Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಬಂಡವಾಳ ಹೂಡಿಕೆಯಲ್ಲ, ಚುನಾವಣಾ...

ಬಂಡವಾಳ ಹೂಡಿಕೆಯಲ್ಲ, ಚುನಾವಣಾ ಬಾಂಡ್‌ವಾಳ ಹೂಡಿಕೆ !

ಚೇಳಯ್ಯಚೇಳಯ್ಯ24 March 2024 10:50 AM IST
share
ಬಂಡವಾಳ ಹೂಡಿಕೆಯಲ್ಲ, ಚುನಾವಣಾ ಬಾಂಡ್‌ವಾಳ ಹೂಡಿಕೆ !

ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಛೂ. ಆಯೋಗ ‘ಜೇಮ್ಸ್ ಬಾಂಡ್’ ಹಾಲಿವುಡ್ ಚಿತ್ರಗಳಿಗೆ ಒಮ್ಮೆಲೆ ನಿಷೇಧ ಹೇರಿತು. ಪತ್ರಕರ್ತ ಎಂಜಲು ಕಾಸಿ ಆತುರಾತುರದಿಂದ ಛೂ. ಆಯೋಗ ಕಚೇರಿಯ ಬಾಗಿಲು ತಟ್ಟಿದ ‘‘ಸಾರ್...ಚುನಾವಣೆಗೂ ಜೇಮ್ಸ್ ಬಾಂಡ್ ಸಿನೆಮಾಗಳಿಗೂ ಏನು ಸಂಬಂಧ?’’

‘‘ಹ್ಹೆ ಹ್ಹೆ...ಜೇಮ್ಸ್ ಬಾಂಡ್ ಸಿನೆಮಾ ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ?’’ ಛೂ. ಆಯೋಗ ಉತ್ತರಿಸಿತು.

‘‘ಹೇಗೆ ಸಾರ್....?’’ ಕಾಸಿ ಅರ್ಥವಾಗದೆ ಕೇಳಿದ.

‘‘ಜೇಮ್ಸ್ ಬಾಂಡ್ ಸಿನೆಮಾಗಳು ಚುನಾವಣಾ ಬಾಂಡ್‌ನ್ನು ನೆನಪಿಸುವುದರಿಂದ ಅದು ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದುದರಿಂದ ಎಲ್ಲ ಬಾಂಡ್ ಸಿನಿಮಾಗಳನ್ನು ಚುನಾವಣೆ ಮುಗಿಯುವವರೆಗೆ ನಿಷೇಧ ಮಾಡಲಾಗುತ್ತದೆ....’’

‘‘ಚುನಾವಣಾ ಬಾಂಡ್ ಕುರಿತಂತೆ ತನಿಖೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆಯೇ?’’ ಕಾಸಿ ಮರು ಪ್ರಶ್ನಿಸಿದ.

‘‘ಚುನಾವಣಾ ಬಾಂಡ್ ಬಹಿರಂಗವಾಗುವುದರ ಹಿಂದೆ ವಿದೇಶಿ ಕೈವಾಡಗಳಿವೆೆಯೋ? ಭಾರತದ ವರ್ಚಸ್ಸಿಗೆ ಧಕ್ಕೆ ತರಲು ಪಾಶ್ಚಿಮಾತ್ಯ ದೇಶಗಳು ಸಂಚು ನಡೆಸಿವೆಯೋ ಎಂಬಿತ್ಯಾದಿ ತನಿಖೆ ನಡೆಸುವುದಕ್ಕೆ ಆಯೋಗ ಸಿದ್ಧವಿದೆ. ಆದರೆ ವಿರೋಧ ಪಕ್ಷಗಳು ಸಹಕರಿಸುತ್ತಿಲ್ಲ....’’ ಛೂ. ಆಯೋಗ ಅಸಹಾಯಕತೆ ವ್ಯಕ್ತಪಡಿಸಿತು.

***

ಕಾಸಿಗೆ ಛೂ. ಆಯೋಗದ ಉತ್ತರಗಳಿಂದ ಸಂತೃಪ್ತಿಯಾಗದೇ ನೇರವಾಗಿ ಹೆಂಗ್ ಪುಂಗ್ಲಿ ಬಳಿಕ ಧಾವಿಸಿದ. ‘‘ಸಾರ್...ಬಾಂಡ್....’’ ಎಂದು ಕಾಸಿ ಬಾಯಿ ತೆರೆದದ್ದೇ ಪುಂಗ್ಲಿ ಪುಂಗುವುದಕ್ಕೆ ಆರಂಭಿಸಿದರು.

‘‘ನೋಡ್ರಿ....ನಮ್ಮ ಮೋದಿಯವರ ಸಾಧನೆ....ದೇಶ ದೇಶ ತಿರುಗಿ ಬಂಡವಾಳ ಹೂಡಿಕೆ ಮಾಡಲು ಕರೆ ಕೊಟ್ಟರು. ಅದರ ಫಲ ಕಣ್ರೀ....’’

‘‘ಸಾರ್...ಬಂಡವಾಳ ಹೂಡಿಕೆ ಎಲ್ಲಿ ಆಗಿದೆ? ಉದ್ಯಮಗಳೆಲ್ಲ ಬಡವಾಗಿವೆ...’’ ಕಾಸಿ ಆತಂಕದಿಂದ ಹೇಳಿದ.

‘‘ನಮ್ಮ ಮೋದಿಯವರು ಭಾರತದಲ್ಲಿ ಬಂಡವಾಳ ಹೂಡಿ ಎಂದು ಉದ್ಯಮಿಗಳಿಗೆ ಕರೆ ಕೊಟ್ರು. ಅವರೆಲ್ಲ ಬಿಜೆಪಿಯ ಮೇಲೆಯೇ ಬಂಡವಾಳ ಹೂಡಿದರು. ಮೋದಿಯ ಮೇಲೆ ಉದ್ಯಮಿಗಳಿಗೆ ಅಷ್ಟೊಂದು ನಂಬಿಕೆ ಕಣ್ರೀ....’’

‘‘ಹಾಗಾದರೆ ಭಾರತದ ಉದ್ಯಮಗಳ ಗತಿ....’’

‘‘ಏನ್ರೀ ಹೀಗಂತೀರಾ? ಮೋದಿಯವರ ಮೇಲೆ ಬಂಡವಾಳ ಹೂಡಿದರೆ ಭಾರತದ ಮೇಲೆ ಬಂಡವಾಳ ಹೂಡಿದಂತೆಯೇ ಸರಿ. ಮೋದಿಯವರನ್ನು ಟೀಕಿಸಿದರೆ ದೇಶವನ್ನು ಟೀಕಿಸುವುದು ಎಷ್ಟು ನಿಜವೋ ಹಾಗೆಯೇ, ಮೋದಿಯವರ ಮೇಲೆ ಬಂಡವಾಳ ಹೂಡುವುದು ಕೂಡ. ಮೋದಿಯವರ ಮೇಲೆ ಬಂಡವಾಳ ಹೂಡುವುದನ್ನು ವಿರೋಧಿಸಿದರೆ ದೇಶದಲ್ಲಿ ಬಂಡವಾಳ ಹೂಡಿಕೆಯನ್ನು ವಿರೋಧಿಸಿದಂತೆ....’’

‘‘ಆದರೆ ಇದನ್ನು ಅಕ್ರಮ ಎಂದು ಹೇಳುತ್ತಿದ್ದಾರಲ್ಲ....’’ ಕಾಸಿ ಗೊಂದಲಗೊಂಡು ಕೇಳಿದ.

‘‘ಸರ್ಜಿಕಲ್ ಸ್ಟ್ರೈಕ್ ನಕಲಿ ಎಂದು ಹೇಳುತ್ತಾರಲ್ಲ, ಹಾಗೆಯೇ ಇದು. ಮೋದಿಯವರ ಮೇಲೆ ನಂಬಿಕೆಯಿದ್ದ ಕಾರಣ ಅವರು ಸಾವಿರಾರು ಕೋಟಿ ಬಂಡವಾಳ ಹೂಡಿದ್ದಾರೆ....ಬಿಜೆಪಿಯನ್ನು ಬೆಳೆಸುವುದು ಎಂದರೆ ತಮ್ಮ ಉದ್ಯಮವನ್ನು ಬೆಳೆಸಿದಂತೆ ಎಂದು ಉದ್ಯಮಪತಿಗಳು ನಂಬಿರುವ ಕಾರಣ ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಈ ಮೂಲಕ ದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಲಿದೆ....’’

‘‘ಈ ಬಂಡವಾಳದಿಂದ ದೇಶಕ್ಕೆ ಏನು ಲಾಭ? ಇದನ್ನು ಬಂಡವಾಳ ಎಂದು ಕರೆಯುವುದು ಎಷ್ಟು ಸರಿ?’’

‘‘ಬಂಡವಾಳ ಎಂದು ಕರೆಯುವುದಕ್ಕೆ ಕಷ್ಟವಾದರೆ ‘ಬಾಂಡ್’ ವಾಳ ಎಂದು ಕರೆಯಿರಿ. ಸಿಂಹವನ್ನು ಸಾಕುವುದಕ್ಕೆ ಸಾಕಷ್ಟು ಖರ್ಚು ಇರುವುದಿಲ್ಲವೆ? ಪ್ರಧಾನಿ ಮೋದಿಯವರನ್ನು ಸಾಕುವುದಕ್ಕಾಗಿ ಈ ಬಂಡವಾಳವನ್ನು ಬಳಸುತ್ತೇವೆ. ಎಲ್ಲ ಉದ್ಯಮಗಳನ್ನು ಮುಚ್ಚಿ ಮುಂದಿನ ದಿನಗಳಲ್ಲಿ ಬಿಜೆಪಿ ಎನ್ನುವ ಏಕೈಕ ಉದ್ಯಮವನ್ನು ಬೆಳೆಸಿ ಈ ದೇಶದ ಆರ್ಥಿಕತೆಯನ್ನು ಆಕಾಶದೆತ್ತರಕ್ಕೆ ಏರಿಸಲಿದ್ದೇವೆ....’’

‘‘ಸುಪ್ರೀಂಕೋರ್ಟ್ ಈ ಬಾಂಡ್‌ನ್ನು ಅಕ್ರಮ ಎಂದು ಹೇಳಿದೆಯಲ್ಲ?’’ ಕಾಸಿ ಕೇಳಿದ.

‘‘ಮುಂದಿನ ಚುನಾವಣೆಯಲ್ಲಿ ಗೆದ್ದರೆ ಸುಪ್ರೀಂಕೋರ್ಟನ್ನೇ ಅಕ್ರಮ ಎಂದು ಕರೆದರಾಯಿತು. ಆ ಮೂಲಕ ಈ ಬಂಡವಾಳವನ್ನೆಲ್ಲ ಸಕ್ರಮ ಮಾಡಬಹುದು’’ ಪುಂಗ್ಲಿ ಪರಿಹಾರ ಹೇಳಿದರು.

‘‘ಭ್ರಷ್ಟರೆಲ್ಲ ಬಂಡವಾಳ ಹೂಡಿದ್ದಾರಲ್ಲ....’’

‘‘ಹಿಂದೆ ಭ್ರಷ್ಟರೆಲ್ಲ ಸ್ವಿಸ್ ಬ್ಯಾಂಕ್‌ನಲ್ಲಿ ತಮ್ಮ ಕಪ್ಪು ಹಣವನ್ನು ಬಚ್ಚಿಡುತ್ತಿದ್ದರು. ಈಗ ಮೋದಿಯವರು ಬಂದ ಬಳಿಕ ಸ್ವಿಸ್ ಬ್ಯಾಂಕ್‌ನಲ್ಲಿ ಇಡಲು ಹೆದರಿ ನೇರವಾಗಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಇಡುತ್ತಿದ್ದಾರೆ. ಈ ಮೂಲಕ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ತರುವ ಬದಲು ಇಡೀ ಸ್ವಿಸ್ ಬ್ಯಾಂಕ್‌ನ ಶಾಖೆಯನ್ನೇ ಎಸ್‌ಬಿಐ ಬ್ಯಾಂಕ್‌ನಲ್ಲಿ ಸ್ಥಾಪಿಸುವ ಮೋದಿಯವರ ಕನಸು ಯಶಸ್ವಿಯಾಗಿದೆ. ಕಪ್ಪು ಹಣ ಭಾರತದಲ್ಲೇ ಅದರಲ್ಲೂ ಮೋದಿಯವರ ಪೆಟ್ಟಿಗೆಯಲ್ಲೇ ಭದ್ರವಾಗಿ ಉಳಿಯುವಂತಾಗಿದೆ....’’

‘‘ಸಾರ್...ಈ ಬಾರಿ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲಬಹುದು?’’

‘‘ಯಾವ ಪಕ್ಷಕ್ಕೆ ಹೆಚ್ಚು ಹೂಡಿಕೆಯಾಗಿದೆಯೋ ಆ ಪಕ್ಷವೇ ಗೆಲ್ಲಬಹುದು. ಗೆಲ್ಲದೇ ಇದ್ದರೆ ಗೆದ್ದ ಪಕ್ಷಗಳಲ್ಲಿರುವ ಸಂಸದರನ್ನು ಕೊಂಡು ಕೊಳ್ಳುವುದಕ್ಕೆ ಬೇಕಾದ ಬಂಡವಾಳವನ್ನು ಮೋದಿಯವರು ಈಗಾಗಲೇ ಸಿದ್ಧಪಡಿಸಿಕೊಂಡಿದ್ದಾರೆ....ಇಂತಹ ಪ್ರಧಾನಿಯನ್ನು ನೀವು ಯಾವತ್ತಾದರೂ ಕಂಡಿದ್ದೀರಾ?’’

‘‘ಸಾರ್...ಇದನ್ನು ಬಂಡವಾಳ ಎಂದು ಕರೆಯುವುದಕ್ಕಿಂತ ಭಂಡ ವಾಳ ಎಂದು ಕರೆಯುವುದೇ ವಾಸಿ. ನಿಮ್ಮ ಭಂಡ ಬಾಳನ್ನು ಮೆಚ್ಚಲೇ ಬೇಕು’’ ಎಂದವನೇ ಕಾಸಿ ಅಲ್ಲಿಂದ ಕಾಲ್ಕಿತ್ತ.

share
ಚೇಳಯ್ಯ
ಚೇಳಯ್ಯ
Next Story
X