Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಝಲಕ್
  4. ಸ್ವರ್ಗ

ಸ್ವರ್ಗ

-ಮಗು-ಮಗು4 Jan 2021 12:10 AM IST
share
ಸ್ವರ್ಗ

ದೇವರ ಸ್ವರ್ಗವನ್ನು ತನ್ನದಾಗಿಸಲು ಮನುಷ್ಯ ಹೋಮ, ಯಾಗ ಮಾಡಿದ. ಧರ್ಮ ಯುದ್ಧಗಳನ್ನು ಗೆದ್ದ. ತೀರ್ಥ ಯಾತ್ರೆ ಗೈದ. ಅಂತಿಮವಾಗಿ ಸತ್ತು ದೇವರ ಮುಂದೆ ನಿಂತ. ಆತನನ್ನು ನೋಡಿದ್ದೇ ದೇವರು ಕೇಳಿದ ‘‘ಹೇಗಿತ್ತು ನನ್ನ ಸ್ವರ್ಗ?’’

   ಮನುಷ್ಯ ಅರ್ಥವಾಗದೆ ದೇವರ ಮುಖವನ್ನೇ ಮಿಕ ಮಿಕ ನೋಡತೊಡಗಿದ. ದೇವರು ಹೇಳಿದ ‘‘ನಾನು ನಿನಗಾಗಿ ಸ್ವರ್ಗವೊಂದನ್ನು ಸೃಷ್ಟಿಸಿ ನಿನ್ನನ್ನು ಬದುಕಲು ಬಿಟ್ಟಿದ್ದೆ. ನಿನ್ನಂತಹ ಹುಲು ಮಾನವನಿಗಾಗಿ ಭೂಮಿಯನ್ನು ಬೆಳಗುವುದಕ್ಕೆ ಬೃಹತ್ ಸೂರ್ಯನನ್ನು ಸೃಷ್ಟಿಸಿದೆ. ಮಿಶ್ರಮಿಸಲು ರಾತ್ರಿಯ ವ್ಯವಸ್ಥೆಯನ್ನೂ ಮಾಡಿದೆ. ರಾತ್ರಿಯ ಕತ್ತಲ ಏಕಾಂತವನ್ನು ಕಳೆಯಲು ಚಂದ್ರನಲ್ಲಿ ಬೆಳದಿಂಗಳನ್ನು ಇಟ್ಟೆ. ಜೊತೆಗೆ ಪ್ರೀತಿಯ ಒಸರನ್ನು ನಿನ್ನೆದೆಯೊಳಗೆ ಬಿತ್ತಿ ತಬ್ಬಿಕೊಳ್ಳಲು ಸಂಗಾತಿಯನ್ನು ಕೊಟ್ಟೆ. ನಿನಗೆ ಕಡಿಮೆಯಾಗಬಾರದು ಎಂದು ಭೂಮಿಯ ಉದ್ದಗಲಕ್ಕೂ ಸಾವಿರಾರು ನದಿಗಳನ್ನು ಹರಿಯ ಬಿಟ್ಟೆ. ಲಕ್ಷಾಂತರ ಗಿಡ ಮರಗಳು ನಿನಗಾಗಿ ಹಣ್ಣುಗಳನ್ನು ಬಿಡುವುದಕ್ಕೆ ಏರ್ಪಾಡು ಮಾಡಿದೆ. ಬಗೆ ಬಗೆಯ ಹಣ್ಣುಗಳನ್ನು ಅವುಗಳ ಮೂಲಕ ಸೃಷ್ಟಿಸಿ, ಅತ್ಯುತ್ತಮವಾದ ಪ್ಯಾಕ್‌ಗಳ ಮೂಲಕ ನಿನಗಾಗಿ ಕಳುಹಿಸಿ ಕೊಟ್ಟೆ. ರುಚಿ, ಪರಿಮಳವನ್ನೂ ಅವುಗಳಿಗೆ ನೀಡಿದೆ. ಒಂದೇ ರುಚಿಯಿಂದಾಗಿ ನೀನು ಸುಸ್ತಾಗಬಾರದು ಎಂದು ಲಕ್ಷಾಂತರ ಬಗೆಯ ಆಹಾರ ಬೆಳೆಗಳನ್ನು ಅಲ್ಲಿ ಬೆಳೆಸಿದೆ. ಲಕ್ಷಾಂತರ ಬಗೆಯ ಪ್ರಾಣಿಗಳು, ಪಕ್ಷಿಗಳು, ಬಣ್ಣ ಬಣ್ಣದ ಚಿಟ್ಟೆಗಳು, ಬಣ್ಣ ಬಣ್ಣದ ಹೂವು ಗಿಡಗಳನ್ನು ಹರಡಿದೆ. ರಾತ್ರಿಯ ಆಕಾಶವನ್ನೂ ಕೂಡ ನಿನಗಾಗಿ ಸುಂದರವಾಗಿಸಿದೆ. ಹಾಲು, ಜೇನು ಬಗೆ ಬಗೆಯ ಸ್ವಾದಗಳನ್ನು ನಿನಗೆ ಒದಗಿಸಿದೆ. ಅಗಾಧ ಕಡಲುಗಳಲ್ಲಿಯೂ ಬಗೆ ಬಗೆಯ ಆಹಾರ ಬಚ್ಚಿಟ್ಟೆ. ಬೆಟ್ಟ, ಪರ್ವತ, ಕಣಿವೆ, ಮರುಭೂಮಿ, ಹಚ್ಚಹಸಿರು ಬಯಲು, ಮಳೆ, ಚಳಿ, ಬೇಸಿಗೆ....ಹೀಗೆ ಬೇಕು ಬೇಕೆನ್ನುವಷ್ಟು ವೈವಿಧ್ಯಗಳನ್ನು ಸೃಷ್ಟಿಸಿದೆ. ಜೊತೆಗೆ ನೀನು ಆನಂದಿಸಲು ಸಂಗೀತ, ನೃತ್ಯ, ಸಾಹಿತ್ಯ...ಎಲ್ಲವನ್ನೂ ಒದಗಿಸಿದೆ. ಅಂತಹ ಸ್ವರ್ಗವನ್ನು ನರಕವಾಗಿ ಪರಿವರ್ತಿಸಿ ಈಗ ನನ್ನ ಮುಂದೆ ಬಂದು ಪೆಕರನಂತೆ ‘ಸ್ವರ್ಗ ಎಲ್ಲಿದೆ?’ ಎಂದು ಕೇಳುತ್ತಿದ್ದೀಯಲ್ಲ ....ನನ್ನ ಸೃಷ್ಟಿಗಳಲ್ಲೇ ಅತಿ ದೊಡ್ಡ ಮೂರ್ಖ ನೀನು....’’

share
-ಮಗು
-ಮಗು
Next Story
X