Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಮೂಹ ನಾಯಕತ್ವ

ಸಮೂಹ ನಾಯಕತ್ವ

ರಂಜಾನ್ ದರ್ಗಾರಂಜಾನ್ ದರ್ಗಾ29 Nov 2019 2:40 PM IST
share
ಸಮೂಹ ನಾಯಕತ್ವ

ಅವರು ಜನಿಸಿದ್ದು ಅಗ್ರಹಾರಗಳ ಅಗ್ರಹಾರವಾಗಿದ್ದ ಬಾಗೇವಾಡಿಯ ಪುರವರಾಧೀಶ ಮಾದರಸ ಮತ್ತು ಮಾದಲಾಂಬಿಕೆಯ ಮಗನಾಗಿ. ಉನ್ನತಕುಲ ಎಂದು ಕರೆಯಿಸಿಕೊಳ್ಳುವ ಶೈವಬ್ರಾಹ್ಮಣ ಕುಲದಲ್ಲಿ, ಧಾರ್ಮಿಕ ಅಧಿಕಾರ, ವೇದಾಗಮಗಳ ಜ್ಞಾನ ಮತ್ತು ಸಂಪತ್ತು ತುಂಬಿದ್ದ ಮನೆತನದಲ್ಲಿ! ಆದರೆ ಬಸವಣ್ಣನವರಿಗೆ ಇದಾವುದರ ಪರಿವೆ ಇರಲಿಲ್ಲ. ಶೂದ್ರರ ಮತ್ತು ಪಂಚಮರ ಸಾಮಾಜಿಕ ನ್ಯಾಯದ ಪ್ರಶ್ನೆ ಮಾತ್ರ ಅವರನ್ನು ಬಾಧಿಸುತ್ತಿತ್ತು. ಅದಕ್ಕೆ ಅವರು ಉತ್ತರ ಕಂಡುಕೊಳ್ಳಲೇ ಬೇಕಾಗಿತ್ತು. ಅದಕ್ಕಾಗಿ ಅವರು ಬ್ರಾಹ್ಮಣ್ಯವನ್ನು, ಸಂಪತ್ತನ್ನು ಮತ್ತು ನಂತರ ಕಲ್ಯಾಣದ ಪ್ರಧಾನಿ ಪದವಿಯನ್ನೂ ಬಿಟ್ಟುಕೊಡಬೇಕಾಯಿತು. ಶೋಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತ, ಶೂದ್ರರು ಮತ್ತು ಪಂಚಮರು ಎಂದೆಂದಿಗೂ ಆರ್ಥಿಕವಾಗಿ ದುರ್ಬಲರಾಗಿಯೇ ಉಳಿಯುವಂಥ ಸ್ಥಿತಿಯನ್ನು ನಿರ್ಮಿಸಿದ ವರ್ಣವ್ಯವಸ್ಥೆಯನ್ನು ಗಟ್ಟಿ ಮಾಡಿದ ಮನುಸ್ಮತಿಯ ಕೌರ್ಯದ ವಿರುದ್ಧ ಹೋರಾಡುತ್ತ, ದಯಾಸಂಸ್ಕೃತಿಯನ್ನು ಸಾಮಾಜೀಕರಣಗೊಳಿಸಿ ಬದುಕಿನ ಎಲ್ಲ ಸ್ತರಗಳಲ್ಲಿನ ಶೋಷಣೆಯನ್ನು ನಿರ್ನಾಮಗೊಳಿಸುವುದೇ ಬಸವಣ್ಣನವರ ಗುರಿಯಾಗಿತ್ತು.

ಕಾಯಕಜೀವಿಗಳನ್ನು ಸಂಘಟಿಸುವುದರ ಮೂಲಕ ಬಸವಣ್ಣನವರು ದುಡಿಯುವ ವರ್ಗದ ಮೊದಲ ನಾಯಕರಾದರು. ಆದರೆ ಅವರು ತಮ್ಮ ನಾಯಕತ್ವವನ್ನು ಸಮೂಹ ನಾಯಕತ್ವವಾಗಿ ಪರಿವರ್ತಿಸಿದರು. ರಾಜರುಗಳಿಂದ ತುಂಬಿದ್ದ ಜಗತ್ತಿನಲ್ಲಿ ಸಮೂಹ ನಾಯಕತ್ವದ ಪ್ರಶ್ನೆಯೇ ಇರಲಿಲ್ಲ. ರಾಜ ಹೇಳಿದ್ದೇ ಅಂತಿಮವಾಗಿತ್ತು. ಆದರೆ ಬಸವಣ್ಣನವರು ವಿಶ್ವದಲ್ಲಿ ಮೊದಲ ಬಾರಿಗೆ ಸಮೂಹ ನಾಯಕತ್ವದ ಪರಿಕಲ್ಪನೆಯನ್ನು ಸಾಕಾರಗೊಳಿಸಿದರು. ಅಲ್ಲಿಯವರೆಗೆ ಜಗತ್ತಿನ ಯಾವ ದಾರ್ಶನಿಕನಿಗೂ ಸಮೂಹ ನಾಯಕತ್ವದ ಕಲ್ಪನೆ ಮೂಡಿರಲಿಲ್ಲ. ಅನುಭವ ಮಂಟಪದ 770 ಅಮರಗಣಂಗಳೇ ಆ ಸಮೂಹ ನಾಯಕರು. ಇಲ್ಲಿನ ಬಹುಪಾಲು ನಾಯಕರೆಲ್ಲ ವಿವಿಧ ಸಾಮಾಜಿಕ ಸ್ತರಗಳಿಂದ ಬಂದ ಕಾಯಕಜೀವಿಗಳಾದ ಶರಣ ಶರಣೆಯರಾಗಿದ್ದರು. ಕೆಲವರು ಮೇಲಿನ ವರ್ಣಗಳವರು ಶರಣಸಂಕುಲದ ಸರ್ವಸಮತ್ವವನ್ನು ಒಪ್ಪಿಕೊಂಡು ಶರಣ ಶರಣೆಯರಾಗಿದ್ದರು. ಇವರೆಲ್ಲ ಅನುಭವ ಮಂಟಪವೆಂಬ ಸಮಾಜೋಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು. ನಟುವರ ಜನಾಂಗದಿಂದ ಬಂದ ಮಹಾಜ್ಞಾನಿ ಅಲ್ಲಮಪ್ರಭುಗಳು ಈ ಸಂಸತ್ತಿನ ಸಭಾಧ್ಯಕ್ಷರಾಗಿದ್ದರು. ಹೀಗೆ ಜಗತ್ತಿನಲ್ಲಿ ಮೊದಲಬಾರಿಗೆ ಸಂಸತ್ತಿನ ಪರಿಕಲ್ಪನೆ ಮೂಡಿತು.

ಅನುಭವ ಮಂಟಪದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು. ಬದುಕಿನ ಎಲ್ಲ ಆಗುಹೋಗುಗಳ ಚರ್ಚೆಯಾಗುತ್ತಿತ್ತು. ಶರಣರ ವಚನಗಳು ಅನುಭವ ಮಂಟಪದ ವೂಸೆಯಲ್ಲಿ ಹಾಯ್ದು ಹೊರಬರುತ್ತಿದ್ದವು. ಅಂದರೆ 770 ಅಮರಗಣಂಗಳ ಒಪ್ಪಿಗೆ ಪಡೆದು ಮಸೂದೆಗಳು ಕಾಯ್ದೆಗಳಾಗುವ ಹಾಗೆ ವಚನಗಳು ಹೊರಬರುತ್ತಿದ್ದವು. ಈ ಕಾರಣದಿಂದಲೇ ವಚನಗಳು ‘ವಚನ ಸಂವಿಧಾನ’ ಎಂದು ಕರೆಯಿಸಿಕೊಂಡವು.

ಈ ವಚನ ಸಂವಿಧಾನ ಕೇವಲ ಐಹಿಕ ಜಗತ್ತಿಗೆ ಸಂಬಂಧಿಸಿದ್ದಲ್ಲ. ಮಾನವನ ಆಂತರಿಕ ಜಗತ್ತಿಗೂ ಸಂಬಂಧಿಸಿತ್ತು. ಜಗತ್ತು ಬದಲಾಗಬೇಕಾದರೆ ಆ ಬದಲಾವಣೆ ಬಯಸುವ ಮಾನವರು ಬದಲಾಗಬೇಕು ಎಂಬುದು ಬಸವಣ್ಣನವರ ದೃಢ ನಿಲುವಾಗಿದೆ. ಅಂತೆಯೆ ಅವರು ಕಳಬೇಡ, ಕೊಲಬೇಡ ಎಂಬ ಸಪ್ತಸೂತ್ರಗಳನ್ನು ತಿಳಿಸಿದರು.

share
ರಂಜಾನ್ ದರ್ಗಾ
ರಂಜಾನ್ ದರ್ಗಾ
Next Story
X