Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಗಾಳಿ ಬೆಳಕು
  5. ಬುದ್ಧ ಪ್ರತಿಮೆಗಳ ನಡುವೆ

ಬುದ್ಧ ಪ್ರತಿಮೆಗಳ ನಡುವೆ

ನಟರಾಜ್ ಹುಳಿಯಾರ್ನಟರಾಜ್ ಹುಳಿಯಾರ್12 May 2025 11:50 AM IST
share
ಬುದ್ಧ ಪ್ರತಿಮೆಗಳ ನಡುವೆ
‘ಬೌದ್ಧ ದಮ್ಮದಿಂದಾಗಿ ದಲಿತರಲ್ಲಿ ಹೊಸ ಐಡೆಂಟಿಟಿ ಹಾಗೂ ಆತ್ಮವಿಶ್ವಾಸ ಕಾಣುತ್ತಿದೆ. ಬೌದ್ಧರಾಗಿರುವ ಯುವಕರು ಪೂರ್ವಜನ್ಮದ ಕರ್ಮದ ಸಿದ್ಧಾಂತವನ್ನಾಗಲೀ ಹಳೆಯ ಆಚರಣೆಗಳನ್ನಾಗಲೀ ನಂಬುವುದಿಲ್ಲ. ಮೇಲುಜಾತಿಯ ಹಿಂದೂ ತರುಣ ತರುಣಿಯರಿಗಿಂತ ಇವರಲ್ಲಿ ಹೆಚ್ಚಿನ ದೃಢತೆ, ವೈಜ್ಞಾನಿಕತೆ ಹಾಗೂ ಪ್ರಗತಿಪರತೆ ಕಂಡುಬರುತ್ತಿವೆ. ಅವರು ಕುರುಡು ನಂಬಿಕೆಗಳನ್ನು ಕೈಬಿಟ್ಟು ವೈಚಾರಿಕತೆಯ ಕಡೆಗೆ ನಡೆದಿರುವುದರಿಂದ, ಅವರಲ್ಲಿ ಶಿಕ್ಷಣ ಹಾಗೂ ಜ್ಞಾನದ ಹಸಿವು ಹೆಚ್ಚಿದೆ. ಅವರ ಆರ್ಥಿಕ ಪ್ರಗತಿಗೆ ಇದು ಕೂಡ ಮುಖ್ಯ ಕಾರಣವಾಗಿದೆ.’

ನನ್ನ ವಿದ್ಯಾರ್ಥಿ ದೆಸೆಯಿಂದಲೂ ಬೇಂದ್ರೆಯವರ ‘ಬುದ್ಧ... ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ ಎಂಬ ಬಣ್ಣನೆ ಚಕಿತಗೊಳಿಸುತ್ತಲೇ ಇದೆ; ಏಕಕಾಲಕ್ಕೆ ವಾಚ್ಯಾರ್ಥವಾಗಿಯೂ ನಿಜವಾಗುವ, ರೂಪಕಾರ್ಥಗಳಲ್ಲೂ ಬೆಳೆಯುತ್ತಲೇ ಹೋಗುವ ಈ ಚಿತ್ರದ ವಿಸ್ಮಯ ಹಬ್ಬುತ್ತಲೇ ಇರುತ್ತದೆ. ನಾವು ಯಾರ ಮೂಲಕ ಯಾರನ್ನು ನೋಡುತ್ತೇವೆ ಎಂಬುದು ಅನೇಕ ಸಲ ನಿರ್ಣಾಯಕವಾಗಿರಬಲ್ಲದು. ಬಾಲ್ಯದಲ್ಲಿ ಜಿ.ಪಿ. ರಾಜರತ್ನಂ ಮೊದಲಾದವರ ಮೂಲಕ ಬುದ್ಧನನ್ನು ಕಂಡಿದ್ದ ನನಗೆ ಮುಂದೆ ಲಂಕೇಶರ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ ಲೇಖನ ಹೊಸ ಬುದ್ಧನನ್ನೇ ಕಾಣಿಸಿತು. ಹಾಗೆಯೇ ರಾಜಲಕ್ಷ್ಮಿ ಎನ್. ರಾವ್ ಅವರ ‘ವೈಶಾಖ ಶುದ್ಧ ಪೂರ್ಣಿಮೆ’ ಕತೆಯ ಬುದ್ಧಪೂರ್ಣಿಮೆಯ ಬೆಳದಿಂಗಳು, ಹಾಡು, ಬುದ್ಧ ಪ್ರತಿಮೆ ಕೂಡ ನನ್ನ ಚಿತ್ತದಲ್ಲಿ ಉಳಿದಿದೆ. ಮುಂದೆ ಅಂಬೇಡ್ಕರ್ ಕಡೆದ ವೈಚಾರಿಕ ಬುದ್ಧ ನನ್ನೊಳಗೆ ಬೆಳೆಯತೊಡಗಿದಂತೆಲ್ಲ ‘ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ’ ಎಂಬ ಬೇಂದ್ರೆ ರೂಪಕ ಅಂಬೇಡ್ಕರ್‌ಗೂ ಅನ್ವಯಿಸತೊಡಗಿತು;

ಬರಬರುತ್ತಾ ಅಂಬೇಡ್ಕರ್ ಕಡೆದ ಬುದ್ಧ ಶಿಲ್ಪವೇ ನನ್ನೊಳಗೆ ಹೆಚ್ಚು ನೆಲೆ ನಿಂತಂತಿದೆ. ಇದೇ ಮೇ ತಿಂಗಳ 12ರ ಬುದ್ಧ ಪೂರ್ಣಿಮೆಯನ್ನು ಸ್ವಾಗತಿಸಲು ಅಂಬೇಡ್ಕರ್ ರೂಪಿಸಿದ ಬುದ್ಧ, ಬೌದ್ಧ ದಮ್ಮ ಕುರಿತ ಧ್ಯಾನ:

ಗೌತಮಬುದ್ಧನಿಗೆ ಜ್ಞಾನೋದಯವಾದ ಹಾಗೆಯೇ ಇಪ್ಪತ್ತನೆಯ ಶತಮಾನದ ಮಧ್ಯಭಾಗದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೂ ಬಹುದೊಡ್ಡ ಜ್ಞಾನೋದಯವಾಗಿತ್ತು.

ಸ್ವಂತದ ದುಃಖ ಹಾಗೂ ಸಮುದಾಯದ ದುಃಖ, ಅವಮಾನ, ಅಧ್ಯಯನ, ಹುಡುಕಾಟ, ಚಿಂತನೆ ಹಾಗೂ ಸಂಘರ್ಷಗಳಿಂದ ಹುಟ್ಟಿದ ಆ ಜ್ಞಾನೋದಯ ಭಾರತದ ಚರಿತ್ರೆಯ ದಿಕ್ಕನ್ನು ಬದಲಿಸುವಷ್ಟು ಶಕ್ತಿಶಾಲಿಯಾಗಿತ್ತು. ತಮ್ಮ ಕಣ್ಣೆದುರಿಗಿರುವ ಯಾವ ಧರ್ಮದಲ್ಲಿ

ದಲಿತರ ಅಸ್ಪಶ್ಯತೆಗೆ ಬಿಡುಗಡೆಯಿದೆಯೆಂದು ಆಳವಾಗಿ ಪರಿಶೀಲಿಸಿದ್ದರು. ಜೊತೆಗೆ, ಇಡೀ ದೇಶಕ್ಕೇ ಅಗತ್ಯವಾದ ಅತ್ಯುತ್ತಮ ಧರ್ಮ ಯಾವುದೆಂಬ ಬಗ್ಗೆಯೂ ತಮ್ಮ ನಿರ್ಣಯವನ್ನು ಸಾರಿದ್ದರು.

ಬೌದ್ಧ ದಮ್ಮ ಸ್ವೀಕಾರಕ್ಕೂ ಮುನ್ನ ಅಂಬೇಡ್ಕರ್ ಪ್ರಾಚೀನ ಭಾರತದ ಚರಿತ್ರೆಯ ಅನೇಕ ವಿವರಗಳನ್ನು ಪುನರ್ ನಿರ್ಮಿಸಿಕೊಂಡರು. ಚರಿತ್ರೆಯಲ್ಲಿ ಬೌದ್ಧ ದಮ್ಮ ಮತ್ತು ಬ್ರಾಹ್ಮಣವಾದಗಳ ನಡುವೆ ನಡೆದ ಮುಖಾಮುಖಿಯ ಸ್ವರೂಪವನ್ನು ಆಳವಾಗಿ ಸಂಶೋಧಿಸಿದರು. ದಲಿತರು ಮೂಲತಃ ಬೌದ್ಧರಾಗಿದ್ದರು ಎಂಬುದನ್ನು ಆಧಾರಸಹಿತವಾಗಿ ಸಾಬೀತುಪಡಿಸಿದರು. ಬೌದ್ಧ ದಮ್ಮವನ್ನು ಆಧುನಿಕ ಕಾಲಕ್ಕೆ ತಕ್ಕ ಧರ್ಮವನ್ನಾಗಿ ವ್ಯಾಖ್ಯಾನಿಸಿ, ಮರುರೂಪಿಸಿದರು. 1954ರಲ್ಲಿ ಮಾಡಿದ ರೇಡಿಯೊ ಭಾಷಣವೊಂದರಲ್ಲಿ ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಗಳ ತತ್ವಗಳನ್ನು ಫ್ರೆಂಚ್ ಕ್ರಾಂತಿಯಿಂದ ನಾನು ಪಡೆಯಲಿಲ್ಲ; ಬದಲಿಗೆ ನನ್ನ ಗುರು

ಬುದ್ಧನಿಂದ ಈ ತತ್ವಗಳನ್ನು ಪಡೆದೆ’ ಎಂದು

ಅಂಬೇಡ್ಕರ್ ಘೋಷಿಸಿದರು. ‘ನನ್ನ ಸಿದ್ಧಾಂತದ ಬೇರುಗಳು ಧರ್ಮದಲ್ಲಿವೆಯೇ ಹೊರತು ರಾಜ್ಯಶಾಸ್ತ್ರದಲ್ಲಲ್ಲ’ ಎಂದು ಅವರು ಇದೇ ಭಾಷಣದಲ್ಲಿ ಹೇಳಿದ್ದರು.

ಬುದ್ಧನನ್ನು ವೈಚಾರಿಕವಾಗಿ ವಿವರಿಸಲೆತ್ನಿಸಿದ ಅಂಬೇಡ್ಕರ್, ಬುದ್ಧನ ಬಗೆಗಿನ ಸಿದ್ಧಪುರಾಣಗಳನ್ನು ಒಡೆದರು. ನಾವೆಲ್ಲ ಚರಿತ್ರೆಯ ಜನಪ್ರಿಯ ಪುಸ್ತಕಗಳ ಮೂಲಕ ತಿಳಿದಿರುವಂತೆ ಸಿದ್ಧಾರ್ಥ ‘ರೋಗ, ಮುಪ್ಪು ಹಾಗೂ ಸಾವಿನ ಚಿತ್ರಗಳನ್ನು ಕಂಡು ವಿರಾಗಿಯಾದ’ ತಾನೆ? ಈ ದೃಶ್ಯಗಳು ರೂಪಕಗಳಾಗಿ ಅತ್ಯಂತ ಅರ್ಥಪೂರ್ಣವಾಗಿವೆ ಎನ್ನುವುದು ನಿಜ. ಆದರೆ ಚರಿತ್ರೆಯ ಸೂಕ್ಷ್ಮ ಅಧ್ಯಯನದ ಮೂಲಕ ಅಂಬೇಡ್ಕರ್ ಕಂಡುಕೊಂಡ ಸತ್ಯ ಇದು: ಬುದ್ಧ ಈ ದೃಶ್ಯಗಳನ್ನು ಕಂಡು ವಿರಾಗಿಯಾಗಲಿಲ್ಲ; ಬದಲಿಗೆ, ತನ್ನ ತಂದೆಯ ರಾಜ್ಯಕ್ಕೂ ಪಕ್ಕದ ರಾಜ್ಯಕ್ಕೂ

ನದಿಯ ನೀರಿನ ವಿಷಯದಲ್ಲಿ ಉಂಟಾದ

ಜಗಳದಿಂದ ಬೇಸರಗೊಂಡು ರಾಜ್ಯ ತೊರೆದ. ಬುದ್ಧನನ್ನು ಹತ್ತು ಅವತಾರಗಳ ಜೊತೆ

ಹನ್ನೊಂದಾಗಿಸಿ ನುಂಗಲೆತ್ನಿಸಿದ ಪುರಾಣಗಳನ್ನೂ ಅಂಬೇಡ್ಕರ್ ತಿರಸ್ಕರಿಸಿದರು. ಏಸುಕ್ರಿಸ್ತ, ಪೈಗಂಬರರ ಹಾಗೆ ಬುದ್ಧ ತಾನು ದೇವದೂತನೆಂದಾಗಲೀ, ಕೃಷ್ಣನಂತೆ ದೇವರದೇವನೆಂದಾಗಲೀ

ಎಂದೂ ಹೇಳಿಕೊಳ್ಳಲಿಲ್ಲ ಎಂಬ ಸತ್ಯವನ್ನು ಒತ್ತಿ ಹೇಳಿದರು.

ಹೀಗೆ ಅಂಬೇಡ್ಕರ್ ತಮ್ಮ ಒಟ್ಟು ಜೀವಿತದಲ್ಲಿ ಬೌದ್ಧ ದಮ್ಮವನ್ನು ಅತ್ಯಂತ ಕರಾರುವಾಕ್ಕಾಗಿ ಹಾಗೂ ವೈಚಾರಿಕವಾಗಿ ವಿವರಿಸಿಕೊಂಡ ಕ್ರಮ ಇಂದು ಇಡೀ ಜಗತ್ತಿಗೆ ಆದರ್ಶ ಮಾದರಿಯಾಗಬಲ್ಲದು. ಯಾಕೆಂದರೆ, ಧಾರ್ಮಿಕ ಮೂಲಭೂತವಾದಿ ಕೈಗಾರಿಕೆ ಜಗತ್ತಿನಾದ್ಯಂತ ಬೆಳೆಯುತ್ತಿದೆ. ಧರ್ಮ ಉಕ್ಕಿಸಬಲ್ಲ ಭಾವನಾತ್ಮಕತೆಯನ್ನು ಜನರನ್ನು ಬೆಸೆಯಲು ಬಳಸದೆ, ಭಾವನಾತ್ಮಕ ವಿಕಾರಗಳನ್ನು ಹಬ್ಬಿಸುವ ಕ್ರೂರ ಕೆಲಸ ಹೆಚ್ಚಾಗಿದೆ. ಇಂಥ ಕಾಲದಲ್ಲಿ, ಅಂಬೇಡ್ಕರ್ ಬೌದ್ಧದಮ್ಮವನ್ನು ವಿವರಿಸಿರುವ ಆರೋಗ್ಯಕರ ರೀತಿಯನ್ನು ಹೀಗೆ ಸಂಗ್ರಹಿಸಿ ನೋಡಬಹುದು:

1. ಉದಾರವಾದಿ ಪ್ರಜಾಪ್ರಭುತ್ವ, ಮಾನವತಾವಾದ, ವೈಜ್ಞಾನಿಕತೆ ಹಾಗೂ ವಿಚಾರವಾದಗಳನ್ನು ಒಪ್ಪುವ ಆಧುನಿಕ ಮನಸ್ಸಿಗೆ ಬೌದ್ಧ ದಮ್ಮ ಒಪ್ಪಿತವಾಗುತ್ತದೆ.

2. ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತ್ವ- ಸೋದರಿತ್ವಗಳ ತತ್ವವನ್ನು ಬೌದ್ಧ ದಮ್ಮ ಪ್ರತಿಪಾದಿಸುತ್ತದೆ.

3. ಧರ್ಮದ ಹೆಸರಿನಲ್ಲಿ ಅನಿಷ್ಟವಾದ ಆಚರಣೆಗಳನ್ನು ಬೌದ್ಧ ದಮ್ಮ ಒಪ್ಪುವುದಿಲ್ಲ.

4. ಬೌದ್ಧ ದಮ್ಮ ಜಾತಿಯ ಮೇಲು, ಕೀಳುಗಳನ್ನು ತಿರಸ್ಕರಿಸುತ್ತದೆ.

5. ಈ ದಮ್ಮದ ಮಾರ್ಗಗಳನ್ನು ಪ್ರಶ್ನಿಸುವ, ವಿವರಣೆಯ ಮೂಲಕ ಅದಕ್ಕೆ ತಿದ್ದುಪಡಿ ತರುವ ಸ್ವಾತಂತ್ರ್ಯ ದಮ್ಮದ ಅನುಯಾಯಿಗೆ ಇದೆ.

6. ಧರ್ಮಗಳು ಸಾಮಾನ್ಯವಾಗಿ ಪವಾಡಗಳು, ಅಲೌಕಿಕ ಘಟನೆಗಳು ಹಾಗೂ ಅಲೌಕಿಕ ಶಕ್ತಿಗಳ ಸುತ್ತ ಕಟ್ಟಿದ ಸುಳ್ಳುಗಳ ಮೂಲಕ ಜನರ ಮೇಲೆ ಯಜಮಾನಿಕೆ ಸ್ಥಾಪಿಸುತ್ತಿರುತ್ತವೆ. ಹಿಂದೂ

ಧರ್ಮವೂ ಈ ಬಗೆಯಲ್ಲೇ ಜನಸಮುದಾಯ

ವನ್ನು ನಿಯಂತ್ರಿಸುತ್ತಾ ಬಂದಿದೆ. ಈ ದೃಷ್ಟಿಯಿಂದ ನೋಡಿದಾಗ, ಬೌದ್ಧ ದಮ್ಮ ಪವಾಡಗಳಾಗಲೀ ಅಲೌಕಿಕವಾದ ದೈವದ ಕಲ್ಪನೆಯಾಗಲೀ

ಇಲ್ಲದ ಧರ್ಮ. ಧಾರ್ಮಿಕ ನಾಯಕರಲ್ಲಿ

ಅಲೌಕಿಕ ಶಕ್ತಿಯಿದೆಯೆಂದು ಬೌದ್ಧ ದಮ್ಮ ಬಿಂಬಿಸುವುದಿಲ್ಲ.

7. ಸಮಾನತೆಯ ಆಶಯವನ್ನು ಪ್ರತಿಪಾದಿಸಲು, ರಾಜಕೀಯ ಕ್ರಾಂತಿಗೆ ಪೂರಕವಾಗಬಲ್ಲ ಧಾರ್ಮಿಕ

ಕ್ರಾಂತಿಯನ್ನು ರೂಪಿಸಲು ಬೌದ್ಧ ದಮ್ಮ ನೆರವಾಗಬಲ್ಲದು.

8. ಬುದ್ಧನ ಪ್ರಕಾರ ‘ದಮ್ಮ’ ಎನ್ನುವುದು ಮೂಲತಃ ನ್ಯಾಯ ಹಾಗೂ ಸಾಮಾಜಿಕ ನೈತಿಕತೆ. ಈ ದಮ್ಮದಲ್ಲಿ ತೀರ್ಥಯಾತ್ರೆ, ಬಲಿ ಇತ್ಯಾದಿಗಳಿಗೆ ಅವಕಾಶವಿಲ್ಲ.

9. ಚರಿತ್ರೆಯುದ್ಧಕ್ಕೂ ಅನೇಕ ಧರ್ಮಗಳು ಯಾಜಮಾನ್ಯದ ರಾಜಕಾರಣ ಹಾಗೂ ಎಲ್ಲವನ್ನೂ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಲಾಭಕೋರ ರಾಜಕಾರಣದ ಮುಖವಾಡಗಳಾಗಿ ಬಳಕೆಯಾಗುತ್ತಾ ಬಂದಿವೆ. ಇದನ್ನು ಮನಗಂಡಿದ್ದ ಅಂಬೇಡ್ಕರ್ ‘ನನಗೆ ಧರ್ಮದ ಅಗತ್ಯವಿದೆಯೇ ಹೊರತು ಧರ್ಮದ ಹೆಸರಿನಲ್ಲಿ ಗೋಸುಂಬೆತನವಲ್ಲ’ ಎಂದರು. ಒಂದು ಉತ್ತಮ ಜೀವನಮಾರ್ಗ ವಾಗಿ ಕೂಡ ಅವರು ಬೌದ್ಧ ಮಾರ್ಗವನ್ನು ಒಪ್ಪಿಕೊಂಡರು.

10. ಬೌದ್ಧ ದಮ್ಮ ವೈದಿಕವಾದ ಹಾಗೂ ಬ್ರಾಹ್ಮಣವಾದದ ವಿರುದ್ಧ ಹೋರಾಡುತ್ತಾ ಅಸ್ಪಶ್ಯತೆಯನ್ನು ದೃಢವಾಗಿ ವಿರೋಧಿಸಿತ್ತು ಹಾಗೂ ಅಸ್ಪಶ್ಯರನ್ನು ತನ್ನ ತೆಕ್ಕೆಗೆ ಸ್ವೀಕರಿಸಿತ್ತು. ಈ ತಾತ್ವಿಕ ಹಾಗೂ ಧಾರ್ಮಿಕ ಬುನಾದಿ ಅಂಬೇಡ್ಕರ್ ವೈದಿಕ ವಿಕಾರಗಳ ವಿರುದ್ಧ ನಡೆಸುತ್ತಿದ್ದ ಹೋರಾಟಕ್ಕೆ ಪೂರಕವಾಗಿತ್ತು.

ಅಂಬೇಡ್ಕರ್‌ವಾದಿ ಚಿಂತನೆ ಹಾಗೂ ಅವರ ಬೌದ್ಧ ವ್ಯಾಖ್ಯಾನಗಳೆರಡೂ ಇಂದಿನ ಭಾರತೀಯ ಚಿಂತನೆಯ ಬಹುಮುಖ್ಯ ಧಾರೆಯನ್ನು ರೂಪಿಸತೊಡಗಿವೆ. ಹಾಗೆಯೇ ಅಂಬೇಡ್ಕರ್ ಅವರ ಬೌದ್ಧ ದಮ್ಮ ಸ್ವೀಕಾರದ ಮಾರ್ಗ ಕೂಡ ವ್ಯಾಪಕವಾಗಿ ಹಬ್ಬತೊಡಗಿದೆ.

ಭಾರತದ ದಲಿತ ಚಳುವಳಿಯಲ್ಲಿ ಅಂಬೇಡ್ಕರ್‌ವಾದ ಹಾಗೂ ಬೌದ್ಧ ದಮ್ಮಗಳು ಪರಸ್ಪರ ಬೆರೆತುಹೋಗಿವೆ. ದಲಿತರು ತಮ್ಮ ಮೇಲೆ ಹೇರಲಾದ ಕೀಳರಿಮೆಯನ್ನು ಬೌದ್ಧ ದಮ್ಮದ ಮೂಲಕ ಮೀರಲೆತ್ನಿಸಿದ್ದಾರೆ. ಅಸ್ಪಶ್ಯತೆಯ ಅವಮಾನದಿಂದ ಕುಗ್ಗಿಹೋದ ದಲಿತರ ದೇಹ ಹಾಗೂ ಚೈತನ್ಯಗಳನ್ನು ಬಿಡುಗಡೆಗೊಳಿಸದಿದ್ದರೆ ಆ ಮನಸ್ಸುಗಳಲ್ಲಿ ಯಾವ ಉತ್ಸಾಹವೂ ಹುಟ್ಟುವುದಿಲ್ಲ; ಮನಸ್ಸಿನಲ್ಲಿ ಉತ್ಸಾಹ ಉಕ್ಕದೆ ಪ್ರಗತಿಯಿಲ್ಲ ಎಂಬುದನ್ನು ಅಂಬೇಡ್ಕರ್ ಸ್ಪಷ್ಟವಾಗಿ ಗ್ರಹಿಸಿದ್ದರು. ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯೋತ್ತರ ದಲಿತ ತಲೆಮಾರುಗಳ ಮೇಲೆ ಬುದ್ಧ ತತ್ವಗಳ ಪ್ರಭಾವವನ್ನು ಕುರಿತು ಅಧ್ಯಯನ ಮಾಡಿರುವ ಅರುಣ್‌ಸಾಧು ತಾವು ಕಂಡ ಬೆಳವಣಿಗೆಯನ್ನು ಹೀಗೆ ದಾಖಲಿಸುತ್ತಾರೆ:

‘ಬೌದ್ಧ ದಮ್ಮದಿಂದಾಗಿ ದಲಿತರಲ್ಲಿ ಹೊಸ ಐಡೆಂಟಿಟಿ ಹಾಗೂ ಆತ್ಮವಿಶ್ವಾಸ ಕಾಣುತ್ತಿದೆ. ಬೌದ್ಧರಾಗಿರುವ ಯುವಕರು ಪೂರ್ವಜನ್ಮದ ಕರ್ಮದ ಸಿದ್ಧಾಂತವನ್ನಾಗಲೀ ಹಳೆಯ ಆಚರಣೆಗಳನ್ನಾಗಲೀ ನಂಬುವುದಿಲ್ಲ. ಮೇಲುಜಾತಿಯ ಹಿಂದೂ ತರುಣ ತರುಣಿಯರಿಗಿಂತ ಇವರಲ್ಲಿ ಹೆಚ್ಚಿನ ದೃಢತೆ, ವೈಜ್ಞಾನಿಕತೆ ಹಾಗೂ ಪ್ರಗತಿಪರತೆ ಕಂಡುಬರುತ್ತಿವೆ. ಅವರು ಕುರುಡು ನಂಬಿಕೆಗಳನ್ನು ಕೈಬಿಟ್ಟು ವೈಚಾರಿಕತೆಯ ಕಡೆಗೆ ನಡೆದಿರುವುದರಿಂದ, ಅವರಲ್ಲಿ ಶಿಕ್ಷಣ ಹಾಗೂ ಜ್ಞಾನದ ಹಸಿವು ಹೆಚ್ಚಿದೆ. ಅವರ ಆರ್ಥಿಕ ಪ್ರಗತಿಗೆ ಇದು ಕೂಡ ಮುಖ್ಯ ಕಾರಣವಾಗಿದೆ.’

ಅಂಬೇಡ್ಕರ್ ವ್ಯಾಖ್ಯಾನಿಸಿ ರೂಪಿಸಿಕೊಟ್ಟ ಬೌದ್ಧದಮ್ಮ ಆರಂಭಿಸಿದ ಸ್ವಾತಂತ್ರ್ಯೋತ್ತರ ಭಾರತದ ಅಸಲಿ ಪುನರುಜ್ಜೀವನವನ್ನು ದಲಿತ, ಹಿಂದುಳಿದ ವರ್ಗಗಳ ಬಹುಜನ ಸಮಾಜಕ್ಕೆ ವ್ಯಾಪಕವಾಗಿ ಹಬ್ಬಿಸುವ ಮಹತ್ತರ ಕರ್ತವ್ಯ ಕೂಡ ನಮ್ಮೆದುರಿಗಿದೆ. ಈ ಬುದ್ಧ ಪೂರ್ಣಿಮೆಯ ದಿನ ಅಂಬೇಡ್ಕರ್ ಬೌದ್ಧ ಮಾರ್ಗದಲ್ಲಿ ಹಬ್ಬಿಸಿದ ಹೊಸ

ವೈಚಾರಿಕ ಬೆಳಕು ಮುಸುಕಿದೀ ಮಬ್ಬಿನಲಿ ನಮ್ಮ ಕೈ ಹಿಡಿದು ನಡೆಸುವಂತಾಗಲಿ! ಒಳಮೀಸಲಾತಿಯ ಚಿಂತನೆಗಳ ಹೈಪ್‌ಗಳ ನಡುವೆ ಅಂಬೇಡ್ಕರ್ ಮತ್ತು ಬುದ್ಧ ಎಂದೂ ಹಿನ್ನೆಲೆಗೆ ಸರಿಯದಿರಲಿ. ಹ್ಯಾಪಿ ಬುದ್ಧ ಪೂರ್ಣಿಮಾ!

share
ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್
Next Story
X