Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. 1923ರ ನೇತ್ರಾವತಿ ‘ಮಾರಿಬೊಲ್ಲ’ಕ್ಕೆ 100...

1923ರ ನೇತ್ರಾವತಿ ‘ಮಾರಿಬೊಲ್ಲ’ಕ್ಕೆ 100 ವರ್ಷ

ನಿಖಿಲ್ ಕೋಲ್ಪೆನಿಖಿಲ್ ಕೋಲ್ಪೆ7 Aug 2023 5:41 PM IST
share
1923ರ ನೇತ್ರಾವತಿ ‘ಮಾರಿಬೊಲ್ಲ’ಕ್ಕೆ 100 ವರ್ಷ

ನೇತ್ರಾವತಿ ನದಿಯಲ್ಲಿ ದಾಖಲಾದ ಅತ್ಯಂತ ದೊಡ್ಡ ನೆರೆಗೆ ಆಗಸ್ಟ್ 7ರಂದು (ಇಂದು) ವರ್ಷ ತುಂಬುತ್ತದೆ. 1923ರಲ್ಲಿ ಈ ಮಹಾನೆರೆ ಬಂದಿತ್ತು. ಇದರಿಂದಾಗಿ ನದಿ ಹರಿವಿನ ಬಹುತೇಕ ಭಾಗ ನೀರಿನಲ್ಲಿ ಮುಳುಗಿ ಸಾವಿರಾರು ಮನೆ, ಗುಡಿಸಲುಗಳು ನಾಶವಾಗಿ ಅಪಾರ ನಷ್ಟ ಉಂಟಾಗಿತ್ತು. ಇದು ‘ಮಾರಿ ಬೊಲ್ಲ’ ಎಂದು ಇಂದಿಗೂ ಒಂದು ತಲೆಮಾರಿನ ತಲೆಯಲ್ಲಿ ಉಳಿದಿದೆ.

ಆಗ ಜನಸಂಖ್ಯೆ ಹಾಗೂ ಮನೆಗಳು ತೀರಾ ವಿರಳವಾಗಿದ್ದುದರಿಂದ ನಂತರ ಬಂದ 1974ರ ಮಹಾನೆರೆಯಲ್ಲಿ ಉಂಟಾದ ಮನೆಗಳ ನಾಶಕ್ಕೆ ಹೋಲಿಸಿದಾಗ 1923ರ ವಿನಾಶ ಕಡಿಮೆ ಎಂದು ಹೇಳಬಹುದಾದರೂ, ಬ್ರಿಟಿಷ್ ಕಾಲದಲ್ಲಿ ಸರಕಾರಿ ನೆರವು ಇಲ್ಲದ ಕಾರಣದಿಂದ ಹಲವಾರು ಶ್ರೀಮಂತರೂ, ಜಮೀನ್ದಾರರೂ ಭಾರೀ ನಷ್ಟದಿಂದ ದುರ್ಗತಿ ಅನುಭವಿಸಿದರು. ಈ ನೆರೆಯಲ್ಲಿ ಉಪ್ಪಿನಂಗಡಿ, ಬಂಟ್ವಾಳ, ಪಾಣೆಮಂಗಳೂರು ಪೇಟೆ ಬಹುತೇಕ ನಾಶವಾಗಿ ವ್ಯಾಪಾರಿಗಳ ಆಹಾರ ಧಾನ್ಯ, ದಿನಸಿ, ಬಟ್ಟೆ ಇತ್ಯಾದಿ ವಸ್ತುಗಳು ಸಂಪೂರ್ಣ ನಾಶವಾಗಿದ್ದವು. ಆದರೂ 1974ರ ಹಾನಿ ದೊಡ್ಡದು. ನಾವೀಗ ಕಾಣುವ ಜನತಾ ಕಾಲನಿ, ನೆಹರೂ ನಗರಗಳು ಮನೆ ಕಳೆದುಕೊಂಡವರಿಗೆ ಸರಕಾರ ಆಗ ಕಟ್ಟಿಸಿಕೊಟ್ಟ ಮನೆಗಳು.

1923ರ ನೆರೆಯ ಕುರಿತು ಹೇಳಬಲ್ಲವರು ಯಾರೂ ಈಗ ಬದುಕಿ ಉಳಿದಿಲ್ಲ. ಈ ನೆರೆಯ ಹೆಚ್ಚಿನ ದಾಖಲೆಗಳು ಇಲ್ಲದಿರುವುದರಿಂದ ಈ ಕುರಿತು ಈಗಲೂ ಚಾಲ್ತಿಯಲ್ಲಿರುವ ದಂತಕತೆಗಳನ್ನೇ ಅವಲಂಬಿಸಬೇಕು. 1923ರ ನೆರೆ, 1974ರ ನೆರೆಗಿಂತ ಬಹಳ ದೊಡ್ಡದು ಎಂದು ಹೇಳಲಾಗುತ್ತದೆ. ನೇತ್ರಾವತಿ ನದಿಯ ಅಪಾಯದ ಮಟ್ಟ ಪಾಣೆಮಂಗಳೂರು ಹಳೆ ಸೇತುವೆಯ ಬಳಿ 8.5 ಮೀಟರ್ ಇದ್ದು, 1974ರ ಜುಲೈ 24ರಂದು ಬಂದ ನೆರೆಯ ಮಟ್ಟ 11.4 ಮೀಟರ್ ಇತ್ತೆಂದು ದಾಖಲೆಯಿದೆ. ನಂತರ 2018ರ ಆಗಸ್ಟ್ 10ರ ನೆರೆಯ ಮಟ್ಟ ದಾಖಲೆ ಪ್ರಕಾರ 11.9 ಮೀಟರ್ ಇದ್ದರೂ, ಪ್ರತ್ಯಕ್ಷದರ್ಶಿಗಳ ಪ್ರಕಾರ 1974ರ ನೆರೆ ಒಳಪ್ರದೇಶಗಳಲ್ಲಿ ಕನಿಷ್ಠ ಒಂದು ಮೀಟರ್ ಹೆಚ್ಚಿತ್ತು. 1974ರ ನೆರೆಯಲ್ಲಿ ಹಳೆಸೇತುವೆಯ ಒಂದು ಕಡೆಯಿಂದ ನೀರು ಹರಿದುಹೋಗಿತ್ತು. 2018ರಲ್ಲಿ ಹಾಗಾಗಿರಲಿಲ್ಲ. 1923ರ ನೆರೆಯಲ್ಲಿ ಈ ಸೇತುವೆ ಸಂಪೂರ್ಣ ಮುಳುಗಿತ್ತು. 1923ರ ನೆರೆ ಇದಕ್ಕಿಂತಲೂ ಬಹಳ ದೊಡ್ಡದಾಗಿತ್ತು ಎಂಬುದಕ್ಕೆ ಆಧಾರಗಳಿವೆ. ಬಂಟ್ವಾಳದಲ್ಲಿ ಮತ್ತು ಪಾಣೆಮಂಗಳೂರು ಪೇಟೆಯ ಅಂಗಡಿಯೊಂದರ ಮುಂದೆ 1923ರ ನೆರೆ ಇಲ್ಲಿಯ ತನಕ ಬಂದಿತ್ತು ಎಂದು ಸಿಮೆಂಟು ಫಲಕದಲ್ಲಿ ಕೊರೆದು ಗೆರೆ ಎಳೆಯಲಾಗಿದೆ. ಇದಕ್ಕೆ ಹೋಲಿಸಿದಾಗ 1974ರ ನೆರೆಯ ಮಟ್ಟ ಕನಿಷ್ಠ ಒಂದು ಮೀಟರ್ ಕಡಿಮೆಯಿದೆ. 2018ರ ಮಟ್ಟ ಹತ್ತಿರಕ್ಕೂ ಬರುವುದಿಲ್ಲ. ಅಧಿಕೃತ ಅಂಕಿ-ಅಂಶದಲ್ಲಿ ದೋಷವಿರುವುದು ಖಂಡಿತ. ಈಗ ನೇತ್ರಾವತಿ ಮತ್ತು ಕುಮಾರಧಾರ ಹರಿವಿನಲ್ಲಿ ಸರಪಾಡಿ, ತುಂಬೆ ಸಹಿತ ಹಲವಾರು ಚೆಕ್ ಡ್ಯಾಂಗಳೂ ಸಾಕಷ್ಟು ದೊಡ್ಡ ಅಣೆಕಟ್ಟುಗಳೂ ಇವೆ. ಆದುದರಿಂದ ನಿಯಂತ್ರಿತ ನೀರಿನ ಹರಿವು ಸಾಧ್ಯ. ಈಗ ಈ ಅಣೆಕಟ್ಟುಗಳಲ್ಲಿ ನೀರು ಬಿಟ್ಟಾಗ ಸೈರನ್ ವ್ಯವಸ್ಥೆ ಇದೆ. ಅಳಿವೆ ಬಾಗಿಲಲ್ಲಿ ಮರಳು ತೆಗೆಯಲು ಡ್ರೆಜ್ಜಿಂಗ್ ವ್ಯವಸ್ಥೆ ಇದೆ. ಆಗ ಇರಲಿಲ್ಲ. ಏನಿದ್ದರೂ, ಜನಪದರಲ್ಲಿ ಬಹುಕಾಲ ಮಲ್ಲ ಬೊಲ್ಲೊಡ್ದು ಅಥವಾ ಮಾರಿ ಬೊಲ್ಲೊಡ್ದು ದುಂಬು, ಬೊಕ್ಕ (ಮಹಾ ನೆರೆಗೆ ಮೊದಲು, ನಂತರ) ಎಂದು ವರ್ಷಗಳ ಲೆಕ್ಕ ಹಾಕಿಸಿದ ಆ ಮಹಾ ವಿನಾಶಕಾರಿ ನೆರೆ ಮತ್ತೆ ಬರದಿರಲಿ.

share
ನಿಖಿಲ್ ಕೋಲ್ಪೆ
ನಿಖಿಲ್ ಕೋಲ್ಪೆ
Next Story
X