Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಪರ್ಯಾಯ ಹಂಬಲಗಳ ಪರಿಶೀಲನೆ

ಪರ್ಯಾಯ ಹಂಬಲಗಳ ಪರಿಶೀಲನೆ

ಪುಸ್ತಕದೊಳಗೇನಿದೆ?

-ಡಾ. ಜಿ. ಪ್ರಶಾಂತನಾಯಕ-ಡಾ. ಜಿ. ಪ್ರಶಾಂತನಾಯಕ16 Dec 2021 1:20 PM IST
share
ಪರ್ಯಾಯ ಹಂಬಲಗಳ ಪರಿಶೀಲನೆ

‘ಚಹರೆಗಳೆಂದರೆ, ಗಾಯಗಳೂ ಹೌದು’ ಗೆಳೆಯರಾದ ಡಾ. ಎ.ಎಸ್. ಪ್ರಭಾಕರ ಅವರ ಸಮುದಾಯ ಕಥನಗಳ ಕುರಿತು ಮಾತನಾಡುವ ಕೃತಿ. ಇಂತಹದ್ದೊಂದು ಅಪರೂಪದ ಕೃತಿಯನ್ನು ಓದುವಾಗ ಮತ್ತೆ ಮತ್ತೆ ಓದುಗನನ್ನು ‘ಸಾಂಸ್ಕೃತಿಕ ಪ್ರಜ್ಞೆ’ ಎನ್ನುವುದು ಆವರಿಸಿಕೊಳ್ಳುತ್ತದೆ. ಹಾಗಾಗಿಯೇ ಈ ಮೇಲಿನ ಮಾತುಗಳನ್ನು ಮನನ ಮಾಡುವುದು ಅನಿವಾರ್ಯ, ಸಾಂಸ್ಕೃತಿಕ ಅಧ್ಯಯನ ಸಂಶೋಧನೆ ಎನ್ನುವ ಮಾದರಿಯೊಂದು ಸಹಜವಾಗಿಯೇ ಈ ಕೃತಿಯೊಳಗೆ ಹರಳುಗಟ್ಟಿದೆ. ಪದ, ವಾಕ್ಯ, ಅಕ್ಷರಗಳಿಗೆ ಅರ್ಥ ತುಂಬುವುದು, ಲೇಖನಕ್ಕೊಂದು ಆಶಯವೆನ್ನುವುದು, ಬರಹಗಾರನ ನಿಜದ ಕಾಳಜಿಗಳೆನ್ನುವುದನ್ನೆಲ್ಲಾ ಈ ಕೃತಿ ನಿಧಾನವಾಗಿ ಅರಿವು ಮಾಡಿಸುತ್ತದೆ.

ಕೃತಿ, ವಿಶಿಷ್ಟ ಕೊಡುಗೆ ಎನ್ನುವುದೊಂದು ಸಾಮಾನ್ಯ ಮಾತಿನಂತಾಗದೆ ಬರಹ ಮತ್ತು ಬರಹಗಾರರ ಬದ್ಧತೆ ಮತ್ತು ಕಾಳಜಿಗಳ ರೂಪಕವಾಗುತ್ತದೆ. ಪ್ರತಿ ವಿಷಯದ ಆಯ್ಕೆ ಯೋಚಿಸಿ, ಯೋಜಿಸಿದಂತಾಗಿಲ್ಲ. ಪ್ರತಿಯೊಂದು ಬರೆಯಲೇಬೇಕು, ದಾಖಲಾಗಬೇಕು, ವಾಸ್ತವದೊಂದಿಗೆ ಸಂವಾದಿಸಬೇಕು ಎಂಬ ತುಡಿತದೊಂದಿಗೆ ಬರೆಸಿಕೊಂಡ ಲೇಖನಗಳಾಗಿವೆ. ಸಮುದಾಯಗಳ ಚಹರೆಗಳು ಮತ್ತು ಗಾಯಗಳು ಎನ್ನುವಲ್ಲಿಯೇ ಖಚಿತವಾಗುವ ಗಾಂಭೀರ್ಯಕ್ಕೆ ಭಾವುಕತೆಯ ಲೇಪವಿಲ್ಲ. ನಾಗರಿಕತೆ, ಆಧುನಿಕತೆಯ ಹುಳುಕುಗಳ ದರ್ಪಣವೂ ಆದಂತಾಗುತ್ತದೆ. ಒಬ್ಬ ಪ್ರಾಮಾಣಿಕ ಸಂಶೋಧಕ ಜೀವಪರ ಸಂವೇದನೆಯ ಲೇಖಕ ಅಂತಃಕರಣವನ್ನು ಹೊಂದಿದಾಗ ಈ ಬಗೆಯ ಕೃತಿಯೊಂದು ಹೆರಿಗೆಯ ಸಂಕಟವೊಂದನ್ನು ಅವುಡುಗಚ್ಚಿ ಸಹಿಸುತ್ತಲೇ ಹೊಸ ಜನ್ಮಕ್ಕೆ ಕಾರಣವಾಗುವ ಬಗೆಯಾಗುತ್ತದೆ.

ಕೃತಿಯ ಪ್ರತಿ ಬರಹಗಳಲ್ಲಿರುವ ಆಪ್ತತೆಯ ಸಂವೇದನೆಗೆ ಕಾರಣವಾಗುವುದು. ಲೇಖಕನೇ ಪಾತ್ರವಾಗುವ, ಘಟನೆಯಾಗುವ, ಸಾಕ್ಷಿಯಾಗುವ ಗುಣಗಳಿಂದ ತಾದ್ಯಾತ್ಮತೆ ಎನ್ನುವ ಸರಳ ಅರ್ಥವನ್ನು ಮೀರಿದ ಪ್ರತಿಫಲವಿದು. ಓದುಗರು ಅಕ್ಷರದೊಂದಿಗೆ ಸೇರುತ್ತಲೇ ಮನನ, ಪರಿಶೀಲನೆಯ ಸಾಧ್ಯತೆಗೂ ಚಾಚಿಕೊಳ್ಳು ವಂತಾಗುವುದು ಕೃತಿಯೊಳಗಿನ ಶಕ್ತಿ ಮತ್ತು ಅದೊಂದು ಸಾಂಸ್ಕೃತಿಕ ಹಠವೂ ಹೌದು.

ಹನ್ನೊಂದು ಲೇಖನಗಳು-ವಿಚಾರಗಳ ಕಾರಣಕ್ಕೆ ಎಲ್ಲವೂ ಸ್ವತಂತ್ರ, ಆದರೆ ಒಂದರೊಡನೊಂದು ಪೂರಕವಾದ ಸಂಬಂಧಗಳನ್ನು ಏರ್ಪಡಿಸಿಕೊಳ್ಳುವುದರಲ್ಲಿ ನಿಜದನಿಯ ಸಹಜತೆ ಇದೆ. ‘ಬುಡಕಟ್ಟುಗಳ ಬದುಕಿನ ಮೀಮಾಂಸೆ’ಯೊಂದಿಗೆ ತೆರೆದುಕೊಂಡು ‘ಕರ್ನಾಟಕದ ಆದಿವಾಸಿ ರೈತ ಹೋರಾಟಗಳ ಸ್ವರೂಪ’ ‘ಅಲೆಮಾರಿಗಳ ಶಾಪಗ್ರಸ್ತ ಪಯಣ’ ‘ಒಳಗಿನವರಾಗುವುದು; ಹಾಗೆಂದರೇನು?’ ಎಂದೆಲ್ಲಾ ಮುಂದುವರಿಯುತ್ತದೆ.

ಪುಸ್ತಕ: ಚಹರೆಗಳೆಂದರೆ, ಗಾಯಗಳೂ ಹೌದು

ಲೇಖಕರು:

ಡಾ. ಎ.ಎಸ್. ಪ್ರಭಾಕರ ಪ್ರಕಾಶಕರು: ಗೌರಿ ಮೀಡಿಯಾ ಟ್ರಸ್ಟ್, ನಂ.05, 1ನೇ ಕ್ರಾಸ್, ಹನುಮಂತ ನಗರ, ಬೆಂಗಳೂರು

ಮೊ:9353666821

ಬೆಲೆ: ರೂ. 250

share
-ಡಾ. ಜಿ. ಪ್ರಶಾಂತನಾಯಕ
-ಡಾ. ಜಿ. ಪ್ರಶಾಂತನಾಯಕ
Next Story
X