Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪರಿಸರವಾದಿ ಬಸವಣ್ಣ

ಪರಿಸರವಾದಿ ಬಸವಣ್ಣ

ವಾರ್ತಾಭಾರತಿವಾರ್ತಾಭಾರತಿ18 Oct 2019 12:01 AM IST
share
ಪರಿಸರವಾದಿ ಬಸವಣ್ಣ

ಜೀವಜಾಲದಲ್ಲಿದೆ ಚರಾಚರವೆಲ್ಲ ಎಂದು ಬಸವಣ್ಣನವರು ತಿಳಿಸಿದ್ದಾರೆ. ‘‘ಮರ ಗಿಡ ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು

ಪ್ರಾಣವ ಕೊಂದುಂಡು, ಶರೀರ ಹೊರೆವ ದೋಷಕ್ಕೆ

ಇನ್ನಾವುದು ವಿಧಿಯಯ್ಯಾ?

ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ

ಜೀವಜಾಲದಲ್ಲಿದೆ ಚರಾಚರವೆಲ್ಲ.

ಅದು ಕಾರಣ,

ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು

ನಿರ್ದೋಷಿಗಳಾಗಿ ಬದುಕಿದರು.’’

ಎಂದು ಬಸವಣ್ಣನವರು ಹೇಳುವ ಮೂಲಕ ಸಸ್ಯಗಳಿಗೂ ಜೀವವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಸ್ಯಾಹಾರ ಸೇವನೆ ಕೂಡ ಹಿಂಸೆಯನ್ನು ಅಂಟಿಸಿಕೊಂಡೇ ಇದೆ. ಅಂತೆಯೇ ಶರಣರು ತಮ್ಮ ಆಹಾರವನ್ನು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು ನಿರ್ದೋಷಿಗಳಾಗಿ ಬದುಕಿದರು.

ಅರ್ಥವಿಜ್ಞಾನಿ, ಸಮಾಜವಿಜ್ಞಾನಿ, ಮನೋವಿಜ್ಞಾನಿ, ಭಾಷಾವಿಜ್ಞಾನಿ, ತತ್ತ್ವಜ್ಞಾನಿ, ಮಹಾನ್ ಆಡಳಿತಗಾರ ಮತ್ತು ಸಮಗ್ರ ಕ್ರಾಂತಿಯ ಜನಕರಾದ ಬಸವಣ್ಣನವರು ಆತ್ಮವಿಶ್ವಾಸ ಮತ್ತು ಆತ್ಮಗೌರವದ ಪ್ರತಿಪಾದಕರಾಗಿದ್ದರು. ದಂಡರೂಪಿ ಸುಲಿಗೆಯ ಪ್ರಾಯಶ್ಚಿತ್ತವನ್ನು ಅಲ್ಲಗಳೆದು ಮನ ಪರಿವರ್ತನೆಯ ಪಶ್ಚಾತ್ತಾಪದ ದಾರಿ ತೋರಿಸಿದರು.

ಅರಿವಿನ ಮೂಲಕ ಆತ್ಮವು ಸಕಲ ಜೀವಾತ್ಮರ ಜೊತೆ ಸಂಪರ್ಕ ಹೊಂದುವಂತೆ ಮಾಡುವುದರ ಮೂಲಕ ಒಳ ಮತ್ತು ಹೊರ ಜಗತ್ತಿನ ಮಧ್ಯೆ ಸಂಬಂಧ ಕಲ್ಪಿಸಿದರು. ಒಳಗಿನ ಸ್ವಾತಂತ್ರ್ಯದ ಅರಿವು ಮತ್ತು ಹೊರಗಿನ ಕರ್ತವ್ಯಪ್ರಜ್ಞೆಯನ್ನು ಮೂಡಿಸಿದರು. ಕೆಳವರ್ಗೀಕರಣಕ್ಕೆ ಮತ್ತು ಕೆಳಜಾತೀಕರಣಕ್ಕೆ ಒಳಗಾಗುವುದರ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗಸೂಚಿಯಾದರು.

ರಾಜಪ್ರಭುತ್ವ ಅಳಿದು ಪ್ರಜಾಪ್ರಭುತ್ವ ಉದಯವಾಗುವುದರ ಕನಸು ಕಂಡರು. ಯುಗದ ಉತ್ಸಾಹವಾಗಿ ಜನಸಮುದಾಯದ ಏಳ್ಗೆಗಾಗಿ ಅಹರ್ನಿಶಿ ದುಡಿದರು.

ನ್ಯಾಯನಿಷ್ಠುರಿ: ‘‘ನ್ಯಾಯನಿಷ್ಠುರಿ; ದಾಕ್ಷಿಣ್ಯಪರ ನಾನಲ್ಲ. ಲೋಕವಿರೋಧಿ; ಶರಣನಾರಿಗಂಜುವನಲ್ಲ. ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ.’’ ಎಂದು ಬಸವಣ್ಣನವರು ಹೇಳಿದ್ದಾರೆ.

  ಬಾಗಿದ ಶಿರ ಮುಗಿದ ಕೈಯೊಂದಿಗೆ ಸದುವಿನಯದಿಂದ ಬದುಕಿದ ಬಸವಣ್ಣನವರು ಸಾಂಪ್ರದಾಯಕವಾಗಿ ಬಂದ ಸುಲಿಗೆ ವ್ಯವಸ್ಥೆಯನ್ನು ವಿರೋಧಿಸುವಲ್ಲಿ ಯಾವುದೇ ದಾಕ್ಷಿಣ್ಯವನ್ನು ತೋರಿಸುತ್ತಿರಲಿಲ್ಲ. ನ್ಯಾಯನಿಷ್ಠುರಿಯಾದ ಶರಣ ಯಾರಿಗೂ ಅಂಜುವುದಿಲ್ಲ ಎಂದು ಶರಣರ ವ್ಯಕ್ತಿತ್ವದ ವ್ಯಾಖ್ಯಾನ ಮಾಡಿದ್ದಾರೆ.

‘‘ಧರಣಿಯ ಮೇಲೊಂದು ಹಿರಿದಪ್ಪಅಂಗಡಿಯನಿಕ್ಕಿ

ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ

ಒಮ್ಮನವಾದಡೆ ಒಡನೆ ನುಡಿವನು

ಇಮ್ಮನವಾದಡೆ ನುಡಿಯನು.

ಕಾಣಿಯ ಸೋಲ ಅರ್ಧಗಾಣಿಯ ಗೆಲ್ಲ

ಜಾಣ ನೋಡವ್ವಾ ನಮ್ಮ ಕೂಡಲಸಂಗಮದೇವ.’’

ಎಂದು ಬಸವಣ್ಣನವರು ಹೇಳಿದ್ದು ಜೀವಜಾಲಸಮತೋಲನಕ್ಕೆ ಸಂಬಂಧಿಸಿದೆ. ಜಗನ್ನಿಯಾಮಕನಾದ ದೇವರು ಲೋಕವ್ಯವಹಾರ ಮಾಡುತ್ತಿದ್ದಾನೆ. ಒಮ್ಮನಸ್ಸಿನಿಂದ ಬದುಕಲು ತಿಳಿಸುತ್ತಾನೆ. ಎರಡು ಮನಸ್ಸುಳ್ಳವರ ಜೊತೆ ಆತನ ವ್ಯವಹಾರವಿಲ್ಲ. ಏಕೆಂದರೆ ಇಮ್ಮನಸ್ಸಿನಿಂದ ಜೀವಜಾಲಸಮತೋಲನಕ್ಕೆ ಹಾನಿಯುಂಟಾಗುವುದು. ಅಂತೆಯೇ ಅವನ ಸಮತೋಲನದ ವ್ಯವಹಾರದಲ್ಲಿ ಸೋಲು ಗೆಲುವುಗಳಿಲ್ಲ.

ಈ ಧೈರ್ಯ ಸುಮ್ಮನೆ ಬಂದುದಲ್ಲ. ಪರಿಸರ ಸೇರಿದಂತೆ ಎಲ್ಲರನ್ನೂ ಒಳಗೊಳ್ಳುವ ‘ಕೂಡಲಸಂಗಮದೇವ’ ಎಂಬ ಸಿದ್ಧಾಂತ ಅವರ ಮುಂದೆ ಇತ್ತು. ಆ ಸಿದ್ಧಾಂತದ ಮಹಾತೇಜದಲ್ಲಿ ಅವರಿದ್ದರು. ಅಂದರೆ ಸಮತ್ವದ ಸೈದ್ಧಾಂತಿಕ ನಿಲುವು ಅವರನ್ನು ಎಲ್ಲ ಅನಿಷ್ಟಗಳನ್ನು ಎದುರಿಸುವ ವೀರಪುರುಷನನ್ನಾಗಿಸಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X