Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಿಡಿಲು ಬಡಿತ: ಎಚ್ಚರವಿರಲಿ

ಸಿಡಿಲು ಬಡಿತ: ಎಚ್ಚರವಿರಲಿ

ಡಾ. ಕರವೀರಪ್ರಭು ಕ್ಯಾಲಕೊಂಡಡಾ. ಕರವೀರಪ್ರಭು ಕ್ಯಾಲಕೊಂಡ12 Jun 2024 12:29 PM IST
share
ಸಿಡಿಲು ಬಡಿತ: ಎಚ್ಚರವಿರಲಿ

ಮುಂಗಾರಿನ ಮಳೆಯ ಆಗಮನದ ಸಂದರ್ಭದಲ್ಲಿ ಸಿಡಿಲು ಬಡಿದ ಸುದ್ದಿ ದೃಶ್ಯಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ಭಯ, ಭೀತಿ ಹೆಚ್ಚಿಸಿದೆ. ಈ ವರ್ಷವೂ ಸಿಡಿಲಿನ ಆರ್ಭಟ ಹೆಚ್ಚಾಗಿದೆ. ಸಿಡಿಲು ಬಡಿದು ಮಡಿದ ಜನ-ಜಾನುವಾರುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೊಲಗಳಂತಹ ಬಯಲು ಪ್ರದೇಶಗಳಲ್ಲಿ ಕೆಲಸ ಮಾಡುವ ರೈತರು, ದನ-ಕುರಿ ಕಾಯುವವರು, ಮರಗಳಡಿ ನಿಂತಿರುವವರು ಹೆಚ್ಚಾಗಿ ಸಿಡಿಲಿಗೆ ಬಲಿಯಾಗುತ್ತಿದ್ದಾರೆ.

ನಮಗೆ ಮಿಂಚು ಮೊದಲು ಕಾಣಿಸಿ ಸ್ವಲ್ಪ ಸಮಯದ ನಂತರ ಗುಡುಗು ಸಿಡಿಲು ಕೇಳಿಸುತ್ತವೆ. ಇದಕ್ಕೆ ಕಾರಣ ಬೆಳಕಿನ ವೇಗ ಶಬ್ದದ ವೇಗಕ್ಕಿಂತ ಹೆಚ್ಚು ಇರುವುದು. ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿ.ಮೀ. ಆದರೆ, ಶಬ್ದದ ವೇಗ ಸೆಕೆಂಡಿಗೆ 330 ಮೀ. ಇರುತ್ತದೆ. ಆದ್ದರಿಂದ ಮಿಂಚುಕಂಡ ನಂತರ ಗುಡುಗು, ಸಿಡಿಲು ಕೇಳಿಸುತ್ತವೆ. ಮಿಂಚಿನಿಂದ 30,000 ಆ್ಯಂಪಿಯರ್‌ಗಳಷ್ಟು ವಿದ್ಯುತ್ ವಿಸರ್ಜನೆಯಾದರೆ ಮಾತ್ರ ಗುಡುಗು ಕೇಳಿಸುತ್ತದೆ!

ಲಕ್ಷಣಗಳು:

ಸಿಡಿಲು ಬಡಿದಾಗ ವ್ಯಕ್ತಿ ಒಮ್ಮಿಂದೊಮ್ಮೆಲೆ ಬವಳಿ ಬಂದಂತಾಗಿ ಪ್ರಜ್ಞಾಹೀನವಾಗುವರು. ಹೃದಯ ಚಟುವಟಿಕೆಗಳು ನಿಲ್ಲುವುದರಿಂದ ವ್ಯಕ್ತಿ ತಕ್ಷಣ ಸಾವನ್ನಪ್ಪಬಹುದು. ಇಲ್ಲವೇ ಸಿಡಿಲು ಹತ್ತಿರದಲ್ಲೇ ಬಡಿದಾಗ ಉಂಟಾಗುವ ಸುಟ್ಟಗಾಯಗಳಿಂದಾಗಿ, ಅವುಗಳ ನಂತರದ ಪರಿಣಾಮಗಳಿಂದಾಗಿ ಸಿಡಿಲು ಬಡಿದ ಕೆಲವು ದಿನಗಳು ಅಥವಾ ವಾರಗಳಲ್ಲಿ ಅಸು ನೀಗಬಹುದು. ಅಪಾಯಕಾರಿ ಅಲ್ಲದ ಸಂದರ್ಭಗಳಲ್ಲಿ ಹಿಸ್ಟಿರಿಯಾ, ತಲೆನೋವು, ತಲೆಸುತ್ತು ಬರಬಹುದು. ದಿನಗಳೆದಂತೆ ಈ ಲಕ್ಷಣಗಳು ಮಾಯವಾಗಿ ಅಶಕ್ತತೆ ಅಪ್ಪಿಕೊಳ್ಳಬಹುದು. ತೀವ್ರ ಸ್ವರೂಪದ ಸಿಡಿಲು ಬಡಿತದಲ್ಲಿ ಕಾರ್ನಿಯಾ ಹೊಳಪು ಕಳೆದುಕೊಂಡು ದೃಷ್ಟಿ ಮಸುಕಾಗಬಹುದು, ಕ್ಯಾಟರ್ಯಾಕ್ಟ್ ಕಾಣಿಸಬಹುದು. ದೃಷ್ಟಿಪಟಲದಲ್ಲಿ ರಕ್ತಸ್ರಾವವಾಗಬಹುದು ಅಥವಾ ದೃಷ್ಟಿಪಟಲ ಬೇರ್ಪಟ್ಟು ದೃಷ್ಟಿಮಾಂದ್ಯ ತಲೆದೋರಬಹುದು. ಕಿವುಡು ಕಂಗೆಡಿಸಬಹುದು. ಜೊತೆಗೆ ಎಲುಬುಗಳ ಮುರಿತ, ಆಳವಾದ ಸುಟ್ಟಗಾಯಗಳಂತಹ ತೀವ್ರ ಸ್ವರೂಪದ ಗಾಯಗಳಾಗುವುದು ಅಪರೂಪವೇನಲ್ಲ

ಚಿಕಿತ್ಸೆ:

ಸಿಡಿಲು ಬಡಿದವರಿಗೆ ತಕ್ಷಣ ಕೃತಕ ಉಸಿರಾಟ ಪ್ರಾರಂಭಿಸಬೇಕು ಮತ್ತು ಅದನ್ನು ನಾಲ್ಕೈದು ತಾಸುಗಳವರೆಗೆ ಮುಂದುವರಿಸಬೇಕು. ವೆಂಟಿಲೇಟರ್ ಸೌಲಭ್ಯಗಳು ಸಿಗುವಲ್ಲಿಗೆ ಸ್ಥಳಾಂತರಿಸುವುದು ಸೂಕ್ತ. ಹೆಚ್ಚು ಒತ್ತಡದಲ್ಲಿರುವ ಆಮ್ಲಜನಕವನ್ನು ವ್ಯಕ್ತಿಗೆ ನೀಡಬೇಕು. ಉಸಿರಾಟ ಕ್ರಿಯೆ ಸಾಮಾನ್ಯ ಸ್ಥಿತಿಗೆ ತಲುಪಿದ ಮೇಲೆ ಹೃದಯದ ಚಟುವಟಿಕೆ ಪ್ರಚೋದಿಸುವುವಂತಹ ಔಷಧಿಗಳನ್ನು ನೀಡಬೇಕು.

ಸಾಮಾನ್ಯವಾಗಿ ಸಿಡಿಲು ಬಡಿದಾಗ ವ್ಯಕ್ತಿಗಳು ಗಾಬರಿಯಾಗಿ, ಹೌಹಾರಿ ಆಘಾತಕ್ಕೆ ಒಳಗಾಗಿರುತ್ತಾರೆ. ತುರ್ತು ಚಿಕಿತ್ಸೆ ನೀಡುವುದರ ಜೊತೆಗೆ ಸಲಾಯಿನ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿ, ನಾಡಿಬಡಿತ, ಉಸಿರಾಟ, ಬಿ.ಪಿ. ಸಾಮಾನ್ಯ ಸ್ಥಿತಿಯಲ್ಲಿರುವಂತೆ ಕ್ರಮ ತೆಗೆದುಕೊಳ್ಳಬೇಕು. ಎಲ್ಲಾ ವೈದ್ಯಕೀಯ ಸೌಲಭ್ಯಗಳು ಸಿಗುವ ಸ್ಥಳದಲ್ಲಿ ಸಿಡಿಲು ಬಡಿದರೆ, ವ್ಯಕ್ತಿಯ ಅದೃಷ್ಟ ಎಂದೇ ಹೇಳಬೇಕು. ಏಕೆಂದರೆ ತುರ್ತು ಚಿಕಿತ್ಸೆಯಿಂದ ಬದುಕಿಸಬಹುದು. ಆದರೆ, ಸಾಮಾನ್ಯವಾಗಿ ಇಂತಹ ಅವಘಢಗಳು ವೈದ್ಯಕೀಯ ಸೌಲಭ್ಯಗಳು ಸಿಗದ ಸ್ಥಳದಲ್ಲೇ ಆಗುವುದು ಹೆಚ್ಚು. ಆಗ ಅಪಘಾತದಿಂದ ಹೊರಬರದ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗಬಹುದು! ಹೀಗಾಗಿ ಸಿಡಿಲಿನ ಬಗ್ಗೆ ಎಚ್ಚರ ಅಗತ್ಯ.

share
ಡಾ. ಕರವೀರಪ್ರಭು ಕ್ಯಾಲಕೊಂಡ
ಡಾ. ಕರವೀರಪ್ರಭು ಕ್ಯಾಲಕೊಂಡ
Next Story
X