೆ ಕಟ್ಟುವಂತೆ ಮಾಡಿದ ಪರಶುರಾಮ ಪಾತ್ರಧಾರಿ (ಪುಷ್ಪರಾಜ್ ಏನೇಕಲ್)

ಸತ್ಯವತಿ, ಸಖಿ- ಹೀಗೆ ಬೇರೆ ಬೇರೆ ಪಾತ್ರೆಗಳಲ್ಲಿ ಮಿಂಚಿದ ಸುಗಂಧಿ ಕಲ್ಮಾಡಿ ಮತ್ತು ಉಮೇಶ್ ಕಲ್ಮಾಡಿ

ಅತ್ಯುತ್ತಮ ಪಾತ್ರ ನಿರ್ವಹಣೆ, ಮಿತವಾದ ಆದರೆ ಅರ್ಥಪೂರ್ಣ ರಂಗಸಜ್ಜಿಕೆ ಮತ್ತು ಪ್ರಸಾದನ, ಸೂತ್ರದ ಗೊಂಬೆಗಳು, ಯಕ್ಷಗಾನದ ತೆರೆ, ಚಲನೆಗಳ ಸೀಮಿತ ಉಪಯೋಗ, ಒಮ್ಮೆಯೂ ತಡವರಿಸದ ಸಂಭಾಷಣೆ, ಪರಿಣಾಮಕಾರಿ ಹಿನ್ನೆಲೆ ಸಂಗೀತ .. ವಸ್ತ್ರ ವಿನ್ಯಾಸ- ಅಂಬೆ -ಬೂದಿ, ಕೆಂಪು ಬಣ್ಣದ ಬಟ್ಟೆಗಳೊಂದಿಗೆ ಆಡುವ ದೃಶ್ಯ - ಅವಳ ಚಿತೆಯ ಬೆಂಕಿ ಮತ್ತು ಬೂದಿ ಮಾತ್ರವಲ್ಲದೆ ಅವಳ ರೋಷ, ಅಸಹಾಯಕತೆ, ಸೇಡಿನ ಪರಿಣಾಮಗಳನ್ನು ಪ್ರತಿಬಿಂಬಿಸಿದ್ದು...

ಒಟ್ಟಿನಲ್ಲಿ ಒಂದೂವರೆ ಗಂಟೆ ದ್ವಾಪರ ಯುಗದಲ್ಲೇ ಇದ್ದಂತೆ ಭಾಸವಾಯಿತು. ಹಾಗೆಯೇ ಹೆಣ್ಣಿನ ಅಂತರಂಗಕ್ಕೂ, ಪ್ರೀತಿ, ದ್ವೇಷದ ತೀವ್ರ ಏರುಪೇರುಗಳಿಗೂ ಇಣುಕು ನೋಟ. ಒಬ್ಬ ಸ್ವಂತಿಕೆ ಇರುವ ಹೆಣ್ಣಿನ ನೋವು, ಚಡಪಡಿಕೆ, ಸೇಡಿನ ಸಂಕಲ್ಪ (ಇಲ್ಲಿ ಅಂಬಿಕೆ, ಅಂಬಾಲಿಕೆಯರನ್ನು ಮಾತ್ರ ಗೊಂಬೆಗಳನ್ನಾಗಿ ಮಾಡಿದ್ದು ಬಹಳ ಔಚಿತ್ಯ ಪೂರ್ಣ) ಎಲ್ಲವೂ- ಯುಗಗಳ ಹಿಂದಿನ ದಂತಕತೆ/ಚರಿತ್ರೆಯನ್ನು ಇಪ್ಪತ್ತೊಂದನೆಯ ಶತಮಾನದಲ್ಲೂ ಪ್ರಸ್ತುತವೆನಿಸುವಂತೆ ಮಾಡಿತು.

ಕೊನೆಯಲ್ಲಿ ರಂಗದ ಮೇಲಿನ ಕೈಯಿಂದ ತೂಗಾಡುತ್ತಿದ್ದ ಗೊಂಬೆ ದಾರ ಮುರಿದು ಕೆಳಗೆ ಬಿದ್ದಿದ್ದು ಅತ್ಯಂತ ಪ್ರಭಾವಶಾಲಿ ಸಂಕೇತವಾಗಿ ಮೂಡಿ - ಹೆಣ್ಣು ಅಬಲೆಯೆನ್ನುವ sಣeಡಿeo ಣಥಿಠಿe/ಮಾದರಿ ಮುರಿದು ಬಿದ್ದಿತು ಎನ್ನುವುದರ ಕಾವ್ಯಾತ್ಮಕ ರಂಗರೂಪಕವಾಗಿ- ವೀಕ್ಷಕರ ಮನಸ್ಸಿನಲ್ಲಿ ಪ್ರಶ್ನೆಯ ಅಲೆಗಳನ್ನು ಎಬ್ಬಿಸಿತು.

ಕೊನೆಗೂ ಅಂಬೆ ಗೆದ್ದಳೇ? ಅಥವಾ ವ್ಯವಸ್ಥೆಗೆ ಬಲಿಯಾದಳೇ? ತಾಯಿ ತಂದೆ ಗುರು ಸಮಾಜ - ಎಲ್ಲರೂ ಕೈ ಬಿಟ್ಟಾಗ ತನ್ನದೇ ದಾರಿಯಿಂದ, ಲಿಂಗಮಿತಿಯನ್ನೂ ಮೀರಿ ಸಶಕ್ತಳಾಗಿ ತನ್ನ ಗುರಿ ಸಾಧಿಸಿದಳೇ? ಸೇಡಿನ ಉರಿಯಲ್ಲಿ ತಾನೂ ಸುಟ್ಟು ಭಸ್ಮವಾದಳೆ?

ನಮ್ಮ ಉತ್ತರಗಳನ್ನು ನಾವೇ ಕಂಡುಕೊಳ್ಳಬೇಕು, ನಮ್ಮ ಸಾಧನೆಗೆ ನಾವೇ ಶ್ರಮಿಸಬೇಕು, ಸಿದ್ಧಿ ಪಡೆದುಕೊಳ್ಳಬೇಕು- ಹೆಣ್ಣೋ, ಗಂಡೋ, ತೃತೀಯ ಲಿಂಗಿಗಳೋ- ನಾವೇ ಸಬಲರಾಗಬೇಕು ಎನ್ನುವ ಸಂದೇಶ ತಲುಪಿತು.

ಇಂತಹ ಅಮೋಘ ಕತೆಗಳನ್ನು ತನ್ನಲ್ಲಿ ಹುದುಗಿಸಿ ಕೊಂಡಿರುವ ಮಹಾಭಾರತವನ್ನು ಇನ್ನೊಮ್ಮೆ ಓದಬೇಕು ಎನ್ನುವ ಆಸೆಯನ್ನು ಮೂಡಿಸಿತು.

ಮಹಾಭಾರತದ ಈ ಮನ ಕಲಕುವ ಕತೆಯನ್ನು ಅದ್ಭುತವಾಗಿ ಮತ್ತೆ ಕಟ್ಟಿಕೊಟ್ಟ ‘ನಾಟ್ಕಾ ಮುದ್ರಾಡಿ’ಯವರ ರಂಗ ದಿಗ್ವಿಜಯ ಅಭಿನಂದನಾರ್ಹ.

share
ಸುಮತಿ ನಿರಂಜನ, ಹೈದರಾಬಾದ್
ಸುಮತಿ ನಿರಂಜನ, ಹೈದರಾಬಾದ್
Next Story
X