Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹನಿ ನೀರೂ ಪೋಲಾಗದಿರಲಿ

ಹನಿ ನೀರೂ ಪೋಲಾಗದಿರಲಿ

ಇಂದು ವಿಶ್ವ ಜಲ ದಿನ

ಡಾ. ಕರವೀರಪ್ರಭು ಕ್ಯಾಲಕೊಂಡಡಾ. ಕರವೀರಪ್ರಭು ಕ್ಯಾಲಕೊಂಡ22 March 2024 10:20 AM IST
share
ಹನಿ ನೀರೂ ಪೋಲಾಗದಿರಲಿ
ರಿಯೊ ಡಿ ಜನೈರೊದಲ್ಲಿ 1992ರ ವಿಶ್ವ ಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದ ಕಾರ್ಯಸೂಚಿ 21ರಲ್ಲಿ ಜಲ ದಿನವನ್ನು ಮೊದಲು ಔಪಚಾರಿಕವಾಗಿ ಪ್ರಸ್ತಾಪಿಸಲಾಯಿತು. ಡಿಸೆಂಬರ್ 1992 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ A/RES/47/193 ನಿರ್ಣಯವನ್ನು ಅಂಗೀಕರಿಸಿತು. ಅದರ ಮೂಲಕ ಪ್ರತೀ ವರ್ಷ ಮಾರ್ಚ್ 22ನ್ನು ‘ವಿಶ್ವ ಜಲದಿನ’ವೆಂದು ಘೋಷಿಸಲಾಯಿತು. 1993ರಲ್ಲಿ ಮೊದಲ ‘ವಿಶ್ವ ಜಲ ದಿನ’ವನ್ನು ಆಚರಿಸಲಾಯಿತು. ಹನಿ ನೀರನ್ನೂ ಪೋಲು ಮಾಡದೆ ಸಂರಕ್ಷಿಸುವುದು, ಮಿತವಾಗಿ ಬಳಸುವುದು ಮತ್ತು ನೀರಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತೀ ವರ್ಷ ಮಾರ್ಚ್ 22ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ.

ನೀರಿಲ್ಲದೆ ಪ್ರಕೃತಿಯಿಲ್ಲ, ಜಗತ್ತಿಲ್ಲ, ಜೀವವಿಲ್ಲ ಎಂಬ ಪುರಾತನ ನಾಣ್ಣುಡಿ ಈಗಲೂ ಅರ್ಥಪೂರ್ಣ. ಸೃಷ್ಟಿಯ ಮೂಲ ಪಂಚಭೂತಗಳು: ಆಕಾಶ, ಜಲ, ಭೂಮಿ, ಅಗ್ನಿ ಮತ್ತು ವಾಯು. ಪಂಚಭೂತಗಳಿಲ್ಲದೆ ಯಾವುದೇ ಜೀವಿ ಜೀವಿಸಲು ಸಾಧ್ಯವೇ ಇಲ್ಲ. ಇವುಗಳಲ್ಲಿ ನೀರು ಕೂಡ ಒಂದು. ನೀರು ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು ಪ್ರತೀ ಜೀವ ಸಂಕುಲಕ್ಕೂ ಸಂಜೀವಿನಿ. ನೀರಿನ ಮೂಲಗಳಿಲ್ಲದಿದ್ದರೆ ನಾಗರಿಕತೆಗಳೇ ಇಲ್ಲ. ಈಜಿಪ್ಟ್ ಸಿಂಧೂ, ಹರಪ್ಪ, ಮೊಹೆಂಜೊದಾರೊನಂತಹ ನಾಗರಿಕತೆಗಳು ಹುಟ್ಟಿದ್ದು ನದಿಯ ಪಾತ್ರಗಳಲ್ಲೇ.

ಭೂಮಿಯ ಮುಕ್ಕಾಲು ಭಾಗವನ್ನು ನೀರು ಆಕ್ರಮಿಸಿದೆ. ಮನುಷ್ಯನ ದೇಹವು ಕೂಡಾ ಪ್ರತಿಶತ 80ರಷ್ಟು ನೀರಿನಿಂದ ತುಂಬಿದೆ. ಹೀಗಾಗಿ ನೀರು ಮನುಷ್ಯನ ಅವಿಭಾಜ್ಯ ಅಂಗ. ಜೀವಕ್ಕೆ ಅವಶ್ಯವಿರುವ ನೀರು ಅನೇಕ ರೋಗಗಳಿಗೆ ಮೂಲವೂ ಹೌದು. ಶುದ್ಧವಾದ ಕುಡಿಯುವ ನೀರನ್ನು ಪೂರೈಸುವುದರಿಂದ ಮನುಷ್ಯರಿಗೆ ಬರುವ ಅರ್ಧದಷ್ಟು ಸಾಂಕ್ರಾಮಿಕ ರೋಗಗಳನ್ನು ತಡೆಯಬಹುದು ಎಂದು ವೈದ್ಯ ವಿಜ್ಞಾನಿಗಳು ಹೇಳಿರುವ ಮಾತು ಅಕ್ಷರಶಃ ಸತ್ಯ.

ಇಂಥ ಅಮೃತವು ನೈರ್ಮಲ್ಯದ ನಿರ್ಲಕ್ಷ್ಯದಿಂದ ವಿರೂಪ ತಾಳುವುದು. ರೋಗಾಣುಗಳ ನೆಲೆಯಾಗುವುದು. ಅನೇಕ ಸಾಂಕ್ರಾಮಿಕ ರೋಗಗಳು ಹರಡಲು ಸಹಕಾರ ನೀಡುವುದು. ನಿಸರ್ಗದತ್ತವಾಗಿ ದೊರಕುವ ಜಲದ ಪ್ರಾಮುಖ್ಯತೆ, ಮಹತ್ವ, ಅಗತ್ಯತೆಯನ್ನು ಅರಿಯದಿದ್ದರೆ ಭವಿಷ್ಯದಲ್ಲಿ ಇಡೀ ಬದುಕೇ ನಾಶವಾಗುವ ಸ್ಥಿತಿ ಎದುರಾಗಬಹುದು ! ಜಗತ್ಯಿನಾದ್ಯಂತ ನೀರಿನ ಸಮಸ್ಯೆ ಉದ್ಭವವಾಗಲು ಮುಖ್ಯ ಕಾರಣ ಮನುಷ್ಯನ ಅತಿಯಾದ ದುರಾಸೆ, ತೀವ್ರಗತಿಯ ಅರಣ್ಯ ನಾಶ, ಮಿತಿ ಮೀರಿದ ಮಾಲಿನ್ಯ, ಪ್ರಾಕೃತಿಕ ಸಂಪನ್ಮೂಲಗಳ ಅವ್ಯಾಹತ ಬಳಕೆ ಮತ್ತು ಪರಿಸರದ ಮೇಲೆ ತೋರುತ್ತಿರುವ ಕ್ರೌರ್ಯ. ಇದರಿಂದ ಕ್ಷಣ ಕ್ಷಣಕ್ಕೂ ಹಸಿರು ಮನೆಯ ಮೇಲೆ ಕೆಟ್ಟ ಪರಿಣಾಮ ಹೆಚ್ಚಾಗುತ್ತದೆ.

ನೀರಿನ ಮೌಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಸಾರ್ವತ್ರಿಕ ದ್ರಾವಕವು ನಮ್ಮ ಮನೆ, ಸಂಸ್ಕೃತಿ, ಆರೋಗ್ಯ, ಶಿಕ್ಷಣ, ಅರ್ಥಶಾಸ್ತ್ರ ಮತ್ತು ನಮ್ಮ ನೈಸರ್ಗಿಕ ಪರಿಸರದ ಸಮಗ್ರತೆಗೆ ಅಗಾಧ ಮತ್ತು ಸಂಕೀರ್ಣ ಮೌಲ್ಯವನ್ನು ಹೊಂದಿದೆ. ಈ ಯಾವುದೇ ಮೌಲ್ಯಗಳನ್ನು ನಾವು ಕಡೆಗಣಿಸಿದರೆ ಈ ಸೀಮಿತ, ಭರಿಸಲಾಗದ ಸಂಪನ್ಮೂಲವನ್ನು ನಾವು ತಪ್ಪಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಾವು ಈ ಸಂಪನ್ಮೂಲವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.

ಶುದ್ಧ ನೀರೆಷ್ಟು ಮುಖ್ಯ

ನಮಗೆ ಬಾಯಾರಿಕೆಯಾದಾಗ ಸಿಕ್ಕಿದ ಎಲ್ಲಾ ನೀರು ಕುಡಿಯಲಾಗದು. ಕುಡಿಯಲು ಯೋಗ್ಯವಾದ ನೀರು ರೋಗಾಣುಗಳಿಂದ ಮುಕ್ತವಾಗಿರಬೇಕು. ಬಣ್ಣ, ರುಚಿ, ವಾಸನೆ ಹಿತಕರವಾಗಿರಬೇಕು. ಹಾನಿಕಾರಕ ರಾಸಾಯನಿಕ, ವಿಕಿರಣ ಬೆರೆತಿರಬಾರದು ಮತ್ತು ಸುರಕ್ಷಿತವಾಗಿ ರಬೇಕು. ನೀರನ್ನು ಬಹಳ ವರ್ಷಗಳ ಕಾಲ ಉಪಯೋಗಿಸಿದರೂ ಯಾವುದೇ ರೀತಿಯ ಅಪಾಯವನ್ನುಂಟು ಮಾಡಬಾರದು.

ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ.18ರಷ್ಟು ಮಂದಿ ಭಾರತದಲ್ಲಿದ್ದಾರೆ. ಆದರೆ ಜಗತ್ತಿನಲ್ಲಿ ಒಟ್ಟು ಲಭ್ಯವಿರುವ ಜಲಸಂಪನ್ಮೂಲಗಳಲ್ಲಿ ಭಾರತ ಹೊಂದಿರುವ ಪಾಲು ಶೇ.4. ಇದನ್ನು ನಾವು ಅರಿತುಕೊಳ್ಳಬೇಕು. ಹೀಗಾಗಿ ನೀರಿನ ಪ್ರತೀ ಹನಿಯೂ ಎಷ್ಟು ಮುಖ್ಯ ಎಂಬುದರ ಅರಿವು ಆಗಬೇಕು. ಭಾರತದ ಬಹು ಭಾಗಗಳಲ್ಲಿ 2040ರೊಳಗೆ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಲಿದೆ ಎಂದು ಇತ್ತೀಚಿನ ಅಧ್ಯಯನ ಹೇಳಿದೆ.

ಶುದ್ಧ ಕುಡಿಯುವ ನೀರು ಎಲ್ಲಾ ಜೀವಿಗಳ ಹಕ್ಕು.... ಅಂದರೆ ಮಾತು ಬಾರದ ಮೂಕ ಪಶು, ಪಕ್ಷಿ, ಪ್ರಾಣಿಗಳಿಂದ ಹಿಡಿದು ಗಿಡ, ಮರಗಳವರೆಗೆ ಎಲ್ಲವುಗಳಿಗೂ ಸಮಾನವಾದ ಹಕ್ಕು ಈ ಭೂಮಿಯ ಜಲ ಮೂಲಗಳ ಮೇಲಿದೆ! ಹಾಗಾಗಿ ನಾವು ಮನುಷ್ಯರು ಮಾತ್ರವಲ್ಲ, ಈ ಭೂಮಿಯ ಮೇಲಿನ ಜೀವರಾಶಿಯೂ ಶುದ್ಧ ಕುಡಿಯುವ ನೀರಿನ ಮೇಲೆ ಹಕ್ಕು ಹೊಂದಿದೆ !!

ನೀರಿಲ್ಲದ ಪರಿಸ್ಥಿತಿಗೆ ಕಾರಣ ಯಾರು?

ಇಂದು ನಾವು ದೇಶದ ಪವಿತ್ರವೆನ್ನುವ ನದಿಗಳಲ್ಲಿ ಸ್ನಾನ ಮಾಡಲೂ ಹೆದರುವಂತಾಗಿದೆ. ಏಕೆಂದರೆ ಅವುಗಳ ನೀರು ಅಷ್ಟೊಂದು ಕಲುಷಿತಗೊಂಡಿದೆ. ನಮಗೆ ಬೇಡದ ಕೊಳೆ ಕಲ್ಮಶಗಳೆಲ್ಲದರ ಜೊತೆಗೆ ಸತ್ತವರ ಶವಗಳು ಕೂಡಾ ನದಿಗಳ ಒಡಲು ಸೇರುತ್ತಿವೆ. ಜಲಮಾಲಿನ್ಯ ಕಡಿಮೆ ಮಾಡಲು ನಗರದ ಒಳಚರಂಡಿಗಳ ಹೊಲಸು ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗೆ ಬಿಡುವುದರ ಬದಲಿಗೆ ಅದನ್ನು ಸಂಸ್ಕರಿಸಿ ಹಲವಾರು ಕೆಲಸಗಳಿಗೆ ಬಳಸಬಹುದೆಂಬ ತಂತ್ರಜ್ಞಾನವನ್ನು ನಾವಿನ್ನೂ ಅರಿತುಕೊಂಡಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ಮಳೆ ಇಲ್ಲದ ರೈತರು ಯಾವಾಗಲೂ ಆಕಾಶದತ್ತಲೇ ಮುಖಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಗಳ ನಲ್ಲಿಗಳಲ್ಲಿ ನೀರು ಮಾಯವಾಗುತ್ತಿದೆ. ಬೋರ್‌ವೆಲ್‌ಗಳು ಬರಿದಾಗುತ್ತಿವೆ. ಮಳೆಗಾಲದಲ್ಲೂ ಸೂರ್ಯ ಪ್ರಖರವಾಗುತ್ತಿದ್ದಾನೆ. ಆಕಾಶ ನೀಲಿಯಾಗಿಯೇ ಇದೆ. ದೇಶದ ಹಲವು ನಗರಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ಅಪಾರವಾದ ಅರಣ್ಯ ನಾಶ, ಕುಸಿಯುತ್ತಿರುವ ಅಂತರ್ಜಲ. 2,000 ಅಡಿ ಕೊಳವೆಬಾವಿ ಕೊರೆದರೂ ಒಂದು ಹನಿ ನೀರು ಸಿಗದೆ ಇರುವ ಸನ್ನಿವೇಶ ಅನೇಕ ಕಡೆ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಭೂಮಿಗೆ ನೀರು ಮರು ಪೂರಣವಾಗುತ್ತಿಲ್ಲ ಎನ್ನುವುದು ಸ್ಪಷ್ಟ.

ನೀರು ಸಂರಕ್ಷಿಸೋಣ

ಸುಮಾರು 300 ಕೋಟಿ ವರ್ಷಗಳ ಹಿಂದೆ ಭೂಮಿಯ ಉಗಮದ ನಂತರ ನೀರು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದ್ದು ಜೀವರಾಶಿಗಳ ಬದುಕಿಗೆ ಆಧಾರವಾಗಿದೆ. ಭೂಮಿಯ ನೀರಿನ ಲಭ್ಯತೆಯ ಪ್ರಮಾಣವು ಡೈನೋಸಾರ್ ಗಳ ಯುಗದಿಂದ ಈ ವರೆಗೆ ಸ್ಥಿರವಾಗಿಯೇ ಇದೆ. ಆದರೆ 30 ವರ್ಷಗಳ ಹಿಂದೆ ನಾವು ಬಳಸುತ್ತಿದ್ದ ನೀರಿನ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದ್ದು ಇನ್ನೂ ಹೆಚ್ಚಾಗಲಿದೆ. ಈ ಬಳಕೆ ಇದೇ ರೀತಿ ಮುಂದುವರಿದರೆ ನದಿಗಳ ನೀರಿನ ಪ್ರಮಾಣ ಕಡಿಮೆಗೊಂಡು, ಅಂತರ್ಜಲ ಕುಸಿದು ಜೀವರಾಶಿಗಳು ನಾಶವಾಗಲೂ ಬಹುದು. ಆದ್ದರಿಂದ ನೀರನ್ನು ಮಿತವಾಗಿ ಬಳಸಲು ನಾವು ಕಲಿಯಬೇಕಾಗಿದೆ. ಇದು ಇಂದಿನ ಅವಶ್ಯಕತೆ ಕೂಡ.

ಅದಕ್ಕಾಗಿ...

* ನೀರಿನ ಸೋರಿಕೆಯನ್ನು ನಿಯಂತ್ರಿಸಲು ಸಹಕರಿಸಿ ನೀರನ್ನು ಉಳಿಸಬೇಕು

* ತೆರೆದಿಟ್ಟ ನಲ್ಲಿಯು ನಿಮಿಷ ಒಂದಕ್ಕೆ 15ರಿಂದ 20 ಲೀಟರ್ ವರೆಗೆ ನೀರನ್ನು ಹೊರ ಚೆಲ್ಲುವುದರಿಂದ ನಲ್ಲಿ ಸರಿ ಮಾಡಬೇಕು.

*ಬೈಕ್, ಕಾರು ಹಾಗೂ ಇತರ ವಾಹನಗಳನ್ನು ತೊಳೆಯಲು ಮಿತಿ ಇಲ್ಲದೆ ನೀರು ಉಪಯೋಗಿಸುವವರು ಬಕೆಟ್ ಬಳಸಿದಲ್ಲಿ ನೀರನ್ನು ಉಳಿಸಬಹುದು.

* ಬಟ್ಟೆ ಒಗೆದ ನೀರನ್ನು ಚೆಲ್ಲದೆ ಹೂವಿನ ಗಿಡಕ್ಕೆ ಅಥವಾ ಅಂಗಳ ತೊಳೆಯಲು ಉಪಯೋಗಿಸುವುದು

* ಕಡ್ಡಾಯವಾಗಿ ಪ್ರತೀ ಕಟ್ಟಡ, ಮನೆಗಳಲ್ಲಿ ಮಳೆಕೊಯ್ಲು ಅಳವಡಿಸುವುದು.

* ಸಭೆ, ಸಮಾರಂಭಗಳಲ್ಲಿ, ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ನೀರು ಪೋಲಾಗದಂತೆ ಜಾಗ್ರತೆ ವಹಿಸುವುದು.

* ಕೆರೆ, ನದಿಗಳ ಮೂಲ ಮಲಿನವಾಗದಂತೆ ಎಚ್ಚರವಹಿಸುವುದು.

* ಮಕ್ಕಳಿಗೆ ಬಾಲ್ಯದಲ್ಲಿಯೇ, ಶಾಲಾ ಪಠ್ಯ ಪುಸ್ತಕಗಳಲ್ಲಿ ನೀರಿನ ಮಿತ ಬಳಕೆ ಬಗ್ಗೆ ತಿಳಿಸುವುದು.

* ವ್ಯರ್ಥವಾಗುವ, ಹರಿದುಹೋಗುವ ನೀರನ್ನು ಮರು ಸಂಸ್ಕರಿಸಿ ಇತರ ಉಪಯೋಗಕ್ಕೆ ಬಳಸುವುದು.

* ಪ್ರಕೃತಿ, ಪರಿಸರದ ರಕ್ಷಣೆಗೆ ಒತ್ತು ನೀಡುವುದು. ನೀರು ಪೋಲು ಮಾಡುವುದು ಸಾಮಾಜಿಕ ಅಪರಾಧವಾಗಿದ್ದು ಈ ಬಗ್ಗೆ ಜಾಗೃತಿ ಮೂಡಿಸುವುದು.

ಅಂತರ್ಜಲ ರಕ್ಷಣೆಗೆ ಭೂಜಲ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಅನುಷ್ಠಾನಗೊಳಿಸುವುದು.

ಮುಗಿಸುವ ಮುನ್ನ:

ನಾವು ಪೋಲು ಮಾಡದೆ ಉಳಿಸುವ ಒಂದೊಂದು ಹನಿ ನೀರಿನಿಂದ ಒಂದು ಜೀವ ಉಳಿಸಬಹುದು. ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಸಕಲ ಜೀವಿಗಳ ಉಳಿವಿಗೆ ಒಂದೊಂದು ಹನಿ ಜೀವಜಲವೂ ಅತ್ಯಮೂಲ್ಯ. ಯಾರೂ ತಮ್ಮ ಹಕ್ಕಿನ ನೀರನ್ನು ಪಡೆಯುವಲ್ಲಿ ವಂಚಿತರಾಗದಿರುವಂತೆ ನೋಡಿಕೊಳ್ಳೋಣ! ಎಲ್ಲ ಜಲ ಮೂಲಗಳನ್ನು ರಕ್ಷಿಸೋಣ ಇದು ಇಂದಿನ ಅವಶ್ಯಕತೆಯೂ ಹೌದು.

share
ಡಾ. ಕರವೀರಪ್ರಭು ಕ್ಯಾಲಕೊಂಡ
ಡಾ. ಕರವೀರಪ್ರಭು ಕ್ಯಾಲಕೊಂಡ
Next Story
X