Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಉರಿಯುತ್ತಿರುವ ಮಣಿಪುರ: ಹೊಣೆ ಯಾರು?

ಉರಿಯುತ್ತಿರುವ ಮಣಿಪುರ: ಹೊಣೆ ಯಾರು?

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ12 May 2025 10:49 AM IST
share
ಉರಿಯುತ್ತಿರುವ ಮಣಿಪುರ: ಹೊಣೆ ಯಾರು?
ಭಾರತ ವಿದೇಶಿ ಆಳ್ವಿಕೆಯಿಂದ ಸ್ವತಂತ್ರ ಗೊಂಡಾಗ ವ್ಯಾಪಕ ಕೋಮು ಹಿಂಸಾಚಾರ ನಡೆಯಿತು.ಆಗ ಮಹಾತ್ಮಾ ಗಾಂಧಿ ಉರಿಯುತ್ತಿದ್ದ ನೌಖಾಲಿಗೆ ಬರಿಗಾಲಲ್ಲಿ ಕೋಲೂರುತ್ತ ಹೋದರು.ಅಲ್ಲಿನ ಅತಿರೇಕವಾದಿಗಳು ಗಾಂಧಿ ಬರಬಾರದೆಂದು ದಾರಿಯುದ್ದಕ್ಕೂ ಕಲ್ಲು, ಮುಳ್ಳು, ಗಾಜಿನ ಚೂರುಗಳನ್ನು ಹಾಕಿದರು. ಗಾಂಧೀಜಿ ಕಲ್ಲು ಮುಳ್ಳಿನ ಮೇಲೆ ಕಾಲೂರುತ್ತ ಅಲ್ಲಿ ಹೋಗಿ ಉರಿಯುವ ಬೆಂಕಿಯನ್ನು ನಂದಿಸಿ ಬೆಳಕು ಚೆಲ್ಲುವ ದೀಪವನ್ನು ಹಚ್ಚಿದರು. ಗಾಯಗೊಂಡ ಮಣಿಪುರಕ್ಕೆ ಅಂಥ ಹೊಸ ಪರಿಹಾರ ಮಾರ್ಗ ಬೇಕಾಗಿದೆ.

ಈಶಾನ್ಯ ಭಾರತದ ಪುಟ್ಟ ರಾಜ್ಯ ಮಣಿಪುರ ಕಳೆದ ಎರಡು ವರ್ಷಗಳಿಂದ ಧಗ ಧಗ ಉರಿಯುತ್ತಿದೆ. ಅಲ್ಲಿ ಹೋಗಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪುರುಸೊತ್ತಿಲ್ಲ. ಆದರೆ, ಉಕ್ರೇನ್‌ಗೆ ಹೋಗಿ ಅಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸುವ ಬಗ್ಗೆ ರಶ್ಯದ ಅಧ್ಯಕ್ಷ ಪುಟಿನ್ ಜೊತೆ ಮಾತಾಡಲು ಸಮಯವಿದೆ. ಮಣಿಪುರದ

ಎರಡು ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಮೈತೈ ಸಮುದಾಯವನ್ನು ಪರಿಶಿಷ್ಟ ವರ್ಗಗಳ ಪಟ್ಟಿ ಗೆ ಸೇರಿಸುವ ಬಗ್ಗೆ ಪರಿಗಣಿಸುವಂತೆ ಸೂಚನೆ ನೀಡಿದ್ದನ್ನು ವಿರೋಧಿಸಿ ಕುಕಿ ಸಮುದಾಯದ ಜನರು ಸಂಘಟಿಸಿದ್ದ ಜಾಥಾ ಸಮಯದಲ್ಲಿ ಭುಗಿಲೆದ್ದ ಹಿಂಸಾಚಾರ ಇನ್ನೂ ತಣ್ಣಗಾಗಿಲ್ಲ. ಅಲ್ಲಿ ಯಾವ ರೀತಿ ಪರಿಸ್ಥಿತಿ ಹದಗೆಟ್ಟಿದೆಯೆಂದರೆ ಒಂದು ಸಮುದಾಯದ ಜನ ನೆಲೆಸಿರುವ ಪ್ರದೇಶಗಳಿಗೆ ಇನ್ನೊಂದು ಸಮುದಾಯದವರು ಹೋಗುವಂತಿಲ್ಲ. ಸರಕಾರದ ಶಸ್ತ್ರಾಗಾರದಿಂದ ಲೂಟಿ ಮಾಡಿರುವ ಬಂದೂಕು, ಗುಂಡುಗಳು ಹೊಡೆದಾಡುತ್ತಿರುವ ಜನರ ಕೈಗೆ ಹೋಗಿವೆ.ಈ ವರೆಗೆ 300ಕ್ಕೂ ಹೆಚ್ಚು ಜನರು ಅಸು ನೀಗಿದ್ದಾರೆ.

ಅಲ್ಲಿ ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಉಗ್ರ ಗಾಮಿಗಳು ಅಲ್ಲಿನ ನಾಗರಿಕ ಪ್ರದೇಶದ ಮೇಲೆ ನಿರಂತರವಾಗಿ ರಾಕೆಟ್ ಚಾಲಿತ ಗ್ರೆನೇಡ್‌ಗಳನ್ನು, ಅತ್ಯಾಧುನಿಕ ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಅಲ್ಲಿನ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಅಲ್ಲಿನ ಮುಖ್ಯ ಮಂತ್ರಿಯಾಗಿದ್ದ ಬಿರೇನ್ ಸಿಂಗ್ ಪರಿಸ್ಥಿತಿಯನ್ನು ನಿಯಂತ್ರಿಸುವ ಬದಲಾಗಿ ಅದನ್ನು ಇನ್ನಷ್ಟು ಹದಗೆಡುವಂತೆ ಮಾಡಿದರು. ಮೈತೈ ಸಮುದಾಯಕ್ಕೆ ಸೇರಿದ ಬಿರೇನ್ ಸಿಂಗ್ ಮುಖ್ಯಮಂತ್ರಿಯಾಗಿ ನಿಷ್ಪಕ್ಷಪಾತದಿಂದ ನಡೆದುಕೊಳ್ಳುವ ಬದಲಿಗೆ ತನ್ನ ಮೈತೆ ಸಮುದಾಯದ ನಾಯಕನಂತೆ ವರ್ತಿಸುತ್ತ ಬಂದರು. ಹೀಗಾಗಿ ಕೇಂದ್ರ ಸರಕಾರ ಕಳೆದ ಫೆಬ್ರವರಿಯಲ್ಲಿ ಅವರಿಗೆ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿತು. ನಂತರ ರಾಷ್ಟ್ರಪತಿ ಆಡಳಿತ ಜಾರಿಯಾದ ಬಳಿಕ ಪರಿಸ್ಥಿತಿ ಸುಧಾರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಅದು ಸಾಧ್ಯವಾಗಿಲ್ಲ. ದಿಲ್ಲಿಯಲ್ಲಿ ನಡೆದ ಮಾತುಕತೆಗಳಿಂದಲೂ ಪ್ರಯೋಜನ ಆಗಿಲ್ಲ. ಈಗ ತಮಗೆ ಪ್ರತ್ಯೇಕ ಆಡಳಿತಾತ್ಮಕ ಪ್ರದೇಶ ನೀಡಬೇಕೆಂದು ಕುಕಿ ಸಮುದಾಯದ ಜನ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಮೈತೈ ಸಮುದಾಯದವರ ಪ್ರಬಲ ವಿರೋಧವಿದೆ. ರಾಜ್ಯಪಾಲ ಎ.ಕೆ.ಭಲ್ಲಾ ಅವರೂ ಮೂಕ ಪ್ರೇಕ್ಷಕರಾಗಿದ್ದಾರೆ.

ರಾಕೆಟ್ ಚಾಲಿತ ಗ್ರೆನೇಡ್‌ಗಳು (ಆರ್‌ಪಿಜಿ), ಡ್ರೋನ್‌ಗಳನ್ನು ಅಲ್ಲಿನ ಜನ ಬಳಸುತ್ತಿದ್ದಾರೆ. ಕುಕಿ ಮತ್ತು ಮೈತೈ ಜನಾಂಗೀಯ ಕಲಹ ಯುದ್ಧದ ಸ್ವರೂಪ ಪಡೆಯುತ್ತಿದೆ. ಈ ದಾಳಿಯಲ್ಲಿ ಅಮಾಯಕರು ಸಾವಿಗೀಡಾಗಿದ್ದಾರೆ. ಮಣಿಪುರದ ಮ್ಯಾನ್ಮಾರ್‌ಗಡಿಯಲ್ಲಿ ಈ ಹಿಂದೆ ಸೇನಾ ಆಡಳಿತ ಹಾಗೂ ಬಂಡುಕೋರರ ನಡುವೆ ಘರ್ಷಣೆ ನಡೆದಿದೆ. ಮಣಿಪುರದಲ್ಲಿ ನಡೆದಿರುವ ದಾಳಿ ಗಮನಿಸಿದರೆ, ತಾಂತ್ರಿಕ ಪರಿಣತಿಯುಳ್ಳವರ ಕೈವಾಡ ಇದ್ದಂತೆ ಕಾಣುತ್ತದೆ.

ಆದರೆ, ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ಜನಸಾಮಾನ್ಯರನ್ನು ಅವರ ಆಸ್ತಿಪಾಸ್ತಿಗಳನ್ನು ರಕ್ಷಿಸುವಲ್ಲಿ ಸರಕಾರ ವಿಫಲಗೊಂಡಿರುವುದು ಸ್ಪಷ್ಟವಾಗುತ್ತದೆ. 2022ನೇ ವರ್ಷದ ಮೇ ತಿಂಗಳಿನಿಂದ ಆರಂಭವಾದ ಜನಾಂಗೀಯ ಹಿಂಸಾಚಾರ ಇತರ ಪ್ರದೇಶಗಳಿಗೂ ವಿಸ್ತರಿಸುತ್ತಿದೆ.

ಮಣಿಪುರ ರಾಜ್ಯ ಕುಕಿ ಸಮುದಾಯ ಹಾಗೂ ಮೈತೈ ಸಮುದಾಯಗಳ ಪ್ರದೇಶಗಳ ನಡುವೆ ಒಡೆದು ಹೋಗಿದೆ. ಎರಡೂ ಸಮುದಾಯಗಳ ನಡುವೆ ದ್ವೇಷದ ದಳ್ಳುರಿ ಎದ್ದಿದೆ. ಹಿಂಸಾಚಾರದಿಂದ ನೆಲೆ ಕಳೆದುಕೊಂಡ 60 ಸಾವಿರಕ್ಕೂ ಹೆಚ್ಚು ಮಂದಿ ನಿರಾಶ್ರಿತರ ಶಿಬಿರಗಳಲ್ಲಿ ಇದ್ದಾರೆ. ಸರಕಾರದ ಶಸ್ತ್ರಾಗಾರದಿಂದ ಲೂಟಿ ಮಾಡಲ್ಪಟ್ಟ ಶಸ್ತ್ರಾಸ್ತ್ರಗಳು ಉಗ್ರರ ಕೈ ಸೇರಿವೆ. ಆದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಣಿಪುರ ಎಂಬ ರಾಜ್ಯ ತನಗೆ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳತ್ತಿರುವುದು ಆತಂಕದ ಸಂಗತಿ, ಮಣಿಪುರ ಜನಾಂಗೀ

ಯ ದ್ವೇಷದ ದಳ್ಳುರಿಯಲ್ಲಿ ಬೆಂದು ಹೋಗುತ್ತಿದೆ. ರಕ್ತಪಾತದಿಂದ ನಲುಗಿದೆ. ಈ ಬೆಂಕಿ ಆರಿಸಬೇಕಾದವರು ಮೇಲೇಳುತ್ತಿರುವ ಜ್ವಾಲೆಗಳಲ್ಲಿ ಮೈ ಕಾಯಿಸಿಕೊಳ್ಳಲು ಹೊರಟಿದ್ದಾರೆ. ಮಾಜಿ ಪ್ರಧಾನಿಗೆ ‘ಮೌನಿ ಬಾಬಾ’ ಎಂದು ಕುಹಕದ ಮಾತನಾಡಿದವರು ಗಾಢ ಮೌನ ತಾಳಿದ್ದಾರೆ.

ಕರ್ನಾಟಕದ ಮಾಧ್ಯಮಗಳಲ್ಲಿ ಮಣಿಪುರದ ಸುದ್ದಿ ಅಷ್ಟಾಗಿ ಬರುತ್ತಿಲ್ಲ. ಆದರೆ, ಯಾದವೀ ಕಲಹದ ಅಂಚಿಗೆ ಮಣಿಪುರ ಬಂದು ನಿಂತಿದೆ. ಬಹುಸಂಖ್ಯಾತ ಮೈತೈ ಮತ್ತು ಅಲ್ಪಸಂಖ್ಯಾತ ಕುಕಿ ಮತ್ತಿತರ ಬುಡಕಟ್ಟು ಸಮುದಾಯಗಳ ನಡುವೆ ದ್ವೇಷದ ಅಡ್ಡಗೋಡೆ ಎದ್ದು ನಿಂತು ಅದೀಗ ಹತ್ಯಾಕಾಂಡದ ರೂಪ ತಾಳಿದೆ.

ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಕಳೆದ ವರ್ಷ ಮಣಿಪುರ ಮೂಲದ ವಿದೇಶಾಂಗ ಖಾತೆಯ ರಾಜ್ಯ ಸಚಿವ ಆರ್.ಕೆ.ರಂಜನ್ ಸಿಂಗ್ ತಮ್ಮ ಪಕ್ಷದ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಂಫಾಲ್ ದಲ್ಲಿರುವ ತನ್ನ ಮನೆಯ ಮೇಲೆ ಉದ್ರಿಕ್ತ ಗುಂಪುಗಳು ಪೆಟ್ರೋಲ್ ಬಾಂಬ್ ದಾಳಿ ನಡೆಸಿದರೂ ಸರಕಾರ ಸೂಕ್ತ ಭದ್ರತೆ ಒದಗಿಸಿಲ್ಲವೆಂದು ಕೆಂಡ ಕಾರಿದ್ದಾರೆ.

ಕೇಂದ್ರದಲ್ಲಿ ಮಾತ್ರವಲ್ಲ, ಮಣಿಪುರ ರಾಜ್ಯದಲ್ಲೂ ಬಿಜೆಪಿ ಸರಕಾರ ಇದ್ದರೂ ಮಣಿಪುರದ ಹಿಂಸಾಚಾರವನ್ನು ನಿಯಂತ್ರಿಸಲು ಡಬಲ್ ಇಂಜಿನ್ ಸರಕಾರಕ್ಕೆ ಆಗ ಸಾಧ್ಯವಾಗಲಿಲ್ಲ. ಈಗಂತೂ ಸಾಧ್ಯವಾಗುತ್ತಿಲ್ಲ. ರಾಜ್ಯದ ಇಂಜಿನ್ ಕೆಟ್ಟು ನಿಂತಿದೆ. ಕೇಂದ್ರದ ಇಂಜಿನ್ ದಿಲ್ಲಿ ಬಿಟ್ಟು ಬರುತ್ತಿಲ್ಲ. ಜನಾಂಗೀಯ ದ್ವೇಷದ ದಳ್ಳುರಿಯಲ್ಲಿ ಓಟಿನ ಬೆಳೆಯನ್ನು ತೆಗೆಯಲು ಹೊರಟವರು ತಮಗೇನೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ.

ಮಣಿಪುರದ ಜನಾಂಗೀಯ ದ್ವೇಷದ ದಳ್ಳುರಿ 2022 ಮೇ 3ರಿಂದ ಆರಂಭವಾದರೂ ಅದನ್ನು ನಿಯಂತ್ರಿಸಲು ಆಗ ಅಲ್ಲಿದ್ದ ಬಿಜೆಪಿ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತಕ್ಷಣ ಸ್ಪಂದಿಸಬೇಕಾದ ದೇಶದ ಗೃಹ ಮಂತ್ರಿ ಅಮಿತ್ ಶಾ ಕರ್ನಾಟಕದ ಚುನಾವಣಾ ಪ್ರಚಾರದಲ್ಲಿದ್ದರು. ಕರ್ನಾಟಕವನ್ನು ಹೇಗಾದರೂ ಗೆಲ್ಲುವ ಮೂಲಕ ಇಡೀ ದಕ್ಷಿಣ ಭಾರತವನ್ನು ಕಬಳಿಸಲು ಹೊಂಚು ಹಾಕಿದವರು ಮಣಿಪುರದತ್ತ ಕಣ್ಣೆತ್ತಿ ನೋಡಲಿಲ್ಲ. ದೇಶದ ಪ್ರಧಾನಿಯೇ 15 ದಿನ ಕರ್ನಾಟಕದಲ್ಲಿ ಝಂಡಾ ಊರಿ ಜಿಲ್ಲೆ, ತಾಲೂಕು, ಹಳ್ಳಿ, ಪಟ್ಟಣಗಳನ್ನು ಸುತ್ತಿ ವೇದಿಕೆಯ ಮೇಲಿನಿಂದ ಜನರಿಗೆ ನಡು ಬಗ್ಗಿಸಿ, ನಮಸ್ಕಾರ ಮಾಡುವ ಪ್ರಹಸನ ನಡೆಸಿದಾಗ ಮಣಿಪುರ ದಳ್ಳುರಿಯಲ್ಲಿ ಬೆಂದು ಹೋಗುತ್ತಿತ್ತು.

ಅವರು ಕರ್ನಾಟಕ ಚುನಾವಣೆಯನ್ನು ಮುಗಿಸಿ ದಿಲ್ಲಿಗೆ ಹೋಗಿ ಹೊಸ ಸಂಸತ್ ಭವನವನ್ನು ಪುರೋಹಿತರ ಸಮ್ಮುಖದಲ್ಲಿ ಉದ್ಘಾಟಿಸಿದ ಆನಂತರ ಮಣಿಪುರದ ಬೆಂಕಿಯ ಜ್ವ್ವಾಲೆಯ ಬಿಸಿ ಇವರಿಗೆ ತಟ್ಟಿತು. ಕೊನೆಗೂ ಗೃಹ ಮಂತ್ರಿ ಅಮಿತ್ ಶಾ ಮಣಿಪುರ ರಾಜಧಾನಿ ಇಂಫಾಲ್‌ಗೆ

ಹೋಗಿದ್ದು ಹಿಂಸಾಚಾರ ನಡೆದು ಒಂದು ತಿಂಗಳ ಆನಂತರ, ಅಲ್ಲಿ ಹೋಗಿ ಪರಿಸ್ಥಿತಿಯ ಅವಲೋಕನ ಮಾಡಿ ಕಾಟಾಚಾರದ ಶಾಂತಿ ಸಮಿತಿಯನ್ನು ಮಾಡಿ ಬಂದರು.

ಆದರೆ, ಮಣಿಪುರ ತಣ್ಣಗಾಗಲಿಲ್ಲ. ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಮಣಿಪುರವನ್ನು ಭಾರತದ ಆಭರಣ ಎಂದು ಕರೆದಿದ್ದರು. ಮೈತೈ, ನಾಗಾ, ಕುಕಿ, ಜೋಮಿ ಸೇರಿ ಹಲವಾರು ಬುಡಕಟ್ಟು ಸಮುದಾಯಗಳು ಇಲ್ಲಿ ನೆಲೆಸಿವೆ. ವಿಭಿನ್ನ ಸಮುದಾಯಗಳು ಒಂದು ಭೂ ಪ್ರದೇಶದಲ್ಲಿ ಕೂಡಿ ಸೌಹಾರ್ದದಿಂದ ಬದುಕುತ್ತಿರುವ ನೂರಾರು ಉದಾಹರಣೆಗಳು ಜಗತ್ತಿನಲ್ಲಿ ಇವೆ.

ಮಣಿಪುರದಲ್ಲೂ ಜೊತೆಗೂಡಿ ಬದುಕಬಹುದಿತ್ತು. ಆದರೆ, ಎಲ್ಲ ಸಮುದಾಯಗಳಲ್ಲಿ ಉಗ್ರವಾದಿಗಳು, ಜನಾಂಗೀಯ ದ್ವೇಷಿಗಳು ಇರುವಂತೆ ಮಣಿಪುರದ ಮೈತೈ ಮತ್ತಿತರ ಸಮುದಾಯಗಳಲ್ಲಿ ಇದ್ದಾರೆ. ಹೀಗಾಗಿ ಬಂಡುಕೋರ ಚಟುವಟಿಕೆಗಳಿಗೂ ಇದು ಹೆಸರಾಗಿದೆ. ಇಂಥ ಮಣಿಪುರ 1980ರಿಂದಲೂ ಅಶಾಂತಿಯ ತಾಣವಾಗಿದೆ.

ಇಲ್ಲಿನ ಬಂಡುಕೋರರನ್ನು, ಪ್ರತ್ಯೇಕತಾವಾದಿಗಳನ್ನು ಹತ್ತಿಕ್ಕಲು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ ಎಸ್ ಪಿಎ) ಜಾರಿಯಲ್ಲಿದೆ. ಈ ವಿಶೇಷಾಧಿಕಾರ ಕಾಯ್ದೆಯನ್ನು ಅಲ್ಲಿನ ಸೈನಿಕರು ದುರ್ಬಳಕೆ ಮಾಡಿಕೊಂಡು ಅನುಮಾನ ಬಂದವರನ್ನೆಲ್ಲ ಗುಂಡಿಕ್ಕಿ ಕೊಲ್ಲುತ್ತ ಬಂದಿದ್ದಾರೆ.ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಉದಾಹರಣೆಗಳೂ ಇವೆ. ಅದಕ್ಕೆ 2000ದಲ್ಲಿ ಮಹಿಳೆಯರು ಬೆತ್ತಲೆ ಪ್ರತಿಭಟನೆ ನಡೆಸಿದ್ದರು.

ಅಲ್ಲಿನ ಸೇನೆಯ ದೌರ್ಜನ್ಯವನ್ನು ವಿರೋ ಧಿಸುವುದಕ್ಕಾಗಿ ವಿಧವೆಯರೆಲ್ಲ ಸೇರಿ ಸಂಘಟನೆ ಕಟ್ಟಿಕೊಂಡಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರಕಾರ ಮುಂದಾದಾಗ ಕುಕಿ ಸೇರಿದಂತೆ ಕೆಲವು ಬುಡಕಟ್ಟು ಸಮುದಾಯಗಳು ಸಾಂಕೇತಿಕವಾಗಿ ಆಕ್ಷೇಪವನ್ನು ವ್ಯಕ್ತಪಡಿಸಿದ್ದೇ ನೆಪವಾಗಿ ಮೈತೈ ಸಮುದಾಯದ ಕೆಲವು ಉಗ್ರಗಾಮಿ, ಜನಾಂಗವಾದಿ ಗುಂಪುಗಳು ಕುಕಿಗಳ ಮೇಲೆ ದ್ವೇಷದ ದಾಳಿಯನ್ನು ಆರಂಭಿಸಿದವು. ಇಂಥ ಸಂದರ್ಭದಲ್ಲಿ ಎಲ್ಲ ಬುಡಕಟ್ಟು ಸಮುದಾಯಗಳು ಹಾಗೂ ಮೈತೈ ಜನಾಂಗದ ಪ್ರಮುಖರ ಸಭೆಯನ್ನು ಕರೆದು ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಬಹುದಾಗಿತ್ತು. ಇಂಥ ಪರಿಹಾರ ಕಂಡು ಹಿಡಿಯಬೇಕಾದರೆ ಸರಕಾರದ ಚುಕ್ಕಾಣಿ ಹಿಡಿದವರು ಎಲ್ಲ ಜಾತಿ, ಮತ, ಸಮುದಾಯ, ಬುಡಕಟ್ಟುಗಳ ಆಚೆಗೆ ನಿಂತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ಹಿಂದೆ ನಾಗಾಲ್ಯಾಂಡ್‌ನಂಥ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿದ ಉದಾಹರಣೆಗಳಿವೆ. ಆದರೆ ಜನ ವಿಭಜನೆಯನ್ನೇ ರಾಜಕೀಯ ಸಿದ್ಧಾಂತವನ್ನಾಗಿ ಮಾಡಿಕೊಂಡವರಿಂದ ಇಂಥ ಮನಸ್ಸು ಕಟ್ಟುವ, ಹೃದಯ ಬೆಸೆಯುವ ಕಾರ್ಯ ಸಾಧ್ಯವಾಗುವುದಿಲ್ಲ. ಮಣಿಪುರದಲ್ಲಿ ಇವರು ಮಾಡಿದ್ದು ಅದನ್ನೇ, ಅಲ್ಪಸಂಖ್ಯಾತ ಕುಕಿ ಬುಡಕಟ್ಟು ಸಮುದಾಯದ ವಿರುದ್ಧ ಬಹುಸಂಖ್ಯಾತ ಮೈತೈ ಸಮುದಾಯವನ್ನು ಎತ್ತಿಕಟ್ಟಿದರು. ಮೈತೈ ಸಮುದಾಯದ ಕೆಲವು ಉಗ್ರಗಾಮಿ ಗುಂಪುಗಳು ಹಿಂದುತ್ವದ ಅಮಲನ್ನು ಏರಿಸಿಕೊಂಡವು. ಈಗ ಪರಿಸ್ಥಿತಿ ಕೈ ಮೀರಿದೆ.

ಮಣಿಪುರ ಸಮಸ್ಯೆಗೆ ವಿಶೇಷ ಸಶಸ್ತ್ರ ಪಡೆಗಳಿಂದ, ಸೇನಾಪಡೆಯ ತುಕಡಿಗಳಿಂದ, ಪೊಲೀಸ್ ಪಡೆಗಳಿಂದ ಬಂದೂಕನ್ನು ಎದೆಗೆ ಹಿಡಿದು ಪರಿಹಾರ ಕಂಡು ಹಿಡಿಯಲು ಸಾಧ್ಯವಿಲ್ಲ. ಮೊದಲು ಸರಕಾರದ ಧೋರಣೆ ಬದಲಾಗಬೇಕು. ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿ ಕಟ್ಟುವ ವಿಭಜನಕಾರಿ ರಾಜಕೀಯದ ಬದಲು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ, ಮನಸ್ಸು ಗೆಲ್ಲುವ ಮಾರ್ಗ ಅನುಸರಿಸಬೇಕು.

ಇಂಥ ಸಮಸ್ಯೆಗಳಿಗೆ ಪರಿಹಾರ ಸಾವರ್ಕರ್, ಗೋಳ್ವಲ್ಕರ್ ಪುಸ್ತಕಗಳಲ್ಲಿ ಸಿಗುವುದಿಲ್ಲ. ಅದರ ಬದಲಾಗಿ ಗಾಂಧಿ, ಅಂಬೇಡ್ಕರ್, ನೆಹರೂ, ಸುಭಾಷ್‌ಚಂದ್ರ ಬೋಸ್, ಭಗತ್ ಸಿಂಗ್ ಮಾರ್ಗದಲ್ಲಿ ಹೊಸ ದಾರಿ ಕಂಡು ಹಿಡಿಯಬೇಕು. ಆದರೆ ಇಂದಿನ ಅಧಿಕಾರ ಸೂತ್ರ ಹಿಡಿದವರಿಗೆ ಅಂಥ ಬೌದ್ಧಿಕ ಶಕ್ತಿಯಾಗಲಿ, ಪ್ರಾಮಾಣಿಕತೆಯಾಗಲಿ ಇಲ್ಲ ಎಂಬುದಕ್ಕೆ ನಿಯಂತ್ರಣಕ್ಕೆ ಬಾರದ ಮಣಿಪುರ ಕಣ್ಣೆದುರಿನ ಸಾಕ್ಷಿಯಾಗಿದೆ.

ಭಾರತ ವಿದೇಶಿ ಆಳ್ವಿಕೆಯಿಂದ ಸ್ವತಂತ್ರ ಗೊಂಡಾಗ ವ್ಯಾಪಕ ಕೋಮು ಹಿಂಸಾಚಾರ ನಡೆಯಿತು.ಆಗ ಮಹಾತ್ಮಾ ಗಾಂಧಿ ಉರಿಯುತ್ತಿದ್ದ ನೌಖಾಲಿಗೆ ಬರಿಗಾಲಲ್ಲಿ ಕೋಲೂರುತ್ತ ಹೋದರು.ಅಲ್ಲಿನ ಅತಿರೇಕವಾದಿಗಳು ಗಾಂಧಿ ಬರಬಾರದೆಂದು ದಾರಿಯುದ್ದಕ್ಕೂ ಕಲ್ಲು, ಮುಳ್ಳು, ಗಾಜಿನ ಚೂರುಗಳನ್ನು ಹಾಕಿದರು. ಗಾಂಧೀಜಿ ಕಲ್ಲು ಮುಳ್ಳಿನ ಮೇಲೆ ಕಾಲೂರುತ್ತ ಅಲ್ಲಿ ಹೋಗಿ ಉರಿಯುವ ಬೆಂಕಿಯನ್ನು ನಂದಿಸಿ ಬೆಳಕು ಚೆಲ್ಲುವ ದೀಪವನ್ನು ಹಚ್ಚಿದರು. ಗಾಯಗೊಂಡ ಮಣಿಪುರಕ್ಕೆ ಅಂಥ ಹೊಸ ಪರಿಹಾರ ಮಾರ್ಗ ಬೇಕಾಗಿದೆ.

ಆದರೆ, ಸಮಸ್ಯೆಗಳ ಪರಿಹಾರದಲ್ಲಿ ಈಗ ಅಧಿಕಾರದಲ್ಲಿ ಇರುವವರಿಗೆ ಆಸಕ್ತಿ ಇಲ್ಲ. ಮಣಿಪುರ ಹೊತ್ತಿ ಉರಿಯುತ್ತಿರುವಾಗ ಇವರು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಪ್ರತಿಪಕ್ಷಗಳ ನಾಯಕರನ್ನು ಹತ್ತಿಕ್ಕುವುದು, ಬಿಜೆಪಿಯೇತರ ಸರಕಾರಗಳನ್ನು ಉರುಳಿಸುವಲ್ಲಿ ನಿರತರಾಗಿದ್ದಾರೆ. ಭಾರತ ಎಂಬುದು ಯಾವುದೇ ಒಂದು ಧರ್ಮಕ್ಕೆ, ಸಮುದಾಯಕ್ಕೆ, ಜನಾಂಗಕ್ಕೆ ಬುಡಕಟ್ಟಿಗೆ ಸೇರಿದ್ದಲ್ಲ.

ಇದು ಎಲ್ಲ ಸಮುದಾಯಗಳಿಗೆ ಸೇರಿದ ಸರ್ವ ಜನಾಂಗದ ಶಾಂತಿಯ ತೋಟ. ಎಲ್ಲರೂ ಪರಸ್ಪರ ಪ್ರೀತಿಸಿ,ಗೌರವಿಸಿ, ಸೌಹಾರ್ದದಿಂದ ಬದುಕಿದರೆ ಮಾತ್ರ ಇದು ಸುರಕ್ಷಿತವಾಗಿ ಉಳಿಯುತ್ತದೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X