Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತೋಟಗಾರಿಕೆ ಕೃಷಿಯಲ್ಲಿ ಮಾದರಿಯಾದ...

ತೋಟಗಾರಿಕೆ ಕೃಷಿಯಲ್ಲಿ ಮಾದರಿಯಾದ ನಿವೃತ್ತ ಪ್ರೊಫೆಸರ್ ಬೋರೇಗೌಡ

ಕುಂಟನಹಳ್ಳಿ ಮಲ್ಲೇಶಕುಂಟನಹಳ್ಳಿ ಮಲ್ಲೇಶ18 Nov 2024 12:39 PM IST
share
ತೋಟಗಾರಿಕೆ ಕೃಷಿಯಲ್ಲಿ ಮಾದರಿಯಾದ ನಿವೃತ್ತ ಪ್ರೊಫೆಸರ್ ಬೋರೇಗೌಡ

ಮಂಡ್ಯ: ತೋಟಗಾರಿಕೆ ಇಲಾಖೆ ಪಿತಾಮಹ ಡಾ.ಎಂ.ಎಚ್.ಮರೀಗೌಡರ ಜತೆ ಒಡನಾಟದಿಂದ ಪ್ರಭಾವಿತರಾದ ಪ್ರೊಫೆಸರೊಬ್ಬರು, ಸೇವೆಯಿಂದ ನಿವೃತ್ತಿ ನಂತರ ಮೂರು ಎಕರೆ ಭೂಮಿ ಖರೀದಿಸಿ ತೋಟಗಾರಿಕೆ ಬೇಸಾಯ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಮದ್ದೂರು ತಾಲೂಕು ಮಾಲಗಾರನಹಳ್ಳಿಯ ನಿವೃತ್ತ ಪ್ರೊ.ಎಂ.ಸಿ.ಬೋರೇಗೌಡರು ಚಾಮನಹಳ್ಳಿ ಬಳಿ ಮಾಡಿರುವ ತೋಟ ತೆಂಗು, ಜಂಬೂ ನೇರಳೆ, ಸಪೋಟ, ಮಾವು ಮುಂತಾದ ಹತ್ತಾರು ಬಗೆಯ ಹಣ್ಣಿನ ಮರಗಳಿಂದ ಕಂಗೊಳಿಸುತ್ತಿದೆ.

ಬೆಂಗಳೂರಿನ ವಿ.ವಿ.ಪುರ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಮೂರು ವರ್ಷಗಳ ಹಿಂದೆ ನಿವೃತ್ತಿಯಾದ ಬಳಿಕ ಪ್ರೊ.ಬೋರೇಗೌಡರು ಸ್ವಗ್ರಾಮ ಮಾಲಗಾರನಹಳ್ಳಿಗೆ ಮರಳಿದರು. ತಾವು ಕಂಡಿದ್ದ ಕನಸನ್ನು ನನಸು ಮಾಡುವ ಉದ್ದೇಶದಿಂದ ಚಾಮನಹಳ್ಳಿ ಬಳಿ ಮೂರು ಎಕರೆ ಒಣಭೂಮಿಯನ್ನು ಖರೀದಿಸಿ ಕೊಳವೆ ಬಾವಿ ತೋಡಿಸಿ, 40 ವಿದ್ಯುತ್ ಕಂಬಗಳನ್ನು ಹಾಕಿಸಿ ವಿದ್ಯುತ್ ಸಂಪರ್ಕ ಪಡೆದು ಭೂಮಿಯನ್ನು ಬೇಸಾಯಕ್ಕೆ ಹದಗೊಳಿಸಿದರು. ತನ್ನ ಕನಸಿನ ವಿವಿಧ ಬಗೆಯ ತೋಟಗಾರಿಕೆ ಗಿಡಗಳನ್ನು ನಾಟಿ ಮಾಡಿಸಿದರು. ಪ್ರಸ್ತುತ ಹಲವು ಮರಗಳು ಫಲ ನೀಡುತ್ತಿದ್ದು ವಾರ್ಷಿಕ ಸುಮಾರು 2 ಲಕ್ಷ ರೂ. ಸಂಪಾದಿಸುತ್ತಿದ್ದಾರೆ. ಇನ್ನು ಮೂರು ವರ್ಷ ಕಳೆದರೆ ವರಮಾನ ಸುಮಾರು 6 ಲಕ್ಷ ರೂ.ಸಿಗಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.

ಬೋರೇಗೌಡರ ಕೃಷಿ ಪ್ರೀತಿಗೆ ಅವರ ಕುಟುಂಬ ಸಾಥ್ ನೀಡುತ್ತಿದೆ. ಪತ್ನಿ ಶಾರದಮ್ಮ, ಪುತ್ರಿ ಸೋಮಿಕಾ ಹಾಗೂ ಅಳಿಯ ವರುಣ್ ಪ್ರಭಾಕರ್ ಅವರು ಬೇಸಾಯಕ್ಕೆ ಕೈಜೋಡಿಸುತ್ತಿದ್ದಾರೆ. ಬೋರೇಗೌಡರು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಯನ್ನು ಪಡೆದುಕೊಳ್ಳುತ್ತಾ ವೈಜ್ಞಾನಿಕ ಮಾದರಿಯನ್ನು ಅನುಸರಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಅವಲಂಬಿಸದೆ ಕೊಟ್ಟಿಗೆ ಗೊಬ್ಬರ ಮತ್ತು ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಇದರಿಂದ ಬೆಳೆ ಸಮೃದ್ಧವಾಗಿದೆ.

ತೆಂಗು, ಜಂಬೂ ನೇರಳೆ, ಕಿತ್ತಳೆ, ಸಪೋಟ, ಪನ್ನೀರು, ಮಾವು, ಬೆಟ್ಟದನಲ್ಲಿಕಾಯಿ, ಪರಂಗಿ, ದಾಳಿಂಬೆ, ಕೃಷ್ಣ ಫಲ, ಅಡಿಕೆ, ಬಾಳೆ, ಮಹಾಗನಿ ಮರ, ಟೀಕ್ ವುಡ್, ಸೇಬು, ರಾಮಫಲ, ಲಕ್ಷ್ಮಣ ಫಲ, ಜಾಯಿಕಾಯಿ, ಸೀಬೆ, ನಿಂಬೆ, ನುಗ್ಗೆ, ರಕ್ತ ಚಂದನ ಮರಗಳ ಜತೆಗೆ ಅವರೇಕಾಯಿ, ತೊಗರಿ ಕಾಯಿ, ಮಲ್ಲಿಗೆ, ಗುಲಾಬಿ ಸೇರಿದಂತೆ ವಿವಿಧ ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. 20 ನಾಟಿಕೋಳಿಗಳು, 4 ಕುರಿಗಳನ್ನು ಸಾಕುತ್ತಿದ್ದಾರೆ.

ಕೃಷಿಯಿಂದ ರೈತರು ವಿಮುಖರಾದರೆ ಜಗತ್ತಿನಲ್ಲಿ ಯಾವುದೇ ಜೀವರಾಶಿ ಬದುಕುಳಿಯಲು ಸಾಧ್ಯವೇ ಇಲ್ಲ. ಹಾಗಾಗಿ ಸೇವೆಯ ನಿವೃತ್ತಿ ನಂತರ ಕೃಷಿ ಮಾಡಬೇಕೆಂಬ ಹಂಬಲ ಹೊಂದಿದ್ದೆ. ಜತೆಗೆ ತೋಟಗಾರಿಕೆ ಪಿತಾಮಹ ಎಂ.ಎಚ್.ಮರೀಗೌಡರ ಒಡನಾಟ ಇತ್ತು. ಅವರಿಂದ ಪ್ರೇರಿತನಾಗಿ ಕೃಷಿ ಕಾಯಕಕ್ಕೆ ಇಳಿದಿದ್ದೇನೆ. ಕುಟುಂಬದ ಸಹಕಾರ ಚೆನ್ನಾಗಿದೆ. ಉತ್ತಮ ಫಸಲು ಬರುತ್ತಿರುವುದು ಖುಷಿ ತಂದಿದೆ. ಉದ್ಯೋಗಕ್ಕೆ ಅಲೆದಾಡುವ ಬದಲು ಗ್ರಾಮೀಣ ಯುವಜನರು ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಕೊಂಡರೆ ಉತ್ತಮ ಜೀವನ ಮಾಡಬಹುದು.

-ಪ್ರೊ.ಎಂ.ಸಿ.ಬೋರೇಗೌಡ, ಯಶಸ್ವಿ ಕೃಷಿಕರು.

ಸೇವೆಯಿಂದ ನಿವೃತ್ತಿಯಾದ ಬಹುತೇಕರು ವಿಶ್ರಾಂತಿ ಜೀವನ ಸಾಗಿಸುತ್ತಾರೆ. ಆದರೆ, ಪ್ರೊ.ಬೋರೇಗೌಡರು ವಿಶ್ರಾಂತಿ ಜೀವನ ನಡೆಸದೆ ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂದು ಪಣತೊಟ್ಟು ಕಷ್ಟಪಟ್ಟು ಸಮಗ್ರ ಕೃಷಿ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇವರಿಗೆ ತೋಟಗಾರಿಕೆ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ.

-ಕೆ.ಎಂ.ರೇಖಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ, ಮದ್ದೂರು

share
ಕುಂಟನಹಳ್ಳಿ ಮಲ್ಲೇಶ
ಕುಂಟನಹಳ್ಳಿ ಮಲ್ಲೇಶ
Next Story
X