Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪಿಟ್ಕಾಯಣ
  5. ಕಾರ್ಮಿಕ ಕಾನೂನುಗಳಿನ್ನು ಮಾಲಕರ...

ಕಾರ್ಮಿಕ ಕಾನೂನುಗಳಿನ್ನು ಮಾಲಕರ ಕೋಡುಗಳೇ?

ರಾಜಾರಾಂ ತಲ್ಲೂರುರಾಜಾರಾಂ ತಲ್ಲೂರು31 May 2025 10:07 AM IST
share
ಕಾರ್ಮಿಕ ಕಾನೂನುಗಳಿನ್ನು ಮಾಲಕರ ಕೋಡುಗಳೇ?
ಈಗ ಕೋಡ್ ಅನುಷ್ಠಾನಕ್ಕೆ ಸರಕಾರ ಹಾಕಿದ್ದ 2025ರ ಮಾರ್ಚ್ ಅಂತ್ಯದ ಗಡುವು ದಾಟಿದೆ. ನಾಲ್ಕು ಕೋಡ್‌ಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಉದಾರೀಕರಣದ ಗಡಿಬಿಡಿಯಲ್ಲಿರುವ ಸರಕಾರ ಈಗ ತಮಗೆ ಅಗತ್ಯ ಎಕೊಸಿಸ್ಟಮ್ ಒದಗಿಸಬೇಕೆಂಬ ಖಾಸಗಿ ಲಾಬಿಗಳ ಒತ್ತಡಕ್ಕೆ ಸಿಲುಕಿದೆ. ಖಾಸಗಿ ‘ಆನಿ’ಗಳು- ಸರಕಾರದ ನಡುವಣ ಈ ಕೋಡು ಜೋಡಾಟ ‘‘ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು’’ ಆಗದಿರಲಿ.

ದೇಶದಲ್ಲಿ ಕಾರ್ಮಿಕ ಕಾನೂನುಗಳ ಚರಿತ್ರೆ ಎಂದರೆ, ಮನಸ್ಸು ಬಂದಾಗಲೆಲ್ಲ ಒಂದೊಂದು ಕಾನೂನು ಮಾಡುತ್ತಲೇ ಹೋದದ್ದು. 1802ರಷ್ಟು ಹಳೆಯ ಬ್ರಿಟಿಷ್ ಕಾಲದ ಫ್ಯಾಕ್ಟರಿ ಕಾಯ್ದೆಯಿಂದ ಆರಂಭಿಸಿ ದೇಶದಲ್ಲಿ ಸುಮಾರು 40ರಷ್ಟು ಭಾರತ ಸರಕಾರದ ಕಾನೂನುಗಳು ಮತ್ತು ಅಂದಾಜು 100ರಷ್ಟು ವಿವಿಧ ರಾಜ್ಯ ಸರಕಾರಗಳ ಕಾನೂನುಗಳಿದ್ದವು. ಭಾರತದ ಸಂವಿಧಾನದ ಅಡಿಯಲ್ಲಿ ‘ಕಾರ್ಮಿಕ’ ಜಂಟಿ ಪಟ್ಟಿಯ ವಿಷಯವಾಗಿರುವುದರಿಂದ, ಅದಕ್ಕೆ ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳೆರಡೂ ಕಾನೂನುಗಳನ್ನು ರಚಿಸಲು ಅವಕಾಶ ಇದೆ. 2002ರಲ್ಲಿ ರಚಿತವಾದ ಎರಡನೇ ರಾಷ್ಟ್ರೀಯ ಕಾರ್ಮಿಕ ಆಯೋಗವು ಈ ರಾಶಿ ಕಾನೂನುಗಳೆಲ್ಲ ಬಹಳ ಸಂಕೀರ್ಣವಾಗಿದ್ದು, ಹಲವು ಅಪ್ರಸ್ತುತವೂ ಆಗಿವೆ. ಹಾಗಾಗಿ ಇವನ್ನು ಸ್ಥೂಲ ಗುಂಪುಗಳಾಗಿ ವಿಂಗಡಿಸಿ, ಇವುಗಳ ಅನುಷ್ಠಾನವನ್ನು ಪರಿಣಾಮಕಾರಿಗೊಳಿಸಬೇಕೆಂದು ಶಿಫಾರಸು ಮಾಡಿತ್ತು.

2019ರಲ್ಲಿ ಭಾರತ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯು ತನ್ನ ಸುಮಾರು 29 ಕಾಯ್ದೆಗಳನ್ನು ಸಂಬಳಗಳು, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ವೃತ್ತಿ ಸುರಕ್ಷೆ-ಆರೋಗ್ಯ-ಕೆಲಸದ ಸ್ಥಿತಿ ಎಂಬ ನಾಲ್ಕು ಸ್ಥೂಲ ವರ್ಗಗಳಲ್ಲಿ ವಿಂಗಡಿಸಿತು. ಈ ನಾಲ್ಕು ಕೋಡ್‌ಗಳನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಸಂಬಳಗಳ ಕೋಡ್ ಸಂಸತ್ತಿನ ಅನುಮೋದನೆ ಪಡೆಯಿತಾದರೂ, ಉಳಿದ ಮೂರನ್ನು ಸಂಸತ್ತಿನ ಕಾರ್ಮಿಕ ಸ್ಥಾಯಿ ಸಮಿತಿಯ ಪರಿಶೀಲನೆಗೆಂದು ಮಂಡಿಸಲಾಯಿತು. ಅದು ಸೂಚಿಸಿದ್ದರಲ್ಲಿ ಚೂರುಪಾರು ಬದಲಾವಣೆಗಳನ್ನು ಮಾಡಿ, 2020ರಲ್ಲಿ ಈ ಕೋಡ್‌ಗಳನ್ನು ಸಂಸತ್ತು ಅಂಗೀಕರಿಸಿತು.

ಈ ಕೋಡ್‌ಗಳನ್ನು 2025ರ ಮಾರ್ಚ್ 31ರ ಒಳಗೆ ಎಲ್ಲ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮಲ್ಲಿಗೆ ಅನ್ವಯವಾಗುವಂತೆ ಏಕಸೂತ್ರದಲ್ಲಿ ಜಾರಿಗೆ ತರಬೇಕೆಂದು ಭಾರತ ಸರಕಾರ ಸೂಚಿಸಿತ್ತು. ಆದರೆ ಈ ಕಾಯ್ದೆ ಇನ್ನೂ ರಾಜ್ಯಗಳಲ್ಲಿ ಸಮಗ್ರವಾಗಿ ಅನುಷ್ಠಾನಗೊಂಡಿಲ್ಲ. ಕಾಯ್ದೆಯ ವಿವಿಧ ಅಂಶಗಳನ್ನು ಸುಮಾರು 19-30 ರಾಜ್ಯಗಳು ಜಾರಿಗೊಳಿಸಿಕೊಂಡಿವೆ. ಇದರಲ್ಲಿ ಎನ್‌ಡಿಎ ಆಡಳಿತ ಇಲ್ಲದ ರಾಜ್ಯಗಳೂ ಸೇರಿವೆ. ಸಂಘಪರಿವಾರದ ಭಾಗ ಆಗಿರುವ ಭಾರತೀಯ ಮಜದೂರ್ ಸಭಾ ಕೂಡ ಈ ನಾಲ್ಕು ಕೋಡ್‌ಗಳಿಗೆ ಸಂಪೂರ್ಣ ಸಹಮತಿ ಹೊಂದಿಲ್ಲವಂತೆ. ಉಳಿದ 10 ರಾಷ್ಟ್ರೀಯ ಕಾರ್ಮಿಕ ಸಂಘಗಳು (AITUC, INTUC, HMS, CITU, AIUTUC, TUCC, SEWA, AICCTU, LPF, UTUC) ಈ ಕೋಡ್‌ಗಳನ್ನು ಸಮಗ್ರವಾಗಿ ವಿರೋಧಿಸುತ್ತಿವೆ. ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ಐಎಲ್‌ಒ) ನಿರ್ಣಯಗಳಿಗೆ ವಿರುದ್ಧವಾಗಿ, ಕಾರ್ಮಿಕ-ಮಾಲಕ-ಸರಕಾರಗಳ ನಡುವೆ ತ್ರಿಪಕ್ಷೀಯ ಚರ್ಚೆ-ಸಂವಾದಗಳಿಲ್ಲದೆ ಈ ಕೋಡ್‌ಗಳು ಹೊರಬಂದಿವೆ ಮತ್ತು ಇವು ಸಂಪೂರ್ಣವಾಗಿ ಉದ್ಯಮಿ-ಮಾಲಕರ ಪರ ಆಗಿವೆ ಎಂಬುದು ಅವರ ದೂರು.

ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ, ದೇಶ ಸ್ವಾತಂತ್ರ್ಯದ 75 ವರ್ಷಗಳನ್ನು ತಲುಪುವ ವೇಳೆಗೆ ಕಾರ್ಮಿಕ-ಉದ್ಯೋಗ ಕ್ಷೇತ್ರಗಳ ಸುಧಾರಣೆಗಳಿಗೆ ಸಂಬಂಧಿಸಿದಂತೆ ನಾಲ್ಕು ಉದ್ದೇಶಗಳನ್ನು ಮುಂದಿಟ್ಟಿತ್ತು. 2019ಕ್ಕೆ ಮುನ್ನ ನಾಲ್ಕು ಕಾರ್ಮಿಕ ಕೋಡ್‌ಗಳ ಅನುಷ್ಠಾನ, 2022-23ಕ್ಕೆ ಮುನ್ನ ಮಹಿಳಾ ಕಾರ್ಮಿಕರ ಪ್ರಮಾಣವನ್ನು ಶೇ. 30ಕ್ಕೆ ಏರಿಸುವುದು, ಕಾರ್ಮಿಕ ಡೇಟಾಗಳನ್ನು ತ್ರೈಮಾಸಿಕಕ್ಕೊಮ್ಮೆ ಸಂಗ್ರಹಿಸಿ ಆಡಳಿತ ಸುಧಾರಣೆಗೆ ಬಳಸುವುದು, ಅನೌಪಚಾರಿಕ ವಲಯಗಳ ಕಾರ್ಮಿಕರಿಗೆ ಕಾನೂನಿನ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಗಳ ಮೂಲಕ ಉತ್ಪಾದಕತೆಯಲ್ಲಿ ಗಮನಾರ್ಹ ವೃದ್ಧಿ. ಇವುಗಳಲ್ಲೀಗ, ಕಾರ್ಮಿಕ ಕಾನೂನುಗಳು ಪೂರ್ಣ ಪ್ರಮಾಣದಲ್ಲಿ ಇನ್ನೂ ಅನುಷ್ಠಾನ ಆಗಿಲ್ಲ; ಮಹಿಳಾ ಕಾರ್ಮಿಕರ ಪ್ರಮಾಣ ಶೇ. 32.8ರಷ್ಟಿದೆ; 2017ರಿಂದ ಈಚೆಗೆ ತ್ರೈಮಾಸಿಕ ಕಾರ್ಮಿಕ ಸಮೀಕ್ಷೆ ವರದಿಗಳು (ಪಿಎಲ್‌ಎಫ್‌ಎಸ್) ಲಭ್ಯವಿವೆ. ಆದರೆ ಉದಾರೀಕರಣಕ್ಕೆ ನೀಡಲಾಗಿರುವ ಅತಿವೇಗ ಮತ್ತು ಆರ್ಥಿಕ ಅಸಮತೋಲನಗಳಿಗೆ ಎಡೆಮಾಡಿಕೊಡುತ್ತಿರುವ ಕ್ರೋನಿ ಕ್ಯಾಪಿಟಲಿಸಂ ಕಾರಣದಿಂದಾಗಿ ಸನ್ನಿವೇಶ ಮೊದಲು ಊಹಿಸಿದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಇಂದು ರೈಲು, ರಸ್ತೆ, ವಿಮಾನ, ಬಂದರು, ಟೆಲಿಕಾಂ, ಗಣಿಗಾರಿಕೆ, ವಿದ್ಯುತ್, ಬ್ಯಾಂಕಿಂಗ್, ವಿಮೆ, ಸಾರ್ವಜನಿಕ ಮೂಲಸೌಕರ್ಯಗಳು... ಹೀಗೆ ಪ್ರತಿಯೊಂದೂ ಖಾಸಗೀಕರಣಗೊಂಡು ಸಂಪೂರ್ಣ ಎಕೊಸಿಸ್ಟಮ್ ಉದ್ಯಮಿಗಳು ಮತ್ತು ಕಾರ್ಪೊರೇಟ್ ‘ಆನಿ’ಗಳ ಪರ ಬದಲಾಗಿ ನಿಂತಿದೆ. 2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 56.5 ಕೋಟಿ ಕಾರ್ಮಿಕ ಬಲ ಇದೆ. ಅವರಲ್ಲಿ ಕೃಷಿ (ಶೇ.45), ಉತ್ಪಾದನೆ (ಶೇ.11.4), ಸೇವೆಗಳು(ಶೇ.28.9), ನಿರ್ಮಾಣ (ಶೇ.13.0) ಕ್ಷೇತ್ರಗಳಲ್ಲಿದ್ದಾರೆ. ಉದಾರೀಕರಣದ ಆರಂಭದ ದಿನಗಳಿಗೂ ಈಗಕ್ಕೂ ಬದಲಾವಣೆ ಏನೆಂದರೆ, ಸರಕಾರಿ ಮತ್ತು ಖಾಸಗಿ ರಂಗಗಳೆರಡರಲ್ಲೂ ನೇರ ನೇಮಕಾತಿಗಳು ಗಮನಾರ್ಹವಾಗಿ ತಗ್ಗಿದ್ದು, ಗುತ್ತಿಗೆ ನೌಕರರು ಮತ್ತು ಗಿಗ್ ಕೆಲಸಗಾರರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಆಗಿದೆ. ಈ ಬದಲಾದ ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡು ಈ ಕಾರ್ಮಿಕ ಕಾನೂನುಗಳನ್ನು ಗಮನಿಸಿದರೆ, ಇದು ಸ್ಪಷ್ಟವಾಗಿ ಮಾಲಕವರ್ಗದ ಪರ ನಿಂತಿರುವುದು ಕಣ್ಣಿಗೆ ರಾಚುತ್ತದೆ. ಕಾರ್ಮಿಕರ ಹಕ್ಕುಗಳನ್ನು ಉಳಿಸಿಕೊಂಡು ಉದ್ಯೋಗಸೃಷ್ಟಿಯ ಸವಾಲನ್ನು ಎದುರಿಸುವುದು ಈ ಕಾನೂನು-ಸುಧಾರಣೆಗಳ ಉದ್ದೇಶ. ಅದಕ್ಕಾಗಿ ಒಂದು ನೋಂದಣಿ, ಒಂದು ರಿಟರ್ನ್, ಐದು ವರ್ಷಗಳ ಮಾನ್ಯತೆಯುಳ್ಳ ಸಂಸ್ಥೆ ಆಧರಿತ ಪರವಾನಿಗೆ, ಕಾರ್ಮಿಕ ಇನ್‌ಸ್ಪೆಕ್ಟರ್ ಇನ್ನು ಇನ್‌ಸ್ಪೆಕ್ಟರ್ ಕಂ ಫೆಸಿಲಿಟೇಟರ್ ಆಗಿರುವುದು ಮತ್ತಿತರ ಸುಧಾರಣೆಗಳು ಬರಲಿವೆ ಎಂದು ಕಾರ್ಮಿಕ ಇಲಾಖೆ ಹೇಳಿದ್ದು, ಇದು ಈಸ್‌ಆಫ್ ಡೂಯಿಂಗ್ ಬ್ಯುಸಿನೆಸ್‌ಗೆ ವೇಗವರ್ಧಕ ಆಗಲಿದೆ ಎಂದು ಹೇಳಿಕೊಂಡಿದೆ (PIB Release ID: 2088563)

12 ಗಂಟೆಗಳ (10ಗಂಟೆ ಶಿಫ್ಟ್ + 2ಗಂಟೆ ಓವರ್‌ಟೈಮ್) ಕೆಲಸದ ಅವಧಿಯ ಮಿತಿ, ಕೆಲಸದಿಂದ ಸಾಮೂಹಿಕವಾಗಿ ವಜಾಗೊಳಿಸಲು ಮತ್ತು ಉದ್ಯಮ ಮುಚ್ಚಲು, ಲೇ-ಆಫ್ ಮಾಡಲು, ಸರಕಾರದ ಪೂರ್ವಾನುಮತಿಗೆ ಕೈಗಾರಿಕೆಯ ಗಾತ್ರದ ಮಿತಿಯನ್ನು 100 ಕೆಲಸಗಾರರಿದ್ದಲ್ಲಿಂದ 300ಕ್ಕೆ ಏರಿಸಿರುವುದು; ಫ್ಯಾಕ್ಟರಿ ಕಾಯ್ದೆ ಅನ್ವಯ ಆಗಲು ಇರುವ ಕಾರ್ಮಿಕರ ಸಂಖ್ಯೆಯ ಮಿತಿಯನ್ನು 20ರಿಂದ 40ಕ್ಕೆ ಏರಿಸಿರುವುದು; ಗುತ್ತಿಗೆ ಕಾರ್ಮಿಕರ ಕಾನೂನು ಅನ್ವಯಗೊಳ್ಳಲು ಕಾರ್ಮಿಕರ ಸಂಖ್ಯೆಯ ಮಿತಿಯನ್ನು 20ರಿಂದ 50ಕ್ಕೆ ಏರಿಸಿರುವುದು, ಮಹಿಳೆಯರಿಗೆ ರಾತ್ರಿ ಶಿಫ್ಟ್‌ನಲ್ಲಿ ದುಡಿಯಲು ಅನುಮತಿ, ಗಿಗ್ ಕೆಲಸಗಾರರ ಸಾಮಾಜಿಕ ಭದ್ರತೆಯಂತಹ ಹಲವು ಕಾನೂನುಗಳನ್ನು ಬಿಜೆಪಿಯೇತರ ರಾಜ್ಯಗಳೂ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಜಾರಿಗೆ ತಂದಿವೆ.

2015ರ ಅಂದಾಜಿನಂತೆ ದೇಶದಲ್ಲಿ 12,420 ನೋಂದಾಯಿತ ಕಾರ್ಮಿಕ ಸಂಘಟನೆಗಳಿದ್ದು, ಅವು ಸರಾಸರಿ 1,883 ಸದಸ್ಯರನ್ನು ಹೊಂದಿವೆ. ಸಮಸ್ಯೆಗಳು ಎದುರಾದಾಗ ಶೇ. 51 ಸದಸ್ಯತ್ವ ಹೊಂದಿರುವ ಸಂಘಟನೆಗೆ ಮಾತ್ರ ಮಾನ್ಯತೆ, ಕೆಲಸದ ಅವಧಿ-ಸವಲತ್ತುಗಳು, ಕಾರ್ಪೊರೇಟ್‌ಗಳಿಗೆ ಹೆಚ್ಚಿನ ಕೆಲಸಗಳನ್ನು ಹೊರಗುತ್ತಿಗೆ ನೀಡಿಯೇ ಮಾಡಿಸಿಕೊಳ್ಳಲು ಅವಕಾಶ, ಗಿಗ್-ಪ್ಲಾಟ್‌ಫಾರ್ಮ್ ಕೆಲಸಗಾರರ ಬಗ್ಗೆ ಇರುವ ವ್ಯಾಖ್ಯಾನದ ಗೊಂದಲಗಳು, ಖಾಸಗೀಕರಣಕ್ಕೆ ಒತ್ತು, ಕನಿಷ್ಠ ಸಂಬಳ-ಪಿಂಚಣಿ, ಭಾರತ ಸರಕಾರಕ್ಕೆ ಹೆಚ್ಚಿನ ಅಧಿಕಾರ ಸಿಕ್ಕು ಫೆಡರಲ್ ವ್ಯವಸ್ಥೆಗೆ ಧಕ್ಕೆ, ಸರಕಾರ ಜಾರಿಗೆ ತಂದಿರುವ ಹೊಸ ನ್ಯಾಯ ಸಂಹಿತೆಗಳು ಈ ಬದಲಾವಣೆಗೆ ಪೂರಕವಾಗಿರುವುದು; ಜೊತೆಗೆ ಅನಗತ್ಯ ಹಳೆಯ ಕಾಯ್ದೆಗಳನ್ನು ದಿನಕ್ಕೊಂದರಂತೆ ಕಿತ್ತುಹಾಕುವ ಹೆಸರಿನಲ್ಲಿ ಬಂದ ಸರಣಿ ಜನ ವಿಶ್ವಾಸ ಕಾಯ್ದೆಗಳು ಕಾರ್ಪೊರೇಟ್-ಮಾಲಕ ವರ್ಗಕ್ಕೆ ಇದ್ದ ಜೈಲು ಶಿಕ್ಷೆಯಂತಹ ಕಠಿಣ ಕ್ರಮಗಳನ್ನು ಜುಜುಬಿ ದಂಡಕ್ಕೆ ಇಳಿಸಿರುವುದು... ಹೀಗೆ ಹತ್ತು ಹಲವು ಬದಲಾವಣೆಗಳ ಬಗ್ಗೆ ಕಾರ್ಮಿಕ ಸಂಘಟನೆಗಳು ಆತಂಕ ಹೊಂದಿವೆ. ಈ ಕೋಡ್‌ಗಳಿಂದ ಇನ್ನು ಮುಂದೆ ಕಾರ್ಖಾನೆಗಳಿಗೆ ಕಾರ್ಮಿಕರ ವಜಾ, ಲೇ-ಆಫ್, ಮುಚ್ಚುಗಡೆ ಸುಲಭ ಆಗಲಿದೆ, ಕಾರ್ಮಿಕ ಸಂಘಟನೆಗಳ ನೋಂದಣಿ ಕಷ್ಟ ಆಗಲಿದೆ ಮತ್ತು ಅನ್ಯಾಯವಾದಾಗ ಮುಷ್ಕರಗಳಿಗೆ ಪ್ರತಿಬಂಧ ಎದುರಾಗಲಿದೆ ಎಂಬ ಮಾತುಗಳು ಕಾರ್ಮಿಕ ನಾಯಕರಿಂದ ಕೇಳಿಬರುತ್ತಿವೆ. ಈ ಕೋಡ್‌ಗಳ ವಿರುದ್ಧ 2020ರಲ್ಲಿ ರೈತ ಹೋರಾಟಗಳ ಜೊತೆಜೊತೆಗೇ ಕಾರ್ಮಿಕ ಹೋರಾಟಗಳು ಕೂಡ ಆರಂಭಗೊಂಡಿದ್ದವು.

ಈಗ ಕೋಡ್ ಅನುಷ್ಠಾನಕ್ಕೆ ಸರಕಾರ ಹಾಕಿದ್ದ 2025ರ ಮಾರ್ಚ್ ಅಂತ್ಯದ ಗಡುವು ದಾಟಿದೆ. ನಾಲ್ಕು ಕೋಡ್‌ಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಉದಾರೀಕರಣದ ಗಡಿಬಿಡಿಯಲ್ಲಿರುವ ಸರಕಾರ ಈಗ ತಮಗೆ ಅಗತ್ಯ ಎಕೊಸಿಸ್ಟಮ್ ಒದಗಿಸಬೇಕೆಂಬ ಖಾಸಗಿ ಲಾಬಿಗಳ ಒತ್ತಡಕ್ಕೆ ಸಿಲುಕಿದೆ. ಖಾಸಗಿ ‘ಆನಿ’ಗಳು- ಸರಕಾರದ ನಡುವಣ ಈ ಕೋಡು ಜೋಡಾಟ ‘‘ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು’’ ಆಗದಿರಲಿ.

share
ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
Next Story
X