Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ರಂಗ ಪ್ರಸಂಗ
  5. ಮರೆಯದ ‘ಮುಖ್ಯಮಂತ್ರಿ’ಗೆ 875ನೇ ಪ್ರಯೋಗ

ಮರೆಯದ ‘ಮುಖ್ಯಮಂತ್ರಿ’ಗೆ 875ನೇ ಪ್ರಯೋಗ

ಗಣೇಶ ಅಮೀನಗಡಗಣೇಶ ಅಮೀನಗಡ16 May 2025 3:41 PM IST
share
ಮರೆಯದ ‘ಮುಖ್ಯಮಂತ್ರಿ’ಗೆ 875ನೇ ಪ್ರಯೋಗ
‘ಮುಖ್ಯಮಂತ್ರಿ’ ನಾಟಕದಿಂದಲೇ ಮುಖ್ಯಮಂತ್ರಿ ಚಂದ್ರು ಶಾಸಕರಾದರು, ವಿಧಾನ ಪರಿಷತ್ ಸದಸ್ಯರಾದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದರು. ಹೀಗೆ ಜನಪ್ರಿಯರಾದರೂ ಅವರು ‘ಮುಖ್ಯಮಂತ್ರಿ’ ನಾಟಕದಿಂದ ದೂರವಾಗಿಲ್ಲ. ಹೀಗೆಯೇ ಎಲ್ಲರೂ ರಂಗಭೂಮಿಯಲ್ಲಿ ತೊಡಗಿಕೊಳ್ಳಲಿ ಎನ್ನುವ ಆಶಯ ಅವರದು.

‘‘ರಂಗಭೂಮಿಯ ಮೂಲಕ ಪ್ರಸಿದ್ಧರಾದವರು ನಾಟಕಗಳಲ್ಲಿ ಮತ್ತೆ ಬಣ್ಣ ಹಚ್ಚಬೇಕು. ಕೇವಲ ನಟರಲ್ಲ; ರಂಗಭೂಮಿಯಂದ ಪ್ರಸಿದ್ಧರಾದ ಪ್ರಾಧ್ಯಾಪಕರು, ಡಾಕ್ಟರು... ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವವರು, ಯಾವುದೇ ಹುದ್ದೆಯಲ್ಲಿದ್ದರೂ ನಾಟಕಗಳಲ್ಲಿ ತೊಡಗಿಕೊಳ್ಳಿ. ಮನರಂಜನೆಗೆ ಪ್ರವಾಸ, ವಿರಾಮಕ್ಕೆ, ಆರಾಮಕ್ಕೆಂದು ಬೇರೆ ಬೇರೆ ಕಡೆ ತೊಡಗಿಕೊಂಡ ಹಾಗೆ ನಾಟಕಗಳಲ್ಲಿ ಬಣ್ಣ ಹಚ್ಚಿದರೆ ಹೊಸ ಪ್ರೇಕ್ಷಕರು ಬರಲು ಸಾಧ್ಯ...’’

ಹೀಗೆ ಸಲಹೆ ನೀಡಿದವರು ಮುಖ್ಯಮಂತ್ರಿ ಚಂದ್ರು.

ಅವರು 45 ವರ್ಷಗಳಿಂದ ಅಭಿನಯಿಸುತ್ತಿರುವ ‘ಮುಖ್ಯಮಂತ್ರಿ’ ನಾಟಕದ 875ನೇ ಪ್ರಯೋಗ ನಾಳೆ (ಮೇ 17) ಸಂಜೆ ಏಳು ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಯೋಗಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿದಾಗ ‘‘ಖುಷಿಯಿದೆ, ತೃಪ್ತಿ ಇದೆ. ಹವ್ಯಾಸಿ ತಂಡವಾದ ಕಲಾಗಂಗೋತ್ರಿ ಮೂಲಕ ಪ್ರತೀ ತಿಂಗಳು ನಾಟಕವಾಡುತ್ತೇವೆ. ದುಡಿಮೆ ಬರದಿರಬಹುದು. ಆದರೆ ಈಗಿರುವ ಸ್ಥಾನಕ್ಕೆ ಬರಲು ಕಾರಣವಾದ ರಂಗಭೂಮಿ ಮರೆತಿಲ್ಲ. ಐಟಿ/ಬಿಟಿ ನಡುವೆ ಕಳೆದುಹೋಗಿರುವ ಯುವತಲೆಮಾರನ್ನು ರಂಗಭೂಮಿಯತ್ತ ಸೆಳೆಯಲು ಸಾಧ್ಯ. ಅವರಲ್ಲಿ ಅಭಿರುಚಿ ಬೆಳೆಸಲು ಸಾಧ್ಯ. ಇದಕ್ಕಾಗಿ ಜನಪ್ರಿಯ ನಟರಷ್ಟೇ ಅಲ್ಲ; ವಿವಿಧ ಕ್ಷೇತ್ರಗಳಲ್ಲಿರುವವರು ರಂಗಭೂಮಿಗೆ ಬರಬೇಕು. ವರನಟ ಡಾ.ರಾಜಕುಮಾರ್ ಅವರು ವೃತ್ತಿ ರಂಗಭೂಮಿಗೆ ಬಂದಿದ್ದರೆ ಈಗಿನ ಪರಿಸ್ಥಿತಿ ಇರುತ್ತಿರಲಿಲ್ಲ. ಹವ್ಯಾಸಿ ರಂಗಭೂಮಿಯವನಾದ ನಾನೇ ಈಗಲೂ ಸಕ್ರಿಯ. ಹೀಗೆಯೇ ಜನಪ್ರಿಯರಾದವರು, ಪ್ರಸಿದ್ಧರಾದವರು ನಾಟಕಗಳಲ್ಲಿ ಪಾತ್ರ ನಿರ್ವಹಿಸಬೇಕು’’ ಎನ್ನುವ ಸಲಹೆ ಅವರದು.

‘‘ಸರಳವಾದ, ಒತ್ತಡವಿಲ್ಲದ ಬದುಕು ರಂಗಭೂಮಿಯಲ್ಲಿ ಸಾಧ್ಯ. ಒಟ್ಟಿಗೆ ಕುಳಿತು ತಿಂಡಿ, ಊಟ ಮಾಡಿ ಹರಟೆ ಹೊಡೆಯುತ್ತೇವೆ. ಪ್ರತೀ ಸಲ ಮುಖ್ಯಮಂತ್ರಿ ನಾಟಕವಿದ್ದಾಗ ಒಂದೆರಡು ಗಂಟೆ ಮೊದಲೇ ಹೋಗುವೆ. ತಾಲೀಮಿಗಲ್ಲ; ಹರಟೆಗೆ. ಚಿಂತೆಯಿರಲ್ಲ, ಖುಷಿ ಸಿಗುತ್ತದೆ’’ ಎನ್ನುವ ಅನುಭವ ಅವರದು.

ಆದರೆ ರವೀಂದ್ರ ಕಲಾಕ್ಷೇತ್ರ ಕುರಿತು ಅವರಿಗೆ ಅಸಮಾಧಾನವಿದೆ. ‘‘ಮೊದಲಿನ ಹಾಗೆ ರವೀಂದ್ರ ಕಲಾಕ್ಷೇತ್ರ ಉಳಿದಿಲ್ಲ. ಯಾರೋ ಬರ್ತಾರೆ, ಎದ್ದು ಹೋಗ್ತಾರೆ. ಹೀಗೆ ನಾಟಕ ನಡೆಯುತ್ತಿದೆ. ಇದಕ್ಕಾಗಿ ದುರಸ್ತಿ ಆಗಬೇಕು. ನಂತರ ನಿರಂತರವಾಗಿ ಒಂದು ತಿಂಗಳು ನಾಟಕೋತ್ಸವ ಆಗಬೇಕು. ಆಗ ಪ್ರೇಕ್ಷಕರನ್ನು ವಾಪಸ್ ಕರೆತರಬಹುದು. ಈಗಾಗಲೇ ರಂಗಶಂಕರ, ಕಲಾಗ್ರಾಮದಲ್ಲಿ ನಿರಂತರವಾಗಿ ನಾಟಕ ನಡೆಯುವ ಹಾಗೆ ರವೀಂದ್ರ ಕಲಾಕ್ಷೇತ್ರದಲ್ಲೂ ಆಗಬೇಕು. ಕೇವಲ ಸರಕಾರಿ ಕಾರ್ಯಕ್ರಮಗಳಿಗೆ ಮೀಸಲಾಗಬಾರದು’’

ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಲು ‘ಮುಖ್ಯಮಂತ್ರಿ’ ನಾಟಕದ 875ನೇ ಪ್ರಯೋಗವನ್ನು ಏರ್ಪಡಿಸಿದ್ದೇವೆ. ರಂಗಶಂಕರದಲ್ಲಿ ಪ್ರತೀ ತಿಂಗಳು ಈ ನಾಟಕ ಆಡುತ್ತೇವೆ. 200 ರೂಪಾಯಿ ದರವಿದ್ದರೂ ಹೌಸ್‌ಫುಲ್ ಆಗುತ್ತದೆ. ಕಳೆದ 20 ವರ್ಷಗಳಿಂದ ಅಲ್ಲಿ ನೂರಾರು ಪ್ರದರ್ಶನ ನೀಡಿದ್ದೇವೆ. ಹೀಗೆಯೇ ರವೀಂದ್ರ ಕಲಾಕ್ಷೇತ್ರದಲ್ಲೂ ಆಗಲಿ ಎನ್ನುವ ಉದ್ದೇಶವಿದೆ ಈ ನಾಟಕದ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಅವರಿಗೆ.

‘‘ಚಂದ್ರು ಅವರ ಸಿನೆಮಾ ಖ್ಯಾತಿ, ಅವರ ಮ್ಯಾನರಿಸಂ, ಅವರು ಸಂಭಾಷಣೆ ಹೇಳುವ ವೈಖರಿ, ಗಮನ ಸೆಳೆವ ಅಭಿನಯದ ಜೊತೆಗೆ ಎಲ್ಲರೊಂದಿಗೆ ಬೆರೆಯುವ ಅವರ ಸರಳತೆಯಿಂದ ಈ ನಾಟಕ ಜನಪ್ರಿಯವಾಗಿದೆ. ನಾಟಕ ಮುಗಿದ ನಂತರ ಪ್ರೇಕ್ಷಕರನ್ನು ಭೇಟಿ ಆಗುತ್ತಾರೆ. ಅವರಿಗಾಗಿ ಫೋಟೋಗೆ ನಿಲ್ಲುತ್ತಾರೆ. ಈ ಬಗೆಯ ಕಲಾವಿದರು ಅಪರೂಪ. 125 ಪುಟಗಳ ಮುಖ್ಯಮಂತ್ರಿ ನಾಟಕದಲ್ಲಿ 80 ಪುಟಗಳ ಸಂಭಾಷಣೆಯನ್ನು ಚಂದ್ರು ಅವರೇ ಹೇಳಬೇಕು. ಉಳಿದ 25 ಪಾತ್ರಗಳು ಸಣ್ಣಪುಟ್ಟವು. ಇವು ಬದಲಾಗುತ್ತಲೇ ಇರುತ್ತವೆ. ಆದರೆ 45 ವರ್ಷಗಳಿಂದ ಅವರೊಬ್ಬರೇ ಮುಖ್ಯಮಂತ್ರಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅವರಿಗೆ ಈಗ 71 ವರ್ಷ ವಯಸ್ಸು. ಅವರು ಸಾಕು ಎನ್ನುವವರೆಗೆ ಈ ನಾಟಕ ಪ್ರದರ್ಶಿಸುತ್ತಲೇ ಇರುತ್ತೇವೆ’’ ಎನ್ನುವ ಡಾ.ಬಿ.ವಿ.ರಾಜಾರಾಂ ಅವರಿಗೆ 72 ವರ್ಷ ವಯಸ್ಸು. ಅವರ ಕಲಾಗಂಗೋತ್ರಿಗೆ 55ರ ಹರೆಯ.

ಇನ್ನು ‘ಮುಖ್ಯಮಂತ್ರಿ’ ನಾಟಕ ಈಗಾಗಲೇ ರಾಜ್ಯ, ಹೊರ ರಾಜ್ಯಗಳಲ್ಲದೆ ವಿದೇಶದಲ್ಲೂ ಪ್ರಯೋಗಗೊಂಡಿದೆ.

‘ಮುಖ್ಯಮಂತ್ರಿ’ಯ ಮೊದಲ ಪ್ರದರ್ಶನಕ್ಕೆ ಚಂದ್ರು ಅವರು ಬಣ್ಣ ಹಚ್ಚಿದ್ದು ಆಕಸ್ಮಿಕ. ಈ ನಾಟಕವನ್ನು ಕನ್ನಡಕ್ಕೆ ತಂದ ಲೋಹಿತಾಶ್ವ ಅವರೇ ಮುಖ್ಯಮಂತ್ರಿ ಪಾತ್ರ ನಿರ್ವಹಿಸಬೇಕಿತ್ತು. ಆದರೆ ಇನ್ನೊಂದು ವಾರದಲ್ಲಿ ನಾಟಕವಿದೆ ಎನ್ನುವಾಗ ಜ್ವರದಿಂದ ಅವರು ಬಳಲಿದರು. ಆಗ ಚಂದ್ರು ಅವರ ಹೆಗಲಿಗೆ ಮುಖ್ಯಮಂತ್ರಿ ಪಾತ್ರ ಬಂತು. ಹೇಗೋ ಪಾತ್ರ ನಿರ್ವಹಿಸುವೆ ಎಂದ ಅವರ ಮೊದಲ ಪ್ರದರ್ಶನಕ್ಕೆ ಮೆಚ್ಚುಗೆ ಸಿಕ್ಕಿತು. ಆದರೆ ಈ ಪ್ರಯೋಗ ನೋಡಿದ ಲೋಹಿತಾಶ್ವ ಅವರು ‘‘ಗಂಭೀರ ನಾಟಕವನ್ನು ಹಾಸ್ಯವಾಗಿ ಮಾಡಿದ್ರಿ. ಇನ್ನು ನಾನು ನಾಟಕ ಮಾಡಲ್ಲ. ನೀವೇ ಮುಂದುವರಿಸಿಕೊಂಡು ಹೋಗಿ’’ ಎಂದು ಹಾರೈಸಿದರು. ಆಮೇಲೆ ಎಚ್.ಎನ್. ಚಂದ್ರಶೇಖರ್ ಆಗಿದ್ದ ಅವರು ‘ಮುಖ್ಯಮಂತ್ರಿ’ ಚಂದ್ರುವಾಗಿ ಬದಲಾದರು.

ಈ ನಾಟಕ ನೋಡಿದ ನಿರ್ಮಾಪಕ ವೀರಾಸ್ವಾಮಿ ಅವರು ತಮ್ಮ ‘ಚಕ್ರವ್ಯೆಹ’ ಸಿನೆಮಾಕ್ಕೆ ಪ್ರಮುಖ ಖಳನಾಯಕ ಪಾತ್ರಕ್ಕೆ ಆಯ್ಕೆ ಮಾಡಿದರು. ಆಮೇಲೆ ಅವರು 500ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದರು. ದೈನಿಕ ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ.

‘ಮುಖ್ಯಮಂತ್ರಿ’ ನಾಟಕದಿಂದಲೇ ಅವರು ಶಾಸಕರಾದರು, ವಿಧಾನ ಪರಿಷತ್ ಸದಸ್ಯರಾದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದರು. ಹೀಗೆ ಜನಪ್ರಿಯರಾದರೂ ಅವರು ‘ಮುಖ್ಯಮಂತ್ರಿ’ ನಾಟಕದಿಂದ ದೂರವಾಗಿಲ್ಲ. ಹೀಗೆಯೇ ಎಲ್ಲರೂ ರಂಗಭೂಮಿಯಲ್ಲಿ ತೊಡಗಿಕೊಳ್ಳಲಿ ಎನ್ನುವ ಆಶಯ ಅವರದು.

share
ಗಣೇಶ ಅಮೀನಗಡ
ಗಣೇಶ ಅಮೀನಗಡ
Next Story
X