Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಲೋಕಸಭಾ ಚುನಾವಣೆಯ ಹೊತ್ತಿಗೆ ಪರಶುರಾಮ...

ಲೋಕಸಭಾ ಚುನಾವಣೆಯ ಹೊತ್ತಿಗೆ ಪರಶುರಾಮ ಮತ್ತೆ ಬರುತ್ತಾನೆ!

ವಾರ್ತಾಭಾರತಿವಾರ್ತಾಭಾರತಿ22 Oct 2023 11:32 AM IST
share
ಲೋಕಸಭಾ ಚುನಾವಣೆಯ ಹೊತ್ತಿಗೆ ಪರಶುರಾಮ ಮತ್ತೆ ಬರುತ್ತಾನೆ!

ಕಾರ್ಕಳದಲ್ಲಿ ಪರಶುರಾಮ ಥೀಮ್ ಪಾರ್ಕ್‌ನ ಪ್ರತಿಮೆ ರಾತ್ರೋ ರಾತ್ರಿ ಕಾಣೆಯಾಗುತ್ತಿದ್ದಂತೆಯೇ ನಕಲಿ ಹಿಂದುತ್ವವಾದಿ ಮುಖಂಡರೂ ರಾತ್ರೋರಾತ್ರಿ ಕಾಣೆಯಾಗಿರುವುದು ಮಾಧ್ಯಮಗಳ ಗಮನಕ್ಕೆ ಬಂತು. ಅವರಿಗೆ ಕಾಣೆಯಾಗಿರುವ ಪರಶುರಾಮನ ಬಗ್ಗೆ ವರದಿ ಮಾಡುವುದೋ, ಕಾಣೆಯಾಗಿರುವ ಹಿಂದುತ್ವವಾದಿಗಳ ಬಗ್ಗೆ ವರದಿ ಮಾಡುವುದೋ ಎನ್ನುವ ಗೊಂದಲ. ಕಂಚಿನ ಹಿಂದುತ್ವವಾದ ಒಂದೇ ರಾತ್ರಿಯಲ್ಲಿ ಫೈಬರ್ ಹಿಂದುತ್ವವಾದ ಆದ ಬಗ್ಗೆ ಅವರಿಗೆಲ್ಲ ತೀವ್ರಗೊಂದಲವಾಗಿ, ಕಾಣೆಯಾಗಿರುವ ಫೈಬರ್ ನಾಯಕರ ಪ್ರತಿಕ್ರಿಯೆಗಾಗಿ ಹುಡುಕಾಟದಲ್ಲಿ ತೊಡಗಿದರು. ಪತ್ರಕರ್ತ ಎಂಜಲು ಕಾಸಿ ಕಂಚಿನ ಕಂಠದ ಭಾಷಣಕೋರರನ್ನು ಹುಡುಕುತ್ತಾ ಸಾಗಿದ. ಕರಾವಳಿಯಲ್ಲಿ ಕೊನೆಗೂ ಗುರುಪುರ ನದಿಯಲ್ಲಿ ಯಾರೋ ಮುಳುಗಿ ‘ಗುಳು ಗುಳು’ ಸದ್ದು ಮಾಡುತ್ತಿರುವುದು ಗೊತ್ತಾಯಿತು.

‘‘ಸಾರ್...ನೀವು ಮಾಜಿ ಕನ್ನಡ ಸಂಸ್ಕೃತಿ, ಇಂಧನ ಸಚಿವರಲ್ಲವಾ?’’ ಜೋರಾಗಿ ಕೇಳಿದ.

ತಕ್ಷಣ ವ್ಯಕ್ತಿ ಮೇಲೆದ್ದು ಹಲ್ಲುಕಿರಿಯ ತೊಡಗಿತು. ‘‘ಹ್ಹಿ ಹ್ಹಿ...ಕಾಣೆಯಾಗಿದ್ದ ಕಂಚಿನ ಪರಶುರಾಮನನ್ನು ಹುಡುಕುತ್ತಿದ್ದೆ....ಕೊನೆಗೂ ನೀವು ನನ್ನನ್ನು ಹುಡುಕಿ ಬಿಟ್ರಿ....’’

‘‘ಸಾರ್...ಕೊನೆಗೆ ಪರಶುರಾಮನನ್ನೇ ಯಾಮಾರಿಸಿದ್ದೀರಿ ಎಂದು ಆರೋಪಿಸುತ್ತಿದ್ದಾರಲ್ಲ....’’ ಕಾಸಿ ಬೇಜಾರಿನಿಂದ ಕೇಳಿದ.

‘‘ನೋಡ್ರೀ....ನಾನು ಸಂಸ್ಕೃತಿ ಸಚಿವ. ಬಿಜೆಪಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನನ್ನ ಕರ್ತವ್ಯವಾಗಿತ್ತು. ಪರಶುರಾಮನ ಪ್ರತಿಮೆಯ ವಿಷಯದಲ್ಲಿ ಶೇ. 40 ಕಮಿಷನ್ ಉಳಿಸಿಕೊಂಡು ಸಂಸ್ಕೃತಿ ಸಚಿವ ಸ್ಥಾನಕ್ಕೆ ಘನತೆಯನ್ನು ನೀಡುವುದು ನನ್ನ ಕರ್ತವ್ಯವಾಗಿತ್ತು.....’’ ಕಂಚಿನ ಕಂಠದಲ್ಲಿ ಮಾಜಿ ಸಚಿವರು ಹೇಳಿದರು.

‘‘ಪರಶುರಾಮನ ಹೆಸರು ಬಳಸಿ ಚುನಾವಣೆಯ ಪ್ರಚಾರಕ್ಕೆ ಇಂಧನ ತುಂಬಿಸಿಕೊಂಡು ಇದೀಗ ಪರಶುರಾಮನೇ ಇಲ್ಲ ಎಂದರೆ ಹೇಗೆ?’’ ಮಾಜಿ ಇಂಧನ ಸಚಿವರನ್ನು ಕಾಸಿ ಕೇಳಿದ.

‘‘ಹಾಗೇನಿಲ್ಲ....ಪರಶುರಾಮ ಕೊಡಲಿ ಹಿಡಿದುಕೊಂಡು ಇಡೀ ಲೋಕಪರ್ಯಟನೆ ಮಾಡಿದವನು. ಅವನನ್ನು ಒಂದೇ ಕಡೆ ನಿಲ್ಲಿಸುವುದು ಸರಿಯಲ್ಲ ಎಂದು ಶ್ರೀಶ್ರೀಶ್ರೀಗಳು ಹೇಳಿದರು. ಆದುದರಿಂದ ಆತನನ್ನು ಲೋಕಪರ್ಯಟನೆೆಗೆ ಕಳುಹಿಸಿಕೊಡಲಾಗಿದೆ. ಅವನು ಬೇಗ ಮತ್ತೆ ಲೋಕಸಭಾ ಚುನಾವಣೆಯ ಹೊತ್ತಿಗೆ ಕಾರ್ಕಳ ತಲುಪಲಿದ್ದಾನೆ....’’ ಮಾಜಿ ಸಂಸ್ಕೃತಿ ಸಚಿವರು ಘೋಷಿಸಿದರು.

‘‘ಕ್ಷತ್ರಿಯರನ್ನೆಲ್ಲ ಕೊಂದು ಆಗಿದೆಯಲ್ಲ....ಈ ಬಾರಿ ಪರಶುರಾಮ ಶೇ. 40 ಕಮಿಷನ್ ವಿರುದ್ಧ ಕೊಡಲಿಯೆತ್ತುವ ಸಾಧ್ಯತೆಗಳಿವೆಯೆ?’’ ಕಾಸಿ ಅನುಮಾನದಿಂದ ಕೇಳಿದ.

‘‘ಹ್ಹೆ ಹ್ಹೆ... ಹಾಗೇನಿಲ್ಲ...ಪುರಾಣ ಕಾಲದಲ್ಲೂ ಈ ಕಮಿಷನ್ ಪದ್ಧತಿ ಇದ್ದೇ ಇತ್ತು. ಮಹಾಭಾರತದಲ್ಲಿ ಖಾಂಡವವನ ಕಡಿದು ಇಂದ್ರಪ್ರಸ್ಥವನ್ನು ನಿರ್ಮಾಣ ಮಾಡುವಾಗಲೂ ಕಮಿಷನ್ ವ್ಯವಹಾರ ನಡೆದಿತ್ತು ಎನ್ನುವುದನ್ನು ಎಸ್. ಎಲ್. ಬಯ್ಯಿರಪ್ಪನವರು ತಮ್ಮ ಕಾದಂಬರಿಯಲ್ಲಿ ಸಾಬೀತು ಮಾಡಿದ್ದಾರೆ....ಮುಂದಿನ ಚುನಾವಣೆಯಲ್ಲಿ ಪರಶುರಾಮನ ಕೊಡಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ....ಹೆದರಬೇಡಿ ’’ ಮಾಜಿ ಇಂಧನ ಸಚಿವರು ಭರವಸೆ ನೀಡಿದರು..

‘‘ಪರಶುರಾಮನ ಪ್ರತಿಮೆಯಲ್ಲಿ ಕಮಿಷನ್ ಹೊಡೆದ ಪರಿಣಾಮವಾಗಿಯೇ ಬಿಜೆಪಿಗೆ ಸೋಲಾಯಿತು ಎಂದು ಹೇಳುತ್ತಿದ್ದಾರಲ್ಲ....’’ ಕಾಸಿ ಕೇಳಿದ.

‘‘ಹ್ಹೆ ಹ್ಹೆ....ಬಿಜೆಪಿ ಸೋತಿರಬಹುದು. ನಾನೆಲ್ಲಿ ಸೋತಿದ್ದೇನೆ...ಇಷ್ಟಕ್ಕೂ ಹೊಡೆದ ಕಮಿಷನನ್ನು ನಾನೆಲ್ಲಿ ಇಟ್ಟುಕೊಂಡಿದ್ದೇನೆ...? ಎಲ್ಲ ಮಾಧ್ಯಮದವರಿಗೇ ಹಂಚಿದ್ದೇನಲ್ಲ? ಕಳೆದ ಚುನಾವಣೆಯಲ್ಲಿ ನಿಮ್ಮ ಕಿಸೆಗೆ ತುರುಕಿದ ಕವರ್ ಉಂಟಲ್ಲ...ಅದೆಲ್ಲ ಪರಶುರಾಮನ ಕಮಿಷನ್ ದುಡ್ಡೇ....’’ ಎಂದವರೇ ಇಂಧನ ಸಚಿವರು ಮತ್ತೆ ಗುರುಪುರ ನದಿಯಲ್ಲಿ ಮುಳುಗಿದರು. ಫೈಬರ್ ಪರಶುರಾಮನ ಕೊಡಲಿ ತನ್ನ ಬುಡಕ್ಕೆ ಬರುತ್ತಿದೆ ಎಂದು ಗೊತ್ತಾದದ್ದೇ ಕಾಸಿ ಬಾಯಿ ಮುಚ್ಚಿ ಅಲ್ಲಿಂದ ಕಚೇರಿ ಕಡೆಗೆ ದೌಡಾಯಿಸಿದ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X