Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
  4. ಒಲಿದ ಸ್ವರಗಳು

ಒಲಿದ ಸ್ವರಗಳು

ಹೆನ್ರಿ ಪೆರ್ನಾಲ್ಹೆನ್ರಿ ಪೆರ್ನಾಲ್9 Jan 2025 11:52 AM IST
share
ಒಲಿದ ಸ್ವರಗಳು
ಹೆನ್ರಿ ಪೆರ್ನಾಲ್, ಕಿಟಾಳ್ ಅಂತರ್ಜಾಲ ಕೊಂಕಣಿ ಸಾಹಿತ್ಯ ಪತ್ರಿಕೆಯ ಸಂಪಾದಕ/ ಪ್ರಕಾಶಕ ಮತ್ತು ಆರ್ಸೊ ಕೊಂಕಣಿ ಮಾಸಪತ್ರಿಕೆ ಮತ್ತು ಕಿಟಾಳ್ ಪ್ರಕಾಶನದ ಪ್ರಕಾಶಕ. ಕೊಂಕಣಿಯಲ್ಲಿ ಈ ವರೆಗೆ ಮೂರು ಕವನ ಸಂಕಲನ, ಎರಡು ಕಥಾ ಸಂಕಲನ ಮತ್ತು ಒಂದು ವಿಮರ್ಶಾ ಸಂಗ್ರಹ ಪ್ರಕಟಿಸಿದ್ದು, ಸಾಹಿತ್ಯಕ್ಕಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯಿಂದ ಜೀವಮಾನ ಸಾಧನೆ ಗೌರವ ಪ್ರಶಸ್ತಿ ಮತ್ತು ಕೊಂಕಣಿ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಗೌರವವನ್ನು ಪಡೆದಿರುತ್ತಾರೆ. ಪಸ್ತುತ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ ಕೊಂಕಣಿ ಸಲಹಾ ಸಮಿತಿಯ ಸಮಿತಿ ಸದಸ್ಯರಾಗಿ ಮತ್ತು ಅಖಿಲ ಭಾರತ ಕೊಂಕಣಿ ಸಾಹಿತ್ಯ ಪರಿಷತ್‌ನ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1984 ರಿಂದ 1991 ರ ತನಕ ಕನ್ನಡ ಬರವಣಿಗೆಯಲ್ಲಿ ಸಕ್ರಿಯರಾಗಿದ್ದರು.

ಗುಂಡು ಮತ್ತು ಗುಂಡಿಗೆ

ಬಂದೂಕದ ಗುಂಡಿಗೆ

ಬಲಿಯಾಗುವುದಕ್ಕೂ ಬೇಕು

ಗುಂಡಿಗೆ

ಇರಬೇಕು ಎದೆ, ಪ್ರಶ್ನಿಸಲು

ಪ್ರಭುತ್ವವನ್ನು, ಎಲ್ಲಿದೆ

ಸೂರು, ಅನ್ನದ ಕೂಳು

ಕುಡಿಯುವ ನೀರು

ಮಕ್ಕಳಿಗೆ ಶಾಲೆ

ಬಡವರಿಗೆ ಚಿಕಿತ್ಸೆ

ನಡೆದಾಡಲು ರಸ್ತೆ

ಬಸ್ಸು, ಕರೆಂಟು . . .

ಬಂದೂಕದ ಗುಂಡಿಗೆ

ಬಲಿಯಾಗಲು ಬೇಕಿಲ್ಲ

ಕುದಿಯದ, ಸಿಡಿಯದ

ದನಿಯೆತ್ತದ, ದಮನಿತರ

ಪರ ಸೆಟೆದು ನಿಲ್ಲದ

ಕೈ ಕಾಲು , ಮೂಳೆ ಮಾಂಸದ

ತಡಿಕೆ

ಇದ್ದರೆ ಸಾಕು, ಪ್ರಶ್ನಿಸುವ

ಗುಂಡಿಗೆ!

****

ಕ್ರಿಕೆಟ್ ಮತ್ತು

ಯುದ್ಧ

ಕ್ರಿಕೆಟ್ ಮತ್ತು ಯುದ್ಧಕ್ಕೆ

ದೊಡ್ಡ ವ್ಯತ್ಯಾಸವೇನಿಲ್ಲ

ಎರಡು ದೇಶ, ಎರಡು ತಂಡ

ತಂಡಕ್ಕೆ ಮುಖಂಡ, ಒಂದಿಷ್ಟು ಆಟಗಾರರು

ಇದ್ದರೆ ಸಾಕು ಒಂದು ಮೈದಾನ

ಘೋಷಿಸಬಹುದು

ಪಂದ್ಯ ಅಥವಾ ಯುದ್ಧ

ಯಾವ ತಂಡ ಟಾಸ್ ಗೆಲ್ಲುವುದೊ

ಅವರಿಗೆ ಮೊದಲ ಬ್ಯಾಟಿಂಗ್

ಉರುಳುತಿರಲು ಒಂದೊಂದು ವಿಕೆಟ್

ಸಿಡಿಯುತ್ತವೆ ಪಟಾಕಿ ಹಾದಿಬೀದಿ

ಕ್ರಿಕೆಟ್ ಮತ್ತು ಯುದ್ಧಕ್ಕೆ

ದೊಡ್ಡ ವ್ಯತ್ಯಾಸವೇನಿಲ್ಲ

ಬೌಂಡರಿ, ಸಿಕ್ಸರ್ ಬಾರಿಸುವಾಗ

ನರ್ತಿಸುತ್ತಾರೆ ಚಿಯರ್ ಲೀಡರ್

ಪರಿಣತರಿಂದ ಕಾಮೆಂಟರಿ

ಯಾರು ಗೆಲ್ಲಬಹುದು,

ಯಾರು ಸೋಲಬಹುದು

ಊರೆಲ್ಲಾ ಬೆಟ್ಟಿಂಗ್

ಕ್ರಿಕೆಟ್ ಮತ್ತು ಯುದ್ಧಕ್ಕೆ

ದೊಡ್ಡ ವ್ಯತ್ಯಾಸವೇನೂ ಇಲ್ಲ

ಕ್ರಿಕೆಟಲ್ಲಿ ವಿಕೆಟ್ ಗಳು ಮಾತ್ರ ಉರುಳುತ್ತವೆ

ಯುದ್ಧದಲ್ಲಿ ಜೀವಗಳೂ!

****

ಯುದ್ಧವಿಲ್ಲದ ದೇಶದಲ್ಲಿ

ಯುದ್ಧವಾಗಿಬಿಡಲಿ ಒಮ್ಮೆ

ಕೊನೆಗೊಳ್ಳಲಿ ಎಲ್ಲ ಆತಂಕಗಳು.

ಇನ್ನೆಷ್ಟು ದಿನ ಬದುಕುವುದು ಹೀಗೆ

ಅಂಗೈಯಲ್ಲಿ ಹಿಡಿದು ಜೀವ

ಯುದ್ಧವಿಲ್ಲದ ದೇಶದಲ್ಲೂ

ಯುದ್ಧಕೈದಿಯಂತೆ?

ಯುದ್ಧವಿಲ್ಲದ ದೇಶದಲ್ಲಿದ್ದೂ ನಾನು

ಸೇವಿಸುವಂತಿಲ್ಲ ನನ್ನಿಷ್ಟದ ಆಹಾರ

ಧರಿಸುವಂತಿಲ್ಲ ನನ್ನಿಷ್ಟದ ಉಡುಗೆ

ಹಂಚಿಕೊಳ್ಳುವಂತಿಲ್ಲ ನನ್ನ ವಿಚಾರ

ಮದುವೆಯಾಗುವಂತೆಯೂ ಇಲ್ಲ, ಹುಡುಗಿಯನ್ನು

ನನ್ನಿಷ್ಟದ

ತೊಲಗಾಚೆ ದೇಶದ್ರೋಹಿ ಎನ್ನುತ್ತಾರೆ

ಯುದ್ಧವಿಲ್ಲದ ದೇಶದಲ್ಲಿ

ಇನ್ನೆಷ್ಟು ದಿನ ಬದುಕುವುದು ಹೀಗೆ

ಅಂಗೈಯಲ್ಲಿ ಹಿಡಿದು ಜೀವ

ಯುದ್ಧ ಕೈದಿಯಂತೆ!

ಯುದ್ಧವಾಗಿಯೇ ಬಿಡಲಿ ಒಮ್ಮೆ

ಕೊನೆಗೊಳ್ಳಲಿ ಎಲ್ಲ ಆತಂಕಗಳು

ದೇಶಭಕ್ತಿಯ ನೆಪದಲ್ಲಾದರೂ

ಗಡಿಯಾಚೆಗಿನ ಗುಂಡಿಗೆ

ಬಿಡುಗಡೆಗೊಳ್ಳಲಿ ಅಂಗೈಯಲ್ಲಿನ ಜೀವ

ಹೊರಡಲಿ ಟ್ರೇನು ಮತ್ತೊಮ್ಮೆ

ದೇಶ ಬಿಟ್ಟು, ದೇಹ ಬಿಟ್ಟು.

share
ಹೆನ್ರಿ ಪೆರ್ನಾಲ್
ಹೆನ್ರಿ ಪೆರ್ನಾಲ್
Next Story
X