Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ದ್ವೇಷ ಭಕ್ತ ಗೆದ್ದಲುಗಳು ಸೃಷ್ಟಿಸಿದ...

ದ್ವೇಷ ಭಕ್ತ ಗೆದ್ದಲುಗಳು ಸೃಷ್ಟಿಸಿದ ರೆಜಿಮೆಂಟಾಯಣ

ಶಂಬೂಕಶಂಬೂಕ21 May 2025 11:03 AM IST
share
ದ್ವೇಷ ಭಕ್ತ ಗೆದ್ದಲುಗಳು ಸೃಷ್ಟಿಸಿದ ರೆಜಿಮೆಂಟಾಯಣ
ನಮ್ಮ ಗೌರವಾನ್ವಿತ ಹಿರಿಯ ಯೋಧರು ಈ ಪತ್ರ ಬರೆದು ಇದೀಗ ಸುಮಾರು ಐದು ವರ್ಷಗಳಾದವು. ಆದರೂ ‘ಮುಸ್ಲಿಮ್ ರೆಜಿಮೆಂಟ್’ ಎಂಬ ದೇಶವಿರೋಧಿ ವದಂತಿ ಮಾತ್ರ ಇನ್ನೂ ಚಲಾವಣೆಯಲ್ಲಿದೆ. ಪಹಲ್ಗಾಮ್ ಭಯೋತ್ಪಾದಕರನ್ನು ಹಿಡಿಯುವಲ್ಲಿ ವಿಫಲವಾದ ಸರಕಾರ, ಈ ವಿಭಜಕ ವದಂತಿಯನ್ನು ಹರಡುವ ಮೂಲಕ ಆ ಭಯೋತ್ಪಾದಕರಿಗೆ ನೆರವಾಗುತ್ತಿರುವ ಆಂತರಿಕ ದ್ರೋಹಿಗಳನ್ನು ನಿಯಂತ್ರಿಸುವಲ್ಲೂ ಸಂಪೂರ್ಣ ವಿಫಲವಾಗಿದೆ. ಸಮಾಜವನ್ನು ವಿಭಜಿಸುವ ವದಂತಿಕೋರರನ್ನು ನಿಯಂತ್ರಿಸಲು ಸರಕಾರ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದಲೇ ಕಿಡಿಗೇಡಿಗಳು ಬಯಸಿದಂತೆ, ಅವರ ಅಪಪ್ರಚಾರದ ಬಲಿಪಶುಗಳಾದ ಲಕ್ಷಾಂತರ ಮಂದಿಯ ಮನದಲ್ಲಿ ಭಾರತೀಯ ಸೇನೆಯಲ್ಲಿ ‘ಮುಸ್ಲಿಮ್ ರೆಜಿಮೆಂಟ್’ ಯಾಕಿಲ್ಲ? ಎಂಬ ಪ್ರಶ್ನೆ ವಿಷಬೀಜದಂತೆ ಬೀಡು ಬಿಟ್ಟಿದೆ.

ಭಾಗ- 2

2020ರಲ್ಲಿ ಪ್ರಸ್ತುತ ಕಾಲ್ಪನಿಕ ‘ಮುಸ್ಲಿಮ್ ರೆಜಿಮೆಂಟ್’ ಕುರಿತಾದ ಸುಳ್ಳು ದೊಡ್ಡ ಪ್ರಮಾಣದಲ್ಲಿ ಚಲಾವಣೆಗೆ ಬಂದಾಗ ಬಿಬಿಸಿ ಸುದ್ದಿಸಂಸ್ಥೆಯು ತನ್ನ ಹಿಂದಿ ಆವೃತ್ತಿಯಲ್ಲಿ ಈ ಕುರಿತು ಒಂದು ಸತ್ಯಶೋಧಕ ವರದಿಯನ್ನು ಪ್ರಕಟಿಸಿತು.

ಆ ವರ್ಷ ಸೆಪ್ಟಂಬರ್ 17ರಂದು ಪ್ರಕಟವಾದ ಬಿಬಿಸಿ ವರದಿಯಲ್ಲಿದ್ದ ಕೆಲವು ಮುಖ್ಯ ಮಾಹಿತಿ ಹೀಗಿವೆ (ಸಾರಾಂಶ):

‘‘ಭಾರತೀಯ ಸೇನೆಯಲ್ಲಿ ಒಂದು ಮುಸ್ಲಿಮ್ ರೆಜಿಮೆಂಟ್ ಇತ್ತು ಮತ್ತು 1965ರಲ್ಲಿ ಅದರ ಸದಸ್ಯರು ವಿದ್ರೋಹ ಎಸಗಿದ್ದರಿಂದ ಅದನ್ನು ವಿಸರ್ಜಿಸಲಾಯಿತು ಎಂಬ ವದಂತಿ ಬಹುಕಾಲದಿಂದ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚಲಾವಣೆಯಲ್ಲಿದೆ. (ಈ ಕುರಿತು ಫೇಸ್ ಬುಕ್, ಟ್ವಿಟರ್ ಇತ್ಯಾದಿಗಳಲ್ಲಿ ಪ್ರಕಟವಾದ ಮಿಥ್ಯ ಸಂದೇಶಗಳ ಕೆಲವು ಚಿತ್ರಗಳನ್ನು ಉದಾಹರಣೆಗಾಗಿ ಪ್ರಕಟಿಸಲಾಗಿದೆ). ಮೇಜರ್ ಜನರಲ್ (ನಿವೃತ್ತ) ಶಶಿ ಆಸ್ತಾನಾ ಅವರ ಪ್ರಕಾರ ಭಾರತೀಯ ಸೇನೆಯಲ್ಲಿ ಮುಸ್ಲಿಮ್ ರೆಜಿಮೆಂಟ್ ಎಂಬ ಹೆಸರಿನ ಒಂದು ರೆಜಿಮೆಂಟ್ ಎಂದೂ ಅಸ್ತಿತ್ವದಲ್ಲೇ ಇರಲಿಲ್ಲ. ಜಾತಿ ಅಥವಾ ಜನಾಂಗದ ಹೆಸರಲ್ಲಿ ಕೆಲವು ರೆಜಿಮೆಂಟ್‌ಗಳನ್ನು ಒಂದೋ ಬ್ರಿಟಿಷರ ಕಾಲದಲ್ಲಿ ರಚಿಸಲಾಗಿತ್ತು ಅಥವಾ ಅವು ಯಾವುದಾದರೂ ರಾಜ್ಯದ ಸೇನೆಯ ಭಾಗವಾಗಿದ್ದವು. ಉದಾ: ಜಮ್ಮು-ಕಾಶ್ಮೀರದಲ್ಲಿ ‘ಜಮ್ಮು-ಕಾಶ್ಮೀರ್ ಲೈಟ್ ಇನ್ ಫ್ಯಾಂಟ್ರಿ ರೆಜಿಮೆಂಟ್’. ದೇಶದ ಸ್ವಾತಂತ್ರ್ಯದ ಬಳಿಕ ಪ್ರಸ್ತುತ ಘಟಕಗಳ ಹಳೆಯ ಹೆಸರುಗಳನ್ನೇ ಉಳಿಸಿಕೊಳ್ಳಲಾಯಿತು. ಮದ್ರಾಸ್ ರೆಜಿಮೆಂಟ್ 200 ವರ್ಷಕ್ಕಿಂತಲೂ ಹಿಂದಿನಿಂದ ಅಸ್ತಿತ್ವದಲ್ಲಿದೆ. ಕುಮಾವುನ್ ರೆಜಿಮೆಂಟ್ ಎರಡು ಜಾಗತಿಕ ಯುದ್ಧಗಳಲ್ಲಿ ಭಾಗವಹಿಸಿದೆ. ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ ನೈನ್ ಅವರ ಪ್ರಕಾರ ‘ಮುಸ್ಲಿಮ್ ರೆಜಿಮೆಂಟ್’ ಎಂಬುದು ಶುದ್ಧ ಸುಳ್ಳು ಪ್ರಚಾರದ ಭಾಗವಾಗಿದ್ದು ಕನಿಷ್ಠ ಕಳೆದ 200 ವರ್ಷಗಳಲ್ಲಂತೂ ಆ ಹೆಸರಿನ ಯಾವುದೇ ರೆಜಿಮೆಂಟ್ ಭಾರತೀಯ ಸೇನೆಯಲ್ಲಿ ಅಸ್ತಿತ್ವದಲ್ಲಿಲ್ಲ. ಶಶಿ ಆಸ್ತಾನಾ ಅವರು ಹೇಳುವಂತೆ ‘‘ಭಾರತೀಯ ಸೇನೆಯಲ್ಲಿ ಯಾರನ್ನೂ ಅವರ ಜಾತಿ ಅಥವಾ ಧರ್ಮದ ಹೆಸರಲ್ಲಿ ಭರ್ತಿ ಮಾಡಲಾಗುವುದಿಲ್ಲ. ಸೇನೆ ಕೇವಲ ಫಿಟ್ನೆಸ್ ಅನ್ನು ಮಾತ್ರ ನೋಡುತ್ತದೆ. ಸೇನೆಯಲ್ಲಿ ಯಾವುದೇ ಮೀಸಲಾತಿ ಇಲ್ಲ. ಸೇನೆಗೆ ನೇಮಕಾತಿ ಪ್ರಕ್ರಿಯೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದರೆ, ನೀವು ಗಡ್ವಾಲ್‌ನವರಾಗಿದ್ದರೂ ಕುಮಾವುನ್‌ನವರಾಗಿದ್ದರೂ, ಮುಸಲ್ಮಾನರಾಗಿದ್ದರೂ ನಿಮಗೆ ಸೇರಲು ಅವಕಾಶವಿದೆ. ನೀವು ಶಾರೀರಿಕವಾಗಿ ಸಮರ್ಥರಾಗಿದ್ದರೆ ಸಾಕು, ಯಾವುದೇ ರೆಜಿಮೆಂಟ್‌ಗೆ ಸೇರಿಕೊಳ್ಳಬಹುದು.... ಮುಸ್ಲಿಮ್ ಯೋಧರು ಭಾರತೀಯ ಸೇನೆಯ ವಿಭಿನ್ನ ರೆಜಿಮೆಂಟ್ ಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಎಲ್ಲ ಸಂದರ್ಭಗಳಲ್ಲೂ ಅಸಾಮಾನ್ಯ ಸಾಹಸ ಪ್ರದರ್ಶಿಸಿದ್ದಾರೆ.’’

ಬಿಬಿಸಿ ಹಿಂದಿಯ ಫ್ಯಾಕ್ಟ್ ಚೆಕ್ ತಂಡವು ಕಂಡುಕೊಂಡಂತೆ, ಸ್ವಾತಂತ್ರ್ಯಕ್ಕೆ ಮುನ್ನವಾಗಲಿ ಆಬಳಿಕವಾಗಲಿ ಭಾರತೀಯ ಸೇನೆಯಲ್ಲಿ ಎಂದೂ ‘ಮುಸ್ಲಿಮ್ ರೆಜಿಮೆಂಟ್’ ಎಂಬೊಂದು ವಿಭಾಗ ಇರಲೇ ಇಲ್ಲ ಮತ್ತು ಈ ಕುರಿತು ಹರಡಲಾಗುತ್ತಿರುವ ವದಂತಿಗಳೆಲ್ಲಾ ಶುದ್ಧ ಸುಳ್ಳುಗಳಾಗಿವೆ.’’

ಅದೇ ದಿನ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಕೂಡಾ ಈ ಕುರಿತು ಒಂದು ಸತ್ಯಶೋಧಕ ವರದಿ ಪ್ರಕಟಿಸಿತು. ಪ್ರಸ್ತುತ ವದಂತಿಯನ್ನು ಪ್ರಸ್ತಾಪಿಸಿ, ಅದಕ್ಕೆ ಪ್ರಚಾರ ಕೊಡುವ ಕೆಲವು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಫೋಟೊವನ್ನು ಕೂಡಾ ಪುರಾವೆಯ ರೂಪದಲ್ಲಿ ಪ್ರಕಟಿಸಿತು. ಉದಾ:

1. ವಿನೋದ್ ಅಗರವಾಲ್ ಎಂಬಾತನ ಪೋಸ್ಟ್- ‘‘ಭಾರತ-ಪಾಕ್ ಯುದ್ಧದ ವೇಳೆ ಮುಸ್ಲಿಮ್ ರೆಜಿಮೆಂಟ್ ನವರು ಹೋರಾಡಲು ನಿರಾಕರಿಸಿದ್ದರು. ಇವರೆಲ್ಲಾ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ದೇಶದ ಸೇವೆ ಮಾಡುವರೆಂದು ನಿಮಗೆ ಅನಿಸುತ್ತಿದೆಯೇ?’’

2. ಟ್ವಿಟರ್‌ನಲ್ಲಿ ಇದೇ ಪದಗಳನ್ನು ಬಳಸಿ ಪ್ರಿಯತಮ್ ಸ್ವಾಯಿ ಎಂಬಾತ ಹಾಕಿದ ಸಂದೇಶ.

ಈ ಕುರಿತು ಪತ್ರಿಕೆಯು 1979ರಿಂದ 2015ರ ತನಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮೇಜರ್ ಜನರಲ್ (ನಿವೃತ್ತ) ಹರ್ಷ ಕಾಕರ್ ಅವರನ್ನು ಮಾತನಾಡಿಸಿದಾಗ ಅವರು ಭಾರತೀಯ ಸೇನೆಯಲ್ಲಿ ಮುಸ್ಲಿಮರಿಗೆಂದೇ ಮೀಸಲಾಗಿರುವ ಯಾವುದೇ ರೆಜಿಮೆಂಟ್ ಎಂದೂ ಅಸ್ತಿತ್ವದಲ್ಲಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಪತ್ರಿಕೆಯು 1974ರಿಂದ 2013ರ ತನಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ ನೈನ್ 2017ರ ತಮ್ಮ ಲೇಖನದಲ್ಲಿ ‘‘ಪಾಕಿಸ್ತಾನದ ಈ ಕಿಡಿಗೇಡಿ ಪ್ರಚಾರವನ್ನು ಪರಿಣಾಮಕಾರಿಯಾಗಿ ಅಲ್ಲಗಳೆಯದಿದ್ದರೆ ಜನರೆಲ್ಲಾ ಗೊಂದಲಕ್ಕೀಡಾಗುವ ಸಾಧ್ಯತೆ ಇದೆ’’ ಎಂದು ಬರೆದಿದ್ದನ್ನು ನೆನಪಿಸಿತು.

ಪ್ರಸ್ತುತ ವದಂತಿಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಬಳಿಕ ‘ಟೈಮ್ಸ್ ಆಫ್ ಇಂಡಿಯಾ’ ನೀಡಿದ ತೀರ್ಪು ಹೀಗಿತ್ತು: ‘‘1965ರ ಭಾರತ ಪಾಕ್ ಯುದ್ಧದ ವೇಳೆ ಭಾರತದ ಮುಸ್ಲಿಮ್ ರೆಜಿಮೆಂಟ್ ನವರು ಪಾಕ್ ವಿರುದ್ಧ ಹೋರಾಡಲು ನಿರಾಕರಿಸಿದ್ದರೆಂಬುದು ಶುದ್ಧ ಸುಳ್ಳು. ನಿಜವಾಗಿ ಮುಸ್ಲಿಮ್ ರೆಜಿಮೆಂಟ್ ಎಂಬ ಹೆಸರಿನ ಯಾವುದೇ ರೆಜಿಮೆಂಟ್ ಭಾರತೀಯ ಸೈನ್ಯದಲ್ಲಿ ಎಂದೂ ಅಸ್ತಿತ್ವದಲ್ಲೇ ಇರಲಿಲ್ಲ.’’

ಮುಂದಿನ ತಿಂಗಳು, 2020 ಅಕ್ಟೋಬರ್ 10ರಂದು ‘ಆಲ್ಟ್ ನ್ಯೂಸ್’ನಲ್ಲಿ ಪತ್ರಕರ್ತೆ ಕಿಂಜಾಲ್ ಪರ್ಮಾರ್ ಅವರು ಈ ಕುರಿತು ಒಂದು ತನಿಖಾ ವರದಿಯನ್ನು ಪ್ರಕಟಿಸಿದರು. ಅವರ ವರದಿಯಲ್ಲಿ ‘‘ಬಿಜೆಪಿಯ ರಾಷ್ಟ್ರೀಯ ಮೀಡಿಯಾ ಪ್ಯಾನೆಲ್ ಸದಸ್ಯ ಯಶವೀರ್ ರಾಘವ್ ಅವರು 2017ರಲ್ಲೇ ಈ ಸುಳ್ಳನ್ನು ಟ್ವೀಟ್ ಮಾಡಿದ್ದರು. ಆಗಿನಿಂದ ಇದು ವ್ಯಾಪಕ ಚಲಾವಣೆಯಲ್ಲಿದೆ’’ ಎಂಬ ಮಹತ್ವದ ಮಾಹಿತಿ ಇತ್ತು.

‘ಮುಸ್ಲಿಮ್ ರೆಜಿಮೆಂಟ್’ ಎಂಬ ಕಿಡಿಗೇಡಿ ಕಥೆಯನ್ನು ಮೂಲತಃ ಪಾಕಿಸ್ತಾನದ ಬೇಹುಗಾರಿಕಾ ವಿಭಾಗದ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ (ISPಖ) ಘಟಕದವರು ಸೃಷ್ಟಿಸಿದ್ದರು ಮತ್ತು ಆ ಬಳಿಕ ಭಾರತದಲ್ಲಿರುವ ಅವರ ಏಜೆಂಟರು ಅದಕ್ಕೆ ಪ್ರಚಾರ ನೀಡಿದರು ಎಂಬುದಕ್ಕೆ ಒಂದು ಪ್ರಮುಖ ಪುರಾವೆ ಇತ್ತೀಚಿನ ಪಹಲ್ಗಾಮ್ ದುರಂತದ ಬಳಿಕ ಪ್ರಾಪ್ತವಾಯಿತು. ಪಹಲ್ಗಾಮ್ ದುರಂತದ ಬೆನ್ನಿಗೆ ಭಾರತವು ಪಾಕ್ ವಿರುದ್ಧ ಪ್ರತಿಕ್ರಮಕ್ಕೆ ಸಜ್ಜಾಗುತ್ತಿದ್ದಂತೆ ಅತ್ತ ಪಾಕಿಸ್ತಾನದ ಕಡೆಯಿಂದ ಪ್ರೊಪಗಾಂಡಾ ಯುದ್ಧ ಆರಂಭವಾಯಿತು. ಅವರ ಪ್ರಚಾರ ಯೋಧರು ಭಾರತೀಯ ಸೇನೆ ಮತ್ತು ಭಾರತೀಯ ಸಮಾಜದಲ್ಲಿ ಬಿರುಕು ಮೂಡಿಸಲಿಕ್ಕಾಗಿ ಹಲವು ಸುಳ್ಳು ವದಂತಿಗಳನ್ನು ಪ್ರಸಾರ ಮಾಡತೊಡಗಿದರು. ಭಾರತದ ಮಿಲಿಟರಿ ಮೇಜರ್ ಒಬ್ಬ ಕೇಂದ್ರ ಸರಕಾರವನ್ನು ದೂಷಿಸುವ ಪಾಕ್ ಪ್ರಾಯೋಜಿತ ನಕಲಿ ಪೋಸ್ಟ್ ಅನ್ನು ಪ್ರಖ್ಯಾತ ಫ್ಯಾಕ್ಟ್ ಚೆಕ್ಕರ್ ಝುಬೇರ್ ಬಯಲಿಗೆಳೆದಿದ್ದರು. ಅದೇ ರೀತಿ ಭಾರತದ ಸಿಖ್ ಸೈನಿಕರು ಪಾಕ್ ವಿರುದ್ಧ ಹೋರಾಡಲು ನಿರಾಕರಿಸಿದ್ದಾರೆ ಎಂಬ ದಟ್ಟ ಪ್ರಚಾರವೂ ಪಾಕ್ ಕಡೆಯಿಂದ ನಡೆದಿತ್ತು. ಅಲ್ಲಿನ ಕಿಡಿಗೇಡಿಗಳು, ಭಾರತೀಯರ ಹೆಸರುಗಳಲ್ಲಿ, ಕಾಂಗ್ರೆಸ್ ಪಕ್ಷದ ಬೆಂಬಲಿಗರು ಎಂಬಂತೆ ಬಿಂಬಿಸಲಾದವರ ಹೆಸರಲ್ಲಿ ಅಥವಾ ಸಿಖ್ ಸಮಾಜದ ನಾಯಕರ ಹೆಸರಲ್ಲಿ ನಕಲಿ ವಿಳಾಸ, ನಕಲಿ ಖಾತೆ ಮತ್ತು ನಕಲಿ ಫೋಟೊಗಳನ್ನು ಬಳಸಿ ಜನರನ್ನು ದಾರಿತಪ್ಪಿಸುವ, ಅಪನಂಬಿಕೆ ಸೃಷ್ಟಿಸುವ ಮತ್ತು ಗೊಂದಲ ಮೂಡಿಸುವ ಸಂದೇಶಗಳ ವ್ಯಾಪಕ ಪ್ರಸಾರ ನಡೆಸಿದರು. ಝುಬೇರ್ ಥರದ ಸತ್ಯಾನ್ವೇಷಿಗಳು ಹೆಚ್ಚು ವಿಳಂಬಿಸದೆ ಈ ವದಂತಿಗಳ ಪಾಕ್ ಮೂಲವನ್ನು ಪತ್ತೆಹಚ್ಚಿ ಸಂಭಾವ್ಯ ಬಲಿಪಶುಗಳನ್ನು ಜಾಗೃತಗೊಳಿಸಿದರು. ದೇಶದ ಪ್ರಮುಖ ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಪ್ರಕಟವಾಗಿದ್ದವು.

2020ರಲ್ಲೂ ‘ಮುಸ್ಲಿಮ್ ರೆಜಿಮೆಂಟ್’ ಎಂಬ ಸುಳ್ಳು ವದಂತಿ ದಟ್ಟ ಪ್ರಚಾರದಲ್ಲಿದ್ದುದರಿಂದ ಹಲವಾರು ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆ ಕುರಿತು ಸತ್ಯಶೋಧಕ ವರದಿಗಳು ಪ್ರಕಟವಾದವು. ಆ ವರ್ಷ ನಡೆದ ಒಂದು ಪ್ರಮುಖ ಘಟನೆ ಏನೆಂದರೆ ‘ಮುಸ್ಲಿಮ್ ರೆಜಿಮೆಂಟ್’ ಎಂಬ ಕಟ್ಟುಕಥೆಯ ವಿಷಪ್ರಭಾವದ ಬಗ್ಗೆ ಜಾಗೃತರಾದ ಕೆಲವು ನಿವೃತ್ತ ಸೈನ್ಯಾಧಿಕಾರಿಗಳು, ಆ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ (ರಾಷ್ಟ್ರಪತಿಯವರೇ ದೇಶದ ಎಲ್ಲ ರಕ್ಷಣಾ ಪಡೆಗಳ ಪರಮೋಚ್ಚ ಕಮಾಂಡರ್ ಇನ್ ಚೀಫ್ ಆಗಿರುತ್ತಾರೆ) ಅವರನ್ನುದ್ದೇಶಿಸಿ ಒಂದು ಜಂಟಿ ಮನವಿಪತ್ರವನ್ನು ಬರೆದರು. ಅವರು ಆ ಪತ್ರದ ಪ್ರತಿಯನ್ನು ಪ್ರಧಾನ ಮಂತ್ರಿ, ದೇಶದ ಮುಖ್ಯ ನ್ಯಾಯಾಧೀಶರು, ಲೋಕಸಭಾಧ್ಯಕ್ಷರು, ಕೇಂದ್ರ ರಕ್ಷಣಾ ಸಚಿವರು, ಕೇಂದ್ರ ಗೃಹ ಸಚಿವರು, ಸಶಸ್ತ್ರ ಪಡೆಗಳ ಮುಖ್ಯಸ್ಥರು, ಭೂಸೇನಾ ಮುಖ್ಯಸ್ಥರು, ನೌಕಾಪಡೆಯ ಮುಖ್ಯಸ್ಥರು ಮತ್ತು ವಾಯುಪಡೆಯ ಮುಖ್ಯಸ್ಥರಿಗೆ ಕಳಿಸಿ, ಮಾಧ್ಯಮಗಳ ಜೊತೆಗೂ ಹಂಚಿಕೊಂಡರು. ಭಾರತೀಯ ನೌಕಾಪಡೆಯ ಮಾಜಿ ಪ್ರಧಾನ ಎಡ್ಮಿರಲ್ ಲಕ್ಷ್ಮೀ ನಾರಾಯಣ ರಾನಡೆ, ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಮದಾಸ್ ಮೋಹನ್, ನಿವೃತ್ತ ಲೆಫ್ಟಿನೆಂಟ್ ಜನರಲ್ ಆರ್.ಕೆ. ನಾನಾವತಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ವಿಜಯ್ ಒಬೆರಾಯ್‌ರಂತಹ ಪ್ರಮುಖರ ಸಹಿತ, ಒಬ್ಬ ಎಡ್ಮಿರಲ್, 9 ಮಂದಿ ಲೆಫ್ಟಿನೆಂಟ್ ಜನರಲ್‌ಗಳು, 3 ಮಂದಿ ವೈಸ್ ಎಡ್ಮಿರಲ್‌ಗಳು, 11 ಮಂದಿ ಮೇಜರ್ ಜನರಲ್‌ಗಳು, ಒಬ್ಬ ರೇರ್ ಎಡ್ಮಿರಲ್, 20 ಮಂದಿ ಬ್ರಿಗೇಡಿಯರ್‌ಗಳು, 24 ಮಂದಿ ಕರ್ನಲ್ ಗಳು, ನೌಕಾಪಡೆಯ 3 ಮಂದಿ ಕಾಪ್ಟನ್‌ಗಳು, ಇಬ್ಬರು ಗ್ರೋವ್ಪ್ ಕಾಪ್ಟನ್‌ಗಳು, 13 ಮಂದಿ ಲೆಫ್ಟಿನೆಂಟ್ ಕರ್ನಲ್‌ಗಳು, 12 ಮಂದಿ ಕಮಾಂಡರ್‌ಗಳು, 5 ಮಂದಿ ವಿಂಗ್ ಕಮಾಂಡರ್‌ಗಳು, 5 ಮಂದಿ ಮೇಜರ್‌ಗಳು, ಇಬ್ಬರು ಲೆಫ್ಟಿನೆಂಟ್ ಕಮಾಂಡರ್‌ಗಳು, ಒಬ್ಬ ಕಾಪ್ಟನ್, ಒಬ್ಬ ಫ್ಲೈಟ್ ಲೆಫ್ಟಿನೆಂಟ್, ಒಬ್ಬ ಲೆಫ್ಟಿನೆಂಟ್, ಇಬ್ಬರು ಹೊನರರಿ ಲೆಫ್ಟಿನೆಂಟ್‌ಗಳು, 4 ಮಂದಿ ಸಾರ್ಜೆಂಟ್‌ಗಳು ಹೀಗೆ ರಕ್ಷಣಾ ಪಡೆಗಳ ವಿವಿಧ ವಿಭಾಗಗಳಲ್ಲಿ ವಿವಿಧ ಶ್ರೇಣಿ ಮತ್ತು ದರ್ಜೆಗಳಲ್ಲಿ ಕೆಲವು ದಶಕಗಳ ಕಾಲ ಸೇವೆ ಸಲ್ಲಿಸಿ ಅನುಭವವುಳ್ಳ 120 ಮಂದಿ ನಿವೃತ್ತ ಅಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದರು.

2020 ಅಕ್ಟೋಬರ್ 14ರಂದು ಬರೆಯಲಾದ ಆ ಪತ್ರದ ಪೂರ್ಣಪಾಠ ಅಥವಾ ಸಾರಾಂಶವು ಅದೇ ದಿನ ಅಥವಾ ಮರುದಿನ ದೇಶದ ಹಲವು ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟವಾಯಿತು. ದ ವೈರ್, ನ್ಯೂಸ್ ಕ್ಲಿಕ್ ಮತ್ತು ಮನೀ ಲೈಫ್ ನಲ್ಲಿ ಅದೇ ದಿನ ಮತ್ತು ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್, ಎನ್‌ಡಿಟಿವಿ ಮುಂತಾದ ಮಾಧ್ಯಮಗಳಲ್ಲಿ ಮರುದಿನ ಈ ಪತ್ರದ ಕುರಿತು ವರದಿಗಳು ಪ್ರಕಟವಾದವು. ಪತ್ರದಲ್ಲಿದ್ದ ಕೆಲವು ಆಯ್ದ ಮುಖ್ಯಾಂಶಗಳ ಸಾರಾಂಶ ಇಲ್ಲಿದೆ:

‘‘....ನಾವು ಯಾವುದೇ ಗುಂಪು, ಪಂಗಡ ಅಥವಾ ರಾಜಕೀಯ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ. ನಮ್ಮ ದೇಶ ಮತ್ತು ನಮ್ಮ ರಕ್ಷಣಾಪಡೆಗಳ ಅತ್ಯುತ್ತಮ ಹಿತಾಸಕ್ತಿಯನ್ನು ಬಯಸುವವರಾಗಿ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ.... ನಮ್ಮ ದೇಶ ಹಾಗೂ ನಮ್ಮ ರಕ್ಷಣಾಪಡೆಗಳ ಶತ್ರುಗಳಾಗಿರುವ ಕೆಲವು ಶಕ್ತಿಗಳು, ನಮ್ಮ ಪಡೆಗಳ ನೈತಿಕ ಸ್ಥೈರ್ಯಕ್ಕೆ ಮತ್ತು ನಮ್ಮ ರಾಷ್ಟ್ರೀಯ ಭದ್ರತೆಗೆ ಹಾನಿಮಾಡಲಿಕ್ಕಾಗಿ ಪ್ರಚಾರ ಮಾಡುತ್ತಿರುವ ಒಂದು ಅಪ್ಪಟ ಸುಳ್ಳು ವದಂತಿಯ ಕಡೆಗೆ ತಮ್ಮ ಗಮನ ಸೆಳೆಯಬಯಸುತ್ತೇವೆ.... ‘‘1965ರಲ್ಲಿ ಭಾರತೀಯ ಸೇನೆಯಲ್ಲಿ ಒಂದು ‘ಮುಸ್ಲಿಮ್ ರೆಜಿಮೆಂಟ್’ ಇತ್ತು. ಆ ರೆಜಿಮೆಂಟ್ ಪಾಕಿಸ್ತಾನದ ವಿರುದ್ಧ ಹೋರಾಡಲು ನಿರಾಕರಿಸಿತು. ಆ ಬಳಿಕ ಅದನ್ನು ವಿಸರ್ಜಿಸಲಾಯಿತು’’ ಎಂಬ ವದಂತಿಯು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರದಲ್ಲಿದೆ... ಈ ವದಂತಿಯನ್ನು ಮೊದಲ ಬಾರಿಗೆ 2013, ಮೇ 19ರಂದು @120ಛಿಡಿoಡಿeಊiಟಿಜus ಎಂಬ ವಿಳಾಸದಿಂದ ಟ್ವಿಟರ್ ಮೂಲಕ ಪ್ರಕಟಿಸಲಾಗಿತ್ತು. ಆ ಬಳಿಕ ಅದೇ ಸಂದೇಶವನ್ನು ಹಲವಾರು ಮಂದಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳ ಮೂಲಕ ಪ್ರಚಾರ ಮಾಡುತ್ತಲೇ ಇದ್ದಾರೆ.... ನಿಜವಾಗಿ ಇದೊಂದು ಶುದ್ಧ ಸುಳ್ಳು ಎಂಬುದನ್ನು ಮತ್ತು 1965ರಲ್ಲಾಗಲಿ ಅದರ ನಂತರವಾಗಲಿ ಭಾರತೀಯ ಸೇನೆಯಲ್ಲಿ ‘ಮುಸ್ಲಿಮ್ ರೆಜಿಮೆಂಟ್’ ಎಂಬೊಂದು ಘಟಕ ಅಸ್ತಿತ್ವದಲ್ಲೇ ಇರಲಿಲ್ಲ ಎಂಬುದನ್ನು ಸೇನೆಯಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅನೇಕ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ... ಮುಸ್ಲಿಮ್ ಯೋಧರು ಸದಾ ಕಾಲ ವಿವಿಧ ಶ್ರೇಣಿಯ ರೆಜಿಮೆಂಟ್‌ಗಳ ಸದಸ್ಯರಾಗಿ, ಸಂಪೂರ್ಣ ನಿಷ್ಠೆ ಮತ್ತು ಬದ್ಧತೆಯೊಂದಿಗೆ ಭಾರತೀಯ ಸೇನೆಗೆ ಸೇವೆ ಸಲ್ಲಿಸಿದ್ದಾರೆ. 1965ರ ಯುದ್ಧದಲ್ಲಂತೂ ಕೆಲವು ಮುಸ್ಲಿಮ್ ಯೋಧರು ಮೆರೆದ ತ್ಯಾಗ ಮತ್ತು ಸಾಹಸ ಅವಿಸ್ಮರಣೀಯವಾಗಿತ್ತು..... 1947ರಲ್ಲಿ ದೇಶದ ವಿಭಜನೆಯ ವೇಳೆ ಬಲೂಚ್ ರೆಜಿಮೆಂಟ್ ಪಾಕಿಸ್ತಾನಕ್ಕೆ ಸೇರಿತು. ಆದರೆ ಅದರಲ್ಲಿದ್ದ ಬ್ರಿಗೇಡಿಯರ್ ಮುಹಮ್ಮದ್ ಉಸ್ಮಾನ್ ಭಾರತದ ಸೇನೆಯಲ್ಲಿ ಉಳಿಯಲು ನಿರ್ಧರಿಸಿದರು. ಪಾಕಿಸ್ತಾನದ ಕಡೆಯಿಂದ ಅವರಿಗೆ ಪಾಕ್ ಸೇನೆಯ ಮುಖ್ಯಸ್ಥರಾಗಿಸುವ ಪ್ರಸ್ತಾವ ಬಂದಿತ್ತು. ಸ್ವತಃ ಮುಹಮ್ಮದ್ ಅಲಿ ಜಿನ್ನಾ ಅವರು ಬ್ರಿಗೇಡಿಯರ್ ಉಸ್ಮಾನ್ ಜೊತೆ ಮಾತನಾಡಿ ಅವರ ಮನವೊಲಿಸಲು ಪ್ರಯತ್ನಿಸಿದ್ದರು. ಆದರೂ ಬ್ರಿಗೇಡಿಯರ್ ಉಸ್ಮಾನ್ ಒಪ್ಪಿರಲಿಲ್ಲ. 1948ರಲ್ಲಿ ಪಾಕಿಸ್ತಾನವು ಕಾಶ್ಮೀರದ ಮೇಲೆ ದಾಳಿ ನಡೆಸಿದಾಗ ಉಸ್ಮಾನ್, ಪಾಕ್ ಪಡೆಗಳ ವಿರುದ್ಧ ಹೋರಾಡುತ್ತಾ ಆ ವರ್ಷ ಜುಲೈ ತಿಂಗಳಲ್ಲಿ ರಣರಂಗದಲ್ಲೇ ಹುತಾತ್ಮರಾದರು. ಬ್ರಿಗೇಡಿಯರ್ ಉಸ್ಮಾನ್ ಆ ಯುದ್ಧದಲ್ಲಿ ಹುತಾತ್ಮರಾದ ಅತ್ಯಂತ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದರು. ಅವರು ಮೆರೆದ ಶೌರ್ಯಕ್ಕಾಗಿ ಮರಣೋತ್ತರ, ‘ಮಹಾವೀರಚಕ್ರ’ವನ್ನು ನೀಡಿ ಅವರಿಗೆ ಗೌರವ ಸಲ್ಲಿಸಲಾಗಿತ್ತು.... ‘ಮುಸ್ಲಿಮ್ ರೆಜಿಮೆಂಟ್’ ಎಂಬ ಕಾಲ್ಪನಿಕ ಕಟ್ಟು ಕಥೆಯು ಸದ್ಯ ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸುತ್ತಿರುವ ಮತ್ತು ಈ ಹಿಂದೆ ಸೇವೆ ಸಲ್ಲಿಸಿ ನಿವೃತ್ತರಾದ ಎಲ್ಲ ಮುಸ್ಲಿಮ್ ಯೋಧರ ನಿಷ್ಠೆಗೆ ಕಳಂಕ ಹಚ್ಚುವ ಮತ್ತು ಭಾರತೀಯ ಯೋಧರನ್ನು ಅಪಮಾನಿಸಿ ಅವರ ಸಾಮರ್ಥ್ಯವನ್ನು ಪ್ರಶ್ನಿಸುವ ಮೂಲಕ ಶತ್ರು ಶಕ್ತಿಗಳಿಗೆ ನೆರವಾಗುವ ಪ್ರಯತ್ನವಾಗಿದೆ... ಭಾರತೀಯ ರಕ್ಷಣಾಪಡೆಗಳಲ್ಲಿ, ವಿವಿಧ ಘಟಕಗಳಲ್ಲಿ ಮತ್ತು ವಿಭಿನ್ನ ವಿಭಾಗಗಳಲ್ಲಿ ಅನೇಕ ದರ್ಜೆ ಮತ್ತು ಶ್ರೇಣಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ನಾವೆಲ್ಲಾ ಯೋಧರು ಜಾತಿ, ಧರ್ಮ, ಭಾಷೆ, ಪ್ರಾಂತ ಇತ್ಯಾದಿ ಎಲ್ಲ ವ್ಯತ್ಯಾಸಗಳನ್ನು ಮರೆತು, ಪರಸ್ಪರ ಬಂಧುಗಳಂತೆ ಒಂದೇ ತಂಡವಾಗಿ ಸಂಪೂರ್ಣ ಭಾವೈಕ್ಯದೊಂದಿಗೆ ಸಕ್ರಿಯರಾಗಿದ್ದೇವೆ. ಹೀಗಿರುವಾಗ ಸಾರ್ವಜನಿಕರಲ್ಲಿ ಸೇನೆ ಅಥವಾ ಅದರ ಯಾವುದಾದರೂ ವಿಭಾಗದ ನಿಷ್ಠೆಯ ಬಗ್ಗೆ ಸಂಶಯ ಬಿತ್ತುವಂತಹ ‘ಮುಸ್ಲಿಮ್ ರೆಜಿಮೆಂಟ್’ ಥರದ ಸುಳ್ಳು ವದಂತಿಗಳು ವಿವಿಧ ಸಮುದಾಯಗಳ ನಡುವೆಯೂ ಅಪನಂಬಿಕೆ ಮತ್ತು ವಿದ್ವೇಷವನ್ನು ಬಿತ್ತುತ್ತವೆ. ಈ ಸುಳ್ಳು ಸುದ್ದಿಗೆ ಸಿಕ್ಕಿರುವ ವ್ಯಾಪಕ ಪ್ರಚಾರಕ್ಕೆ ಹೋಲಿಸಿದರೆ ಇದನ್ನು ಅಲ್ಲಗಳೆದು ಕೆಲವು ಹಿರಿಯ ನಿವೃತ್ತ ಅಧಿಕಾರಿಗಳು ನೀಡಿರುವ ಸ್ಪಷ್ಟೀಕರಣಗಳು ತೀರಾ ಸೀಮಿತ ವಲಯವನ್ನು ಮಾತ್ರ ತಲುಪಿವೆ.... ನಿಜವಾಗಿ ಈ ಬಗೆಯ ವದಂತಿಗಳು ಭಾರತದ ಶತ್ರು ದೇಶಗಳು ತಮ್ಮ ಏಜೆಂಟರ ಮೂಲಕ ನಡೆಸುವ ಮನೋವೈಜ್ಞಾನಿಕ ಯುದ್ಧದ ಭಾಗವಾಗಿವೆ. ಇವು, ತಮ್ಮ ಕುಟುಂಬ ಹಾಗೂ ಬಂಧುಗಳಿಂದ ತುಂಬಾ ದೂರ, ಗಡಿಭಾಗಗಳಲ್ಲಿ, ತೀರಾ ಪ್ರತಿಕೂಲ ಪರಿಸ್ಥಿತಿಗಳಲ್ಲಿ, ತಮ್ಮ ಪ್ರಾಣಗಳನ್ನು ಅಪಾಯಕ್ಕೊಡ್ಡಿ, ಹೋರಾಟಸನ್ನದ್ಧರಾಗಿ ನಿಂತಿರುವ ನಮ್ಮ ಕರ್ತವ್ಯನಿರತ ಯೋಧರ ಸ್ಥೈರ್ಯವನ್ನು ಕುಂದಿಸುತ್ತವೆ. ...ಇಂತಹ ಸನ್ನಿವೇಶದಲ್ಲಿ ಸರಕಾರವು ‘ಮುಸ್ಲಿಮ್ ರೆಜಿಮೆಂಟ್’ ಥರದ ಕಿಡಿಗೇಡಿ ವದಂತಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ಪಾಕಿಸ್ತಾನದ ಪ್ರೊಪಗಾಂಡಾವನ್ನು ಸೋಲಿಸುವುದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಾದುದು ಅತ್ಯವಶ್ಯವಾಗಿದೆ. ಈನಿಟ್ಟಿನಲ್ಲಿ ಈಕೆಳಗಿನ ಕೆಲವು ನಿರ್ದಿಷ್ಟಕ್ರಮಗಳನ್ನು ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ:

* ‘ಮುಸ್ಲಿಮ್ ರೆಜಿಮೆಂಟ್’ ಎಂಬ ಸುಳ್ಳು ವದಂತಿಯನ್ನು ಮೂಲತಃ ಸೃಷಿಸಿದ ವ್ಯಕ್ತಿಗಳ ಹಿನ್ನೆಲೆಯ ಕುರಿತು ತನಿಖೆ ನಡೆಯಬೇಕು.

* ‘ಮುಸ್ಲಿಮ್ ರೆಜಿಮೆಂಟ್’ ಎಂಬ ಸುಳ್ಳು ವದಂತಿಯನ್ನು ಹರಡುತ್ತಿರುವವರನ್ನು ಗುರುತಿಸಿ ಅವರ ವಿರುದ್ಧ ರಾಷ್ಟ್ರವಿರೋಧಿ ಕೃತ್ಯದ ಮೊಕದ್ದಮೆ ಹೂಡಬೇಕು.

* ‘ಮುಸ್ಲಿಮ್ ರೆಜಿಮೆಂಟ್’ ಎಂಬ ಸುಳ್ಳು ವದಂತಿಯ ಪ್ರಚಾರಕ್ಕೆ ವೇದಿಕೆ ಒದಗಿಸಿದ ಫೇಸ್‌ಬುಕ್ ಮತ್ತು ಟ್ವಿಟರ್ ನಂತಹ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಎಚ್ಚರಿಕೆ ನೀಡಬೇಕು.

* ದೇಶದ ಭದ್ರತೆಗೆ ಅಪಾಯ ಒಡ್ಡುವ ಈ ಬಗೆಯ ಎಲ್ಲ ವದಂತಿಗಳ ವಿರುದ್ಧ ಗರಿಷ್ಠ ಜಾಗೃತಿ ವಹಿಸಬೇಕು ಮತ್ತು ಅವುಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಎಲ್ಲ ರಾಜ್ಯ ಸರಕಾರಗಳಿಗೆ ಆದೇಶ ನೀಡಬೇಕು.

ಸರಕಾರವು ನಮ್ಮ ರಕ್ಷಣಾಪಡೆಗಳ ಜಾತ್ಯತೀತ ಹಾಗೂ ರಾಜಕೀಯ ಮುಕ್ತ ಸ್ವರೂಪವನ್ನು ಕಾಪಾಡಬೇಕು ಹಾಗೂ ನಮ್ಮ ದೇಶ ಮತ್ತು ದೇಶದ ಜನತೆಯನ್ನು ಒಂದಾಗಿಟ್ಟಿರುವ ನಮ್ಮ ಸಂವಿಧಾನದ ಸ್ಫೂರ್ತಿಯನ್ನು ಗರಿಷ್ಠಮಟ್ಟದಲ್ಲಿ ಪಾಲಿಸಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ....’’

ನಮ್ಮ ಗೌರವಾನ್ವಿತ ಹಿರಿಯ ಯೋಧರು ಈ ಪತ್ರ ಬರೆದು ಇದೀಗ ಸುಮಾರು ಐದು ವರ್ಷಗಳಾದವು. ಆದರೂ ‘ಮುಸ್ಲಿಮ್ ರೆಜಿಮೆಂಟ್’ ಎಂಬ ದೇಶವಿರೋಧಿ ವದಂತಿ ಮಾತ್ರ ಇನ್ನೂ ಚಲಾವಣೆಯಲ್ಲಿದೆ. ಪಹಲ್ಗಾಮ್ ಭಯೋತ್ಪಾದಕರನ್ನು ಹಿಡಿಯುವಲ್ಲಿ ವಿಫಲವಾದ ಸರಕಾರ, ಈ ವಿಭಜಕ ವದಂತಿಯನ್ನು ಹರಡುವ ಮೂಲಕ ಆ ಭಯೋತ್ಪಾದಕರಿಗೆ ನೆರವಾಗುತ್ತಿರುವ ಆಂತರಿಕ ದ್ರೋಹಿಗಳನ್ನು ನಿಯಂತ್ರಿಸುವಲ್ಲೂ ಸಂಪೂರ್ಣ ವಿಫಲವಾಗಿದೆ. ಸಮಾಜವನ್ನು ವಿಭಜಿಸುವ ವದಂತಿಕೋರರನ್ನು ನಿಯಂತ್ರಿಸಲು ಸರಕಾರ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದಲೇ ಕಿಡಿಗೇಡಿಗಳು ಬಯಸಿದಂತೆ, ಅವರ ಅಪಪ್ರಚಾರದ ಬಲಿಪಶುಗಳಾದ ಲಕ್ಷಾಂತರ ಮಂದಿಯ ಮನದಲ್ಲಿ ಭಾರತೀಯ ಸೇನೆಯಲ್ಲಿ ‘ಮುಸ್ಲಿಮ್ ರೆಜಿಮೆಂಟ್’ ಯಾಕಿಲ್ಲ? ಎಂಬ ಪ್ರಶ್ನೆ ವಿಷಬೀಜದಂತೆ ಬೀಡು ಬಿಟ್ಟಿದೆ. ನಿಜವಾಗಿ ಭಾರತೀಯ ಸೇನೆಯ ಕಾಲಾಳು ಪಡೆಯಲ್ಲಿರುವ 27 ರೆಜಿಮೆಂಟ್‌ಗಳಲ್ಲಿ ಸಿಖ್ ರೆಜಿಮೆಂಟ್ ಇದೆ. ಆದರೆ ಹಿಂದೂ ರೆಜಿಮೆಂಟ್, ಬ್ರಾಹ್ಮಣ ರೆಜಿಮೆಂಟ್, ಕ್ಷತ್ರಿಯ ರೆಜಿಮೆಂಟ್, ವೈಶ್ಯ ರೆಜಿಮೆಂಟ್, ಶೂದ್ರ ರೆಜಿಮೆಂಟ್, ದಲಿತ ರೆಜಿಮೆಂಟ್, ಕ್ರೈಸ್ತ ರೆಜಿಮೆಂಟ್ ಎಂಬಿತ್ಯಾದಿ ಹೆಸರಿನ ರೆಜಿಮೆಂಟ್ ಗಳೂ ಇಲ್ಲ. ಹಾಗೆಯೇ, ಮರಾಠಾ ರೆಜಿಮೆಂಟ್ ಇದೆ. ಆದರೆ ಕನ್ನಡ ರೆಜಿಮೆಂಟ್, ತಮಿಳು ರೆಜಿಮೆಂಟ್, ತೆಲುಗು ರೆಜಿಮೆಂಟ್, ಮಲಯಾಳಂ ರೆಜಿಮೆಂಟ್ ಎಂಬ ಹೆಸರಿನ ರೆಜಿಮೆಂಟ್ ಗಳೂ ಇಲ್ಲ. ಈ ಹಿನ್ನೆಲೆಯಲ್ಲಿ, ಯಾರ ಹೆಸರಲ್ಲಿ ಪ್ರತ್ಯೇಕ ರೆಜಿಮೆಂಟ್ ಇದೆಯೋ ಅವರು ಮಾತ್ರ ದೇಶಪ್ರೇಮಿಗಳೆಂದು ನಿರ್ಧರಿಸುವುದಾದರೆ, ಹೆಚ್ಚಿನ ದೇಶವಾಸಿಗಳ ದೇಶಪ್ರೇಮ ಪ್ರಶ್ನಾರ್ಹವಾಗಿ ಬಿಡುವುದಿಲ್ಲವೇ?

ಈ ಮಧ್ಯೆ ‘‘ಮುಸ್ಲಿಮ್ ರೆಜಿಮೆಂಟ್ ಯಾಕಿಲ್ಲ?’’ ಅಥವಾ ‘‘ರಕ್ಷಣಾ ಪಡೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ ಇರುವುದು ಯಾಕೆ?’’ ಎಂಬ ಕಿಡಿಗೇಡಿಗಳ ಪ್ರಶ್ನೆಗಳಿಂದ ಪ್ರಭಾವಿತರಾಗಿ ಭಾರತದ ಮುಸಲ್ಮಾನರ ಪೈಕಿ ಯಾರಾದರೂ, ಸೇನೆಯಲ್ಲಿ ಒಂದು ಪ್ರತ್ಯೇಕ ಮುಸ್ಲಿಮ್ ರೆಜಿಮೆಂಟ್ ಅನ್ನು ಸ್ಥಾಪಿಸಬೇಕು ಅಥವಾ ಸೇನೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಮಂಡಿಸಿ ಅದಕ್ಕಾಗಿ ಚಳವಳಿ ಆರಂಭಿಸಿದರೆ ಅಥವಾ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸೇನೆಗೆ ಸೇರುವಂತೆ ಮುಸ್ಲಿಮ್ ಯುವಕರನ್ನು ಪ್ರೋತ್ಸಾಹಿಸಲು ಅಭಿಯಾನವನ್ನೇನಾದರೂ ನಡೆಸಿದರೆ ಆಗಲಾದರೂ ಅವರ ದೇಶಪ್ರೇಮ ಸಾಬೀತಾಗಿ ಬಿಡುತ್ತದೆಯೇ? ಒಂದು ಶರ್ಬತ್ ಕಂಪೆನಿಯ ಮಾಲಕರು ಮುಸಲ್ಮಾನರೆಂಬ ಕಾರಣಕ್ಕಾಗಿ, ಅವರು ‘ಶರ್ಬತ್ ಜಿಹಾದ್’ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸುವ, ಪರಮ ಕೊಳಕು ಮನಸ್ಸಿನ ಕಾವಿಧಾರಿಗಳು ಕಂಡುಬರುವ ಸಮಾಜ ನಮ್ಮದಲ್ಲವೇ? ಯುಪಿಎಸ್ಸಿ ಪರೀಕ್ಷೆಗಳಲ್ಲಿ ಪಾಸಾದವರ ಪಟ್ಟಿಯಲ್ಲಿ ಅಪರೂಪಕ್ಕೆಲ್ಲಾದರೂ ಕೆಲವು ಮುಸ್ಲಿಮ್ ಹುಡುಗ ಹುಡುಗಿಯರ ಹೆಸರು ಕಾಣಿಸಿದೊಡನೆ, ಮುಸ್ಲಿಮರೆಲ್ಲಾ ಸೇರಿ ಭಾರತದ ಆಡಳಿತವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಸಂಚು ಹೂಡಿ, ‘ಯುಪಿಎಸ್ಸಿ ಜಿಹಾದ್’ ನಡೆಸುತ್ತಿದ್ದಾರೆ ಎಂದು ಅರಚಾಡುವವರು ಕಂಡು ಬರುವ ಸಮಾಜವಲ್ಲವೇ ನಮ್ಮದು? ಇಂತಹ ಸಮಾಜದಲ್ಲಿ ಪ್ರತ್ಯೇಕ ರೆಜಿಮೆಂಟ್‌ಗಾಗಿ ಅಥವಾ ಮೀಸಲಾತಿಗಾಗಿ ಆಗ್ರಹಿಸುವವರು, ದ್ವೇಶಭಕ್ತರ ವಲಯದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ದೇಶದ್ರೋಹಿಗಳೆಂಬ ಬಿರುದುಗಳಿಗೆ ಪಾತ್ರರಾಗದೆ ಉಳಿಯುವರೇ?

share
ಶಂಬೂಕ
ಶಂಬೂಕ
Next Story
X