Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಝಲಕ್
  4. ಕೊಲೆಗಾರನ ಗುರುತು!

ಕೊಲೆಗಾರನ ಗುರುತು!

ಮಗುಮಗು24 April 2016 12:19 AM IST
share

ಸಂತ ಮತ್ತು ಆತನ ಶಿಷ್ಯ ಆ ದಾರಿಯ ಪಕ್ಕದಲ್ಲಿರುವ ಮರದಡಿಯಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.
ಅಷ್ಟರಲ್ಲಿ ಆ ರಾಜ್ಯದ ರಾಜನ ಭಟರು ಅಲ್ಲಿಗೆ ಧಾವಿಸಿ ಬಂದರು. ಏದುಸಿರು ಬಿಟ್ಟು ಕೇಳಿದರು ‘‘ಈ ದಾರಿಯಲ್ಲಿ ಒಬ್ಬ ಭಯಾನಕ ಕೊಲೆಗಾರ ಹೋಗುವುದನ್ನು ನೋಡಿದಿರಾ...ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ.....’’
ಸಂತ ಕೇಳಿದ ‘‘ಈ ದಾರಿಯಲ್ಲಿ ತುಂಬಾ ಜನರು ಹಾದು ಹೋಗಿದ್ದಾರೆ. ಅವರಲ್ಲಿ ಯಾರನ್ನು ನಾನು ಭಯಾನಕ ಕೊಲೆಗಾರ ಎಂದು ತಿಳಿಯಲಿ...?’’
ಭಟರು ಹೇಳಿದರು ‘‘ಅವನಿಗೆ ಮೀಸೆ ಇರಲಿಲ್ಲ. ಆದರೆ ತುಂಬಾ ಕಪ್ಪಗಿದ್ದ....ಮುಖದಲ್ಲಿ ಕ್ರೌರ್ಯವಿತ್ತು...’’
ಸಂತ ಹೇಳಿದ ‘‘ಇನ್ನಷ್ಟು ವಿವರಗಳು ಬೇಕು...’’
‘‘ಅವನು ಬಿಳಿ ಬಟ್ಟೆ ತೊಟ್ಟುಕೊಂಡಿದ್ದ...’’
ಅಷ್ಟರಲ್ಲಿ ಶಿಷ್ಯ ಕೇಳಿದ ‘‘ಕೊಲೆಗಾರರೆಂದರೆ ಕಪ್ಪು ಬಟ್ಟೆ ತೊಟ್ಟುಕೊಳ್ಳುವುದಲ್ಲವೇ?’’
ಸಂತ ಸಮಾಧಾನಿಸಿದ ‘‘ಶಿಷ್ಯ, ಕೊಲೆಗಾರರಿಗೆ ಸಮವಸ್ತ್ರಗಳಿರುವುದಿಲ್ಲ...’’
‘‘ಅವನ ಕಣ್ಣುಗಳು ಹೇಗಿದ್ದವು?’’ ಸಂತ ಕೇಳಿದ.
ಭಟರು ವಿವರಿಸಿದರು ‘‘ಅವನ ಕಣ್ಣುಗಳು ಕೆಂಪಗಿದ್ದವು..’’
ಸಂತನಿಗೆ ಸಮಾಧಾನವಾಗಲಿಲ್ಲ. ‘‘ಇನ್ನೇನಾದರೂ ವಿವರಗಳಿವೆಯೇ?’’
‘‘ಅವನ ಕೋರೆಹಲ್ಲುಗಳು ನೀಳವಾಗಿದ್ದವು....’’ ಭಟರು ವಿವರಿಸಿದರು.
‘‘ಮೂಗು...’’ ಸಂತ ಕೇಳಿದ.
‘‘ಅದು ವಕ್ರವಾಗಿತ್ತು...’’ ಭಟರು ವಿವರಿಸಿದರು.
ಸಂತ ಮತ್ತು ಶಿಷ್ಯ ಇಬ್ಬರೂ ಒಟ್ಟಾಗಿ ಹೇಳಿದರು ‘‘ನೀವು ವಿವರಿಸಿದ ಯಾರೂ ಈ ದಾರಿಯಲ್ಲಿ ಬರಲಿಲ್ಲ’’
ಭಟರು ನಿರಾಶರಾಗಿ ವಾಪಸಾದರು.
ಶಿಷ್ಯ ಸಂತನಲ್ಲಿ ಕೇಳಿದ ‘‘ಗುರುಗಳೇ...ಕೊಲೆಗಾರ ಈ ದಾರಿಯಲ್ಲಿ ಬಂದಿರಲಿಕ್ಕಿಲ್ಲವೇ?’’
‘‘ಬಂದಿರಬಹುದು...’’ ಸಂತ ಉತ್ತರಿಸಿದ.
‘‘ಹಾಗಾದರೆ ನಾವು ಅವನನ್ನು ನೋಡಿರಲೇ ಬೇಕಲ್ಲ....ಭಟರು ಹೇಳಿದ ಗುಣಲಕ್ಷಣಗಳಿರುವ ಯಾರನ್ನೂ ನಾವು ನೋಡಿಲ್ಲವಲ್ಲ’’ ಶಿಷ್ಯ ಗೊಂದಲದಲ್ಲಿ ಕೇಳಿದ.
‘‘ಶಿಷ್ಯಾ...ನಾವು ನೋಡಿದ ವ್ಯಕ್ತಿ ಕೊಲೆಗಾರ ಎಂದು ನಮಗೆ ಗೊತ್ತಿರಲಿಲ್ಲ. ಆದುದರಿಂದಲೇ ಅವನ ಮುಖದಲ್ಲಿ ಕ್ರೌರ್ಯವನ್ನು ನಮಗೆ ಕಾಣಲಾಗಲಿಲ್ಲ. ಅವನ ಕಣ್ಣಲ್ಲಿರುವ ಕೆಂಪನ್ನು ನಮಗೆ ಗುರುತಿಸಲಾಗಲಿಲ್ಲ. ಅವನ ಕೋರೆಹಲ್ಲುಗಳನ್ನು ಗಮನಿಸಲಾಗಲಿಲ್ಲ. ಭಟರಿಗೆ ಅವನು ಕೊಲೆಗಾರ ಎನ್ನುವುದು ಗೊತ್ತಿದೆ. ಅವರು, ಒಬ್ಬ ಕೊಲೆಗಾರನಿಗಿರುವ ಲಕ್ಷಣಗಳನ್ನು ವಿವರಿಸಿದ್ದಾರೆ. ನಾವು ನೋಡಿದ ವ್ಯಕ್ತಿ ಕೊಲೆಗಾರ ಎನ್ನುವುದು ನಮಗೆ ತಿಳಿಯುವವರೆಗೆ ಆ ಲಕ್ಷಣಗಳನ್ನು ನಮಗೆ ಗುರುತಿಸಲು ಸಾಧ್ಯವಿಲ್ಲ...’’
ಸಂತ ಮುಂದುವರಿಸಿ ಹೇಳಿದ ‘‘ನನ್ನನ್ನು ನೀನು ಇದೇ ಮೊದಲು ನೋಡುವುದಾಗಿದ್ದರೆ ಮತ್ತು ನನ್ನನ್ನು ಯಾರಾದರೂ ಭಯಾನಕ ಕೊಲೆಗಾರ ಎಂದು ಹೇಳಿ ಬಿಟ್ಟಿದ್ದರೆ ಭಟರು ಹೇಳಿದ ಎಲ್ಲ ಲಕ್ಷಣಗಳೂ ನಿನಗೆ ನನ್ನ ಮುಖದಲ್ಲಿ ಕಂಡು ಬಿಡುತ್ತಿದ್ದವು.’’
 

share
ಮಗು
ಮಗು
Next Story
X