ಚಾಮರಾಜನಗರ : ಸಾಲೂರು ಮಠದ ಹಿರಿಯ ಗುರುಸ್ವಾಮಿ ನಿಧನ

ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಹಿರಿಯ ಮಠಾಧಿಪತಿ ಶ್ರೀ ಗುರುಸ್ವಾಮಿ (76) ರವರು ನಿಧನ ಹೊಂದಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಬೃಹ್ಮನ್ಮಠ ಸಾಲೂರು ಮಠದಲ್ಲಿ ಹಲವಾರು ವರ್ಷಗಳಿಂದ ಮಠಾಧಿಪತಿಯಾಗಿದ್ದು, ಸರ್ವ ಜನಾಂಗದವರಿಗೂ ಪ್ರೀತಿ ಪಾತ್ರರಾಗಿದ್ದರು.
ಕಳೆದ ಕೆಲವು ವರ್ಷಗಳ ಹಿಂದೆ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಮುನ್ನ ತಮ್ಮ ಉತ್ತರಾಧಿಕಾರಿಯಾಗಿ ಶ್ರೀ ಶಾಂತ ಮಲ್ಲಕಾರ್ಜುನಸ್ವಾಮಿ ಅವರನ್ನು ನೇಮಿಸಿದ್ದರು.
Next Story