Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಹಜ್ 2025: ಸುಡು ಬಿಸಿಲಿನ ‘ಅರಫಾ ಮೈದಾನ’...

ಹಜ್ 2025: ಸುಡು ಬಿಸಿಲಿನ ‘ಅರಫಾ ಮೈದಾನ’ ದಲ್ಲಿ ಹಜ್ಜಾಜ್‌ಗಳಿಗೆ ತಣ್ಣೀರಿನ ಸಿಂಚನ

► ನಿಮ್ರಾ ಮಸೀದಿ ಸುತ್ತಮುತ್ತ 2,000 ನೀಮ್ ಮರಗಳು ►300 ಬೃಹತ್ ಗಾತ್ರದ ಛತ್ರಿಗಳು ►350 ನೀರನ್ನು ಸ್ಪ್ರೇ ಮಾಡುವ ಯಂತ್ರಗಳ ಅಳವಡಿಕೆ

ವಾರ್ತಾಭಾರತಿವಾರ್ತಾಭಾರತಿ16 May 2025 5:28 PM IST
share
ಹಜ್ 2025: ಸುಡು ಬಿಸಿಲಿನ ‘ಅರಫಾ ಮೈದಾನ’ ದಲ್ಲಿ ಹಜ್ಜಾಜ್‌ಗಳಿಗೆ ತಣ್ಣೀರಿನ ಸಿಂಚನ

ರಿಯಾದ್:‌ 2025ರ ಹಜ್ ಗೆ ತಯಾರಿಗಳು ಭರದಿಂದ ಸಾಗುತ್ತಿದ್ದು, ಹಜ್ಜಾಜ್ ಗಳಿಗೆ ಬೇಕಾದ ಸರ್ವ ಸಿದ್ಧತೆಗಳನ್ನು ಸೌದಿ ಅರೇಬಿಯಾದ ಸರಕಾರವು ಹಜ್ ಸಚಿವಾಲಯದ ಸಹಾಯದಿಂದ ವ್ಯವಸ್ಥಿತವಾಗಿ ಮಾಡುತ್ತಿದೆ.

ದುಲ್ ಹಜ್ಜ್ 9ರಂದು ವಿಶ್ವದ ವಿವಿಧ ಭಾಗಗಳಿಂದ ಬಂದ ಲಕ್ಷಾಂತರ ಮಂದಿ ಸತ್ಯವಿಶ್ವಾಸಿಗಳು ಅರಫಾ ಮೈದಾನದಲ್ಲಿ ಒಂದೇ ದಿನ ಒಟ್ಟುಗೂಡಲಿದ್ದಾರೆ. ʼಲಬ್ಬೈಕಲ್ಲಾಹುಮ್ಮ ಲಬ್ಬೈಕ್ʼ ಎಂಬ ತಕ್ಬೀರ್ ನೊಂದಿಗೆ ಶ್ವೇತ ವಸ್ತ್ರದಾರಿಗಳಾದ ಹಜ್ಜಾಜ್ ಗಳ ಸಂಗಮಕ್ಕೆ ಅರಫಾ ಮೈದಾನವನ್ನು ಹಿಂದೆಂದಿಗಿಂತಲೂ ವ್ಯವಸ್ಥಿತವಾಗಿ ಸಜ್ಜುಗೊಳಿಸಲಾಗುತ್ತಿದೆ.

ಈ ಬಾರಿ ಅರಫಾ ದಿನದಂದು ಸ್ಥಳೀಯ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಹಜ್ಜಾಜ್ ಗಳ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸೌದಿ ಸರಕಾರವು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದರ ಮೊದಲ ಭಾಗವಾಗಿ ಅರಫಾ ಮೈದಾನದ ಸುತ್ತಮುತ್ತ ಹಾಗೂ ನಮೀರಾ ಮಸೀದಿಯ ಸುತ್ತಲೂ ಸುಮಾರು 2000ಕ್ಕೂ ಅಧಿಕ ಮರಗಳನ್ನು ನೆಡಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನವು ‘ನೀಮ್’ ಮರಗಳಾಗಿವೆ. ಈ ಮರಗಳು ಗಾಳಿಯಲ್ಲಿನ ಅಧಿಕ ಉಷ್ಣಾಂಶವನ್ನು ಹೀರಿ ಹವಾಮಾನವನ್ನು ತಂಪಾಗಿ ಸಲು ಸಹಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಡಾನ್ ಅಧ್ಯಕ್ಷ ನ್ಯೂಮೆರಿ ಅವರು ಮೌಂಟ್ ಅರಫತ್‌ನಲ್ಲಿ ನೆಡಲು ಈ ನೀಮ್ ಮರಗಳನ್ನು ಒದಗಿಸಿದ್ದರು. ಸುಡು ಬಿಸಿಲಿನ ಅರಫಾ ಮರುಭೂಮಿಯಲ್ಲಿ ಹಜ್ಜಾಜ್ ಗಳ ದಣಿದ ದೇಹಕ್ಕೆ ನೆರಳಿನ ಆಶ್ರಯವನ್ನು ನೀಮ್ ಮರಗಳು ನೀಡಲಿದೆ. ಪ್ರಪ್ರಥಮ ಭಾರಿಗೆ ‘ಸೌದಿ ವಿಷನ್ 2030’ ಭಾಗವಾಗಿ ಈ ಪ್ರಯೋಗವನ್ನು ಮಾಡಲಾಗಿದೆ. ಈ ಪ್ರಯೋಗವು ಯಶಸ್ವಿಯಾದಲ್ಲಿ ಮುಂದೆ ಇನ್ನಷ್ಟು ಮರಗಳನ್ನು ನೆಟ್ಟು ಅರಫಾ ಮೈದಾನವನ್ನು ಹಸಿರಾಗಿಸುವ ಉದ್ದೇಶವೂ ಹಜ್ ಸಚಿವಾಲಯವು ಹೊಂದಿದೆ.


ಇದಲ್ಲದೆ ಸುಮಾರು 300ಕ್ಕೂ ಹೆಚ್ಚು ದೊಡ್ಡ ಛತ್ರಿಗಳನ್ನು ಮೌಂಟ್ ಅರಫಾತ್ ಸುತ್ತಮುತ್ತ ಸ್ಥಾಪಿಸಲಾಗಿದೆ. 350 ಕ್ಕಿಂತಲೂ ಅಧಿಕ ನೀರನ್ನು ಸ್ಪ್ರೇ ಮಾಡುವ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಹಜ್ ಕರ್ಮಗಳ ನಡುವೆ ಹಜ್ಜಾಜ್ ಗಳಿಗೆ ಹೆಚ್ಚುವರಿ ನೆರಳು ಮತ್ತು ತಂಪಾದ ವಾತಾವರಣವನ್ನು ಈ ವ್ಯವಸ್ಥೆಗಳು ಒದಗಿಸಲಿದೆ.

ಪರಿಸರ ಪರಿಸ್ಥಿತಿಗಳನ್ನು ಸುಧಾರಿಸಲು ಮತ್ತು ಯಾತ್ರಿಕರಿಗೆ ಹಸಿರು, ಹೆಚ್ಚು ಆರಾಮದಾಯಕ ವಾತಾವರಣವನ್ನು ಸೃಷ್ಟಿಸಲು ಅರಫತ್ ಅನ್ನು ಒಳಗೊಂಡಿರುವ ಅಲ್ ಮಶೈರ್‌ನಲ್ಲಿ ಸಸ್ಯವರ್ಗವನ್ನು ಹೆಚ್ಚಿಸಿ ಪರಿಸರವನ್ನು ಹಸಿರಾಗಿಸಲು ಸೌದಿ ಸರ್ಕಾರ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅರಫತ್ ಅನ್ನು ಒಳಗೊಂಡಿರುವ ಅಲ್ ಮಶೈರ್ ಪ್ರದೇಶವು ಮಣ್ಣಿನ ಇಂಗಾಲವನ್ನು ಹೆಚ್ಚಿಸಲು, ಅನಿಲ ಸಾಂದ್ರತೆಯನ್ನು ಕಡಿಮೆ ಮಾಡಲು ಮತ್ತು ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಮರ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.


ಒಟ್ಟಿನಲ್ಲಿ ಹೇಳುವುದಾದರೆ ವಿಶ್ವದ ನಾನಾ ಭಾಗಗಳಿಂದ ಬರುವ ಹಜ್ಜಾಜ್ ಗಳನ್ನು ತಮ್ಮ ಅತಿಥಿಗಳು ಎಂಬಂತೆ ಸೌದಿ ಸರಕಾರವು ಗೌರವದಿಂದ ನಡೆಸಿಕೊಳ್ಳುತ್ತಿದೆ. ಹಜ್ಜಾಜ್ ಗಳ ಆರೋಗ್ಯದ ಹಿತದೃಷ್ಟಿ ಯಿಂದ ಅನೇಕ ಮೊಬೈಲ್ ಆಸ್ಪತ್ರೆಗಳು, ಆಂಬುಲೆನ್ಸ್, ವೈದ್ಯರನ್ನು ಹಾಗು ಆರೋಗ್ಯ ಮೇಲ್ವಿಚಾರಕ ರನ್ನು ಅಲ್ಲಲ್ಲಿ ಸಜ್ಜುಗೊಳಿಸಿದೆ. ಹಜ್ಜಾಜ್ ಗಳಿಗೆ ಮಾರ್ಗದರ್ಶನ ಮಾಡಲು ಸಾವಿರಾರು ಸೌದಿ ಸ್ವಯಂ ಸೇವಕರನ್ನು ನಿಯುಕ್ತಿಗೊಳಿಸಲಾಗಿದೆ. ಹಜ್ ಕರ್ಮದ ಸಮಯದಲ್ಲಿ ಹಜ್ಜಾಜ್ ಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಎಲ್ಲಾ ವಿಧದ ಸೌಕರ್ಯಗಳನ್ನು ಸೌದಿ ಸರಕಾರವು ಕೈಗೊಂಡಿದೆ.

-ಎಸ್.ಎ.ರಹಿಮಾನ್ ಮಿತ್ತೂರು, ಸೌದಿ ಅರೇಬಿಯಾ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X