Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಎದೆಗೆ ಇರಿವ ‘ಎದೆಗೆ ಬಿದ್ದ ಅಕ್ಷರ’

ಎದೆಗೆ ಇರಿವ ‘ಎದೆಗೆ ಬಿದ್ದ ಅಕ್ಷರ’

ಗಣೇಶ ಅಮೀನಗಡಗಣೇಶ ಅಮೀನಗಡ30 May 2025 4:13 PM IST
share
ಎದೆಗೆ ಇರಿವ ‘ಎದೆಗೆ ಬಿದ್ದ ಅಕ್ಷರ’

ನಾಟಕ: ಎದೆಗೆ ಬಿದ್ದ ಅಕ್ಷರ

ಮೂಲ: ದೇವನೂರ ಮಹಾದೇವ

ರಂಗರೂಪ: ಎಸ್.ನಟರಾಜ ಬೂದಾಳ್

ಸಂತೋಷ್ ನಾಯಕ ಆರ್.

ರಂಗಸಜ್ಜಿಕೆ/ಪರಿಕರ: ಪ್ರಶಾಂತ್ ಹೆಬ್ಬಸೂರು

ಧ್ವನಿ ವಿನ್ಯಾಸ: ಸುಬ್ರಹ್ಮಣ್ಯ ಮೈಸೂರು

ಅನಿಮಷೇಷನ್ಸ್: ಸಿ2ಎಂ ಎಜುಟೆಕ್ ಸೊಲುಷನ್ಸ್

ಬೆಳಕು: ಮಧು ಮಳವಳ್ಳಿ

ಸಹಾಯಕ ನಿರ್ದೇಶಕ: ಕಾರ್ತಿಕ್ ಎಸ್.

ಪರಿಕಲ್ಪನೆ/ಸಂಗೀತ/ನಿರ್ದೇಶನ: ಸಿ.ಬಸವಲಿಂಗಯ್ಯ

ತಂಡ: ಕಾವಲುಮನೆ ಸಾಂಸ್ಕೃತಿಕ ಕೇಂದ್ರ, ಮೈಸೂರು

ರಂಗದ ಮೇಲೆ

ಮಲ್ಲಿಕ್, ಭೀಮರಾವ್, ಮಹದೇವ್, ಉಮಾಶಂಕರ ದೀಕ್ಷಿತ್, ಸುಧೀರ್ ಕುಮಾರ್ ಎಸ್. ಸಂಜೀವ ಪಾಟೀಲ, ಚಂದ್ರು, ಜಯಶ್ರೀ ಹೆಗಡೆ, ಸುಮಾ ಪ್ರಶಾಂತ್, ಬಿ.ಶೋಭಾ ಶಿವರಾಜು, ರೂಪಶ್ರೀ, ರೇಖಾ, ಮಹಾದೇವಿ ಕೆಂಚಲಗೂಡು, ಶಹನಾಝ್ ರಹಮಾನ್, ಅಬ್ದುಲ್ ಕರೀಂ, ಪ್ರಸಾದ್ ಎಸ್.ಬಿ.

ದೇವನೂರ ಮಹಾದೇವ ಅವರ ಕೃತಿಗಳು ಈಗಾಗಲೇ ನಾಟಕಗಳಾಗಿವೆ. ಇದಕ್ಕೆ ಹೊಸ ಸೇರ್ಪಡೆ ‘ಎದೆಗೆ ಬಿದ್ದ ಅಕ್ಷರ’ ಕೃತಿ.

1987ರಲ್ಲಿ ಅವರ ಕುಸುಮಬಾಲೆ ಕಾದಂಬರಿಯನ್ನು ನೇರವಾಗಿ ರಂಗಕ್ಕಿಳಿಸಿ, ನಿರ್ದೇಶಿಸಿದವರು ಜನ್ನಿ. ಇದಕ್ಕೆ ಲಿಂಗದೇವರು ಹಳೆಮನೆ ಅವರು ಹಾಡುಗಳನ್ನು ಬರೆದುಕೊಟ್ಟರು. ಮೈಸೂರು ಸಮುದಾಯವು ಇದನ್ನು ಪ್ರಸ್ತುತಪಡಿಸಿತ್ತು. 45 ಕಲಾವಿದರು ಇದರಲ್ಲಿ ನಟಿಸಿದ್ದರು. ಮೈಸೂರಿನ ಕಲಾಮಂದಿರದಲ್ಲಿ ನಿರಂತರವಾಗಿ 13 ಪ್ರದರ್ಶನಗಳನ್ನು ಕಂಡಿತ್ತು. ನಂತರ 1991ರಲ್ಲಿ ಮೈಸೂರಿನ ರಂಗಾಯಣಕ್ಕೆ ‘ಕುಸುಮಬಾಲೆ’ಯನ್ನು ಸಿ. ಬಸವಲಿಂಗಯ್ಯ ನಿರ್ದೇಶಿಸಿದ್ದರು. ಮೈಸೂರಿನ ರಂಗಾಯಣದ ಭೂಮಿಗೀತದಲ್ಲಿ 60, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 22 ಹೀಗೆ ಒಟ್ಟು 180 ಪ್ರದರ್ಶನಗಳಾಗಿವೆ.

ಇದಕ್ಕೂ ಮೊದಲು ದೇವನೂರು ಅವರ ‘ಒಡಲಾಳ’ ನಾಟಕವಾಗಿಸಿ ನಿರ್ದೇಶಿಸಿದವರು ಸಿಜಿಕೆ. ಬೆಂಗಳೂರಿನ ರಂಗ ಸಂಪದ ತಂಡದ ಈ ನಾಟಕದಲ್ಲಿ ಸಾಕವ್ವ ಪಾತ್ರದ ಮೂಲಕ ಪ್ರಸಿದ್ಧರಾದವರು ಉಮಾಶ್ರೀ. ಈ ನಾಟಕದ ಮೂಲಕ ಹವ್ಯಾಸಿ ರಂಗಭೂಮಿಯಲ್ಲಿ ಮರೆಯದ ತಮ್ಮ ಛಾಪನ್ನು ಮೂಡಿಸಿದವರು ಹಾಗೂ ಇತಿಹಾಸ ನಿರ್ಮಿಸಿದವರು ಉಮಾಶ್ರೀ. ಹೀಗೆಯೇ ಜನ್ನಿ ಅವರು ಮೈಸೂರಿನ ನೆಲೆಹಿನ್ನೆಲೆ ತಂಡಕ್ಕೆ ‘ಒಡಲಾಳ’ ನಾಟಕವಾಗಿ ನಿರ್ದೇಶಿಸಿದ್ದರು. ಇದು 12 ಪ್ರಯೋಗಗಳನ್ನು ಕಂಡಿತು. ಆಮೇಲೆ ‘ಸಂಬಂಜ ಅನ್ನೋದು ದೊಡ್ದು ಕಣಾ...’ ಎನ್ನುವ ನಾಟಕವನ್ನು ನಿರ್ದೇಶಿಸಿದವರು ಜನ್ನಿ. ಇದರಲ್ಲಿ ಒಡಲಾಳವೂ ಸೇರಿದಂತೆ ಐದು ಕಥೆಗಳನ್ನು ರಾಜಪ್ಪ ದಳವಾಯಿ ಅವರು ರಂಗರೂಪಕ್ಕಿಳಿಸಿದ್ದರು. ಇದರಲ್ಲಿ ಮಾರಿಕೊಂಡವರು, ಒಂದು ದಹನದ ಕಥೆ, ಮೂಡಲಸೀಮೇಲಿ ಕೊಲೆಗೀಲೆ ಮುಂತಾಗಿ, ಅಮಾಸ ಹಾಗೂ ದ್ಯಾವನೂರು ಕಥೆಗಳು ಒಳಗೊಂಡಿವೆ. ಇದನ್ನು ಜನಮನ ತಂಡ ಪ್ರಸ್ತುತಪಡಿಸಿತು. ಇದಕ್ಕೆ ಚಿಂತನ್ ವಿಕಾಸ್ ಸಂಗೀತ ನೀಡಿದ್ದರು.

ಇದಕ್ಕೂ ಮೊದಲು ಕೆ.ಆರ್. ಸುಮತಿ ಅವರು ಎನ್‌ಎಸ್‌ಡಿ ಪದವಿ ಪಡೆದು ಬಂದ ಮೇಲೆ ಸಾಗರ ಬಳಿಯ ಹಿರೆಮನೆಯಲ್ಲಿ ಹಸಲರು ಜನಾಂಗದವರನ್ನು ಕಲಾವಿದರನ್ನಾಗಿ ಬಳಸಿಕೊಂಡು, ಹುಚ್ಚಪ್ಪ ಮಾಸ್ತರರ ನೇತೃತ್ವದಲ್ಲಿ ‘ದ್ಯಾವನೂರು’ ಕಥೆಯನ್ನು ನಾಟಕವಾಗಿ ರೂಪಾಂತರಿಸಿ, ನಿರ್ದೇಶಿಸಿದ್ದರು.

ಹೀಗೆ ದೇವನೂರ ಮಹಾದೇವ ಅವರ ಕೃತಿಗಳು ಕನ್ನಡ ರಂಗಭೂಮಿಯಲ್ಲಿ ಮಹತ್ವ ಪಡೆದಿವೆ ಮತ್ತು ದಾಖಲೆ ನಿರ್ಮಿಸಿವೆ. ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವ ಅಂಶಗಳು’ ಎನ್ನುವ ಮೂಲಕ ’ಎದೆಗೆ ಬಿದ್ದ ಅಕ್ಷರ’ ನಾಟಕವು ಆಶಾಬೀಜವನ್ನು ಬಿತ್ತುತ್ತದೆ. ದಲಿತರಿಗೆ, ದಮನಿತರಿಗೆ ಸಮಾನತೆ, ಸ್ವಾತಂತ್ರ್ಯ ಹಾಗೂ ಗೌರವಯುತ ಬದುಕು ಸಿಗಬೇಕು ಎನ್ನುವ ಆಶಯವನ್ನು ಬಸವಲಿಂಗಯ್ಯ ಅವರು ತಮ್ಮ ಈ ನಾಟಕದ ಮೂಲಕ ಸಮರ್ಥವಾಗಿ ಕಟ್ಟಿಕೊಡುತ್ತಾರೆ. ಆದರೆ ಆಕೃತಿಯಾಗಿ ನಾಟಕವಿಲ್ಲ ಎಂದು ಬೇಸರದಿಂದ ಹೇಳುವೆ. ಏಕೆಂದರೆ ಅವರು ಮೈಸೂರು ರಂಗಾಯಣಕ್ಕೆ ನಿರ್ದೇಶಿಸಿದ ‘ಗಾಂಧಿ ವರ್ಸಸ್ ಗಾಂಧಿ’ ಹಾಗೂ ‘ಟಿಪ್ಪು ಕನಸುಗಳು’ ನಾಟಕಗಳನ್ನು ಈಗಲೂ ಮರೆಯಲಾಗದು. ಈ ನಾಟಕಗಳು ಗೆಲ್ಲಲು ರಂಗಾಯಣದ ಸಮರ್ಥ ಕಲಾವಿದರು ಪ್ರಮುಖರು ಎನ್ನುವಲ್ಲಿ ಎರಡು ಮಾತಿಲ್ಲ. ಇದೇ ಮಾತನ್ನು ‘ಎದೆಗೆ ಬಿದ್ದ ಅಕ್ಷರ’ ನಾಟಕಕ್ಕೆ ಅನ್ವಯಿಸಲಾಗದು. ತಾಲೀಮಿನ ಕೊರತೆಯ ಕಾರಣಕ್ಕೋ ಏನೋ ಕಲಾವಿದರು ಸಂಭಾಷಣೆಗಳನ್ನು ಹೇಳುವಲ್ಲಿ ಎಡವುತ್ತಿದ್ದರು. ಹೀಗೆ ಕಲಾವಿದರ ಅಭಿನಯ ನೋಡುತ್ತ, ಮಾತು ಕೇಳಿಸಿಕೊಳ್ಳಬೇಕೆಂದುಕೊಳ್ಳುವಾಗ ಪ್ರೊಜೆಕ್ಟರ್ ಪರದೆ ಮೇಲೆ ಚಿತ್ರಗಳು ಮೂಡಲಾರಂಭಿಸುತ್ತಿದ್ದವು. ಇದರಿಂದ ನಮ್ಮ ಕಣ್ಣುಗಳು ಕಲಾವಿದರ ಮೇಲಿರಬೇಕೋ ಪ್ರೊಜೆಕ್ಟರ್ ಮೇಲಿರಬೇಕೋ ಎನ್ನುವ ಗೊಂದಲ ಉಂಟಾಗುತ್ತಿತು. ಕಲಾವಿದರ (ಎಲ್ಲರೂ ಅಲ್ಲ) ಸೊರಗಿದ ಅಭಿನಯದ ಕೊರತೆಯನ್ನು ನೀಗಿಸಲು ಪ್ರೊಜೆಕ್ಟರ್‌ಗೆ ಬಸು ಅವರು ಮೊರೆ ಹೋದರೇನೋ ಎನ್ನಿಸುತ್ತಿದೆ. ಈ ಕುರಿತು ರಂಗಕರ್ಮಿ ಕೆ.ಆರ್. ಸುಮತಿ ಅವರು ‘‘ಈ ನಾಟಕವನ್ನು ಡಾಕ್ಯೂ ಡ್ರಾಮಾ ಎನ್ನುವುದು ಸೂಕ್ತ. ಕಥೆಯಿಲ್ಲ. ಬಿಡಿ ಬಿಡಿ ಚಿತ್ರಗಳು. ಬಹಳ ಬ್ರೇಕ್ ಇದ್ದವು’’ ಎಂದಿದ್ದು ಸರಿಯಿದೆ. ಇದರೊಂದಿಗೆ ರಂಗಕರ್ಮಿ ಬಿ. ಸುರೇಶ್ ಅವರು ‘‘ನಿರ್ದೇಶಕರಾಗಿ ಬಸು ಅವರಿಗೆ ಈ ನಾಟಕವು ಪ್ರಯೋಗ. ಕಲಾವಿದರಿಗೆ ಪ್ರಯಾಣ. ಅವರು ಗಟ್ಟಿಯಾದರಷ್ಟೇ ಯಶಸ್ವಿಯಾಗುತ್ತದೆ’’ ಎಂದು ಸಲಹೆ ನೀಡಿದರು.

ಬಿಡಿ ಲೇಖನಗಳ ಸಂಕಲನವಾದ ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲಿ ದೇವನೂರು ಅವರ ಸಮಕಾಲೀನ ಸಂದರ್ಭಕ್ಕೆ ಸ್ಪಂದಿಸಿದ್ದರ ಅನಾವರಣ ಈ ನಾಟಕ. ಬರ ಕುರಿತು ಹೇಳುವಾಗ ಛಾಯಾಗ್ರಾಹಕ ಕೆಲ್ವಿನ್ ಅವರ ಅದ್ಭುತವಾದ ಚಿತ್ರವು ಪ್ರೊಜೆಕ್ಟರಲ್ಲಿ ಮೂಡುತ್ತದೆ. ಹಸಿವಿನಿಂದ ನೆಲಕ್ಕೆ ಅಂಟಿಕೊಂಡ ಬಾಲಕನನ್ನು ಹದ್ದು ಹೊಂಚು ಹಾಕಿ ಕಾಯುತ್ತಿರುವುದು ಗಮನ ಸೆಳೆಯುತ್ತದೆ. ಬರವಿದ್ದಾಗಲೂ ಯುದ್ಧಗಳು ನಿಲ್ಲುತ್ತಿಲ್ಲ ಎನ್ನುವುದನ್ನು ನಾಟಕ ಹೇಳುತ್ತದೆ. ನಂತರ ಜೋತೆಮ್ಮಗಳು ನಾಟಕವನ್ನು ವಿಸ್ತರಿಸುತ್ತ ಹೋಗುತ್ತಾರೆ. ಜನಗಳಿಗೆ ಮನೆಮಂಚಪ್ಪ ಹೇಳುವ ದೃಶ್ಯ ಗಮನಾರ್ಹ. ‘‘ಎಲ್ಲಿಯವರೆಗೆ ಈ ದೇಶದಲ್ಲಿ ದಿಕ್ಕುದೆಸೆಯಿಲ್ಲದ ನನ್ನ ಮಕ್ಕಳಿಗೆ ಸೂರು ಸಿಕ್ಕಿಲ್ಲವೊ, ನನಗೂ ಸೂರು ಬೇಡ. ನಿಮಗೆ ಸಿಕ್ಕ ಮೇಲೆ ನನಗೆ ಗುಡಿ ಕಟ್ಟಿಸಿ’’ ಎನ್ನುತ್ತಾಳೆ. ನಂತರ ‘‘ಮನುಷ್ಯರು ನಾವು. ಜಾತಿಗಳಾಗಿ ಒಡೆದುಹೋಗಿದ್ದೀವಿ. ಹಂಗಾಗಿ ಎಡಗೈ, ಬಲಗೈ, ಹೆಬ್ಬೆರಳು, ಕಿರುಬೆರಳು, ತೋರುಬೆರಳು... ಹೀಗೆ ಒಡೆದುಹೋಗಿದ್ದೀವಿ. ಎಲ್ರೂ ಮನುಷ್ಯರೇ. ಮನುಷ್ಯರಾಗಿ ಬಾಳಬೇಕು. ಬ್ಯಾರೆಯವ್ರನ್ನು ಬಾಳಿಸಬೇಕು’’ ಎನ್ನುವ ಸಂದೇಶವನ್ನೂ ಹೇಳುತ್ತಾಳೆ. ಹೀಗೆ ಜಾತಿ ತಾರತಮ್ಯ, ಸಲಹೆಗಳು ಇವೆ. ಇಂಥವು ನಾಟಕದ ಉದ್ದಕ್ಕೂ ಸಿಗುತ್ತವೆ. ದೇವನೂರು ಅವರು ಸಂಶೋಧಕರಾಗಿದ್ದ ಎಲ್.ಬಸವರಾಜು ಅವರು ಅನಾರೋಗ್ಯವಾಗಿ ಆಸ್ಪತ್ರೆಗೆ ಸೇರಿದಾಗ ಅವರನ್ನು ವಿಚಾರಿಸಲು ಹೋಗುತ್ತಾರೆ. ಆಗ ಬಸವರಾಜು ಅವರು ‘‘ಇದೇ ಆಸ್ಪತ್ರೆಯಲ್ಲಿಯೇ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ದಾಖಲಾಗಿದ್ದಾರೆ’’ ಎಂದಾಗ ಅವರನ್ನೂ ಭೇಟಿಯಾಗುವ ದೃಶ್ಯಗಳಿವೆ. ಆಗ ಅನಂತಮೂರ್ತಿ ಅವರು ‘‘ಕನಸಿನಲ್ಲಿ ನಿನಗೆ ಗಾಯತ್ರಿ ಮಂತ್ರ ಉಪದೇಶಿಸಿದೆ. ನೀನು ಧಾರಣ ಮಾಡಿಕೊಂಡೆ. ಇದು ನನಗೆ ಥ್ರಿಲ್ ಅನ್ನಿಸಿತು’’ ಎಂದಾಗ ದೇವನೂರು ಅವರು ‘‘ಇದರಾಗೇನು ಥ್ರಿಲ್ ಇದೆ ಸರ್? ನಾನೇನಾದರೂ ನಿಮಗೆ ಗಾಯತ್ರಿ ಮಂತ್ರ ಉಪದೇಶ ಮಾಡಿದ್ರೆ ಥ್ರಿಲ್ ಆಗಬೇಕಿತ್ತು’’ ಎನ್ನುವುದು ಬಹಳ ಮಹತ್ವವಾದುದು. ಹೀಗೆ ಬಿಡಿ ಬಿಡಿಯಾದ ದೃಶ್ಯಗಳು ಗಮನ ಸೆಳೆಯುತ್ತವೆ. ಹೀಗೆಯೇ ಲೇಖಕ ಆಲನಹಳ್ಳಿ ಶ್ರೀಕೃಷ್ಣ ಅವರ ಭೇಟಿ, ಒಡನಾಟದ ದೃಶ್ಯವೂ ಇದೆ.

ಇನ್ನೊಂದು ದೃಶ್ಯ; ಎಸ್.ಬಿ.ಪ್ರಸಾದ್ ಅವರು ಬಿಳಿ ಬಟ್ಟೆ ಧರಿಸಿ ಗಮನ ಸೆಳೆದರು. ಅವರ ಮಾತು ‘‘ಎಲ್ಲ ಧರ್ಮದಲ್ಲೂ ಮೂರು ಥರದ ಜನರು ಇರುತ್ತಾರೆ. ಅಧ್ಯಾತ್ಮಧರ್ಮಿಗಳು, ಕುಟುಂಬಧರ್ಮಿಗಳು ಮತ್ತು ರಾಜಕೀಯಧರ್ಮಿಗಳು. ಅಧ್ಯಾತ್ಮಧರ್ಮಿಗಳು ದೇಹದಲ್ಲೇ ದೇಗುಲವನ್ನು ಕಾಣುವಂಥ ಸಾಧುಸಂತರು. ಕುಟುಂಬಧರ್ಮಿಗಳು ದೇವರು ಮತ್ತು ಧರ್ಮವನ್ನು ಎಷ್ಟಕ್ಕೆ ಬೇಕೋ ಅಷ್ಟಕ್ಕೆ ಇಟ್ಟುಕೊಂಡು ಆರಾಮವಾಗಿ ಜೀವನ ಮಾಡುವಂಥ ನಮ್ಮಂಥ ಜನ. ಇನ್ನು ರಾಜಕೀಯಧರ್ಮಿಗಳು ಮಾತ್ರ ದೇವರು ಮತ್ತು ಧರ್ಮವನ್ನು ವ್ಯಾಪಾರ ಹಾಗೂ ವ್ಯವಹಾರ ಮಾಡುತ್ತಾರೆ’’ ಎಂದು ಹೇಳುತ್ತ ಕೊನೆಗೆ ‘‘ನಾವು ಈಗ ನಿಜದ ರಾಮನನ್ನು ಹುಡುಕಬೇಕಿದೆ’’ ಎನ್ನುತ್ತಾರೆ. ನಾಟಕದ ಇತರ ಕಲಾವಿದರು ಕಪ್ಪುಬಟ್ಟೆಗಳನ್ನು ಧರಿಸಿದ್ದರೆ, ಪ್ರಸಾದ್ ಮಾತ್ರ ಬಿಳಿಬಟ್ಟೆ ಧರಿಸಿದ್ದರು. ಅವರದು ಮಹಾತ್ಮಾ ಗಾಂಧಿ ಪಾತ್ರ ಎನ್ನಲಾಗದು. ಅಧ್ಯಾತ್ಮ ಗುರು ಎನ್ನಬಹುದು. ಕಪ್ಪು ಬಣ್ಣ ಅಲಕ್ಷಿತವೂ ಹೌದು, ಪ್ರತಿಭಟನೆಯ ಸಂಕೇತವೂ ಹೌದು. ಈ ಹಿನ್ನೆಲೆಯಲ್ಲಿ ಬಸು ಅವರು ಕಪ್ಪು ಉಡುಪನ್ನು ಆಯ್ಕೆಮಾಡಿಕೊಂಡಿರಬಹುದು.

ಬಸವಲಿಂಗಯ್ಯ ಅವರ ಪ್ರಕಾರ ನಾಟಕವೆಂದರೆ ‘‘ನಾಯಕ, ನಾಯಕಿ ಇರಬೇಕು ಜೊತೆಗೊಬ್ಬ ಖಳನಾಯಕ ಇರಬೇಕು. ಖಳನಾಯಕನನ್ನು ನಾಯಕ ಸಾಯಿಸಬೇಕು. ಹೀಗಿರುವುದೇ ನಾಟಕವಲ್ಲ’’ ಎನ್ನುವುದು ಮುಖ್ಯ. ಆದರೆ ಈ ನಾಟಕಕ್ಕೆ ದೇವನೂರು ಅವರೇ ನಾಯಕರು. ಅವರ ಬಯೋಪಿಕ್ ಮಾಡಿದ್ದರೂ ಚೆನ್ನಾಗಿರುತ್ತಿತ್ತು. ಹೀಗೆಂದಾಗ ಈ ನಾಟಕ ಚೆನ್ನಾಗಿಲ್ಲವೆಂದಲ್ಲ. ಇನ್ನಷ್ಟು ಚೆನ್ನಾಗಿರಬೇಕಿತ್ತು, ಕಲಾತ್ಮಕವಾಗಿರಬೇಕಿತ್ತು, ಎದೆಗೆ ಒದ್ದಂತಾಗಬೇಕಿತ್ತು ಎನ್ನಿಸುತ್ತದೆ. ದೇವನೂರು ಅವರ ವಿಚಾರಗಳನ್ನು, ಲೇಖನಗಳನ್ನು ರಂಗಕ್ಕಿಳಿಸುವುದು ಸವಾಲು ಕೂಡಾ ನಿಜ. ಈ ಸವಾಲನ್ನು ಬಸು ಅವರು ಗೆದ್ದಿದ್ದಾರೆ. ಶೋಷಕರಿಗೆ ತಿವಿಯುವ, ಶೋಷಿತರನ್ನು ಎಚ್ಚರಿಸುವ, ಶಿಕ್ಷಣ ಹಾಗೂ ಸಂವಿಧಾನದ ಮಹತ್ವ ಹೇಳುವ, ಆಮೂಲಕ ಸಮಾನತೆ ಸಾರುವ ಈ ನಾಟಕ ಮಹತ್ವ ಪಡೆಯುತ್ತದೆ.

ಒಂದೂವರೆ ಗಂಟೆಯ ಈ ನಾಟಕದಲ್ಲಿ ಪ್ರೇಕ್ಷಕರೊಂದಿಗೆ ಅನುಸಂಧಾನ ನಡೆಸುವ ಅನೇಕ ವಿಚಾರಗಳಿವೆ. ಕನ್ನಡದ ಅಳಿವು-ಉಳಿವು, ಉಡುಪಿಯ ಶ್ರೀಕೃಷ್ಣನನ್ನು ಕಾಣಲು ಕನಕದಾಸರು ನಡೆಸಿದ ಪ್ರಯತ್ನ, ಸಂವಾದ ಮುಖ್ಯ. ಹೀಗೆ ದೇವನೂರು ಅವರ ವಿಚಾರಧಾರೆಗಳನ್ನು ಸಮರ್ಥವಾಗಿ ರಂಗದ ಮೇಲೆ ಬಸವಲಿಂಗಯ್ಯ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ದೇವನೂರು ಅವರ ಈ ಕೃತಿ ಓದದವರಿಗೂ ನಾಟಕದ ಮೂಲಕ ತಲುಪಿಸುವ ಅವರ ಪ್ರಯೋಗಶೀಲತೆಗೆ ಅಭಿನಂದಿಸುವೆ. ಅವರ ಪ್ರಯತ್ನ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸುವೆ.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X