Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ನೂರ್ ಇನಾಯತ್ ಖಾನ್: ಚರಿತ್ರೆ, ಸಂಗೀತ...

ನೂರ್ ಇನಾಯತ್ ಖಾನ್: ಚರಿತ್ರೆ, ಸಂಗೀತ ಮತ್ತು ದರ್ಶನ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ2 March 2020 12:00 AM IST
share
ನೂರ್ ಇನಾಯತ್ ಖಾನ್:  ಚರಿತ್ರೆ, ಸಂಗೀತ ಮತ್ತು ದರ್ಶನ

ಇತಿಹಾಸದ ಹರಿಯು ಅತ್ಯಂತ ಕುತೂಹಲಕರವಾದುದು. ಅದರ ರೂಪಾಂತರಗಳು ಕೂಡ. ಟಿಪ್ಪುಸುಲ್ತಾನ್ ತನ್ನ ನಾಡಿಗಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಾ ರಣರಂಗದಲ್ಲಿ ಹುತಾತ್ಮನಾದ ಈ ದೇಶ ಕಂಡ ಅಪರೂಪದ ಅರಸ. ಈ ನೆಲದ ಜನಗಳಿಗಾಗಿ ಕೊನೆಯವರೆಗೂ ಮಿಡಿದವನು. ರೈತರು, ದಲಿತರ ಸಂಕಟಗಳಿಗೆ ಸ್ಪಂದಿಸಿದವನು. ಕೃಷಿ, ಆರ್ಥಿಕತೆ, ರಾಜಕೀಯಗಳಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿದಾತ. ಧಗಿಸುವ ಕನಸುಗಳನ್ನು ಮುಡಿದುಕೊಂಡು ಬದುಕಿನ ಬಹುತೇಕ ಸಮಯವನ್ನು ಸಾಮ್ರಾಜ್ಯ ಶಾಹಿಗಳ ವಿರುದ್ಧ ಹೋರಾಡಲು ರಣರಂಗದಲ್ಲಿ ಕಳೆದುಕೊಂಡವನು. ಆತನ ಬಲಿದಾನ ಅಲ್ಲಿಗೇ ಮುಗಿಯದೇ ಅದು ನಮ್ಮನ್ನು ಮತ್ತೆ ಬ್ರಿಟಿಷ್ ನೆಲದಲ್ಲೇ ಹೊಸದಾಗಿ ತೆರೆದುಕೊಳ್ಳುವ ಅಚ್ಚರಿಯನ್ನು ‘ನೂರ್ ಇನಾಯತ್ ಖಾನ್’ ಬದುಕಿನ ಮೂಲಕ ನಮ್ಮದಾಗಿಸಬಹುದು. ನೂರ್ ಇನಾಯತ್ ಖಾನ್ ಟಿಪ್ಪುವಿನ ಮರಿಮಗಳು. ಈಕೆಯ ಅಪ್ಪ ಹಜರತ್ ಇನಾಯತ್ ಖಾನ್ ಸೂಫಿ ಸಂಗೀತಗಾರ ಹಾಗೂ ದಾರ್ಶನಿಕ. ರಶ್ಯದಲ್ಲಿ ಹುಟ್ಟಿದ ನೂರ್, ಎರಡನೆಯ ಮಹಾಯುದ್ಧದಲ್ಲಿ ಇಂಗ್ಲೆಂಡಿನ ಗೂಢಚಾರಿಣಿಯಾಗಿ ಫ್ರಾನ್ಸಿಗೆ ಹೋಗಿ, ನಾಝಿಗಳ ಕೈಯಲ್ಲಿ ಸಿಕ್ಕಿ ಬಿದ್ದು, ಜರ್ಮನಿಯ ಡಕಾವ್ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ ಸಜೀವ ದಹನವಾದವಳು. ಅವಳ ಪೂರ್ವಜನಾದ ಟಿಪ್ಪು, ಬ್ರಿಟಿಷರನ್ನು ಆಜನ್ಮ ವೈರಿಗಳೆಂದು ಪರಿಭಾವಿಸಿ ಜೀವನವಿಡೀ ಅವರ ವಿರುದ್ಧ ಹೋರಾಡುತ್ತ, ರಣರಂಗದಲ್ಲಿ ನೆತ್ತರು ಹರಿಸುತ್ತಾ ಪ್ರಾಣ ಬಿಟ್ಟರೆ, ಅವನ ವಂಶದ ಕುಡಿಯೊಂದು ಒಂದೂವರೆ ಶತಮಾನದನಂತರ, ಬ್ರಿಟಿಷರ ಪ್ರತಿನಿಧಿಯಾಗಿ ಹೋಗಿ ರಣರಂಗದಲ್ಲಿ ಜೀವಬಿಟ್ಟಿತು. ಆದರೆ ಇಲ್ಲಿ ಟಿಪ್ಪುವಾಗಲಿ, ನೂರ್ ಇನಾಯತ್ ಖಾನ್ ಆಗಲಿ ನಮಗೆ ಹತ್ತಿರವಾಗುವುದು ರಾಜಕೀಯೇತರವಾದ ಹಲವು ಸಂಗತಿಗಳಿಗಾಗಿ. ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ಮಂಡೆಕೋಲು ಅವರ ‘ನೂರ್ ಇನಾಯತ್ ಖಾನ್-ನಾಝಿ ಹೋರಾಟದ ಆರ್ದ್ರ ಕಾವ್ಯ’ ಮುಖ್ಯವಾಗುತ್ತದೆ.

ಹಿರಿಯ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಕೃತಿಯ ಕುರಿತಂತೆ ಹೀಗೆ ಅಭಿಪ್ರಾಯ ಪಡುತ್ತಾರೆ ‘‘ಈ ಪುಸ್ತಕವನ್ನು ಚರಿತ್ರೆಯ ಕಥನವೆಂದು ಓದತೊಡಗಿದರೆ, ಅದು ಸರ್ವಾಧಿಕಾರದ ವಿರುದ್ಧ ಹೋರಾಡುವ ವರ್ತಮಾನದ ನಿರೂಪಣೆಯಾಗಿ ಮೆಲ್ಲನೆ ಪರಿವರ್ತನೆ ಹೊಂದುತ್ತದೆ. ಪುಸ್ತಕದ ಕೇಂದ್ರದಲ್ಲಿರುವ ನೂರಳನ್ನು ಭಾರತೀಯ ಮೂಲದವಳೆಂಬ ರಾಷ್ಟ್ರೀಯ ಪ್ರಜ್ಞೆಯಲ್ಲಿ ಗ್ರಹಿಸಿಕೊಂಡು ಹೊರಟರೆ ಆಕೆ ನಮ್ಮ ಕೈ ಹಿಡಿದು ಅಮೆರಿಕ, ಬ್ರಿಟನ್, ರಶ್ಯ, ಫ್ರಾನ್ಸ್, ಜರ್ಮನಿಗಳ ಗಡಿ ಧಾಟಿಸಿ ಮುನ್ನುಗ್ಗಿಸುತ್ತಾಳೆ. ಸೂಫಿ ಸಂಗೀತದ ವಿಶ್ವಾತ್ಮಕ ಮಧುರ ಭಾವದೊಡನೆ ಓದು ಮುಂದುವರಿದರೆ, ಅದು ನಮ್ಮನ್ನು ಡಕಾವೋ ಕ್ಯಾಂಪ್‌ನ ಅಮಾನುಷ ಕ್ರೌರ್ಯದ ಮಗ್ಗುಲಲ್ಲಿ ನಿಲ್ಲಿಸಿ ತಳಮಳಗೊಳಿಸುತ್ತದೆ....’’

ಸೂಫಿ ಚಿಂತನೆಯ ಆಳ ಅಗಲಗಳನ್ನು ತನ್ನದಾಗಿಸಿಕೊಂಡಿರುವ ರಹಮತ್ ತರಿಕೆರೆ ಮಾತುಗಳು ಈ ಕೃತಿಯ ಇನ್ನೊಂದು ಹೊಸತೇ ಆದ ಆಯಾಮವನ್ನು ತೆರೆದುಕೊಡುತ್ತದೆ ‘‘...ಚರಿತ್ರೆ, ಸಂಗೀತ ಮತ್ತು ದರ್ಶನಗಳನ್ನು ವಸಾಹತುಶಾಹಿ ಆಳ್ವಿಕೆಯ ವಿದ್ಯಮಾನಗಳ ಚೌಕಟ್ಟಿನಲ್ಲಿಟ್ಟು ಕಾಣಿಸುವುದರಿಂದ, ಈ ಕೃತಿಯು ಏಕಕಾಲಕ್ಕೆ ತತ್ವಶಾಸ್ತ್ರ, ರಾಜಕಾರಣ ಹಾಗೂ ಚರಿತ್ರೆಯ ಕೃತಿಯಾಗಿದೆ. ಗಂಡು ಹೆಣ್ಣಿನ ಪ್ರೇಮ, ವ್ಯಕ್ತಿಗಳ ಅನುಭಾವದ ಸಾಧನೆ ಹಾಗೂ ಸಂಗೀತದ ಅಭಿರುಚಿಗಳ್ನು ಒಂದು ಕೇಂದ್ರಕ್ಕೆ ತರುತ್ತದೆ. ಈ ಮೂಲಕ ಭಾರತದ ಧಾರ್ಮಿಕ ಹಾಗೂ ಕಲಾತ್ಮಕ ಸಾಮರಸ್ಯದ ಅಪೂರ್ವ ಪರಂಪರೆಯನ್ನು ಕಾಣಿಸುತ್ತದೆ, ಈ ಪರಂಪರೆಯ ಒಳಗಿನ ಮಾನವೀಯ ಸಂಬಂಧಗಳನ್ನು ಶೋಧಿಸುತ್ತದೆ....’’

ಅಹರ್ನಿಶಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 180. ಮುಖಬೆಲೆ 160 ರೂಪಾಯಿ. ಆಸಕ್ತರು 94491 74662 ದೂರವಾಣಿಯನ್ನು ಸಂಪರ್ಕಿಸಬಹುದು.

share
-ಕಾರುಣ್ಯಾ
-ಕಾರುಣ್ಯಾ
Next Story
X