Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ...

ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಪರಮೋಚ್ಚ

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ14 July 2025 12:08 PM IST
share
ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಪರಮೋಚ್ಚ
ರಾಜಕಾರಣಿಗಳು, ಕಾರ್ಪೊರೇಟ್ ಉದ್ಯಮಪತಿಗಳು ಹಾಗೂ ಮಠಾಧಿಪತಿಗಳ ನಡುವಿನ ಅಪವಿತ್ರ, ಅನೈತಿಕ ಮೈತ್ರಿಯಿಂದ ಭಾರತದ ಪ್ರಜಾಪ್ರಭುತ್ವ ತೀವ್ರ ಸ್ವರೂಪದ ಅಪಾಯವನ್ನು ಎದುರಿಸುತ್ತಿದೆ. ಸೆಕ್ಯುಲರ್ ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾಗಿ ಧರ್ಮದ ಆಧಾರದಲ್ಲಿ ರಾಷ್ಟ್ರವನ್ನು ಪುನರ್ನಿರ್ಮಾಣ ಮಾಡಲು ಹೊರಟಿರುವ ಶಕ್ತಿಗಳು ತಮ್ಮ ಬಲವನ್ನು ಹೆಚ್ಚಿಸಿಕೊಂಡಿವೆ. ವಿಶೇಷವಾಗಿ ಬಿಸಿರಕ್ತದ ತರುಣರನ್ನು ಬಲೆಗೆ ಬೀಳಿಸಿಕೊಂಡು ದಾರಿ ತಪ್ಪಿಸುತ್ತಿವೆ.ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಅಳಿವು ಉಳಿವಿನ ಹೋರಾಟ ನಡೆಸಬೇಕಾಗಿದೆ.

ಪ್ರಜಾಪ್ರಭುತ್ವ ಆಡಳಿತ ಪದ್ಧತಿಯನ್ನು ಸ್ವತಂತ್ರ ಭಾರತ ಒಪ್ಪಿಕೊಂಡು ಏಳು ದಶಕಗಳೇ ಗತಿಸಿದವು. ಪ್ರಜಾಪ್ರಭುತ್ವಕ್ಕೆ ಪೂರಕವಾದ ಬಾಬಾಸಾಹೇಬರ ಸಂವಿಧಾನ ಈಗ ದೇಶವನ್ನು ಮುನ್ನಡೆಸುವ ಬೆಳಕಾಗಿದೆ. ಆದರೆ, ನಮ್ಮ ಸಮಾಜ ಈವರೆಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿಲ್ಲ.ಇದೊಂದು ವಿರೋಧಾಭಾಸ ಎಂದು ತುಂಬ ಹಿಂದೆಯೇ ಬಾಬಾ ಸಾಹೇಬರು ಹೇಳಿದ ಮಾತು ನೆನಪಾಗುತ್ತಲೆ ಇರುತ್ತದೆ. ಪ್ರಜಾಪ್ರಭುತ್ವವನ್ನೇ ನಿಯಂತ್ರಿಸುವ ಸಂವಿಧಾನೇತರ ಶಕ್ತಿ ಕೇಂದ್ರಗಳು ಇಲ್ಲಿ ಸಾಕಷ್ಟು ಪ್ರಬಲವಾಗಿವೆ. ಉದಾಹರಣೆಗೆ ಕರ್ನಾಟಕದ ಮುಖ್ಯಮಂತ್ರಿ ಯಾರಾಗಬೇಕೆಂಬ ಬಗ್ಗೆ ಹೇಳಿಕೆ ನೀಡುವ, ಒತ್ತಡ ತರುವ ಮಠಾಧೀಶರು ನಮ್ಮಲ್ಲಿ ಸಾಕಷ್ಟಿದ್ದಾರೆ. ವಾಸ್ತವವಾಗಿ ಮಠ ,

ಮಂದಿರ, ಮಸೀದಿ, ಬಸದಿ ಹಾಗೂ ಗುರುದ್ವಾರಗಳು ಒಂದೆಡೆ ಮತ್ತು ರಾಜಕೀಯ, ಆಡಳಿತ, ಶಾಸನಸಭೆ, ಚುನಾವಣೆ ಇವುಗಳು ಇನ್ನೊಂದೆಡೆ. ಇವೆರಡೂ ಪ್ರತ್ಯೇಕ ಕ್ಷೇತ್ರಗಳು.ಇವುಗಳಿಗೆ ಇವುಗಳದ್ದೇ ಆದ ಪಾವಿತ್ರ್ಯವಿದೆ. ಒಬ್ಬರು ಇನ್ನೊಬ್ಬರ ಕ್ಷೇತ್ರದಲ್ಲಿ ಕೈ ಹಾಕಬಾರದು. ಇವೆರಡರ ನಡುವಿನ ಲಕ್ಷ್ಮಣ ರೇಖೆಯನ್ನು ದಾಟಬಾರದು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಚುನಾಯಿತ ಸದಸ್ಯರು ತೀರ್ಮಾನಿಸುತ್ತಾರೆ. ಬಹುಮತ ಪಡೆದ ಪಕ್ಷದ ಶಾಸಕರು ಯಾರನ್ನು ಬೆಂಬಲಿಸುತ್ತಾರೋ ಅವರು ಮುಖ್ಯಮಂತ್ರಿ ಆಗುತ್ತಾರೆ. ಬಹುಮತ ಪಡೆದ ಪಕ್ಷದ ವರಿಷ್ಠರು (ಹೈಕಮಾಂಡ್) ಅದಕ್ಕೆ ಒಪ್ಪಿಗೆ ನೀಡುತ್ತದೆ. ಮೇಲ್ನೋಟಕ್ಕೆ ಇದು ಹೈಕಮಾಂಡ್ ತೀರ್ಮಾನವೆನಿಸಿದರೂ ಇದರ ಹಿಂದೆ ಶಾಸಕರ ಅಭಿಪ್ರಾಯ ಪ್ರಮುಖ ಪಾತ್ರ ವಹಿಸುತ್ತದೆ. ಧಾರ್ಮಿಕ ಗುರುಗಳು ಅಥವಾ ಮಠಾಧೀಶರ ಪಾತ್ರ ಇದರಲ್ಲಿ ನಗಣ್ಯ. ಅದೇ ರೀತಿ ಒಂದು ಮಠದ ಗುರುಗಳು ಯಾರಾಗಬೇಕೆಂಬುದನ್ನು ಆ ಮಠದ ಭಕ್ತರು ತೀರ್ಮಾನಿಸುತ್ತಾರೆ. ಇದರಲ್ಲಿ ರಾಜಕಾರಣಿಗಳು ಕೈ ಹಾಕಬಾರದು.ಆದರೂ ಮಠ, ಪೀಠಗಳಲ್ಲಿ ವಿವಾದ ಉಂಟಾದರೆ ಪರಿಹಾರಕ್ಕಾಗಿ ನ್ಯಾಯಾಲಯದ ಬಾಗಿಲ ಬಳಿ ಬಂದು ನಿಲ್ಲಲೇ ಬೇಕಾಗುತ್ತದೆ.

ಆದರೆ, ಈಗ ಇದು ಉಲ್ಟಾಪಲ್ಟಾ ಆಗಿದೆ. ಇಂಥವರೇ ಮುಖ್ಯಮಂತ್ರಿಯಾಗಬೇಕೆಂದು ಮಠಾಧೀಶರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ಬಡವರ ಪರವಾಗಿ ಸರಕಾರ ತಂದ ಯೋಜನೆಗಳನ್ನು ವಿರೋಧಿಸುವ ಚಾಳಿ ಹೆಚ್ಚಾಗುತ್ತಿದೆ. ಬಡವರ ಹಸಿವನ್ನು ಇಂಗಿಸುವ ಅನ್ನ ಭಾಗ್ಯ ಯೋಜನೆಯನ್ನು ರಂಭಾಪುರಿ ಮಠದ ಸ್ವಾಮಿಗಳು ಇತ್ತೀಚೆಗೆ ವಿರೋಧಿಸಿ ಹೇಳಿಕೆಯನ್ನು ನೀಡಿದರು. ಅನ್ನಭಾಗ್ಯಗಳಂಥ ಯೋಜನೆಗಳಿಂದ ಜನರು ಸೋಮಾರಿಗಳಾಗುತ್ತಾರೆ ಎಂದು ಈ ಸ್ವಾಮಿಗಳು ಹೇಳಿದರು. ಈಗಂತೂ ಮಠಗಳಲ್ಲಿ ಇರಬೇಕಾದವರು ವಿಧಾನ ಸೌಧದ ಕಾರಿಡಾರುಗಳಲ್ಲಿ, ವಿಧಾನ ಸೌಧದಲ್ಲಿ ಇರಬೇಕಾದವರು ಮಠಾಧೀಶರ ಅಡ್ಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ ಧರ್ಮ ಮತ್ತು ರಾಜಕಾರಣ ಪ್ರತ್ಯೇಕ ಎಂಬ ಮಾತನ್ನು ಕೆಲ ಮಠಾಧೀಶರು ಒಪ್ಪುವುದಿಲ್ಲ. ಭಾರತದ ಗತ ಇತಿಹಾಸದಲ್ಲಿ ಅಂದಿನ ರಾಜ, ಮಹಾರಾಜರಿಗೆ ಧರ್ಮ ಗುರುಗಳು ರಾಜಗುರುಗಳಗಾಗಿ ಮಾರ್ಗದರ್ಶನ ಮಾಡಿದರೆಂದು ತಮ್ಮ ಹಸ್ತಕ್ಷೇಪವನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಹೀಗೆ ಸಮರ್ಥಿಸಿಕೊಳ್ಳುವ ಸ್ವಾಮಿಗಳು ಒಂದು ವಾಸ್ತವವನ್ನು ಮರೆಯುತ್ತಾರೆ. ನಿಜ, ರಾಜ ಪ್ರಭುತ್ವದಲ್ಲಿ ಧರ್ಮ ಗುರುಗಳು ರಾಜಗುರುಗಳಾಗಿ ಮಾರ್ಗದರ್ಶನ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಈಗ ದೇಶದಲ್ಲಿ ಇರುವುದು ರಾಜ ಪ್ರಭುತ್ವವಲ್ಲ. ಇದು ಪ್ರಜಾಪ್ರಭುತ್ವ. ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರ್ಗದರ್ಶನ ಮಾಡಲು ಸಂವಿಧಾನವಿದೆ. ಆಗಸ್ಟ್ 15ರಂದು ಭಾರತ ಸ್ವತಂತ್ರಗೊಂಡ ನಂತರ ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಿ, ಆ ಸಮಿತಿ ರೂಪಿಸಿದ ಸಂವಿಧಾನನದ ಅಡಿಯಲ್ಲಿ ದೇಶ ಕಾರ್ಯ ನಿರ್ವಹಿಸುತ್ತಿದೆ. ಆಡಳಿತದಲ್ಲಿ ಜನಪ್ರತಿನಿಧಿಗಳ ಪಾತ್ರ ಮುಖ್ಯ ವಾಗಿರುತ್ತದೆ. ಇದರಲ್ಲಿ ಧರ್ಮ ಗುರುಗಳ ಪಾತ್ರ ನಗಣ್ಯವೆಂದರೆ ಅತಿಶಯೋಕ್ತಿಯಲ್ಲ. ಧರ್ಮ ಗುರುಗಳಿಗೆ, ಮಠಾಧೀಶರಿಗೆ ಅವರದೇ ಆದ ಧಾರ್ಮಿಕ ಗ್ರಂಥಗಳಿವೆ. ಅವರಿಗೆ ಆ ಗ್ರಂಥಗಳು ಪವಿತ್ರ. ಇದರಾಚೆ ಅವರವರ ಕ್ಷೇತ್ರಗಳಲ್ಲಿ ಅವರು ಕಾರ್ಯನಿರ್ವಹಿಸುವುದು ಸೂಕ್ತ.

ಇದೆಲ್ಲ ಯಾಕೆ ಮತ್ತೆ ಪ್ರಸ್ತಾಪಿಸಬೇಕಾಯಿತೆಂದರೆ ಇತ್ತೀಚೆಗೆ ರಂಭಾಪುರಿ ಸ್ವಾಮಿಗಳಂಥ ಕೆಲವು ಮಠಾಧೀಶರು ತಾವೇ ಎಳೆದುಕೊಂಡ ಪವಿತ್ರ ರೇಖೆಯನ್ನು ದಾಟಿ ವೃತ್ತಿನಿರತ ರಾಜಕಾರಣಿಗಳಂತೆ ವರ್ತಿಸುತ್ತಿದ್ದಾರೆ ಎಂದು ಅವರ ಭಕ್ತರೇ ಟೀಕಿಸುತ್ತಿದ್ದಾರೆ. ಸರಕಾರವೂ ಜಾತಿಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮಗಳನ್ನು ಮಾಡಿ ಸಂವಿಧಾನದ ಕಟ್ಟುಪಾಡುಗಳನ್ನು ಉಲ್ಲಂಘಿಸಿದೆ. ರಾಜಕಾರಣಿಗಳು ಏನಾದರೂ ಮಾಡಿಕೊಳ್ಳಲಿ ಆದರೆ ಸ್ವಾಮಿಗಳಾಗಿ ಕಾವಿ ವಸ್ತ್ರ ಧರಿಸಿದವರು ತಮ್ಮ ಜಾತಿಯ ರಾಜಕಾರಣಿಗಳನ್ನು ಮಂತ್ರಿಗಳನ್ನಾಗಿ ಮಾಡಬೇಕೆಂದು ಮುಖ್ಯ ಮಂತ್ರಿಗಳ ಮೇಲೆ ನಿರಂತರ ಒತ್ತಡ ತರುವುದು, ತಮ್ಮ ಜಾತಿಗೂ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಆಗ್ರಹಿಸುತ್ತಿರುವುದು ಅವರ ಪೀಠಕ್ಕೆ ಶೋಭೆ ತರುವುದಿಲ್ಲ.

ಮಠಾಧೀಶರಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡುವುದನ್ನು ಆರಂಭಿಸಿದವರು ಯಡಿಯೂರಪ್ಪ ನವರು. ಅವರು ಮುಖಮಂತ್ರಿಯಾಗಿದ್ದಾಗ ಮಠ , ಮಂದಿರಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಲು ಬಜೆಟ್‌ನಲ್ಲಿ ಹಣ ಒದಗಿಸಿದರು.ಅವರ ನಂತರ ಮುಖ್ಯ ಮಂತ್ರಿಯಾದವರೂ ಅದನ್ನು ಮುಂದುವರಿಸಬೇಕಾದ ಅನಿವಾರ್ಯತೆಗೊಳಗಾದರು. ಆದರೆ ಮಠಾಧೀಶರು ಮತ್ತು ರಾಜಕಾರಣಿಗಳ ನಡುವಿನ ಒಡನಾಟಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಜಾತಿ ಮತಗಳನ್ನು ದಾಟಿ ಒಟ್ಟು ಸಮಾಜಕ್ಕೆ ಉಪಯುಕ್ತವಾದ ಸಲಹೆಗಳನ್ನು ನೀಡುವ ಎಲ್ಲ ಪ್ರಜೆಗಳಿಗಿರುವ ಸಂವಿಧಾನಾತ್ಮಕ ಹಕ್ಕು ಮಠಾಧೀಶರಿಗೂ ಇದೆ. ಆದರೆ ಅದರಾಚೆ ತಮ್ಮ ಸಮುದಾಯದ ಇಂತಿಂಥವರನ್ನು ಮಂತ್ರಿಗಳನ್ನಾಗಿ ಮಾಡಿ, ಮಾಡದಿದ್ದರೆ ಸರಕಾರವನ್ನೇ ಉರುಳಿಸುತ್ತೇವೆ ಎಂದು ಬೆದರಿಕೆ ಹಾಕುವುದು ಹಕ್ಕು ಚಲಾವಣೆಯಲ್ಲ. ಅದು ದರ್ಪ.ಒತ್ತಡ ಹೇರುವುದು ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ ತಾವು ಪಾಲಿಸಿಕೊಂಡು ಬಂದಿರುವ ಧಾರ್ಮಿಕ ಪರಂಪರೆಗೂ ಅವಮಾನ ಮಾಡಿದಂತೆ. ಕೆಲ ಮಠಾಧೀಶರ ಇಂಥ ಅತಿರೇಕದ ವರ್ತನೆಯಿಂದ ಅವರ ಭಕ್ತರೇ ಅಪಹಾಸ್ಯ ಮಾಡಿ ನಗುವಂತಾಗಿದೆ.

ತೊಂಭತ್ತರ ದಶಕದಲ್ಲಿ ಒಟ್ಟೊಟ್ಟಿಗೆ ಬಂದ ಜಾಗತೀಕರಣ, ನವ ಉದಾರೀಕರಣ ಮತ್ತು ಕೋಮುವಾದಗಳ ಅಬ್ಬರದ ನಂತರ ರಾಜಕಾರಣ ಮತ್ತು ಧರ್ಮಗಳ ನಡುವಿನ ಲಕ್ಷ್ಮಣ ರೇಖೆ ಅಳಿಸಿ ಹೋದಂತಾಗಿದೆ. ಕರ್ನಾಟಕದಲ್ಲಿ ಮಠಾಧೀಶರು ತಮ್ಮ ಭಕ್ತರಾದ ರಾಜಕಾರಣಿಗಳ ಪರವಾಗಿ ಒತ್ತಡ ರೂಪದ ಲಾಬಿ ಮಾಡುತ್ತಿದ್ದರೆ, ಉತ್ತರ ಪ್ರದೇಶದಂಥ ರಾಜ್ಯದಲ್ಲಿ ಮಠದಲ್ಲಿ ಇರಬೇಕಾದವರು ಮುಖ್ಯಮಂತ್ರಿಯಾಗಿ ವಿಧಾನ ಸಭೆಯನ್ನು ಪ್ರವೇಶಿಸಿದ್ದಾರೆ. ರಾಜಪ್ರಭುತ್ವದ ಕಾಲದಲ್ಲಿ ರಾಜ ಗುರುಗಳಾಗಿದ್ದವರು ಪ್ರಜಾಪ್ರಭುತ್ವದ ಈ ಕಾಲದಲ್ಲಿ ಮುಖ್ಯಮಂತ್ರಿಯಾಗಿ ರಾಜ, ಮಹಾರಾಜರಂತೆ ದರ್ಬಾರು ನಡೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಅವನತಿಯ ಮುನ್ಸೂಚನೆಯಲ್ಲದೇ ಬೇರೇನೂ ಅಲ್ಲ.

ಭಾರತದ ರಾಜಕೀಯದಲ್ಲಿ ಧರ್ಮ ಗುರುಗಳ ಹಸ್ತಕ್ಷೇಪ ಇದೇ ಮೊದಲೇನಲ್ಲ. ಉಡುಪಿಯ ಪೇಜಾವರ ಮಠದ ಹಿಂದಿನ ಸ್ವಾಮಿಗಳು ( ವಿಶ್ವೇಶ ತೀರ್ಥರು) ನೇರವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡ ಉದಾಹರಣೆಗಳಿವೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಚಳವಳಿ ಧಾರ್ಮಿಕ ಎಂದು ಅವರು ಹೇಳಿದರೂ ಕೂಡ ಅದು ಬಿಜೆಪಿಯ ಮತ್ತು ಅದರ ತಾತ್ವಿಕ ಸ್ಪೂರ್ತಿಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಕೀಯ ಕಾರ್ಯಸೂಚಿ ಎಂಬುದನ್ನು ತಳ್ಳಿ ಹಾಕಲು ಆಗುವುದಿಲ್ಲ. ಅಡ್ವಾಣಿಯವರ ರಥಯಾತ್ರೆಯ ನಂತರ ಲೋಕಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ ಎರಡರಿಂದ ಎಂಭತ್ತೆಂಟಕ್ಕೆ ತಲುಪಿ ಈಗ ಅಧಿಕಾರವನ್ನೇ ವಹಿಸಿಕೊಂಡಿರುವುದರ ಹಿಂದೆ ಅಯೋಧ್ಯೆಯ ಕೊಡುಗೆಯೂ ಇದೆ. ಇದರಲ್ಲಿ ಪೇಜಾವರರು ಸೇರಿ ನೂರಾರು ವಿಶ್ವ ಹಿಂದೂ ಪರಿಷತ್ತಿನ ಮಠಾಧೀಶರು, ಸನ್ಯಾಸಿಗಳು ಪಾಲ್ಗೊಂಡಿದ್ದರು.ಈಗಲೂ ಕಾರ್ಯೋನ್ಮ್ಮುಖರಾಗಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ಉಂಟಾದಾಗ ಪೇಜಾವರ ಸ್ವಾಮಿಗಳೇ ಮಧ್ಯಸ್ಥಿಕೆ ವಹಿಸಿ ಬಗೆಹರಿಸಿದ ಉದಾಹರಣೆಗಳಿವೆ. ಆದರೆ ಈಗ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿರುವ ವೀರಶೈವ, ಲಿಂಗಾಯತ ಮಠಾಧೀಶರ ಬಗ್ಗೆ ವ್ಯಕ್ತವಾಗುತ್ತಿರುವ ಟೀಕೆ ಈ ಹಿಂದೆ ಪೇಜಾವರರು ಮತ್ತು ವಿ.ಎಚ್.ಪಿ. ಸ್ವಾಮಿಗಳ ಬಗ್ಗೆ ವ್ಯಕ್ತವಾಗಿರಲಿಲ್ಲ ಎಂಬುದು ಕಹಿಯಾದರೂ ಕಟು ಸತ್ಯ.

ಇತ್ತೀಚಿನ ವರ್ಷಗಳಲ್ಲಿ ಮಠಾಧೀಶರು ಮತ್ತು ರಾಜಕಾರಣಿಗಳ ಸಂಬಂಧ ವಿಭಿನ್ನ ರೂಪಗಳನ್ನು ತಾಳುತ್ತಿದೆ.ಕೆಲವು ಮಠಗಳು ರಾಜಕಾರಣಿಗಳ, ಉದ್ಯಮಿಗಳ ಕಪ್ಪು ಹಣವನ್ನು ಸುರಕ್ಷಿತವಾಗಿಡುವ ಸ್ವದೇಶಿ ಸ್ವಿಸ್ ಬ್ಯಾಂಕುಗಳಾಗಿವೆ ಎಂಬ ಮಾತು ಜನ ಜನಿತವಾಗಿದೆ.

ರಾಜಕಾರಣಿಗಳು, ಕಾರ್ಪೊರೇಟ್ ಉದ್ಯಮಪತಿಗಳು ಹಾಗೂ ಮಠಾಧಿಪತಿಗಳ ನಡುವಿನ ಅಪವಿತ್ರ , ಅನೈತಿಕ ಮೈತ್ರಿಯಿಂದ ಭಾರತದ ಪ್ರಜಾಪ್ರಭುತ್ವ ತೀವ್ರ ಸ್ವರೂಪದ ಅಪಾಯವನ್ನು ಎದುರಿಸುತ್ತಿದೆ. ಸೆಕ್ಯುಲರ್ ಪ್ರಜಾಪ್ರಭುತ್ವ ವ್ಯವಸ್ಥೆಯ ಬದಲಾಗಿ ಧರ್ಮದ ಆಧಾರದಲ್ಲಿ ರಾಷ್ಟ್ರವನ್ನು ಪುನರ್ನಿರ್ಮಾಣ ಮಾಡಲು ಹೊರಟಿರುವ ಶಕ್ತಿಗಳು ತಮ್ಮ ಬಲವನ್ನು ಹೆಚ್ಚಿಸಿಕೊಂಡಿವೆ. ವಿಶೇಷವಾಗಿ ಬಿಸಿರಕ್ತದ ತರುಣರನ್ನು ಬಲೆಗೆ ಬೀಳಿಸಿಕೊಂಡು ದಾರಿ ತಪ್ಪಿಸುತ್ತಿವೆ.ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಅಳಿವು ಉಳಿವಿನ ಹೋರಾಟ ನಡೆಸಬೇಕಾಗಿದೆ. ಎಲ್ಲ ರಾಜಕಾರಣಿಗಳು, ಎಲ್ಲ ಸ್ವಾಮಿಗಳು ಕೆಟ್ಟವರಲ್ಲ, ಆದರೆ ಅಂಥವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ.ಸ್ವಾಮಿಗಳು ರಾಜಕೀಯದಲ್ಲಿ ಆಸಕ್ತಿ ವಹಿಸಬಾರದೆಂದಲ್ಲ.ಜಾತಿ ಮತಗಳ ಗಡಿ ದಾಟಿ ಸರ್ವ ಜನಾಂಗದ ಏಳಿಗೆಗೆ ದುಡಿಯುವ ಧರ್ಮ ಗುರುಗಳು ಸಮಾಜಕ್ಕೆ ಗೌರವ.ಕರ್ನಾಟಕದಲ್ಲಿ ಎಪ್ಪತ್ತರ ದಶಕದ ಮೊದಲು ಇಂಚಗೇರಿ ಮಠದ ಮಹಾದೇವರು ಬಡವರು, ದಲಿತರು, ಅಲ್ಪಸಂಖ್ಯಾತರು, ತುಳಿತಕ್ಕೊಳಗಾದವರ ಪರವಾಗಿ ನೇರವಾಗಿ ರಾಜಕೀಯಕ್ಕೆ ಧುಮುಕಿ ಪ್ರಭುತ್ವದ ದೌರ್ಜನ್ಯ ಎದುರಿಸಿದ ಉದಾಹರಣೆಗಳಿವೆ. ಬಹಳ ಹಿಂದೇಕೆ, ಗದುಗಿನ ತೋಂಟದಾರ್ಯ ಸ್ವಾಮಿಗಳು ಜನಪರ ಹೋರಾಟಗಳಿಗೆ ನೀಡುತ್ತಿದ್ದ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಅಸು ನೀಗಿದ ಸ್ವಾಮಿ ಅಗ್ನಿವೇಶ್‌ರಂಥ ಕಾವಿಧಾರಿ ಸನ್ಯಾಸಿಗಳು ಬದುಕಿನುದ್ದಕ್ಕೂ ಜೀತದಾಳುಗಳ ವಿಮೋಚನೆಗೆ ದುಡಿದರು. ದುಷ್ಟ ಕೋಮುವಾದಿ ಶಕ್ತಿಗಳನ್ನು ಎದುರಿಸಿ ಸಾಕಷ್ಟು ತೊಂದರೆ ಅನುಭವಿಸಿದರು. ಇಂಥ ಸ್ವಾಮಿಗಳು ನಿತ್ಯ ಸ್ಮರಣೀಯರು.

ಆದರೆ ಈಗ ಜಗತ್ತಿನ ಮತ್ತು ದೇಶದ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಎಡಪಂಥೀಯ ಪ್ರಗತಿಪರ, ಮತ ನಿರಪೇಕ್ಷ ಸಂಘಟನೆಗಳು ಮತ್ತು ಪಕ್ಷಗಳ ಪ್ರಭಾವ ಕಡಿಮೆಯಾಗಿದೆ. ಜಗತ್ತಿನ ಎಲ್ಲೆಡೆ ಮತಾಂಧ ಮೂಲಭೂತವಾದಿ, ಜನಾಂಗವಾದಿ, ಕೋಮುವಾದಿ ಪಕ್ಷಗಳ,

ಶಕ್ತಿಗಳ ಆರ್ಭಟ ಕೇಳುತ್ತಿದೆ. ಸಮಾಜವಾದಿ ಸೋವಿಯತ್ ರಶ್ಯದ ಪತನದ ನಂತರ ಅಮೆರಿಕದ ಸಾಮ್ರಾಜ್ಯಶಾಹಿ ಲೂಟಿಕೋರ ಪಾಳಯದ ಹಿಡಿತ ಗಟ್ಟಿಯಾಗುತ್ತಿದೆ. ಕೋಟ್ಯಂತರ ಜನರಿಗೆ ಸೇರಿದ ಜಗತ್ತಿನ ಎಲ್ಲ ಸಂಪತ್ತನ್ನು ದೋಚುವ ದಗಾಕೋರರಿಗೆ ಜನರನ್ನು ಧರ್ಮ, ಜಾತಿ,ಭಾಷೆ, ಜನಾಂಗದ ಆಧಾರದಲ್ಲಿ ವಿಭಜಿಸಿ ಆಳುವ ಅನಿವಾರ್ಯತೆ ಇದೆ.ಇದಕ್ಕಾಗಿ ಧರ್ಮಗಳು, ಧರ್ಮಗುರುಗಳು,ರಾಷ್ಟ್ರೀಯ

ತೆಗಳು, ಸಾಂಸ್ಕೃತಿಕ ಐಡಂಟಿಟಿಗಳು ದುರ್ಬಳಕೆ ಆಗುತ್ತಿವೆ. ಇದರ ಭಾಗವಾಗಿರುವ ನಮ್ಮ ದೇಶದ ಮಠಾಧೀಶರು, ಪೀಠಾಧಿಪತಿಗಳು ಸಹಜವಾಗಿ ರಾಜಕೀಯ ಹಿತಾಸಕ್ತಿ ಹೊಂದಿದ್ದಾರೆ.

ಧರ್ಮದಲ್ಲಿ ರಾಜಕೀಯ ಇರಬಾರದು ಆದರೆ ರಾಜಕೀಯದಲ್ಲಿ ಧರ್ಮ ಇರಬೇಕು ಎಂಬ ಅಪಾಯಕಾರಿ ವಾದವನ್ನು ಕೆಲ ಮಠಾಧೀಶರು ಮುಂದಿಡುತ್ತಿದ್ದಾರೆ. ಈ ವಾದವೇ ಪ್ರಜಾಪ್ರಭುತ್ವ ವಿರೋಧಿ ರಾಜಕೀಯದಲ್ಲಿ ಧರ್ಮದ ಇಲ್ಲವೇ ಧರ್ಮದಲ್ಲಿ ರಾಜಕೀಯದ ಹಸ್ತಕ್ಷೇಪ ಅನುಚಿತವಾದುದು. ಮಠವೆಂದರೆ, ಧರ್ಮವೆಂದರೆ ಇಂದಿನ ವಾಸ್ತವ ಚಿತ್ರಣವೇ ಬೇರೆಯಾಗಿದೆ.ಸ್ವಾಮಿ ವಿವೇಕಾನಂದ, ಸಿದ್ದಾರೂಢರಂಥ ಸನ್ಯಾಸಿಗಳು ಈಗಿಲ್ಲ. ಧರ್ಮವೆಂದರೆ ಈಗ ಮೆಡಿಕಲ್,

ಇಂಜಿನಿಯರಿಂಗ್ ಕಾಲೇಜು, ಕ್ಯಾಪಿಟೇಶನ್ ವಸೂಲಿಗಳು ಕಣ್ಣಿಗೆ ಗೋಚರಿಸುತ್ತಿವೆ. ಹಿಂದೆ ಬೀದರ್‌ನಂಥ ಜಿಲ್ಲೆಗಳಲ್ಲಿ ನಿಜಾಮರ ಕಾಲದಲ್ಲಿ ಬಾಗಿಲಿಗೆ ಉರ್ದು ಬೋರ್ಡ್ ಹಾಕಿ ಕನ್ನಡ ಕಲಿಸಿದ ಬಾಲ್ಕಿಯ ಪಟ್ಟದ ದೇವರಂಥ ಅಪರೂಪದ ಚೇತನರಾದ ಸ್ವಾಮಿಗಳಿದ್ದರು. ಎಲ್ಲ ಜಾತಿ, ಧರ್ಮಗಳ ಮಕ್ಕಳಿಗೆ ಉಚಿತವಾಗಿ ಅಕ್ಷರ ಮತ್ತು ಅನ್ನ ದಾಸೋಹವನ್ನು ಏಕಕಾಲದಲ್ಲಿ ನಡೆಸಿದ ಬಸವಾನುಯಾಯಿ ಮಠಾಧೀಶರಿದ್ದರು. ಆದರೆ ಈಗ ಅವರ ಕಾಲ ಮುಗಿಯಿತು. ಬಸವನ ಹೆಸರು ಹೇಳಿಕೊಳ್ಳುವ ಮಠಗಳ ಕಾರ್ಯಕ್ರಮದಲ್ಲಿ ಕೋಮುವಾದಿ ಸಂಘಟನೆಗಳ ಪ್ರಚೋದನಕಾರಿ ಭಾಷಣಕಾರರನ್ನು ಆಹ್ವಾನಿಸಿ ಅವರಿಂದ ಉಪದೇಶ ಕೇಳುವಷ್ಟು ಕಾಲ ಬದಲಾಗಿದೆ.

ರಾಷ್ಟ್ರ ಕವಿ ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟವೆಂದು ಕರೆದ ಭಾರತ ಮತ್ತು ಕರ್ನಾಟಕಗಳನ್ನು ಸುರಕ್ಷಿತವಾಗಿ ಕಾಪಾಡಲು ನಮ್ಮ ಸಂವಿಧಾನವೊಂದರಿಂದಲೇ ಸಾಧ್ಯ. ‘ಪ್ರಜಾಪ್ರಭುತ್ವವೇ ಧರ್ಮ, ಸಂವಿಧಾನವೇ ಧರ್ಮಗ್ರಂಥ’ ಎಂಬುದು ನಮ್ಮ ಘೋಷ ವಾಕ್ಯವಾಗಬೇಕಾಗಿದೆ. ಸಂವಿಧಾನವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X