Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಮೆದುಳು ಟ್ಯೂಮರ್: ಲಕ್ಷಣಗಳು ಮತ್ತು...

ಮೆದುಳು ಟ್ಯೂಮರ್: ಲಕ್ಷಣಗಳು ಮತ್ತು ಚಿಕಿತ್ಸೆ

ಇಂದು ವಿಶ್ವ ಮೆದುಳು ಟ್ಯೂಮರ್ ಜಾಗೃತಿ ದಿನ

ಡಾ. ಮುರಲೀ ಮೋಹನ್, ಚೂಂತಾರುಡಾ. ಮುರಲೀ ಮೋಹನ್, ಚೂಂತಾರು8 Jun 2023 1:11 PM IST
share
ಮೆದುಳು ಟ್ಯೂಮರ್: ಲಕ್ಷಣಗಳು ಮತ್ತು ಚಿಕಿತ್ಸೆ
ಇಂದು ವಿಶ್ವ ಮೆದುಳು ಟ್ಯೂಮರ್ ಜಾಗೃತಿ ದಿನ

ಪ್ರತೀ ವರ್ಷ ಜೂನ್ 8ರಂದು ವಿಶ್ವದಾದ್ಯಂತ ವಿಶ್ವ ಬ್ರೈನ್ ಟ್ಯೂಮರ್ ಜಾಗೃತಿ ದಿನ ಎಂದು ಆಚರಿಸಿ ಮೆದುಳಿನ ಟ್ಯೂಮರ್‌ನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೆಚ್ಚಿನ ಮೆದುಳಿನ ಗೆಡ್ಡೆಗಳು ಮಾರಣಾಂತಿಕವಾಗಿರುತ್ತದೆ ಮತ್ತು ಗುರುತಿಸಿದ ಒಂದು ವರ್ಷದೊಳಗೆ ಸಾವಿನಲ್ಲಿ ದುರಂತ ಅಂತ್ಯಕಾಣುತ್ತದೆ. ಪ್ರತೀ ವರ್ಷ 40ರಿಂದ 50 ಸಾವಿರ ಮಂದಿ ಮೆದುಳಿನ ಟ್ಯೂಮರ್‌ಗೆ ತುತ್ತಾಗುತ್ತಾರೆ. ಇದರಲ್ಲಿ ಶೇ. 20 ಮಕ್ಕಳಲ್ಲಿ ಕಾಣಸಿಗುತ್ತದೆ. ಸುಮಾರು 120 ಬಗೆಯ ವಿಧವಿಧದ ಮೆದುಳಿನ ಟ್ಯೂಮರ್ ಗುರುತಿಸಲಾಗಿದ್ದು, ಬೇರೆ ಬೇರೆ ರೀತಿಯಲ್ಲಿ ಇವುಗಳು ರೋಗಿಯನ್ನು ಕಾಡುತ್ತದೆ. ರೋಗದ ಚಿಹ್ನೆಗಳು ಮೆದುಳಿನ ಯಾವ ಭಾಗದಲ್ಲಿ ಮೆದುಳಿನ ಗೆಡ್ಡೆ ಬೆಳೆದಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಾಗಿ ಇಳಿ ವಯಸ್ಸಿನಲ್ಲಿ ಕಾಣಸಿಗುವ ಈ ಬ್ರೈನ್ ಟ್ಯೂಮರ್, 65 ವರ್ಷ ದಾಟಿದ ಬಳಿಕ ಸುಮಾರು 1 ಲಕ್ಷದಲ್ಲಿ 15ರಿಂದ 20 ಮಂದಿಯಲ್ಲಿ ಕಾಣಿಸಿಕೊಳ್ಳಬಹುದು.

► ಲಕ್ಷಣಗಳು

ಮೆದುಳಿನ ಟ್ಯೂಮರ್‌ನ ಚಿಹ್ನೆಗಳು ಟ್ಯೂಮರ್‌ನ ಗಾತ್ರ, ಜಾಗ ಮತ್ತು ಬೆಳವಣಿಗೆಯ ತೀವ್ರತೆಯ ಮೇಲೆ ಅವಲಂಬಿತವಾಗಿರುತ್ತದೆ

* ಮೆದುಳು ನಮ್ಮ ದೇಹದ ಅತ್ಯಂತ ಗಟ್ಟಿಯಾದ ತಲೆಬುರುಡೆ ಎಲುಬಿನ ಒಳಭಾಗದಲ್ಲಿರುವುದರಿಂದ, ಮೆದುಳಿನಲ್ಲಿ ಗೆಡ್ಡೆ ಬೆಳೆದಾಗ ಮೆದುಳಿನ ಒಳಭಾಗದ ಒತ್ತಡ ಹೆಚ್ಚಾಗುತ್ತದೆ. ಹೀಗೆ ಮೆದುಳಿನ ಒತ್ತಡ ಜಾಸ್ತಿಯಾದಾಗ ತಲೆನೋವು ಬರುತ್ತದೆ. ಮೆದುಳಿನ ಟ್ಯೂಮರ್‌ನ ಗಾತ್ರ ಜಾಸ್ತಿಯಾದಂತೆಲ್ಲಾ ತಲೆನೋವಿನ ತೀವ್ರತೆ ಹೆಚ್ಚುತ್ತದೆ. ತಲೆನೋವೇ ಮೆದುಳು ಗೆಡ್ಡೆಯ ಸೂಚಕವಲ್ಲ. ಆದರೆ ಮೆದುಳುಗೆಡ್ಡೆ ಇದ್ದವರಲ್ಲಿ ತಲೆನೋವು ಸಾಮಾನ್ಯ.  ಕೆಮ್ಮಿದಾಗ, ಸೀನಿದಾಗ, ಮುಂದೆ ಬಾಗಿದಾಗ ನೋವು ಹೆಚ್ಚಾಗುವುದರ ಜೊತೆಗೆ, ವಾಂತಿಯಾಗುತ್ತಿದ್ದರೆ ಬಹಳ ಗಂಭೀರವಾಗಿ ಪರಿಗಣಿಸಬೇಕು. ಪರೀಕ್ಷೆಗಳು ನಕಾರಾತ್ಮಕವೆಂದು ತಿಳಿಯುವವರೆಗೂ ಮೆದುಳು ಗೆಡ್ಡೆಯ ಸಂಶಯವನ್ನು ತಳ್ಳಿ ಹಾಕುವಂತಿಲ್ಲ.

► ಜಡತ್ವ, ನೆನಪು, ಬುದ್ಧಿ ಶಕ್ತಿಯ ಬದಲಾವಣೆಗಳು, ಮಾತನಾಡುವ ಸಾಮರ್ಥ್ಯ ಕುಂಠಿತವಾಗುವುದು.

► ವಿಪರೀತ ಸುಸ್ತು, ದೇಹದಲ್ಲಿ ವಿವಿಧ ರೀತಿಯ ಬದಲಾವಣೆ, ದೇಹದ ಭಾಗಗಳಲ್ಲಿ ನರಗಳ ದೌರ್ಬಲ್ಯ ಕಾಣಿಸಬಹುದು.

► ಮೂರ್ಛೆ ತಪ್ಪುವುದು ಅಥವಾ ಅಪಸ್ಮಾರ ಪದೇ ಪದೇ ಕಾಡುತ್ತದೆ.

► ಕೆಲಸಕಾರ್ಯಗಳಲ್ಲಿ ಅನಾಸಕ್ತಿ, ಮಂಕಾಗು ವುದು, ಪ್ರಜ್ಞೆ ಇಲ್ಲದಂತಾಗುವುದು. ಕಲಿಕೆಯ ಸಾಮರ್ಥ್ಯ ಕುಸಿಯುವುದು, ನಿತ್ಯದ ಬೇಕು-ಬೇಡಗಳನ್ನು ನೋಡಿಕೊಳ್ಳುವ ಸಾಮರ್ಥ್ಯ ಕುಂಠಿತವಾಗುತ್ತದೆ.

► ಚಿಕಿತ್ಸೆ ಹೇಗೆ?

ರೋಗಿಯ ಸಾಮಾನ್ಯ ಆರೋಗ್ಯ ಸ್ಥಿತಿ, ಮೆದುಳು ಗೆಡ್ಡೆಯ ಗಾತ್ರ, ವಿಧ ಮತ್ತು ಯಾವ ಜಾಗದಲ್ಲಿದೆ ಎಂಬುದನ್ನು ಗುರುತಿಸಲಾಗುತ್ತದೆ. ಅದೇ ರೀತಿ ಗೆಡ್ಡೆಯ ಬೆಳವಣಿಗೆಯ ವೇಗ ಮತ್ತು ರೋಗಿಯ ವಯಸ್ಸು ಇವೆಲ್ಲವನ್ನು ತಾಳೆ ಹಾಕಿ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ವೈನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಮೆದುಳಿನ ಹೊರಭಾಗದಲ್ಲಿರುವ ಚಿಕ್ಕ ಪುಟ್ಟ ತೀವ್ರತರವಲ್ಲದ ಗೆಡ್ಡೆಗಳನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಲಾಗುತ್ತದೆ. ಆದರೆ ಕೆಲವೊಮ್ಮೆ ಮೆದುಳು ಒಳಭಾಗದಲ್ಲಿ ಗೆಡ್ಡೆ ಬೆಳೆದಿದ್ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದಲ್ಲಿ ರೋಗಿಗೆ ಗೆಡ್ಡೆಗಿಂತ, ಶಸ್ತ್ರಚಿಕಿತ್ಸೆಯಿಂದಲೇ ಹೆಚ್ಚು ಹಾನಿಯಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಗೆಡ್ಡೆಗಳ ಗಾತ್ರ ಜಾಸ್ತಿಯಾಗಿ ಪಕ್ಕದ ಅಂಗಾಂಶಗಳ ಜೊತೆ ಸೇರಿಹೋಗಿದ್ದಲ್ಲಿ, ಗೆಡ್ಡೆಯನ್ನು ಸಂಪೂರ್ಣವಾಗಿ ತೆಗೆಯಲು ಸಾಧ್ಯವಾಗದಿರಬಹುದು. ಈ ಕಾರಣದಿಂದ ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಜೊತೆಗೆ ವಿಕಿರಣ ಚಿಕಿತ್ಸೆ ಮತ್ತು ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ಕೆಲವೊಮ್ಮೆ ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ತಲೆಬುರುಡೆಯೊಳಗಿನ ಉರಿಯೂತದಿಂದಾಗಿ ಸಣ್ಣ ಪುಟ್ಟ ತೊಂದರೆಗಳೂ ಉಂಟಾಗಬಹುದು. ಇವೆಲ್ಲವನ್ನು ರೋಗಿಯ ಒಡನಾಡಿಗಳಿಗೆ ಸೂಕ್ತ ಮಾಹಿತಿ ನೀಡಿ ಮನವರಿಕೆ ಮಾಡಲಾಗುತ್ತದೆ. ಶಸ್ತ್ರ ಚಿಕಿತ್ಸೆಯಿಂದ ಉಂಟಾಗುವ ಅಡ್ಡ ಪರಿಣಾಮದ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ರೋಗಿ ಮತ್ತು ರೋಗಿಯ ಸಂಬಂಧಿಕರಿಗೆ ಆಪ್ತ ಸಮಾಲೋಚಕರಿಂದ ಸಮಾಲೋಚನೆ ಮಾಡಿ ಮಾನಸಿಕ ಧೈರ್ಯ ಮತ್ತು ನೈತಿಕ ಸ್ಥೈರ್ಯ ನೀಡುವುದು ಅತೀ ಅವಶ್ಯಕ.

► ಕೊನೆ ಮಾತು:

ಬ್ರೈನ್ ಟ್ಯೂಮರ್ ಮಾರಣಾಂತಿಕ ಕಾಯಿಲೆ ಹೌದಾದರೂ, ಪ್ರಥಮ ಮತ್ತು ದ್ವಿತೀಯ ಹಂತದ ಬ್ರೈನ್ ಟ್ಯೂಮರ್ ಹೊಂದಿರುವವರಿಗೆ ಪರಿಣಾಮಕಾರಿ ಚಿಕಿತ್ಸೆ ಇದೆ. ತೀವ್ರತರವಲ್ಲದ ಬ್ರೈನ್‌ಟ್ಯೂಮರನ್ನು ಶಸ್ತ್ರ ಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದು. ರೋಗಿಗೆ ಮಾನಸಿಕ ಧೈರ್ಯ ಮತ್ತು ಕೌನ್ಸಿಲಿಂಗ್ ಮಾಡಿಸುವುದು ಅತೀ ಅವಶ್ಯಕ. ರೋಗಿಗೆ ಸಾಕಷ್ಟು ನೈತಿಕ ಬೆಂಬಲ ನೀಡಿ ಆಶಾವಾದಿಯಾಗಿರುವಂತೆ ಮಾನಸಿಕವಾಗಿ ಸಿದ್ಧತೆ ಮಾಡಬೇಕು. ರೋಗಿ ಚಿಕಿತ್ಸೆಯ ಬಳಿಕ ಅಳಿದುಳಿದ ಶಕ್ತಿ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಂಡು, ಸ್ವಾವಲಂಬಿಯಾಗಿ ಕೆಲಸ ಮಾಡಲು ಪೂರಕವಾದ ವಾತಾವರಣ ಸೃಷ್ಟಿಸಬೇಕು. ಶಸ್ತ್ರಚಿಕಿತ್ಸೆ ಬಳಿಕವೂ ನಿರಂತರವಾಗಿ ನೋವು ನಿವಾರಕ ಔಷಧಿಗಳು, ಮೂರ್ಛೆ ನಿರೋಧಕ ಮಾತ್ರೆಗಳು ಮತ್ತು ಕಿಮೋಥೆರಪಿ ಔಷಧಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಇವೆಲ್ಲದರ ಅಡ್ಡ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಸಾಕಷ್ಟು ಸಹಕಾರ ಮತ್ತು ಪ್ರೇರಣೆ ಬಂಧುಗಳಿಂದ ಮತ್ತು ಸ್ನೇಹಿತರಿಂದ ಅತೀ ಅವಶ್ಯಕ.

ಪತ್ತೆ ಹಚ್ಚುವುದು ಹೇಗೆ?

ರೋಗಗಳ ಲಕ್ಷಣಗಳ ಬಗೆಗಿನ ವಿವರವಾದ ಮಾಹಿತಿಗಳು, ದೈಹಿಕ ಪರೀಕ್ಷೆ ತಲೆಯ ಕ್ಷ-ಕಿರಣ, ಮೆದುಳಿನ ಸಿ.ಟಿ. ಸ್ಕ್ಯಾನ್ ಮತ್ತು ಎಂಆರ್‌ಐ ಮಾಡಿಸಿ ರೋಗವನ್ನು ಗುರುತಿಸಲಾಗುತ್ತದೆ. ಮೆದುಳಿನ ಕಾರ್ಯದಕ್ಷತೆಯನ್ನು ಇಇಜಿ ಎಂಬ ಪರೀಕ್ಷೆ ಮುಖಾಂತರ ಕಂಡು ಹಿಡಿಯುತ್ತಾರೆ. ಒಂದು ವೇಳೆ ಮೆದುಳಿನ ಒಳಗೆ ಟ್ಯೂಮರ್ ಅಥವಾ ಗೆಡ್ಡೆ ಇದೆ ಎಂದು ತಿಳಿದು ಬಂದಲ್ಲಿ ಅದರ ಗಾತ್ರ, ಅದರ ಸುತ್ತಳತೆ ಮತ್ತು ಸುತ್ತಲಿನ ಮೆದುಳಿನ ಅಂಗಾಂಶಗಳ ಬಗೆಗಿನ ಮಾಹಿತಿಯನ್ನು ಪಡೆಯಲಾಗುತ್ತದೆ. ಅಗತ್ಯವಿದ್ದಲ್ಲಿ ನ್ಯೂರೋಸರ್ಜನ್, ಮೆದುಳಿನ ಹೊರಭಾಗದ ತಲೆಬುರುಡೆ ಎಲುಬಿನಲ್ಲಿ ರಂಧ್ರ ಮಾಡಿ, ಗೆಡ್ಡೆಯ ಸಣ್ಣ ತುಂಡನ್ನು ತೆಗೆದು ಸೂಕ್ಷ್ಮದರ್ಶಕದಲ್ಲಿ ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಗೆ ಬಯಾಪ್ಸಿ ಎನ್ನುತ್ತಾರೆ. ಒಟ್ಟಿನಲ್ಲಿ ನರರೋಗ ತಜ್ಞರು ಮತ್ತು ನ್ಯೂರೋಸರ್ಜನ್ ಒಟ್ಟುಗೂಡಿ, ರೋಗದ ಲಕ್ಷಣಗಳ ಮತ್ತು ಪರೀಕ್ಷೆಯ ಫಲಿತಾಂಶವನ್ನು ತಾಳೆ ಹಾಕಿ ರೋಗ ನಿರ್ಣಯಮಾಡುತ್ತಾರೆ. ಕೆಲವೊಮ್ಮೆ ರೋಗ ನಿರ್ಣಯ ಮಾಡಲು ಹಲವಾರು ಬಾರಿ ಸಿ.ಟಿ. ಸ್ಕ್ಯಾನ್ ಅಥವಾ ಎಂಆರ್‌ಐ ಸ್ಕ್ಯಾನ್ ಮಾಡಬೇಕಾಗಬಹುದು. ಮೆದುಳಿನ ಅಂಗಾಂಶಗಳನ್ನು ಕಾಲ್ಪನಿಕವಾಗಿ ಸಣ್ಣ ಸಣ್ಣ ಹಾಳೆಗಳಾಗಿ ಕತ್ತರಿಸಿ, ಆ ಬಳಿಕ ಮರು ಜೋಡಣೆ ಮಾಡಿ ಗೆಡ್ಡೆಯನ್ನು ಪತ್ತೆ ಹಚ್ಚುತ್ತಾರೆ. ನುರಿತ ರೇಡಿಯೋಲಾಜಿಸ್ಟ್ ಅಥವಾ ಎಕ್ಸ್‌ರೇ ತಜ್ಞರ ಸಲಹೆ ಇದಕ್ಕೆ ಅತೀ ಅಗತ್ಯ.

share
ಡಾ. ಮುರಲೀ ಮೋಹನ್, ಚೂಂತಾರು
ಡಾ. ಮುರಲೀ ಮೋಹನ್, ಚೂಂತಾರು
Next Story
X