Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಆನ್ ರೆಕಾರ್ಡ್
  5. ಸಿದ್ದರಾಮಯ್ಯ ಸಿಂಧೂರ...

ಸಿದ್ದರಾಮಯ್ಯ ಸಿಂಧೂರ ಇಟ್ಟುಕೊಂಡಿದ್ದೇಕೆ?

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ19 May 2025 10:26 AM IST
share
ಸಿದ್ದರಾಮಯ್ಯ ಸಿಂಧೂರ ಇಟ್ಟುಕೊಂಡಿದ್ದೇಕೆ?

ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಬೆಂಬಲ ನೀಡುತ್ತೇವೆ ಎಂದು ಹೇಳಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಂಧೂರ ಇಟ್ಟುಕೊಂಡು ಬಂದಿದ್ದು ಭಾರೀ ಚರ್ಚೆಯಾಗಿತ್ತು. ರಾಷ್ಟ್ರೀಯ ಮಾಧ್ಯಮಗಳು ಕೂಡ ಸಿದ್ದರಾಮಯ್ಯ ಸಿಂಧೂರ ಇಟ್ಟುಕೊಂಡಿದ್ದನ್ನೇ ಒತ್ತಿ ಒತ್ತಿ ಹೇಳಿದವು. ಟಿ.ವಿ. ಕ್ಯಾಮರಾಮನ್‌ಗಳು ಯಾರಾದರೂ ಭಾವನಾತ್ಮಕವಾಗಿ ಮಾತನಾಡುತ್ತಿದ್ದರೆ ಅವರ ಕಣ್ಣುಗಳತ್ತಲೇ ದೃಷ್ಟಿ ನೆಟ್ಟಿರುತ್ತಾರೆ. ಕಣ್ಣು ತೇವವಾದರೆ ಸಾಕು, ಒಂದೇ ಒಂದು ಹನಿ ಜಾರಿದರೆ ಸಾಕು ಎಂದು ಕಾಯುತ್ತಿರುತ್ತಾರೆ. ಅವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಣೆಗೆ-ಸಿಂಧೂರಕ್ಕೆ ಫೋಕಸ್ ಮಾಡುತ್ತಿದ್ದರು. ಖಂಡಿತಾ ಇದು ಕ್ಯಾಮರಾಮನ್ ಗಳನ್ನು ಮಾತ್ರ ಹೊಣೆ ಮಾಡುವ ವಿಷಯವಲ್ಲ, ಇಡೀ ಟಿ.ವಿ. ಮಾಧ್ಯಮವೇ ಬೇರೆಯವರ ಕಣ್ಣೀರಿಗೆ ಕಾಯುವುದು ವಾಸ್ತವ. ಇದೇ ಮನೋಸ್ಥಿತಿಯ ಟಿ.ವಿ.ಗಳಿಗೆ ಅವತ್ತು ಸಿಂಧೂರ ಎಂಬುದು ‘ಸೇಲಬಲ್ ಐಟಂ’ ಆಗಿತ್ತಷ್ಟೇ.

ಸಿದ್ದರಾಮಯ್ಯ ನಾಸ್ತಿಕರೂ ಅಲ್ಲ, ಆಸ್ತಿಕರೂ ಅಲ್ಲ; ನಿರ್ಭಾವುಕ (ಇದು ಹೆಚ್ಚು ಅಪಾಯಕಾರಿ ಸ್ಥಿತಿ). ಮೇ 7ರಂದು ಆಗಿದ್ದು ಕೂಡ ಅದೇ. ಅವತ್ತು ಅವರು ರಾಯಚೂರಿಗೆ ಹೋಗಬೇಕಾಗಿತ್ತು. ಕಾಂಗ್ರೆಸ್ ಆಯೋಜಿಸಿದ್ದ ಸಂವಿಧಾನ ಬಚಾವೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಅದು ರದ್ದಾದ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ ಅವರ ಕಾರ್ಯಕಲಾಪಗಳು ಬದಲಾದವು. ಪುರಸೊತ್ತಾಗಿದ್ದರಿಂದ ಪಟ್ಟಾಲಮ್ಮ ದೇವಸ್ಥಾನಕ್ಕೆ ತೆರಳಿತು. ಮಾರ್ಗ ಮಧ್ಯದಲ್ಲಿ ಬಂದ ದಿಲ್ಲಿ ಕರೆಗೆ ಓಗೊಟ್ಟು ಪಟ್ಟಾಲಮ್ಮ ದೇವಸ್ಥಾನದಿಂದ ನೇರವಾಗಿ

ಪತ್ರಿಕಾಗೋಷ್ಠಿಗೆ ಬಂದರು. ಪಟ್ಟಾಲಮ್ಮ ದೇವಸ್ಥಾನದಲ್ಲಿ ಇಟ್ಟ ಸಿಂಧೂರ ಒಂದೇ ಏಟಿಗೆ ನಾಸ್ತಿಕರಾಮಯ್ಯ ಅವರನ್ನು ಆಸ್ತಿಕರಾಮಯ್ಯನನ್ನಾಗಿ ಪರಿವರ್ತಿಸಿಬಿಟ್ಟಿತು.

ಸಿಂಧೂರ ಸಿದ್ದರಾಮಯ್ಯ ವಿರೋಧಿಗಳಲ್ಲೂ ಸಂಚಲನ ಉಂಟುಮಾಡಿತ್ತು. ಕೆಲವರು ಮೆಚ್ಚಿ ಮಾತನಾಡಿದರು. ಇನ್ನು ಕೆಲವರು ಕಡೆಗೂ ಸಿದ್ದರಾಮಯ್ಯ ಬದಲಾದರು ಎಂದು ತಮ್ಮ ನಿಲುವನ್ನು ಬದಲಿಸಿಕೊಂಡರು. ಈ ಅಂಕಣಕಾರನ ಜೊತೆ ಮಾತನಾಡುತ್ತಿದ್ದ ಬಿಜೆಪಿಯ ಹಿರಿಯ ನಾಯಕರೊಬ್ಬರಂತೂ ಸಿದ್ದರಾಮಯ್ಯ ಅವರದು ಮಾಸ್ಟರ್ ಸ್ಟ್ರೋಕ್ ಎಂದು ಸಂಭ್ರಮಿಸುತ್ತಿದ್ದರು. ‘ಅದು ಹೇಗೆ? ಎಂದಿದ್ದಕ್ಕೆ ‘ಯುದ್ಧ ಬೇಡ ಎಂದ ತಮ್ಮ ವಿರುದ್ಧ ಕದನ ಘೋಷಣೆ ಮಾಡಿದ್ದವರನ್ನು ಕುಂಕುಮ ಇಟ್ಟುಕೊಳ್ಳುವ ಮೂಲಕ ಸಿದ್ದರಾಮಯ್ಯ ಮಣಿಸಿಬಿಟ್ಟರು’ ಎಂಬ ವಿವರಣೆ ನೀಡಿದರು. ಸಿದ್ದರಾಮಯ್ಯ ಪಟಾಲಂ ಕೂಡ ‘ಹೆಂಗೆ ನಮ್ಮ ಸಾಹೇಬ್ರು?’ ಎಂದು ಹಿರಿಹಿರಿ ಹಿಗ್ಗಿದರು. ಇದನ್ನೇ ಅಧಿಕಾರ ಹಸ್ತಾಂತರ ವಿಚಾರಕ್ಕೆ ತಳುಕು ಹಾಕಿಕೊಂಡು ‘ಜಗಜ್ಜಟ್ಟಿ ಸಿದ್ದರಾಮಯ್ಯರನ್ನು ಮುಟ್ಟುವ ಮಗ ಹುಟ್ಟಿಲ್ಲ’ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಹೀಗೆ ಬಹುತೇಕ ವಿಷಯಗಳಲ್ಲಿ ಸಿದ್ದರಾಮಯ್ಯ ಅದೃಷ್ಟದ ರಾಜಕಾರಣಿ. ಕೆಲವೊಮ್ಮೆ ‘ಅನ್ಯಾಯವಾಗಿ ಹೀರೋ’ ಆಗಿಬಿಡುತ್ತಾರೆ. ಆದರೆ ಇತ್ತೀಚೆಗೆ ಯಾಕೋ ಏನೋ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಡುವೆ ಮೊದಲಿನಂತಿಲ್ಲ ಎನ್ನುತ್ತವೆ ದಿಲ್ಲಿ ಮೂಲಗಳು.

ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಮಂಡಲ್ ವರದಿಯನ್ನು ವಿರೋಧಿಸಿದ್ದರು. ವರದಿ ಜಾರಿಗೆ ತಡವಾಗಲು ಪ್ರಮುಖ ಕಾರಣರಾಗಿದ್ದರು. ಅಂಥ ಅಪ್ಪನ ಹೊಟ್ಟೆಯಲ್ಲಿ ಹುಟ್ಟಿ ರಾಹುಲ್ ಗಾಂಧಿ ಗಟ್ಟಿಯಾಗಿ, ದಿಟ್ಟವಾಗಿ ಜಾತಿಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ಮೆಚ್ಚಲೇಬೇಕು. ಆದರೆ ಅವರು ಮಾತನಾಡುತ್ತಿರುವುದು ತೀರಾ ಇತ್ತೀಚೆಗೆ. ಇದಕ್ಕೂ ಮೊದಲು 90ರ ದಶಕದಲ್ಲಿ ಅಹಿಂದ ಆರಂಭವಾದಾಗಲೇ ಜಾತಿಗಣತಿ ಆಗಬೇಕು ಎನ್ನುವುದನ್ನು ಪ್ರತಿಪಾದಿಸಿದವರು ಸಿದ್ದರಾಮಯ್ಯ. 2005ರಲ್ಲಿ ಮೊದಲ ಬಾರಿ ಉಪ ಮುಖ್ಯಮಂತ್ರಿಯಾದಾಗ ಬಜೆಟ್ಟಿನಲ್ಲಿ 23 ಕೋಟಿ ರೂ. ಕೊಟ್ಟಿದ್ದರು (ಡಾ. ಮನಮೋಹನ್ ಸಿಂಗ್ ಸರಕಾರ ಪೈಲೆಟ್ ಪ್ರಾಜೆಕ್ಟ್ ಗಾಗಿ ನೀಡಿದ್ದ 21.5 ಕೋಟಿ ರೂ.ಗೆ ರಾಜ್ಯ ಸರಕಾರದಿಂದ 1.5 ಕೋಟಿ ರೂ. ಸೇರಿಸಿ). 2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಜಾತಿಗಣತಿ ನಡೆಸುವುದಾಗಿ ಘೋಷಿಸಿದರು. 2015ರಲ್ಲಿ ಜಾತಿಗಣತಿಯ ಆರಂಭವೂ ಆಯಿತು. ಈಗ ಸಿದ್ದರಾಮಯ್ಯ ವರದಿ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ.

ಇಷ್ಟಾದರೂ, ಜಾತಿಗಣತಿ ಮತ್ತು ಸಿದ್ದರಾಮಯ್ಯ ನಡುವೆ ಮೂರು ದಶಕಗಳ ನಂಟಿದ್ದರೂ, ಕೇಂದ್ರ ಸರಕಾರ ಜಾತಿಗಣತಿ ನಡೆಸುವುದಾಗಿ ಘೋಷಿಸುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ ಕರ್ನಾಟಕದ ಜಾತಿಗಣತಿ ಬಗ್ಗೆಯಾಗಲಿ ಮತ್ತು ಸಿದ್ದರಾಮಯ್ಯ ಬಗ್ಗೆಯಾಗಲಿ ಒಂದೇ ಒಂದು ಮಾತನಾಡಲಿಲ್ಲ. ಮೊನ್ನೆ ಮೊನ್ನೆ ಬಿಹಾರದಲ್ಲಿ ಭಾಷಣ ಮಾಡಲು ಬಿಡದಿದ್ದರೂ ಲೆಕ್ಕಿಸದೆ ಇನ್ನಷ್ಟು ಆಕ್ರೋಶ ಭರಿತವಾಗಿ ಮಾತನಾಡಿರುವ ರಾಹುಲ್ ಗಾಂಧಿ ತಾವು ಮೂರು ಪ್ರಮುಖ ಕೆಲಸಗಳನ್ನು ಮಾಡೇ ತೀರುತ್ತೇವೆ ಎಂದು ಶಪಥಗೈದಿದ್ದಾರೆ. ಮೊದಲನೆಯದು ತೆಲಂಗಾಣದಂತೆ ದೇಶಾದ್ಯಂತ ಸರಿಯಾದ ರೀತಿಯಲ್ಲಿ ಜಾತಿಗಣತಿ ನಡೆಸಿ ವರದಿ ಜಾರಿ ಮಾಡುತ್ತೇವೆ ಎಂದು. ಎರಡನೆಯದು ಖಾಸಗಿ ಕ್ಷೇತದಲ್ಲೂ ಮೀಸಲಾತಿ ನೀಡುವವರೆಗೂ ಬಿಡಲ್ಲ ಎಂದು. ಮೂರನೆಯದು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಪಾಲು ಅವರಿಗೆ ಸಿಗುವಂತೆ ಮಾಡೇ ಮಾಡುತ್ತೇವೆ ಎಂದು. ಇಷ್ಟೆಲ್ಲಾ ಮಾತನಾಡಿದ ಅವರ ಭಾಷಣದಲ್ಲಿ ಕರ್ನಾಟಕದ ಜಾತಿಗಣತಿ, ಒಳಮೀಸಲಾತಿ ಜಾರಿಗೆ ನಡೆಯುತ್ತಿರುವ ತಯಾರಿ ಮತ್ತು ಸಿದ್ದರಾಮಯ್ಯ ಬಗ್ಗೆ ಒಂದೇ ಒಂದು ಪದ ಇರಲಿಲ್ಲ.

ರಾಹುಲ್ ಗಾಂಧಿ ಕರ್ನಾಟಕದ ಜಾತಿಗಣತಿ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಜಾತಿಗಣತಿ ವರದಿ ಜಾರಿ ಮಾಡಲು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಹೆಸರನ್ನು ಉಲ್ಲೇಖಿಸುತ್ತಿಲ್ಲವೇ? ತಮ್ಮದೇ ಪಕ್ಷದ ಸರಕಾರವಿದ್ದೂ, ಜಾತಿಗಣತಿಯೂ ನಡೆದಿದ್ದೂ ಕರ್ನಾಟಕದಲ್ಲಿ ವರದಿಯನ್ನು ಏಕೆ ಜಾರಿ ಮಾಡುತ್ತಿಲ್ಲ ಎಂಬ ಬಿಜೆಪಿ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಮುಜುಗರ ಅನುಭವಿಸುತ್ತಿರುವ ಕಾರಣಕ್ಕಾಗಿ ರಾಹುಲ್ ಗಾಂಧಿ ಮುನಿದಿದ್ದಾರೆಯೇ? ಈ ಪ್ರಶ್ನೆಗಳಲ್ಲಿ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಡುವಿನ ವಿಶ್ವಾಸಕ್ಕೆ ಧಕ್ಕೆ ಆಗಿರಬಹುದೆಂಬ ಸುಳಿವುಗಳಿವೆ.

ಇದಲ್ಲದೆ 138 ಶಾಸಕರ ಬಲವುಳ್ಳ, ಅಪರೂಪದ 5 ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡಿರುವ ಸರಕಾರ ಸಾಗಬೇಕಿರುವ ರೀತಿ ಇದಲ್ಲ ಎಂಬ ದೂರುಗಳು ಹೈಕಮಾಂಡ್ ತಲುಪಿವೆ. ಎಂದಿನಂತೆ ದೂರಿರುವವರು ಸ್ವಪಕ್ಷೀಯರೇ. ಕೆಲ ಹಿರಿಯರು ಸರಕಾರದಲ್ಲಿ ತಮಗೆ ಕಿಮ್ಮತ್ತಿಲ್ಲ ಎಂದು ಕಿರಿಕಿರಿ ಮಾಡುತ್ತಿದ್ದಾರೆ. ಶಾಸಕರು ತಮ್ಮ ಸರಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದು ಹೇಳಿಕೊಳ್ಳುವ ಬದಲು ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ಅಳಲು ತೋಡಿಕೊಳ್ಳುತ್ತಿದ್ದಾರೆ. ಸಚಿವರು ಕೂಡ ಸಮರ್ಪಕ ಅನುದಾನ ಇಲ್ಲ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಇವರ ಆರೋಪಗಳಲ್ಲಿ ಸತ್ಯಾಂಶವಿದೆ. ಹಾಗೆಯೇ ಇವರುಗಳಿಗೆ ರಾಜ್ಯದ ಜನಸಾಮಾನ್ಯ ಅಥವಾ ಪಕ್ಷದ ಹಿತಾಸಕ್ತಿಗಳಿಗಿಂತ ‘ತಮಗೇನೂ ಸಿಗುತ್ತಿಲ್ಲ’ ಎಂಬ ಕೊರಗೇ ಜಾಸ್ತಿ ಎನ್ನುವುದು ನೂರಕ್ಕೆ ನೂರರಷ್ಟು ನಿಜ.

ಈ ಅಸಮಾಧಾನವನ್ನು ಶಮನ ಮಾಡಿ ಸರಕಾರವನ್ನು ಸರಿದಾರಿಗೆ ತರಬೇಕಾದುದು ಮುಖ್ಯಮಂತ್ರಿಯ ಜವಾಬ್ದಾರಿ. ಅದನ್ನು ಸಿದ್ದರಾಮಯ್ಯ ಸರಿಯಾಗಿ ನಿಭಾಯಿಸಿಲ್ಲ ಎನ್ನುವ ಭಾವನೆ ರಾಹುಲ್ ಗಾಂಧಿ ಅವರಲ್ಲಿರಬಹುದು. ಏಕೆಂದರೆ ಇತ್ತೀಚೆಗೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದ ಎಐಸಿಸಿ ಅಧಿವೇಶನದವರೆಗೂ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಸಂಬಂಧಕ್ಕೆ ಸಮಸ್ಯೆ ಇರಲಿಲ್ಲ. ಅಲ್ಲಿ ನಾಯಕರೊಟ್ಟಿಗೆ ಲೋಕಾಭಿರಾಮವಾಗಿ, ಅಹಿಂದ ವರ್ಗಗಳನ್ನು, ವಿಶೇಷವಾಗಿ ಹಿಂದುಳಿದವರನ್ನು ಸಂಘಟಿಸಬೇಕು ಎನ್ನುವ ವಿಚಾರ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ, ಅಹಿಂದ ಮತಗಳ ಧ್ರುವೀಕರಣವೇ ಕಾರಣ ಎಂದಿದ್ದರು. ಬೇಗ ಜಾತಿಗಣತಿ ವರದಿ ಜಾರಿ ಮಾಡಿ ಎಂದು ಸಿದ್ದರಾಮಯ್ಯ ಅವರ ಬೆನ್ನು ತಟ್ಟಿ ಕಳುಹಿಸಿದ್ದರು. ಆದರೂ ರಾಜ್ಯದ ಜಾತಿಗಣತಿ ವರದಿಗೆ ಮುಕ್ತಿ ಸಿಕ್ಕಿಲ್ಲ. ಇದು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಡುವಿನ ವಿಶ್ವಾಸಕ್ಕೆ ಕುತ್ತು ತಂದಿರಬಹುದು.

ಸರಕಾರ ಎರಡು ವರ್ಷ ಪೂರೈಸುತ್ತಿದೆ. ಇದೇ ಹಿನ್ನೆಲೆಯಲ್ಲಿ ನಾಳೆ (ಮೇ 20) ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ನಡೆಯುತ್ತಿದೆ. ಆದರೆ ಹೊಸಪೇಟೆಯ ಸಮಾವೇಶದ ಬಳಿಕವಾದರೂ ಸರಕಾರ ಹೊಸ ಹುಟ್ಟು ಪಡೆದುಕೊಳ್ಳದಿದ್ದರೆ ಕಾಂಗ್ರೆಸ್ ಎಂಬ ಹಡಗು ಮುಂದಿನ ದಿನಗಳಲ್ಲಿ ಮುಳುಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗೆಯೇ ಹೊಸ ಹುಟ್ಟಿಗೆ ಸ್ವತಃ ಸಿದ್ದರಾಮಯ್ಯ ಅವರೇ ಮುನ್ನುಡಿ ಬರೆಯದಿದ್ದರೆ ಹಡಗಿಗೆ ರಂಧ್ರ ಕೊರೆದ ರೂವಾರಿ ಎಂಬ ಅಪಖ್ಯಾತಿಯಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗುವುದೂ ಇಲ್ಲ.

ಎಂಎಲ್‌ಸಿ ಆಯ್ಕೆಗೆ ತಡ ಏಕೆ?

ರಾಜ್ಯ ಕಾಂಗ್ರೆಸ್ ಸರಕಾರ ಖಾಲಿ ಇರುವ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಈ ಕೂಡಲೇ ನಾಮ ನಿರ್ದೇಶನ ಮಾಡಬಹುದು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ತಲಾ ಒಂದೊಂದು ಸ್ಥಾನ ಹಂಚಿಕೊಂಡಿದ್ದಾರೆ. ಸಮಸ್ಯೆ ಇರುವುದು ಓರ್ವ ಸಾಮಾನ್ಯ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಮಾತ್ರ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ದಿಲ್ಲಿಗೆ ಹೋಗಿ ಹೈಕಮಾಂಡ್ ಜೊತೆ ಚರ್ಚಿಸಿದ್ದರು.

ಎಲ್ಲವೂ ಆಯಿತು, ಅಧಿಕೃತವಾಗಿ ಹೆಸರುಗಳನ್ನು ರಾಜಭವನಕ್ಕೆ ಕಳುಹಿಸಬೇಕು ಎನ್ನುವ ಹಂತದಲ್ಲಿ ತಡೆ ಹಿಡಿಯಲಾಗಿದೆ. ತಡವಾಗಲು ಜಾತಿಗಣತಿ ಮತ್ತು ಪಹಲ್ಗಾಮ್‌ನ ನರಮೇಧ ಎನ್ನುವುದು ಮೇಲುನೋಟದ ಕಾರಣಗಳು. ಆದರೆ ಕಾಂಗ್ರೆಸ್ ನಾಯಕರೊಬ್ಬರ

ಪ್ರಕಾರ ಇದು ಕೂಡ ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ನಡುವಿನ ಸಮನ್ವಯದ ಕೊರತೆಗೆ ಹಿಡಿದ ಕನ್ನಡಿ.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X