Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಮೋಚನೆಯ ಮಾರ್ಗ

ವಿಮೋಚನೆಯ ಮಾರ್ಗ

ರಂಜಾನ್ ದರ್ಗಾರಂಜಾನ್ ದರ್ಗಾ1 Nov 2019 12:12 AM IST
share
ವಿಮೋಚನೆಯ ಮಾರ್ಗ

ಜೀವಕಾರುಣ್ಯ ತತ್ವದೊಂದಿಗೆ ಬಸವಣ್ಣನವರು ಅಹಂಕಾರ ಮರ್ದನ ಮಾಡಿದರು. ಅಹಂಕಾರವು ಎಲ್ಲ ಭೌತಿಕ ಅನಿಷ್ಟಗಳ ಮತ್ತು ಮನೋರೋಗಗಳ ಮೂಲವಾಗಿದೆ. ಜೀವ ಮತ್ತು ಜಗತ್ತಿನ ಅವಿರತ ಸಂಬಂಧವನ್ನು ತೋರಿಸುವ ಮೂಲಕ ದಯಾಭಾವದೊಂದಿಗೆ ಸಹನಶಕ್ತಿಯನ್ನು ಹೆಚ್ಚಿಸುತ್ತ ಮಾನವರನ್ನು ಅಹಂಕಾರ ಭಾವದಿಂದ ಮುಕ್ತಗೊಳಿಸಿ ಅವರೆಲ್ಲ ತಮ್ಮಿಳಗಿನ ದೇವರಿಗೆ ಶರಣಾಗುವಂಥ ಸಿದ್ಧಾಂತವನ್ನು ರೂಪಿಸಿದರು. ಇಡೀ ಮಾನವ ಕುಲ ಒಂದಾಗಿ ಸಕಲಜೀವಾತ್ಮರಿಗೆ ಲೇಸ ಬಯಸುವ ಹಾಗೆ ಬದುಕುವ ಕಲೆಯನ್ನು ಕಲಿಸಿದರು.

ಬಸವಣ್ಣನವರು ವೈದಿಕ ವ್ಯವಸ್ಥೆಯ ಎಲ್ಲವನ್ನೂ ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ಹೊಸ ಮಾನವೀಯ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಬಹುದೇವೋಪಾಸನೆಗೆ ಪರ್ಯಾಯವಾಗಿ ಏಕದೇವೋಪಾಸನೆ, ಸ್ಥಾವರಲಿಂಗಕ್ಕೆ ಪರ್ಯಾಯವಾಗಿ ಇಷ್ಟಲಿಂಗ, ಮಂದಿರಕ್ಕೆ ಪರ್ಯಾಯವಾಗಿ ಅನುಭವ ಮಂಟಪ, ಮಠಕ್ಕೆ ಪರ್ಯಾಯವಾಗಿ ಮಹಾಮನೆ, ಸ್ವಾಮಿಗೆ ಪರ್ಯಾಯವಾಗಿ ತತ್ವಜಂಗಮ, ಕರ್ಮಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕಸಿದ್ಧಾಂತ. ಜಾತಿಭೇದ ಸಮಾಜಕ್ಕೆ ಪರ್ಯಾಯವಾಗಿ ಜಾತಿಸಂಕರ ಸಮಾಜ ಮುಂತಾದವು ಬಸವಣ್ಣನವರ ಪರ್ಯಾಯ ವ್ಯವಸ್ಥೆಯ ಅಂಶಗಳಾಗಿವೆ.

ಬಸವಣ್ಣನವರು ಆಂತರಿಕ ಶಕ್ತಿ ಮತ್ತು ಶುಚಿತ್ವಕ್ಕಾಗಿ ಇಷ್ಟಲಿಂಗದ ಅರಿವು ಕೊಟ್ಟರೆ ಲೋಕದಲ್ಲಿ ಸರ್ವರೀತಿಯ ಸಮಾನತೆ ಸಾಧಿಸುವುದಕ್ಕಾಗಿ ಸಮಾಜವೆಂಬ ಜಂಗಮಲಿಂಗದ ಪ್ರಜ್ಞೆ ಕೊಟ್ಟರು. ಲಿಂಗವಂತರು ಕಾಯಕದ ಜವಾಬ್ದಾರಿ, ಪ್ರಸಾದ ಪ್ರಜ್ಞೆ ಮತ್ತು ದಾಸೋಹ ಭಾವದೊಂದಿಗೆ ಬದುಕುವುದೇ ಜಂಗಮಲಿಂಗಪೂಜೆ. ಹೀಗೆ ಬದುಕುವುದರಿಂದ ಯಾರೂ ಉಪವಾಸದಿಂದ ನರಳುವುದಿಲ್ಲ. ಜಾತಿಯಿಂದಾಗಿ ಕಡೆಗಣನೆಗೆ ಒಳಗಾಗುವುದಿಲ್ಲ. ಬಡವ-ಬಲ್ಲಿದ ಎಂಬ ಭೇದ ಇರುವುದಿಲ್ಲ.

ಇಷ್ಟಲಿಂಗದಿಂದಾಗಿ ಕಾಯಕಜೀವಿಗಳಿಗೆ ಮಂದಿರಗಳಲ್ಲಿ ಆಗುವ ಅವಮಾನ ತಪ್ಪಿತು. ಮಂದಿರಗಳಲ್ಲಿ ಬಿಟ್ಟಿಕೂಲಿ ಮಾಡುವುದು ತಪ್ಪಿತು. ರೈತಾಪಿ ಜನರು ಆಹಾರ ಧಾನ್ಯಗಳನ್ನು ಬಿಟ್ಟಿಯಾಗಿ ಕೊಡುವುದು ತಪ್ಪಿತು. ಗಾಣಿಗರು ಎಣ್ಣೆ ಕೊಡುವುದನ್ನು ನಿಲ್ಲಿಸಿದರು. ದೇವರಿಗೆ ಹರಕೆ ಹೊರುವುದರ ಮೂಲಕ ಜೀವನವಿಡೀ ಉಳಿಸಿದ್ದನ್ನು ಕಳೆದುಕೊಳ್ಳುವುದು ನಿಂತಿತು. ಇಷ್ಟಲಿಂಗ ಪೂಜೆಗೆ ಯಾವುದೇ ಖರ್ಚು ಇಲ್ಲದ ಕಾರಣ ದೇವರ ಹೆಸರಿನಲ್ಲಿ ಪೂಜಾರಿಗಳು, ಮಾಂತ್ರಿಕರು, ಭವಿಷ್ಯಗಾರರು ಮತ್ತು ಇತರ ಮೂಢ ನಂಬಿಕೆ ಹಬ್ಬಿಸುವವರು ಮೋಸ ಮಾಡುವುದು ನಿಂತಿತು. ಹೀಗಾಗಿ ಕಾಯಕಜೀವಿಗಳ ಆರ್ಥಿಕ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಯಾಯಿತು. ‘ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ’ ಎಂಬ ಹೊಸ ವಾತಾವರಣ ಸೃಷ್ಟಿಯಾಯಿತು. ಇಷ್ಟಲಿಂಗವು ಆತ್ಮಗೌರವದ ಪ್ರತೀಕವಾಯಿತು. ಹೀಗೆ ಇಷ್ಟಲಿಂಗವು ಮಾನಸಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕಾಯಕಜೀವಿಗಳನ್ನು ವಿಮೋಚನೆಗೊಳಿಸಿ ಹೊಸ ಜೀವನವಿಧಾನಕ್ಕೆ ನಾಂದಿಹಾಡಿತು.

ಬಸವಣ್ಣನವರು ಮಾನವನ ಅಭ್ಯುದಯಕ್ಕೆ ಅಡ್ಡಿಯನ್ನುಂಟು ಮಾಡುವ ದೇವಾಲಯಗಳನ್ನು, ಮೂರ್ತಿಪೂಜೆಯನ್ನು, ಜನ್ಮಜನ್ಮಾಂತರದ ಭ್ರಮೆಯನ್ನು ಹುಟ್ಟಿಸುವ ಕರ್ಮಸಿದ್ಧಾಂತವನ್ನು ಮತ್ತು ಎಲ್ಲ ತೆರನಾದ ಮೂಢನಂಬಿಕೆಗಳನ್ನು ನಿರಾಕರಿಸುವ ಮೂಲಕ ವಿಮೋಚನೆಯ ಮಾರ್ಗ ತೋರಿಸಿದರು. ಐಹಿಕ ಬದುಕಿನಲ್ಲಿ ವಿವಿಧ ರೀತಿಯ ಕಷ್ಟಗಳನ್ನು ಅನುಭವಿಸುವವರಿಗೆ ಮಾತ್ರ ಈ ತತ್ವ್ವದ ಸಂಪೂರ್ಣ ಅರಿವಾಗುವುದು.

share
ರಂಜಾನ್ ದರ್ಗಾ
ರಂಜಾನ್ ದರ್ಗಾ
Next Story
X