Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  4. ಒಲಿದ ಸ್ವರಗಳು

ಒಲಿದ ಸ್ವರಗಳು

ಸುಬ್ಬು ಹೊಲೆಯಾರ್ಸುಬ್ಬು ಹೊಲೆಯಾರ್6 Jan 2024 12:23 PM IST
share

ಹಿರಿಯ ಲೇಖಕ, ಕವಿ ಸುಬ್ಬು ಹೊಲೆಯಾರ್ ದೂರದರ್ಶನ ಚಂದನ ವಾಹಿನಿಯಲ್ಲಿ ೨೬ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ‘ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’’ ಕೃತಿಗೆ ಡಾ. ಜಿ.ಎಸ್.ಎಸ್. ಕಾವ್ಯಪ್ರಶಸ್ತಿ, ದಿನಕರದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯಪ್ರಶಸ್ತಿ ಸೇರಿದಂತೆ ಹಲವಾರು ಪ್ರಸಸ್ತಿ, ಪುರಸ್ಕಾರಗಳು ಸಂದಿವೆ.

ಇವರ ಎರಡನೇ ಕಾವ್ಯಸಂಗ್ರಹ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ’ ಕೃತಿಯು ೨೦೧೦ನೇ ಸಾಲಿನ ಮುದ್ದಣ ಕಾವ್ಯಪ್ರಶಸ್ತಿಯನ್ನು ಪಡೆದುಕೊಂಡಿದೆ. ೨೦೧೩ನೇ ಸಾಲಿನಲ್ಲಿ ಬುದ್ಧ ಪ್ರಶಸ್ತಿ, ದಲಿತಸಿರಿ ಪ್ರಶಸ್ತಿ, ಕರ್ನಾಟಕ ರಾಜ್ಯಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ. ಇವರ ಜೀವನ ಕಥನ ‘ದನ ಕಾಯದವನು’ ‘ಕರಿಯ ಕಣ್ಬಿಟ್ಟ’ ಎಂಬ ಕಲಾತ್ಮಕ ಚಲನಚಿತ್ರವಾಗಿ ಮೂಡಿಬಂದಿದೆ.

ಮಣ್ಣೆ ನೋಯುತ್ತಿದೆ

ಉರಿದು ನಲುಗಿದ ಸಂಜೆ ಆರುತಿದೆ

ಹೂವು

ಹಣ್ಣು

ನೆಲಕ್ಕೆ ಬಿದ್ದ ಗಾಯವೋ

ನೋಡುತ್ತಾ ನಿಂತ

ಗಾಯವೇ ಮಾಯಲಾರದ ಹಳೆ, ಹೊಸ

ಪುರುಷ ಅಹಂ ಮಾಡಿದ ಗಾಯ

ನೋಡುತ್ತಾ ನಿಂತೆ, ನೋಡುತ್ತಾ ನೋಡುತ್ತಾ

ಗಾಯವೇ ನನ್ನ, ನೋಡುತ್ತಿದೆ ಅನ್ನಿಸಿತು

ಸಣ್ಣದಾಗಿ ಭಯದಿಂದ ಬೆವೆತೆ, ಓಡುವ ಮನಸ್ಸು

ಹಾಗೆ ನೋಡಬೇಡಿ ಗಾಯವೇ ಕೈಮುಗಿದು ಪಾರ್ಥಿಸಿದೆ

ನಗಲಾರಂಭಿಸಿತು ಗಾಯ

ನಿಜವೇ ಇದು ಗಾಯ ನಗುತ್ತಿದೆಯೇ ?

ನಗುತ್ತಾ ನಗುತ್ತಾ ನಗು ಸಣ್ಣದಾಗುತ್ತಾ ಹೋಯಿತು

ನೋವು ನನ್ನೊಳಗೆ ಮುಳ್ಳು ಅಳ್ಳಾಡಿಸಿದ ಹಾಗೆ

ಪಾರ್ಥಿಸಿದೆ ಮಂಡಿಯೂರಿ

ಗಾಯ ಅಳಲಾರಂಭಿಸಿತು ಎಷ್ಟು ಸಣ್ಣಗೆ

ಅಂದರೆ ಇಡೀ ಲೋಕ ತಲ್ಲೆಣಿಸುವ ಹಾಗೆ

ಪಾರ್ಥಿಸಿದೆ ನೆಲಕ್ಕೆ ತಲೆಯಿಟ್ಟ

ಕ್ಷಣ ಬಿಟ್ಟು ತಲೆ ಎತ್ತಿ ನೋಡಿದ

ನಾನೇ ಗಾಯದ ಗುರುತಾಗಿದ್ದ

ಎಲ್ಲಾ ನೋಡಿ ನಕ್ಕಂತೆ ಅತ್ತಂತೆ

ಓಡಿಸಿಕೊಂಡು ಬಂದಂತೆ

ಓಡುತ್ತಿದ್ದೇನೆ ಗಾಯದ ಉರಿ ತಾಳಲಾರದ

ಕತ್ತಲೆಯಿಂದ ಬೆಳಕಿನಿಂದ ಆಚೆಯಿಲ್ಲದ ಕಡೆ

ದೀಪ ಹಿಡಿದವಳು

ಬೆಂಕಿಯೂ ಹೌದು ಗೆಳೆಯ

ಹಾಲು ಕುಡಿಸಿದವಳ ಎದೆ ಹಾಲಾಹಲವಾಗಿದೆ

ಕ್ಷಮೆಯ ಶಬ್ದ ಸುಟ್ಟುಹೋಗಿದೆ

ಹಾಡ ಹೇಳುತ್ತಿದ್ದಾಳೆ

ಮೀಸೆ ಎಂಬುದು ಬರೀ ಕೂದಲು ಕಣಯ್ಯ

ಹಾಗೆ ತಿರುಗಿಸಬೇಡ ಬೆರಳಿಗೆ ನೋವಾಗುತ್ತದೆ.

ಆಕೆ ಉಫ್ ಎಂದು ಉರುಬಿದರೆ ಸಾಕು

ಗಾಯಕ್ಕೆ ಲೋಕದ ನೋವೆ ಮಾಯವಾಗುತ್ತದೆ

ನೊಂದರೆ ಮಣ್ಣು ನೋಯುವ ಹಾಗೆ

ಅವಳ ಜೀವ ನೋಯುತ್ತದೆ.

ನಾನು ನಿಂತಿದ್ದೇನೆ ನೆಲ ನಡೆಸುತ್ತಿದೆ

ನೆನಪಾಗುತ್ತೆ ಕಸಗುಡಿಸುವಾಗ್ಲೆಲ್ಲಾ

ಹುಟ್ಟುತ್ತಲೇ ಕಸವಾದ ನಾನು

ಪೊರಕೆಯೂ ಆದೆ

ಹೊಚ್ಚ ಹೊಸಬಳೆಂದರೆ ನೀನೆ ತಾಯಿ

ಏಕೆ ಒಂಟಿಯಾಗಿ ನಿಂತಿರುವೆ

ಶುರು ಮಾಡಿದ್ದೇನೆ ಈಗ ತಾನೆ

ಹೀಗಲ್ಲ ಹೀಗೆ ಅಂತ

ಇಷ್ಟಕ್ಕೆ ಬೆಚ್ಚಿಬಿದ್ದರೆ ಹೇಗೆ

ನನ್ನ ಇತಿಹಾಸ ನನ್ನ ನಾಲಿಗೆ ಮೇಲಿದೆ

ಹಣೆ ಬರಹ ಬರೆದ ದೇವರಿಗೆ

ಕನ್ನಡ ಬರದದ್ದು ಒಳ್ಳೆಯದೇ ಆಯಿತು

ನೆಲವನ್ನು ಮುಚ್ಚಿಡಲು

ಅಂಗಿ ಗುಂಡಿಗಳನ್ನು ಬಿಚ್ಚುವ ಶೂರರ ನೋಡಿದ್ದೇನೆ

ನನಗೆ ಗೊತ್ತು ಅವರು ನನ್ನ ಹೆದರಿಸಲು ಹಾಗೆ ಮಾಡುತ್ತಿದ್ದಾರೆಂದು

ಅವರ ತೊಳು ತೊಡೆಗಳು ಹಿಗ್ಗಿವೆಯೆಂದು

ನಾನು ಜಗ್ಗುವುದಿಲ್ಲ

ಕರಳು ಹಿಡಿದ ಲೇಖನಿ ಬೆರಳುಗಳ ನಡುವೆ ಈಗ

ಬೆಂಕಿ ಆರಿದ ಇಜ್ಜಲು ನನ್ನ ಆತ್ಮ

ಪ್ರಾಮಾಣಿಕನಲ್ಲ ನಿಮ್ಮ ಹಾಲಿನಷ್ಟು

ಈಗ ಈ ಕ್ಷಣ ಗಾಳಿ ಬೀಸುತ್ತಲ್ಲಾ ಹಾಗೆ ನಾನು

ಅಗಳದ ಮೇಲೆ ಅಗುಳವಿಟ್ಟರೆ ಕಟ್ಟಡವಲ್ಲ ಗೆಳೆಯ

ಹನಿ ಹನಿಯಾಗಿ ಹಳ್ಳದಂತೆ

ನೀರಬಣ್ಣದ ಗಂಟು ಅವಳಿಗಲ್ಲದ

ಇನ್ನಾರಿಗೆ ಗೊತ್ತಿದೆ ಅದಕ್ಕೆ ಅವಳ ಹೆಸರು ಗಂಗೆ

ವಿಷಯಕ್ಕೆ ಬರುತ್ತೇನೆ ಆ ಅಲ್ಲಮ

ಈ ಬೇಂದ್ರೆ ದೇವನೂರಿನ ಕುವೆಂಪು

ಕವಿತೆಯನ್ನೇ ನುಂಗಿ ನೀರು ಕುಡಿದ ನೆರೋಡ

ಎಂಥ ಚೆಂದದ ಕಾವ್ಯಲೋಕದಲ್ಲಿ

ಅವಳ ಬೆರಳ ತುದಿಯ ಬೆಂಕಿ ಆರಿಲ್ಲ

ಗಾಯದ ನೋವೂ ನಿಂತಿಲ್ಲ ನರಸಿಂಹಸ್ವಾಮಿಯವರೇ ?

ದುಮು ದುಮುಗುಡುತ್ತಿರುವ ಅವಳೆದೆಯೋ

ಕುದಿ ಕುದಿಯುವ ನೆಲವೋ

ಕಾಲಿಡಲಾಗುತ್ತಿಲ್ಲ ಅವನ ಕಣ್ಣ ಊರಿಗೆ

ಕಾಯಲಾರೆಯಾ ಕಾಲವೇ

ನಿನ್ನ ತುಟಿಯ ಮೇಲೆ ಇಷ್ಟೊಂದು ನದಿಗಳು ಹರಿಯುತ್ತಿಲ್ಲ!

ಸುಡು ಸುಡು ನೆಲಕ್ಕೆ

ಒಂದು ಮುತ್ತು ಕೊಡೊಲೋ ಅಥವಾ

ನೆಲಪಾದಕ್ಕೆ ಒಂದು ಚೆಮ್ಮಾಳಿಗೆ ಹೊಲೆಯಲೋ

ಲೋಕದ ನೆತ್ತಿಯ ಕಣ್ಣ ತಂಪಾಗಿಸಲು

ಮುಗಿಲೇ ಮುರಿದು ಬೀಳುವಂತೆ

ಮಳೆ ಬರಲಿ ಹರಿಯಲಿ ಅಲ್ಲಿ ನೀರ ಹಾಡಿನ ಹೊಳೆ

ಉಳಿಯಲಿ ಒಂದೇ ಒಂದು ಮುಗುಳ್ನಗೆ

ಸಾಕು ಈ ಲೋಕ ಉಳಿಯಲಿ

ನಾನು ನಿಂತಿದ್ದೇನೆ ನೆಲವೇ ನಡೆಸುತ್ತಿದೆ

ಅಂತ ತಿಳಿದ ದಿನ ನೀವೂ ನಾನು ಎಲ್ಲರೂ ಎಲ್ಲವೂ

share
ಸುಬ್ಬು ಹೊಲೆಯಾರ್
ಸುಬ್ಬು ಹೊಲೆಯಾರ್
Next Story
X