Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಶ್ವವಿದ್ಯಾನಿಲಯಗಳಲ್ಲಿ ಹಣವಿಲ್ಲ, ಆದರೂ...

ವಿಶ್ವವಿದ್ಯಾನಿಲಯಗಳಲ್ಲಿ ಹಣವಿಲ್ಲ, ಆದರೂ ಕುಲಪತಿಗಳ ಹುದ್ದೆಗೆ ಪೈಪೋಟಿ ನಿಂತಿಲ್ಲ!

ಡಾ. ಡಿ.ಸಿ. ನಂಜುಂಡಡಾ. ಡಿ.ಸಿ. ನಂಜುಂಡ12 July 2025 12:08 PM IST
share
ವಿಶ್ವವಿದ್ಯಾನಿಲಯಗಳಲ್ಲಿ ಹಣವಿಲ್ಲ, ಆದರೂ ಕುಲಪತಿಗಳ ಹುದ್ದೆಗೆ ಪೈಪೋಟಿ ನಿಂತಿಲ್ಲ!
ಇಂದಿನ ಸ್ಥಿತಿಯಲ್ಲಿ ಕೆಲವು ರಾಜ್ಯಗಳಲ್ಲಿ ಕುಲಪತಿಗಳ ಆಯ್ಕೆಗೆ ರಾಜಕೀಯ ಮತ್ತು ಹಣದ ವಹಿವಾಟು ಹೆಚ್ಚಾಗಿ ಕಂಡುಬರುತ್ತಿವೆ. ಕೆಲವೊಮ್ಮೆ ವಿವಿಗಳನ್ನು ಆಧರಿಸಿ ಕುಲಪತಿ ಹುದ್ದೆಗೆ ದಕ್ಷಿಣೆ ನಿಗದಿಯಾಗುತ್ತದೆ ಎನ್ನುವ ಆರೋಪವಿದೆ. ಇಲ್ಲಿ ಶೈಕ್ಷಣಿಕ ಅರ್ಹತೆಗಿಂತ ರಾಜಕೀಯ ನಿಕಟತೆ, ಜಾತಿ ರಾಜಕಾರಣ, ನಂಬಿಕೆ ಜಾಲಗಳು ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇದರಿಂದಾಗಿ ಶುದ್ಧ ಶೈಕ್ಷಣಿಕ ಮನೋಭಾವ ಹೊಂದಿದ ನಿಷ್ಠಾವಂತರಿಗಿಂತ ಅಧಿಕಾರಪಿಪಾಸು ವ್ಯಕ್ತಿಗಳಿಗೆ ಆದ್ಯತೆ ದೊರೆಯುತ್ತಿರುವುದು ದುಃಖದ ಸಂಗತಿ.

ಇತ್ತೀಚಿನ ದಿನಗಳಲ್ಲಿ ಭಾರತೀಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಒಂದು ವಿಚಿತ್ರ ಸ್ಥಿತಿ ಕಂಡುಬರುತ್ತಿದೆ. ಭಾರತದಲ್ಲಿ 1,500ಕ್ಕಿಂತ ಹೆಚ್ಚು ವಿಶ್ವವಿದ್ಯಾನಿಲಯಗಳು ಮತ್ತು 55,000ಕ್ಕೂ ಹೆಚ್ಚು ಪದವಿ ಮತ್ತು ಇತರ ಕಾಲೇಜುಗಳು ಇದ್ದರೂ, ಬಹುಪಾಲು ಹೆಚ್ಚು ಬಡವಾಗಿವೆ. ಬಹುತೇಕ ವಿಶ್ವವಿದ್ಯಾನಿಲಯಗಳು ಆರ್ಥಿಕ ಕೊರತೆಯಿಂದ ತೀವ್ರವಾಗಿ ಬಳಲುತ್ತಿವೆ. ನೂತನ ಪಠ್ಯಕ್ರಮ ರೂಪಿಸುವುದು, ಸಂಶೋಧನಾ ಕಾರ್ಯಗಳಿಗೆ ಅನುದಾನ ಒದಗಿಸುವುದು, ಪ್ರಯೋಗಾಲಯದ ಅಭಿವೃದ್ಧಿ, ಗ್ರಂಥಾಲಯಗಳು, ಹಾಸ್ಟೆಲ್ ಮತ್ತು ಶೌಚಾಲಯ ಸೌಲಭ್ಯಗಳು ಮುಂತಾದ ಮೂಲಭೂತ ಶೈಕ್ಷಣಿಕ ಕಾರ್ಯಗಳು ಎಲ್ಲವೂ ಹಣದ ಕೊರತೆಯಿಂದ ಸ್ಥಗಿತಗೊಂಡಿವೆ. ಆದರೆ ಇದೇ ಸಂದರ್ಭದಲ್ಲಿ, ವಿಶ್ವವಿದ್ಯಾನಿಲಯದ ಕುಲಪತಿಗಳ ಹುದ್ದೆಗೆ ಮಾತ್ರ ತೀವ್ರ ಸ್ಪರ್ಧೆ ನಡೆಯುತ್ತಿರುವುದು ಅತ್ಯಂತ ಕುತೂಹಲ ಕೆರಳಿಸುವ ಮತ್ತು ಪ್ರಶ್ನೆ ಎಬ್ಬಿಸುವ ಸಂಗತಿಯಾಗಿದೆ. ಕೆಲವು ವಿವಿಗಳಲ್ಲಿ ಹಾಲಿ ಕುಲಪತಿಯ ಅಧಿಕಾರಾವಧಿ ಎರಡು ವರ್ಷ ಇದ್ದರೂ ಈಗಿನಿಂದಲೇ ಇಂತಿಷ್ಟು ಹಣ ನೀಡಿ ಕಾದಿರಿಸುವ ಪದ್ಧತಿ ಶಿಕ್ಷಣ ವಲಯದಲ್ಲಿ ಕೇಳಿಬರುತ್ತಿದೆ. ಕುಲಪತಿಗಳು ಶುದ್ಧಹಸ್ತರಾಗಿರದಿದ್ದರೆ ವಿವಿಗಳನ್ನು ಕಾಪಾಡುವುದು ಯಾರು?

ಸಾಮಾನ್ಯವಾಗಿ ವಿಶ್ವವಿದ್ಯಾನಿಲಯಗಳು ಸರಕಾರದಿಂದ ಅಥವಾ ಕೆಲವು ಸ್ವಾಯತ್ತ ಸಂಸ್ಥೆಗಳಿಂದ ನಿರ್ದಿಷ್ಟ ಅನುದಾನ ಪಡೆಯುತ್ತವೆ. ಆದರೆ ಈ ಅನುದಾನವು ಬಹುತೇಕ ವಿವಿಗಳ ನೇರ ಮತ್ತು ಪರೋಕ್ಷ ವೆಚ್ಚಗಳನ್ನು ಪೂರೈಸಲು ಅಸಾಧ್ಯವಾಗುತ್ತದೆ. ಹೆಚ್ಚಿನ ವಿವಿಗಳಲ್ಲಿ ಅನುದಾನ ಕಡಿಮೆಯಾಗಿ, ಸಂಶೋಧನೆ, ಅಂತರ್‌ರಾಷ್ಟ್ರೀಯ ಸಹಕಾರ, ಡಿಜಿಟಲ್ ಶಿಕ್ಷಣ ಮಾದರಿಗಳ ಅನುಷ್ಠಾನ ನಿಂತು ಹೋಗಿವೆ. ಹಾಸ್ಟೆಲ್‌ಗಳಲ್ಲಿ ಉತ್ತಮ ಆಹಾರವಿಲ್ಲ, ಶೌಚಾಲಯಗಳಿಲ್ಲದ ಕಾಲೇಜುಗಳು ಮತ್ತು ಸಂಶೋಧನೆಗೆ ಹಣವಿಲ್ಲದ ಬೋಧಕರು ಸಾಮಾನ್ಯ ದೃಶ್ಯವಾಗಿವೆ. ಈ ರೀತಿಯ ಆರ್ಥಿಕವಾಗಿ ಹಿನ್ನಡೆಯಾದ ಶೈಕ್ಷಣಿಕ ಸಂಸ್ಥೆಗಳ ಆಡಳಿತದ ಹೊಣೆ ಹೊತ್ತುಕೊಳ್ಳುವ ಹುದ್ದೆಯಾದ ಕುಲಪತಿಗಳ ಸ್ಥಾನಕ್ಕೆ ಮಾತ್ರ ಭಾರೀ ಆಸಕ್ತಿ ಯಾಕೆ ಎಂಬ ಪ್ರಶ್ನೆ ಉದಯಿಸುತ್ತದೆ. ಕಾರಣ ಸ್ಪಷ್ಟವಾಗಿದೆ-ಈ ಹುದ್ದೆಯು ಕೇವಲ ಶೈಕ್ಷಣಿಕ ನಾಯಕರ ಸ್ಥಾನವಲ್ಲ, ಇದು ರಾಜಕೀಯ ಪ್ರಭಾವ, ನಿರ್ವಹಣಾತ್ಮಕ ಅಧಿಕಾರ, ಸಾಮಾಜಿಕ ಗಂಭೀರತೆ ಮತ್ತು ಅಡಗಿದ ಹಿತಾಸಕ್ತಿಗಳ ಜಾಲದಿಂದ ಕೂಡಿದೆ. ಅಲ್ಲದೆ ಕುಲಸಚಿವರ ಹುದ್ದೆಗೂ ಪೈಪೋಟಿ ಈಗ ನಡೆಯುತ್ತಿದೆ. ಕೆಲವು ವಿವಿಗಳಿಗೆ ಕೆಎಎಸ್ ದರ್ಜೆಯ ಅಧಿಕಾರಿಗಳ ನೇಮಕ ಉತ್ತಮ ಕ್ರಮವಾಗಿದೆ.

ಇಂದಿನ ಸ್ಥಿತಿಯಲ್ಲಿ ಕೆಲವು ರಾಜ್ಯಗಳಲ್ಲಿ ಕುಲಪತಿಗಳ ಆಯ್ಕೆಗೆ ರಾಜಕೀಯ ಮತ್ತು ಹಣದ ವಹಿವಾಟು ಹೆಚ್ಚಾಗಿ ಕಂಡುಬರುತ್ತಿವೆ. ಕೆಲವೊಮ್ಮೆ ವಿವಿಗಳನ್ನು ಆಧರಿಸಿ ಕುಲಪತಿ ಹುದ್ದೆಗೆ ದಕ್ಷಿಣೆ ನಿಗದಿಯಾಗುತ್ತದೆ ಎನ್ನುವ ಆರೋಪವಿದೆ. ಇಲ್ಲಿ ಶೈಕ್ಷಣಿಕ ಅರ್ಹತೆಗಿಂತ ರಾಜಕೀಯ ನಿಕಟತೆ, ಜಾತಿ ರಾಜಕಾರಣ, ನಂಬಿಕೆ ಜಾಲಗಳು ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇದರಿಂದಾಗಿ ಶುದ್ಧ ಶೈಕ್ಷಣಿಕ ಮನೋಭಾವ ಹೊಂದಿದ ನಿಷ್ಠಾವಂತರಿಗಿಂತ ಅಧಿಕಾರಪಿಪಾಸು ವ್ಯಕ್ತಿಗಳಿಗೆ ಆದ್ಯತೆ ದೊರೆಯುತ್ತಿರುವುದು ದುಃಖದ ಸಂಗತಿ. ಉತ್ತಮ ಮನೆ, ವಾಹನ, ಅಧಿಕೃತ ಸಿಬ್ಬಂದಿ, ರಾಷ್ಟ್ರೀಯ ಸಮಿತಿಗಳ ಸದಸ್ಯತ್ವ ಮತ್ತು ನಿರ್ಣಯ ತೆಗೆದುಕೊಳ್ಳುವ ಶಕ್ತಿ ಹುದ್ದೆಯೊಂದಿಗೆ ಬರುತ್ತದೆ. ಕುಲಪತಿಗಳು ನೇಮಕಾತಿ, ಅನುದಾನ ಹಂಚಿಕೆ, ಯೋಜನೆಗಳ ಅನುಮೋದನೆ, ಟೆಂಡರ್ ಹಂಚಿಕೆ ಮುಂತಾದ ನಿರ್ಧಾರಗಳಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತಾರೆ. ಇವುಗಳ ಪರಿಣಾಮವಾಗಿ ಪ್ರಭಾವ, ಸಂಪತ್ತು ಮತ್ತು ಜವಾಬ್ದಾರಿಯೇ ಇಲ್ಲದ ಅಧಿಕಾರವನ್ನೇ ಮುಂದಿಟ್ಟುಕೊಂಡು ಕೆಲವರು ಈ ಸ್ಥಾನಕ್ಕೆ ಪೈಪೋಟಿ ನಡೆಸುತ್ತಾರೆ.

ಇದೊಂದು ಆಂತರಿಕ ವಿರೋಧಾಭಾಸ ಆಗಿದ್ದು, ಭಾರತೀಯ ಉನ್ನತ ಶಿಕ್ಷಣದ ನಿಜವಾದ ಚಿಂತನಶೀಲತೆಯ ವಿರುದ್ಧ ಸವಾಲು ಎನ್ನಬಹುದು. ಹಣವಿಲ್ಲದ ಶಿಕ್ಷಣ ಸಂಸ್ಥೆಗಳ ಆಡಳಿತ ಹುದ್ದೆ ಮೇಲೆ ಹಿಡಿತ ಸಾಧಿಸಲು ಕೆಲವರು ವೈಜ್ಞಾನಿಕ ಗುರಿಗಳಿಗಾಗಿ ಅಲ್ಲ, ತಮ್ಮ ಪ್ರಭಾವವನ್ನೇ ವಿಸ್ತರಿಸಲು ಹೊರಟಿರುವುದು ಸ್ಪಷ್ಟವಾಗುತ್ತದೆ. ಈ ಸ್ಥಿತಿಗೆ ಶುದ್ಧ ಶೈಕ್ಷಣಿಕ ನೀತಿ ಮತ್ತು ಪಾರದರ್ಶಕ ನಿರ್ವಹಣಾ ಕ್ರಮಗಳು ಇಲ್ಲದಿರುವುದೇ ಕಾರಣ. ವಿಶ್ವವಿದ್ಯಾನಿಲಯಗಳಲ್ಲಿ ಲೆಕ್ಕಪತ್ರದ ಪಾರದರ್ಶಕತೆ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಮೌಲ್ಯಾಧಾರಿತ ನೇಮಕಾತಿ ಪ್ರಕ್ರಿಯೆ ಮೂಲೆ ಗುಂಪಾಗಿದೆ. ಕುಲಪತಿಗಳ/ಕುಲಸಚಿವರ ಆಯ್ಕೆ ಪಾರದರ್ಶಕ, ಅರ್ಹತೆ ಆಧಾರಿತವಾಗಿಲ್ಲ. ಇಲ್ಲಿ ಜಾತಿಯದೇ ಮೇಲಾಟ. ಪಾರದರ್ಶಕ ಸಮಿತಿಗಳು, ಸಾರ್ವಜನಿಕ ಚರ್ಚೆಗಳು ಮತ್ತು ಶೈಕ್ಷಣಿಕ ಸಾಧನೆ ಆಧಾರಿತ ಶಿಫಾರಸು ಪ್ರಕ್ರಿಯೆಗಳನ್ನು ವ್ಯವಸ್ಥೆ ರೂಪಿಸಿಲ್ಲ. ಇದಲ್ಲದೆ, ಉನ್ನತ ಶಿಕ್ಷಣಕ್ಕೆ ಸರಕಾರಗಳು ಸಾಕಷ್ಟು ಅನುದಾನವನ್ನು ಒದಗಿಸುತ್ತಿಲ್ಲ. ಗ್ರಾಮೀಣ ಹಾಗೂ ಹೊಸ ವಿಶ್ವವಿದ್ಯಾನಿಲಯಗಳು ಆಧುನಿಕ ಪಠ್ಯಕ್ರಮ, ಡಿಜಿಟಲ್ ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಬೆಂಬಲ ಪಡೆಯುತ್ತಿಲ್ಲ. ವಿದ್ಯಾರ್ಥಿಗಳ ಕಲಿಕೆಗೆ ವಾತಾವರಣ ಉತ್ತಮ ಒದಗಿಸಲು ಮೂಲಭೂತ ಸೌಲಭ್ಯಗಳು ಇಲ್ಲ.

ಭಾರತದ ವಿಶ್ವವಿದ್ಯಾನಿಲಯಗಳು ಆರ್ಥಿಕವಾಗಿ ಹಿಂದುಳಿದಿರುವುದಕ್ಕೆ ಹಲವಾರು ಐತಿಹಾಸಿಕ, ರಾಜಕೀಯ, ಆರ್ಥಿಕ ಮತ್ತು ಆಡಳಿತಾತ್ಮಕ ಕಾರಣಗಳಿವೆ. ಭಾರತ ತನ್ನ ಒಟ್ಟು ಜಿಡಿಪಿಯಲ್ಲಿ ಉನ್ನತ ಶಿಕ್ಷಣಕ್ಕೆ ಶೇ. 1ಕ್ಕೂ ಕಡಿಮೆ ಹಣವನ್ನು ಮೀಸಲಿಡುತ್ತದೆ. ಜಾಗತಿಕ ಸರಾಸರಿ ಇದಕ್ಕಿಂತ ಹೆಚ್ಚು. ಭಾರತದ ಒಟ್ಟು ಶಿಕ್ಷಣ ಬಜೆಟ್ ಸುಮಾರು ಶೇ. 2.9-3 ಇದ್ದರೂ, ಅದರಲ್ಲಿ ಬಹುಪಾಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ಹೋಗುತ್ತದೆ. ವಿಶ್ವವಿದ್ಯಾನಿಲಯಗಳಿಗೆ ಬರುವ ಹಣ ಅತ್ಯಂತ ಕಡಿಮೆ. ಭಾರತದ ಬಹುಪಾಲು ಸರಕಾರಿ ವಿಶ್ವವಿದ್ಯಾನಿಲಯಗಳು ಸರಕಾರದ ಅನುದಾನಕ್ಕೇ ಅವಲಂಬಿತವಾಗಿವೆ. ಸ್ವಂತ ಆದಾಯ ಗಳಿಸಲು ಅವಕಾಶವಿಲ್ಲ ಅಥವಾ ವ್ಯವಸ್ಥೆಯೇ ಇಲ್ಲ. ಪಶ್ಚಿಮದ ವಿಶ್ವವಿದ್ಯಾನಿಲಯಗಳು ದಾನ, ಸಂಶೋಧನಾ ಪೇಟೆಂಟ್‌ಗಳು, ವಿದ್ಯಾವಂತರಿಂದ ದೇಣಿಗೆ, ಕೈಗಾರಿಕಾ ತಾಂತ್ರಿಕ ಸಲಹೆಗಳು ಮುಂತಾದ ಮಾರ್ಗಗಳಿಂದ ಹಣ ಹೊಂದುವ ಸಂಸ್ಕೃತಿ ಇದೆ. ಆದರೆ ಭಾರತದಲ್ಲಿ ಇದಿಲ್ಲ.

ದೇಶದಲ್ಲಿ ವಿಶ್ವವಿದ್ಯಾನಿಲಯಗಳಿಗೆ ಅರ್ಹತೆಯ ಆಧಾರದ ಮೇಲೆ ಅನುದಾನ ನೀಡುವ ವ್ಯವಸ್ಥೆ ಇಲ್ಲ. ಕೆಲವೊಮ್ಮೆ ರಾಜಕೀಯವಾಗಿ ನಿಕಟ ವಿಶ್ವವಿದ್ಯಾನಿಲಯಗಳು ಹೆಚ್ಚು ಅನುದಾನ ಪಡೆಯುತ್ತವೆ. ವಿದೇಶಿ ವಿಶ್ವವಿದ್ಯಾನಿಲಯಗಳು ಅನೇಕ ಕೋಟಿ ರೂಪಾಯಿಗಳನ್ನು ದೇಣಿಗೆಗಳಿಂದಲೇ ಪಡೆಯುತ್ತವೆ. ಆದರೆ ಭಾರತದಲ್ಲಿ ದೇಣಿಗೆ ನೀಡುವ ಸಂಸ್ಕೃತಿ ಬಹಳಷ್ಟು ನಿರ್ಲಕ್ಷಿತವಾಗಿದೆ. ಅತಿಯಾದ ವಿವಿಗಳ ಸ್ಥಾಪನೆಯಿಂದ ಇರುವ ಅನುದಾನ ತುಂಬಾ ಜಾಸ್ತಿ ವಿಭಜನೆಗೊಳಗಾಗುತ್ತದೆ. ಶಿಕ್ಷಣ ಇಲಾಖೆಗಳಿಂದ ಬರುವ ಅನುದಾನವು ವಿಳಂಬವಾಗಿ ಬಿಡುಗಡೆ ಮಾಡಲಾಗುತ್ತದೆ. ಇದರ ಪರಿಣಾಮವಾಗಿ ಯೋಜನೆಗಳು, ಸಂಶೋಧನೆ, ಮೂಲಸೌಕರ್ಯ ಅಭಿವೃದ್ಧಿ ಎಲ್ಲವೂ ಸೊನ್ನೆ. ಆದರೂ ಕುಲಪತಿ ಹುದ್ದೆಗೆ ಪೈಪೋಟಿ ನಿಂತಿಲ್ಲ.

ಭಾರತ ಸಂಶೋಧನೆ ಮತ್ತು ಅಭಿವೃದ್ಧಿಗೆ ಕೇವಲ ಶೇ. 0.7 ಮಾತ್ರ ಖರ್ಚು ಮಾಡುತ್ತಿದೆ. ಇದರ ಬಹುಪಾಲು ಇಸ್ರೋ, ಡಿಆರ್‌ಡಿಒ ಮುಂತಾದ ಕೇಂದ್ರ ಸಂಸ್ಥೆಗಳಿಗೆ ಹೋಗುತ್ತದೆ. ವಿಶ್ವವಿದ್ಯಾನಿಲಯಗಳಿಗೆ ಸಂಶೋಧನೆಗಾಗಿ ಬಹಳ ಕಡಿಮೆ ಹಣ ದೊರೆಯುತ್ತದೆ. ಬಹುತೇಕ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಆಡಳಿತ ದುರ್ಬಲವಾಗಿವೆ. ಲೆಕ್ಕಪತ್ರ ನಿರ್ವಹಣೆ, ಯೋಜನೆಯ ಅನುಷ್ಠಾನ, ನೌಕರರ ನೇಮಕ ಅವ್ಯವಹಾರ ಸಾಮಾನ್ಯವಾಗಿದೆ. ಪಶ್ಚಿಮದ ವಿಶ್ವವಿದ್ಯಾನಿಲಯಗಳಲ್ಲಿ ಕೈಗಾರಿಕೆಗಳೊಂದಿಗೆ ನಿಕಟ ಸಂಪರ್ಕವಿದ್ದು, ಅವು ಸಂಶೋಧನಾ ಸಹಕಾರ, ಆವಿಷ್ಕಾರಗಳಿಗೆ ಹೆಸರುವಾಸಿ. ಆದರೆ ಭಾರತದ ವಿದ್ಯಾಸಂಸ್ಥೆಗಳು ಕೈಗಾರಿಕಾ ಜಗತ್ತಿನಿಂದ ಬಹಳ ದೂರವಾಗಿವೆ. ಹೆಚ್ಚುಗಾರಿಕೆ, ಗುಣಮಟ್ಟ, ಸಂಶೋಧನಾ ಲೇಖನಗಳು, ವಿದ್ಯಾರ್ಥಿಗಳ ನಿರ್ವಹಣೆ ಇವುಗಳಿಂದ ವಿವಿಗಳಿಗೆ ಹಣ ಬರುತ್ತಿಲ.್ಲ ವಿಶ್ವವಿದ್ಯಾನಿಲಯಗಳು ತಮ್ಮ ಗುಣಮಟ್ಟದಿಂದ ಬಹುಪಾಲು ಅನುದಾನವನ್ನು ಪಡೆಯುತ್ತಿಲ್ಲ. ಇದರಿಂದ ಹೊಸತನ, ಶ್ರೇಷ್ಠತೆ ಇಲ್ಲದ ಸ್ಥಿತಿ ಭಾರತದಲ್ಲಿ ನಿರ್ಮಾಣವಾಗುತ್ತಿದೆ.

ಭಾರತದ ಬಹುತೇಕ ವಿಶ್ವವಿದ್ಯಾನಿಲಯಗಳು ಆರ್ಥಿಕ ಕೊರತೆಯಿಂದ ಬಳಲುತ್ತಿವೆ. ಪಠ್ಯಕ್ರಮದ ನವೀಕರಣ, ಸಂಶೋಧನಾ ಕಾರ್ಯಗಳ ಪ್ರೋತ್ಸಾಹ, ಮೂಲ ಸೌಕರ್ಯದ ಅಭಿವೃದ್ಧಿ, ಡಿಜಿಟಲ್ ಯುಗದಲ್ಲಿ ಪಾಠವಿಧಾನಗಳ ಆಧುನೀಕರಣ ಅಗತ್ಯ. ಈ ಹಿನ್ನೆಲೆಯಲ್ಲಿ, ಶೈಕ್ಷಣಿಕ ವ್ಯವಸ್ಥೆಯ ಬಾಳಿಗೆ ನವ ಚೇತನ ನೀಡಲು ಕೆಲವು ಶ್ರೇಷ್ಠ ಕ್ರಮಗಳನ್ನು ಪಾಲಿಸಬೇಕು. ಪ್ರತೀ ವಿಶ್ವವಿದ್ಯಾನಿಲಯದ ಕಾರ್ಯಕ್ಷಮತೆ, ಸಂಶೋಧನಾ ಉತ್ಪಾದಕತೆ, ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶ ಮತ್ತು ಪಠ್ಯಕ್ರಮದ ಆಧುನಿಕತೆಯನ್ನು ಆಧರಿಸಿ ಅನುದಾನ ಹಂಚಿಕೆ ನಡೆಯಬೇಕು. ಇದು ಗುಣಮಟ್ಟದ ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುತ್ತದೆ ಹಾಗೂ ಪ್ರಗತಿಯ ದಿಕ್ಕಿನಲ್ಲಿ ಇಳಿಯುವ ಮಾದರಿಯನ್ನು ರೂಪಿಸುತ್ತದೆ. ಅನುದಾನಕ್ಕಾಗಿ ಸರಕಾರದ ಮೇಲೆ ಮಾತ್ರ ಅವಲಂಬಿಸದೆ, ಉದ್ಯಮ ಜಗತ್ತು, ಹಳೆಯ ವಿದ್ಯಾರ್ಥಿಗಳ ದೇಣಿಗೆ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ದೇಶಿ-ವಿದೇಶಿ ಸಂಶೋಧನಾ ಸಹಕಾರ ಇತ್ಯಾದಿ ಮಾರ್ಗಗಳಲ್ಲಿ ಹಣಕಾಸು ಸಂಪನ್ಮೂಲಗಳನ್ನು ಸಂಗ್ರಹಿಸಬೇಕಾಗಿದೆ. ವಿಶ್ವವಿದ್ಯಾನಿಲಯದ ಕುಲಪತಿಗಳ ನೇಮಕಾತಿ, ಯೋಜನೆ ಅನುಷ್ಠಾನ ಹಾಗೂ ಅನುದಾನ ಹಂಚಿಕೆ ಎಲ್ಲವೂ ರಾಜಕೀಯ ರಹಿತವಾಗಬೇಕು. ಶುದ್ಧ ಶೈಕ್ಷಣಿಕ ಹಿನ್ನೆಲೆ ಹೊಂದಿದ, ನಿಷ್ಠಾವಂತ ವ್ಯಕ್ತಿಗಳಿಂದ ರಚನೆಯಾಗಿರುವ ಆಯೋಗಗಳು ಆಯ್ಕೆ ಪ್ರಕ್ರಿಯೆಗಳನ್ನು ನಿರ್ವಹಿಸಬೇಕು.

ವಿಶ್ವವಿದ್ಯಾನಿಲಯಗಳು ಅಧ್ಯಾಪಕರಿಗೆ ಸಂಶೋಧನೆ ಮಾಡಲು ಹೆಚ್ಚಿನ ಸಹಕಾರ ನೀಡಬೇಕು. ಪೇಟೆಂಟ್, ಪಬ್ಲಿಕೇಶನ್‌ಗಳು ಮತ್ತು ಪ್ರಾಯೋಜಿತ ಸಂಶೋಧನಾ ಯೋಜನೆಗಳ ಮೂಲಕ ಶೈಕ್ಷಣಿಕ ಸಂಸ್ಥೆಯ ಆದಾಯವನ್ನು ಹೆಚ್ಚಿಸಬಹುದಾಗಿದೆ. ಉದ್ಯಮಗಳು ಶೈಕ್ಷಣಿಕ ಸಂಸ್ಥೆಗಳೊಂದಿಗೆ ತರಬೇತಿ, ಸಂಶೋಧನೆ, ಇಂಟರ್ನ್‌ಶಿಪ್‌ಗಳು, ಉಪಕರಣಗಳ ಹಂಚಿಕೆ ಮುಂತಾದ ಕಾರ್ಯಗಳಲ್ಲಿ ಕೈಜೋಡಿಸಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರದ ಬೇಡಿಕೆಗೆ ತಕ್ಕಂತೆ ತಯಾರಾಗುತ್ತಾರೆ. ಅನುದಾನದ ಬಳಕೆ ಕುರಿತು ಪ್ರತೀ ವಿಶ್ವವಿದ್ಯಾನಿಲಯವೂ ಸಾರ್ವಜನಿಕ ಲೆಕ್ಕಪತ್ರ ತಯಾರಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ದುರ್ಬಳಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಕುಲಪತಿಗಳು ತಮ್ಮ ಆಸ್ತಿ, ಆದಾಯ ವಿವರವನ್ನು ಪ್ರಕಟಿಸಬೇಕು.

ವಿಶ್ವವಿದ್ಯಾನಿಲಯಗಳನ್ನು ಮುನ್ನಡೆಸುವವರು ಶುದ್ಧ ಶೈಕ್ಷಣಿಕ ಹಿನ್ನೆಲೆ, ಅನುಭವ ಮತ್ತು ನೈತಿಕತೆಯುಳ್ಳವರಾಗಿರಬೇಕು. ವಿವಿಗೆ ಹಣ ತರುವ ಕುಶಲತೆ ಇರಬೇಕು. ನೇಮಕಾತಿಯಲ್ಲಿ ರಾಜಕೀಯ ಅಥವಾ ವ್ಯಕ್ತಿಗತ ಲಾಭದ ಬದಲಿಗೆ ಶೈಕ್ಷಣಿಕ ದೃಷ್ಟಿಕೋನ ಇರಬೇಕು.ಡಿಜಿಟಲ್ ಸಾಧನಗಳು, ಆನ್‌ಲೈನ್ ಕೋರ್ಸ್‌ಗಳು ಮತ್ತು ಮುಕ್ತ ವಿದ್ಯಾ ವಿಧಾನಗಳ ಮೂಲಕ ವಿವಿಗಳ ಶಿಕ್ಷಣವನ್ನು ಪರಿವರ್ತಿಸಬೇಕು. ಮೂಲಸೌಕರ್ಯವಿಲ್ಲದ ಪ್ರದೇಶಗಳಲ್ಲಿಯೂ ಈ ವಿಧಾನಗಳು ಪರಿಣಾಮಕಾರಿಯಾಗಿದೆ. ಖಾಸಗಿ ಕ್ಷೇತ್ರವು ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ಹಣ, ಜ್ಞಾನ, ಸಲಹೆಗಳ ಮೂಲಕ ಸಹಕರಿಸಬಹುದು. ವಿವಿಗಳ ಹಣಕಾಸು ಸ್ಥಿತಿಯನ್ನು ಶಕ್ತಿಗೊಳಿಸಲು ಸಂಘಟಿತ ಪ್ರಯತ್ನ ಅಗತ್ಯ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮಾಜದ ಇತರ ವರ್ಗ ಜವಾಬ್ದಾರಿ ಪಡೆದು, ಸರಕಾರದ ಗಮನ ಸೆಳೆಯುವ ರೀತಿಯಲ್ಲಿ ಮಾಧ್ಯಮಗಳಲ್ಲಿ ಚರ್ಚೆಗಳು, ವೇದಿಕೆಗಳು, ಲೇಖನಗಳ ಮೂಲಕ ನಿರಂತರ ಅಭಿಯಾನ ನಡೆಸಬೇಕು.

ಇದು ವಿವಿಗಳ ಸುಧಾರಣೆಗೆ ಸೂಕ್ತ ಸಮಯ. ಆರ್ಥಿಕ ಸಂಕಷ್ಟಗಳ ನಡುವೆಯೂ ಶುದ್ಧತೆಯೊಂದಿಗಿನ ಆಡಳಿತ, ಶ್ರೇಷ್ಠತೆಯೊಡನೆ ನವೀಕರಣ ಮತ್ತು ಜವಾಬ್ದಾರಿತ್ವದ ಸಹಿತ ಸಂಶೋಧನೆಗಳನ್ನು ಉತ್ತೇಜಿಸುವ ಮೂಲಕ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕು ನೀಡಬೇಕು. ಈ ಬದಲಾವಣೆ ಇಡೀ ಸಮಾಜದ ಭಾಗವಹಿಸುವಿಕೆಯಿಂದಲೇ ಸಾಧ್ಯವಾಗುತ್ತದೆ. ಭಾರತದಲ್ಲಿ ಪ್ರಪಂಚಮಟ್ಟದ ವಿಶ್ವವಿದ್ಯಾನಿಲಯಗಳನ್ನು ರೂಪಿಸುವ ಕನಸು ನನಸು ಮಾಡುವ ಸಮಯ ಇದೀಗ ಬಂದಿದೆ.

share
ಡಾ. ಡಿ.ಸಿ. ನಂಜುಂಡ
ಡಾ. ಡಿ.ಸಿ. ನಂಜುಂಡ
Next Story
X