Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಮಗಳು ಹೆಲನ್ ಕಣ್ಣಲ್ಲಿ ತೆರೇಸಮ್ಮ

ಮಗಳು ಹೆಲನ್ ಕಣ್ಣಲ್ಲಿ ತೆರೇಸಮ್ಮ

ಗಣೇಶ ಅಮೀನಗಡಗಣೇಶ ಅಮೀನಗಡ3 May 2025 11:45 AM IST
share
ಮಗಳು ಹೆಲನ್ ಕಣ್ಣಲ್ಲಿ ತೆರೇಸಮ್ಮ

ಕಳೆದ ರವಿವಾರ (ಎಪ್ರಿಲ್ ೨೭) ಹುಬ್ಬಳ್ಳಿಯಲ್ಲಿ ನಿಧನರಾದ ರಂಗಭೂಮಿಯಳಿರಿಯ ಕಲಾವಿದೆ ತೆರೇಸಮ್ಮ ಡಿಸೋಜಾ ಅವರಿಗೆ ೯೧ ವರ್ಷ ವಯಸ್ಸಾಗಿತ್ತು. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಅವರು ರಂಗಭೂಮಿ ಕಲಾದೆಯಾಗಿ ಹುಬ್ಬಳ್ಳಿಯಲ್ಲಿ ನೆಲೆ ನಿಂತವರು. ಸಿನೆಮಾಗಳಲ್ಲೂ ನಟಿಸಿದರು. ಅವರ ಮಕ್ಕಳಾದ ಬಾಬು ಮೈಸೂರು, ಫ್ರಾನ್ಸಿಸ್ ಮೈಸೂರು ಹಾಗೂ ಹೆಲನ್ ಮೈಸೂರು ಅವರು ರಂಗಭೂಮಿ ಕಲಾವಿದರು. ಇನ್ನೊಬ್ಬ ಮಗಳು ಗೀತಾ ಖಾಸಗಿ ಉದ್ಯೋಗಿ. ಅವರ ಬದುಕಿನ ಕುರಿತು ಅವರ ಮಗಳಾದ ಹೆಲನ್ ಅವರು ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

‘‘ನನ್ನ ಅಮ್ಮ ತೆರೇಸಾ ನಾಟಕ ಕಂಪೆನಿಗಳಲ್ಲಿ ಅನುಭಸಿದ ಕಷ್ಟಗಳು, ಮಾಡಿದ ಪಾತ್ರಗಳು ನೆನಪಾಗುತ್ತವೆ. ಎದುರಿಸಿದ ಸವಾಲುಗಳು, ಅವಮಾನಗಳನ್ನು ಮೀರಿ ಸಾಧಿಸಿದ್ದು ಮಿಗಿಲು. ನಮ್ಮ ಮೂಲ ಊರು ಅರಸೀಕೆರೆ ತಾಲೂಕಿನ ಬೊಮ್ಮನಹಳ್ಳಿ. ಇದ್ದುದು ೪೦ ಮನೆಗಳು. ಎಲ್ಲರೂ ಕ್ರಿಶ್ಚಿಯನ್ ಸಮುದಾಯದವರೇ. ಬಸ್ಸಿರಲಿಲ್ಲ. ಎಂಟು ಕಿ.ಮೀ. ನಡೆದುಕೊಂಡು ಬಾಣಾವರ ರೈಲು ನಿಲ್ದಾಣಕ್ಕೆ ಹೋಗಬೇಕಿತ್ತು. ಅಪ್ಪ ಜರ್ಮಿ ಡಿಸೋಜಾ ಚಾಲಕರಾಗಿದ್ದರು. ಅವರಿಗೆ ದುಡಿಯೋದು ಗೊತ್ತಿತ್ತು, ಪಗಾರ ಇಸಗೊಂಡು ಗೊತ್ತಿರಲಿಲ್ಲ. ಅಮ್ಮ ಗಾರೆ ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಅಮ್ಮ ಮೊದಲು ಬಣ್ಣ ಹಚ್ಚಿದ್ದು ಅರಸೀಕೆರೆಯ ರೈಲ್ವೆ ಇಲಾಖೆಯವರ ಕನ್ನಡ ಸಂಘದವರು ಆಡಿದ ‘ದೇವರ ಗೊಂಬೆ’ ನಾಟಕಕ್ಕೆ. ತಿಂಗಳುಗಟ್ಟಲೆ ತಾಲೀಮು ಮಾಡಿದ ನಂತರ ಮುಂಬೈನಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಅವರ ನಾಟಕ ಪ್ರದರ್ಶನವಾಯಿತು. ಅದರಲ್ಲಿ ಅಮ್ಮನ ಅಭಿನಯಕ್ಕೆ ಮೊದಲ ಬಹುಮಾನ ಬಂತು. ಹಾಗೆಯೇ ನಾಟಕಕ್ಕೂ ಮೊದಲ ಬಹುಮಾನ ಬಂತು.

ಇದಾದ ಮೇಲೆ ಗುಬ್ಬಿ ವೀರಣ್ಣ ಕಂಪೆನಿಗೆ ಅಮ್ಮ ಸೇರುತ್ತಾರೆ. ಹೇಗೆಂದರೆ ನಮ್ಮ ಚಿಕ್ಕಮ್ಮ ಸುಕನ್ಯಾ ಗುಬ್ಬಿ ಕಂಪೆನಿಯಲ್ಲಿದ್ದರು. ಅದಕ್ಕೂ ಮೊದಲು ಸರ್ಕಸ್ ಕಂಪೆನಿಯಲ್ಲಿದ್ದರು. ಅಲ್ಲಿ ಗುಬ್ಬಿ ವೀರಣ್ಣ ಅವರು ಚಿಕ್ಕಮ್ಮಳನ್ನು ನೋಡಿ ತಮ್ಮ ಕಂಪೆನಿಗೆ ಕರೆದರು. ಅವರೊಂದಿಗೆ ಅಜ್ಜಿ ಸಲೋಮಿ ಕೂಡಾ ಇದ್ದರು. ಅಲ್ಲಿ ಊಟ, ವಸತಿ ಸಿಗುವುದು ಕಂಡು ಚಿಕ್ಕಮ್ಮ ನಮ್ಮ ಅಮ್ಮನನ್ನೂ ಕರೆದರು. ಹಾಗೆಯೇ ಅಮ್ಮ ಅಪ್ಪನನ್ನೂ ಕರ್ಕೊಂಡು ಹೋದ್ರು. ಅಪ್ಪ ಚಾಲಕನಾಗಿದ್ದರಿಂದ ಗುಬ್ಬಿ ವೀರಣ್ಣ ಅವರ ಕಾರಿನ ಚಾಲಕನಾದ್ರು. ನಮ್ಮ ದೊಡ್ಡಣ್ಣ ಬಾಬು ‘ಕೃಷ್ಣಲೀಲೆ’ ನಾಟಕದಲ್ಲಿ ಮಕರಂದನ ಪಾತ್ರ ಮಾಡಿದ. ಅಮ್ಮನಿಗೆ ಹತ್ತು ರೂಪಾಯಿ, ಅಪ್ಪನಿಗೆ ಹತ್ತು ರೂಪಾಯಿ, ಬಾಬಣ್ಣನಿಗೆ ಐದು ರೂಪಾಯಿ, ನನಗೆ ಐದು ರೂಪಾಯಿ. ಹಿಂಗ ತಿಂಗಳ ಪಗಾರ ಸಿಗುತ್ತಿತ್ತು. ಅಲ್ಲಿ ಜಿ.ವಿ. ಶಾರದಾ, ಹರಿಕಥಮ್ಮ, ರಾಧಾ-ರುಕ್ಷ್ಮಿಣಿ, ವಾಸುದೇವರಾವ್ ಇದ್ರು.

ಗುಬ್ಬಿ ಕಂಪೆನಿಯಲ್ಲಿದ್ದಾಗ ಅಮ್ಮನಿಗೆ ಮರಿಯನ್ ಹುಟ್ಟಿದ. ಆದರೆ ಒಂದು ವರ್ಷದವನಿದ್ದಾಗ ಅವನಿಗೆ ಮೂರ್ಛೆರೋಗ ಬಂತು. ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ರು. ಗುಬ್ಬಿ ವೀರಣ್ಣ ಅವರ ಮಗ ಗುರಣ್ಣ ಅವರು ಆಸ್ಪತ್ರೆ ಖರ್ಚು ೨೫ ಸಾವಿರ ರೂ. ಕೊಟ್ರು. ಆಗ ಗುಬ್ಬಿ ಕಂಪೆನಿಯು ಬೆಂಗಳೂರು ಕ್ಯಾಂಪು ಮುಗಿಸಿಕೊಂಡು ಬೇರೆ ಊರಿಗೆ ಹೋಯಿತು. ಅಷ್ಟೊತ್ತಿಗೆ ಅಮ್ಮ ನಟಿ ಎಂದು ಗುರುತಿಸಿಕೊಂಡಿದ್ದಳು. ಮುಂದೆ ಅಮ್ಮ ಎಚ್.ಕೆ.ಯೋಗಾನರಸಿಂಹ ಅವರ ಸರ್ವೋದಯ ನಾಟ್ಯ ಮಂಡಳಿಗೆ ಸೇರಿದರು. ಯೋಗಾನರಸಿಂಹ ಅವರು ಅಮ್ಮನನ್ನು ಪ್ರಬುದ್ಧ ನಟಿಯಾಗಿ ತರಬೇತಿ ನೀಡಿದರು. ಅವರೊಂದಿಗೆ ಅಮ್ಮ ನಾಯಕಿ ಪಾತ್ರ, ಹಾಸ್ಯಪಾತ್ರಗಳಿಗೆ ಬಣ್ಣ ಹಚ್ಚಿದಳು. ನಡುಬೀದಿ ನಾರಾಯಣ, ಕಳ್ಳಭಟ್ಟಿ, ಖಾದಿಸೀರೆ ಮೊದಲಾದ ನಾಟಕಗಳಲ್ಲಿ ನಾಯಕಿ ಪಾತ್ರ ನಿರ್ವಹಿಸಿದಳು.

ಗುಲ್ಬರ್ಗಾದಲ್ಲಿ ಯೋಗಾನರಸಿಂಹ ಅವರ ಕಂಪೆನಿಯು ಮೊಕ್ಕಾಂ ಮಾಡಿದಾಗ ಓಬಳೇಶ್ವರ ಕಂಪೆನಿಯೂ ಮೊಕ್ಕಾಂ ಮಾಡಿತು. ಎರಡೂ ಕಂಪೆನಿಗಳೂ ‘ಖಾದಿ ಸೀರೆ’ ನಾಟಕವಾಡುತ್ತಿದ್ದವು. ಯೋಗಾನರಸಿಂಹ ಅವರ ಕಂಪೆನಿ ಆಡುತ್ತಿದ್ದ ‘ಖಾದಿ ಸೀರೆ’ ನಾಟಕದ ನಾಯಕಿ ಇಂದಿರಮ್ಮ ಪಾತ್ರವನ್ನು ನನ್ನ ಅಮ್ಮ ನಿರ್ವಸಿದರೆ, ಓಬಳೇಶ್ವರ ಕಂಪೆನಿಯಲ್ಲಿ ಇಂದಿರಮ್ಮ ಪಾತ್ರವನ್ನು ಯಶೋದಮ್ಮ ನಿರ್ವಹಿಸುತ್ತಿದ್ದರು. ಆಗ ಅಮ್ಮನ ಪಾತ್ರ ನೋಡಿದ ಜೈಲರ್ ಒಬ್ಬರು ಬಂದು ನಿವೃತ್ತಿ ಅಂಚಿನಲ್ಲಿರುವೆ ಎಂದು ಹೇಳಿ ನಿವೃತ್ತಿ ನಂತರ ಕಂಪೆನಿ ಆರಂಭಿಸುವ ಕುರಿತು ಅಮ್ಮನ ಹತ್ತಿರ ಚರ್ಚೆ ಮಾಡಿದರು. ಆಗ ಯೋಗಾನರಸಿಂಹ ಅವರ ಕಂಪೆನಿಯಲ್ಲಿ ಅಮ್ಮ ಸೇರಿದಂತೆ ನಮಗೆಲ್ಲ ೨೫ ರೂಪಾಯಿ ಪಗಾರ ಇತ್ತು. ಜೈಲರ್ ಅವರು ಎಲ್ಲರಿಗೂ ಸೇರಿ ೩೦೦ ರೂಪಾಯಿ ಕೊಡುವೆ ಎಂದಾಗ ಸಹಜವಾಗಿ ಯೋಗಾನರಸಿಂಹ ಅವರ ಕಂಪೆನಿ ಬಿಡುವುದಾಗಿ ಹೇಳಿದಳು. ಮರುದಿನ ನಸುಕಿನಲ್ಲಿ ಹೊರಟಾಗ ಕಲಾವಿದರೊಬ್ಬರು ಸ್ಟೀಲ್ ಟಾರ್ಚ್ ಮೂಲಕ ಅಮ್ಮನಿಗೆ ಹೊಡೆದರು. ಆಗ ಅಮ್ಮನ ಮೂಗಿಗೆ ಏಟಾಯಿತು. ಅಕಸ್ಮಾತ್ತಾಗಿ ಬಿತ್ತು ಎಂದು ಹೇಳಿದರು. ಆಸ್ಪತ್ರೆಗೆ ಹೋಗಿ ಮೂಗಿಗೆ ಬ್ಯಾಂಡೇಜ್ ಕಟ್ಟಿಸಿಕೊಂಡು ಬಂದು ನಾಟಕ ಆಡಿದಳು ಅಮ್ಮ.

ಹೀಗೆ ಎಂಟು ದಿನಗಳವರೆಗೆ ನಾಟಕವಾಡಿದ ನಂತರ ಜೈಲರ್ ಕಂಪೆನಿಗೆ ಹೊರಟೆವು. ಆಗ ಅಪ್ಪ ಹೊನ್ನಾಳಿಗೆ ಹೋದ್ರು. ಅಪ್ಪನೊಂದಿಗೆ ನಾನು, ತಮ್ಮ ಫ್ರಾನ್ಸಿಸ್ ಹೊನ್ನಾಳಿಗೆ ಹೋದೆವು. ಅಲ್ಲಿ ಆರು ತಿಂಗಳವರೆಗೆ ಇದ್ದೆವು. ಜೈಲರ್ ಕಂಪೆನಿಯು ಬಹಳ ದಿನಗಳವರೆಗೆ ನಡೆಯಲಿಲ್ಲ.

ಆಗ ಯೋಗಾನರಸಿಂಹ ಅವರ ಕಂಪೆನಿಯು ಹುಬ್ಬಳ್ಳಿಯಲ್ಲಿತ್ತು. ದಾವಣಗೆರೆ ಲಲಿತಮ್ಮ, ಮುಸುರಿ ಕೃಷ್ಣಮೂರ್ತಿ, ಸರಸ್ವತಿ, ಬೇಬಕ್ಕ ಇದ್ದರು. ‘ಇಂದ್ರಾಣಿ-ಸುಂದ್ರಾಣಿ’ ನಾಟಕ ಆಡಲಾಗುತ್ತಿತ್ತು. ಇಲ್ಲಿಗೆ ಅಮ್ಮ ಸೇರಿದಳು. ಆದರೆ ಹುಬ್ಬಳ್ಳಿಯಿಂದ ಬೇರೆ ಊರಿಗೆ ಕಂಪೆನಿಯು ಹೊರಟಾಗ ಸುಳ್ಳದ ದೇಸಾಯಿ ಅವರು ತಮ್ಮ ಕಂಪೆನಿಗೆ ಅಮ್ಮನನ್ನು ಕರೆದರು. ೫೦೦ ರೂ. ಪಗಾರ ಕೊಡುವೆನೆಂದರು. ಈ ಕಂಪೆನಿಯಿಂದ ಬೆಳವಣಿಕೆಯ ಹದ್ಲಿ ಶಿವಣ್ಣ ಹಾಗೂ ಮಲ್ಲಣ್ಣ ಅಣ್ಣತಮ್ಮಂದಿರು ಅಮರೇಶ್ವರ ನಾಟ್ಯ ಸಂಘವನ್ನು ೧೯೬೬ರಲ್ಲಿ ಶುರು ಮಾಡಿದ್ರು. ಗದಗದಲ್ಲಿ ಕ್ಯಾಂಪಿದ್ದಾಗ ಅಮ್ಮ ಈ ಕಂಪೆನಿಗೆ ಸೇರಿದ್ಲು. ಇಷ್ಟಾಗುವಾಗ ಅಪ್ಪಕುಡಿತದ ಚಟಕ್ಕೆ ಬಿದ್ರು. ಅಮ್ಮನಿಂದ ದೂರವಾದ್ರು. ಆಗ ನಮಗೆ ಉತ್ತರ ಕರ್ನಾಟಕ ಹೊಸದು. ಭಾಷೆ ಬರದು. ಆದರೆ ಬೆಳವಣಿಕೆ ಕಂಪೆನಿಯಲ್ಲಿ ಡಂಬಳ ಸಂಕಣ್ಣ, ಸಂಕನೂರು ಶಿವಲಿಂಗಯ್ಯ, ಡಿ.ದುರ್ಗಾದಾಸ, ಎಲಿವಾಳ ಸಿದ್ಧಯ್ಯ, ಕೊಟ್ಟೂರು ಕೋಮಲಮ್ಮ, ಹುನಗುಂದ ಬಾಬಣ್ಣ, ರಮಾನವ್ವ ಕಲ್ಮನಿ ಕಲಾವಿದರು ಇದ್ರು. ಸುರೇಶಣ್ಣ ಕುಟ್ಟಿ ಹಾರ್ಮೋನಿಯಂಗೆ ಇದ್ರು. ರತ್ನಮಾಂಗಲ್ಯ, ದಾರಿದೀಪ, ಸೋತು ಗೆದ್ದ ಸಾಧ್ವಿ (ಈಗದು ಚನ್ನಪ್ಪಚನ್ನಗೌಡ), ಎಚ್.ಎನ್. ಹೂಗಾರ ಅವರ ಹುಚ್ಚರ ರಾಜ್ಯ ನಾಟಕಗಳನ್ನು ಆಡಲಾಗುತ್ತಿತ್ತು. ‘ಮೈಸೂರು ಕಡೆಯಿಂದ ಇಲ್ಲಿಗೆ ಬಂದು ಹೆಸರು ಮಾಡಾಕ ಬಂದ್ಲು ನೋಡ್ರಿ’ ಅಂತ ಸಹಕಲಾವಿದರು ವ್ಯಂಗ್ಯವಾಡಿದರು. ಆಗ ಕಂಪೆನಿ ಮಾಲಕ ಎಸ್.ಬಿ.ಹದ್ಲಿ ಅವರು ಅಮ್ಮನ ನೆರವಿಗೆ ಬಂದ್ರು. ನಮ್ಮ ಸಲುವಾಗಿ ಅಮ್ಮ ಬೆಳವಣಿಕೆ ಕಂಪೆನಿಯಲ್ಲಿ ಉಳಿದಳು.

ಬಳ್ಳಾರಿ ಜಿಲ್ಲೆಯ ಶಿರಗುಪ್ಪದಲ್ಲಿ ಕಂಪೆನಿ ಮೊಕ್ಕಾಂ ಮಾಡಿದಾಗ ನಾಟಕ ನಡೆಯುವಾಗಲೇ ಅಮ್ಮನಿಗೆ ಅಬಾರ್ಷನ್ ಆಯ್ತು. ರಕ್ತ ಸೋರುವುದನ್ನು ಪ್ರೇಕ್ಷಕರೇ ಹೇಳಿದ್ರು. ಆಸ್ಪತ್ರೆಗೆ ಕರ್ಕೊಂಡು ಹೋದ್ರು. ಅಲ್ಲಿ ಚಿಕಿತ್ಸೆ ಪಡೆದು ಮರುದಿನ ಮತ್ತೆ ಪಾತ್ರ ಮಾಡಿದ್ಲು. ಪಾತ್ರ ಬಿಡುವ ಹಾಗಿರಲಿಲ್ಲ. ಮುಂದೆ ದೇವದುರ್ಗದಲ್ಲಿ ಕ್ಯಾಂಪು ಇದ್ದಾಗ ತಂಗಿ ಗೀತಾ ಹುಟ್ಟಿದ್ಲು. ಅಲ್ಲಿಂದ ಕಂಪೆನಿ ಮಾಲಕಿಯೆಂದು ಅಮ್ಮ ಪ್ರಸಿದ್ಧಿಯಾದ್ಲು. ಆದರೆ ಹುನಗುಂದ ಬಾಬಣ್ಣ, ದುರ್ಗಾದಾಸ, ಶಿವಲಿಂಗಯ್ಯ ಅವರು ಗುಡಗೇರಿ ಬಸವರಾಜ ಅವರ ಕಂಪೆನಿಗೆ ಹೋದ್ರು. ಅನಿವಾರ್ಯವಾಗಿ ಕಂಪೆನಿ ನಿಲ್ಲಿಸಿದ್ರು. ಆಗ ಅಮ್ಮ ಹುಬ್ಬಳ್ಳಿಯ ಚಂದ್ರಕಲಾ ಟಾಕೀಸಿನ ಹಿಂಭಾಗ ಮನೆ ಮಾಡಿದ್ಲು ಮೈಸೂರು ಕಡೆಯವ್ರ ಎಂದು ಕರೆಯುತ್ತಿದ್ರು. ಹೀಗಾಗಿ ತೆರೇಸಮ್ಮ ಮೈಸೂರು ಅಂತಾದಳು. ಆಮೇಲೆ ಸುಳ್ಳದ ದೇಸಾಯಿ ಅವರ ಕಂಪೆನಿಗೆ ಸೇರಿದ್ವಿ. ಜಿ.ವಿ. ಶಾರದಾ, ಜಿ.ವಿ. ಕೃಷ್ಣ ಇದ್ರು. ಕಿತ್ತೂರು ಚೆನ್ನಮ್ಮ ನಾಟಕದಲ್ಲಿ ಚೆನ್ನಮ್ಮನ ಪಾತ್ರವನ್ನು ಎಚ್.ಪಿ. ಸರೋಜಮ್ಮ ಅದ್ಭುತವಾಗಿ ನಟಿಸುತ್ತಿದ್ರು.

೧೯೮೦ರಲ್ಲಿ ಹುಬ್ಬಳ್ಳಿಯಲ್ಲಿ ರಾಘವೇಂದ್ರ ಸ್ತ್ರೀ ನಾಟಕ ಮಂಡಳಿಯನ್ನು ಅಮ್ಮ ಶುರು ಮಾಡಿದ್ಲು. ಕುಂದಾಪುರ ಸುಶೀಲಮ್ಮ, ಶಕುಂತಲಮ್ಮ, ಗದಗ ಫ್ಲೋರಿನಮ್ಮ, ಸರಸ್ವತಿ ನಾಯ್ಡು, ವನಜಮ್ಮ ಶೆಟ್ಟಿ, ರಾಧಾ-ರುಕ್ಮಿಣಿ, ಜಿ.ವಿ. ಕೃಷ್ಣ ಇದ್ರು. ಗೌಡ್ರ ಗದ್ಲ, ಮುದುಕನ ಮದುವೆ ನಾಟಕಗಳನ್ನೇ ಹೆಚ್ಚಾಗಿ ಆಡುತ್ತಿದ್ದೆವು. ಯಾಕಂದ್ರ ಅವು ಪ್ರಸಿದ್ಧವಾಗಿದ್ವು. ಆಮೇಲೆ ಗದಗಿನ ಪುಟ್ಟರಾಜ ಗವಾಯಿಗಳವರು ‘ಕಂಪೆನಿ ಮಾಡವ್ವ’ ಅಂತ ಆಶೀರ್ವಾದ ಮಾಡಿದ್ರು. ಆಗ ನಟರಾಜ ನಾಟಕ ಮಂಡಳಿಯನ್ನು ಅಮ್ಮ ಶುರು ಮಾಡಿದ್ಲು. ೧೫ ವರ್ಷ ನಡೆಸಿದೆವು. ಸಿನೆಮಾ ನಟರಾದ ತೂಗುದೀಪ ಶ್ರೀನಿವಾಸ್, ಶ್ರೀನಾಥ್, ಉಮಾಶ್ರೀ ಬಂದ್ರು. ಗೋಕಾಕದಲ್ಲಿ ಕಂಪೆನಿ ನಿಲ್ಲಿಸಿದೆವು. ಕಂಪೆನಿ ನಿಲ್ಲಿಸಿದ್ರೂ ಅಮ್ಮ ಬೇರೆ ಬೇರೆ ಕಂಪೆನಿಗಳಿಗೆ ನಟಿಸಲು ಹೋಗುತಿದ್ಲು. ಅದರಲ್ಲೂ ಚಿಂದೋಡಿ ಲೀಲಾ ಅವರ ಕಂಪೆನಿ ಹೆಚ್ಚಾಗಿ ಹೋಗುತಿದ್ಲು. ಲೀಲಾ ಅವರ ಕಂಪೆನಿಯಲ್ಲಿನ ನಾಟಕಗಳಿಗೆ ನೃತ್ಯ ಮಾಡುತ್ತಿದ್ದೆ.

ಹುಬ್ಬಳ್ಳಿಯಲ್ಲಿ ಅನಿಲ್ ಠಕ್ಕರ್ ಅವರು ‘ಗುಡ್ ಬಾಯ್ಸ್ ಮಮ್ಸ್’ ಎನ್ನುವ ಮರಾಠಿ ನಾಟಕವನ್ನು ಕನ್ನಡಕ್ಕೆ ಅದೇ ಹೆಸರಿನಲ್ಲಿ ಆಡಿಸಿದಾಗ ಅಮ್ಮನೂ ಪಾತ್ರ ಮಾಡಿದ್ಲು. ಮುಂದೆ ಇದು ಕನ್ನಡದಲ್ಲಿ ಶಂಕರನಾಗ್ ನಟಿಸಿದ ‘ಗೀತಾ’ ಸಿನೆಮಾವಾಯಿತು. ಈ ನಾಟಕವನ್ನು ನೋಡಿದ ‘ಹರಕೆಯ ಕುರಿ’ ಸಿನೆಮಾದ ನಿರ್ದೇಶಕ ನಾಗೇಶ್ ಅವರು ಅಮ್ಮನನ್ನು ಸಿನೆಮಾಕ್ಕೆ ಆಹ್ವಾನಿಸಿದ್ರು. ‘ಹರಕೆಯ ಕುರಿ’ ಸಿನೆಮಾದಲ್ಲಿ ಜೋಗತಿ ಪಾತ್ರ ಮಾಡಿದ್ಲು. ಕರಿಮಾಯಿ, ನೆಂಟರು ಗಂಟು ಕಳ್ಳರು, ಮಾಗಿಯ ಕನಸು, ಹುಲಿ ಹೆಜ್ಜೆ, ಅಮೃತ ಘಳಿಗೆ, ಪಡುವಾರಹಳ್ಳಿ ಪಾಂಡವರು, ಸಂಗ್ಯಾಬಾಳ್ಯಾ, ಪತಿತ ಪಾವನಿ (ಕನ್ನಡ-ಮರಾಠಿ) ಹೀಗೆ ಒಟ್ಟು ೩೫ ಸಿನೆಮಾಗಳಲ್ಲಿ ನಟಿಸಿದಳು. ೬೮ ವರ್ಷಗಳವರೆಗೆ ಅಮ್ಮ ಪಾತ್ರ ಮಾಡಿದ್ಲು.

ಇಂಥ ನನ್ನಮ್ಮ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಕಿತ್ತೂರು ಚೆನ್ನಮ್ಮ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತಳಾದ್ಲು. ೯೧ ವರ್ಷ ಬದುಕಿದ್ದ ಆಕೆೆ ಯಾವ ರೀತಿಯ ಕಾಯಿಲೆ, ಕಸಾಲೆ ಇರದೆ ಜೀವ ಸವೆಸಿ ಹೋದ್ಲು....

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X